AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಆಹಾರ ಸೇವನೆ ನಂತರ ಹೊಟ್ಟೆ ಭಾರವಾದಂತೆ ಆಗುತ್ತಿದ್ದರೆ ಈ ಮನೆಮದ್ದುಗಳ ಸಹಾಯ ಪಡೆದುಕೊಳ್ಳಿ

Home Remedies: ನೀವು ಆಹಾರ ಸೇವಿಸಿದ ನಂತರ ಹೊಟ್ಟೆ ಭಾರವಾದ ಭಾವನೆ ಉಂಟಾಗಬಹುದು. ಇದನ್ನು ಹೋಗಲಾಡಿಸಲು ವೈದ್ಯರ ಸಲಹೆಯ ಜೊತೆಗೆ ಮನೆಮದ್ದುಗಳನ್ನೂ ಅಳವಡಿಸಿಕೊಳ್ಳಬಹುದು. ಮನೆಯಲ್ಲಿ ಅದನ್ನು ತೊಡೆದುಹಾಕಲು ಕೆಲವು ಸಲಹೆಗಳನ್ನು ಇಲ್ಲಿ ತಿಳಿಯಿರಿ.

TV9 Web
| Edited By: |

Updated on: Mar 01, 2022 | 8:17 AM

Share
ಜೇನುತುಪ್ಪ: ಆಹಾರವನ್ನು ಸೇವಿಸಿದ ನಂತರ ಹೊಟ್ಟೆಯಲ್ಲಿನ ಭಾರವನ್ನು ತೆಗೆದುಹಾಕುವಲ್ಲಿ ಜೇನುತುಪ್ಪ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಇದಕ್ಕಾಗಿ ಆಹಾರ ಸೇವಿಸಿದ ನಂತರ ಸ್ವಲ್ಪ ಜೇನುತುಪ್ಪವನ್ನು ಸವಿಯುವುದನ್ನು ರೂಢಿಸಿಕೊಳ್ಳಿ. ಇದು ಭಾರದ ಹೊರತಾಗಿ ಇತರ ಹೊಟ್ಟೆಯ ಸಮಸ್ಯೆಗಳನ್ನು ಸಹ ತೆಗೆದುಹಾಕುತ್ತದೆ.

ಜೇನುತುಪ್ಪ: ಆಹಾರವನ್ನು ಸೇವಿಸಿದ ನಂತರ ಹೊಟ್ಟೆಯಲ್ಲಿನ ಭಾರವನ್ನು ತೆಗೆದುಹಾಕುವಲ್ಲಿ ಜೇನುತುಪ್ಪ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಇದಕ್ಕಾಗಿ ಆಹಾರ ಸೇವಿಸಿದ ನಂತರ ಸ್ವಲ್ಪ ಜೇನುತುಪ್ಪವನ್ನು ಸವಿಯುವುದನ್ನು ರೂಢಿಸಿಕೊಳ್ಳಿ. ಇದು ಭಾರದ ಹೊರತಾಗಿ ಇತರ ಹೊಟ್ಟೆಯ ಸಮಸ್ಯೆಗಳನ್ನು ಸಹ ತೆಗೆದುಹಾಕುತ್ತದೆ.

1 / 5
ಏಲಕ್ಕಿ: ಚಹಾ ಅಥವಾ ಆಹಾರದ ರುಚಿಯನ್ನು ಹೆಚ್ಚಿಸುವ ಹಸಿರು ಏಲಕ್ಕಿ, ಹೊಟ್ಟೆಯ ಭಾರವನ್ನು ಹೋಗಲಾಡಿಸಲು ಕೂಡ ಸಹಾಯ ಮಾಡುತ್ತದೆ. ಅದನ್ನು ಕೂಡ ಔಷಧವಾಗಿ ಬಳಸಬಹುದು. ಊಟ, ತಿಂಡಿ ತಿಂದ ನಂತರ ನೀವು ಹೊಟ್ಟೆಯ ಭಾರದಿಂದ ತೊಂದರೆಗೊಳಗಾಗಿದ್ದರೆ, ಹಸಿರು ಏಲಕ್ಕಿಯನ್ನು ಅಗಿಯಿರಿ. ಹೀಗೆ ಮಾಡುವುದರಿಂದ ಸಾಕಷ್ಟು ಪರಿಹಾರ ಸಿಗುತ್ತದೆ.

ಏಲಕ್ಕಿ: ಚಹಾ ಅಥವಾ ಆಹಾರದ ರುಚಿಯನ್ನು ಹೆಚ್ಚಿಸುವ ಹಸಿರು ಏಲಕ್ಕಿ, ಹೊಟ್ಟೆಯ ಭಾರವನ್ನು ಹೋಗಲಾಡಿಸಲು ಕೂಡ ಸಹಾಯ ಮಾಡುತ್ತದೆ. ಅದನ್ನು ಕೂಡ ಔಷಧವಾಗಿ ಬಳಸಬಹುದು. ಊಟ, ತಿಂಡಿ ತಿಂದ ನಂತರ ನೀವು ಹೊಟ್ಟೆಯ ಭಾರದಿಂದ ತೊಂದರೆಗೊಳಗಾಗಿದ್ದರೆ, ಹಸಿರು ಏಲಕ್ಕಿಯನ್ನು ಅಗಿಯಿರಿ. ಹೀಗೆ ಮಾಡುವುದರಿಂದ ಸಾಕಷ್ಟು ಪರಿಹಾರ ಸಿಗುತ್ತದೆ.

2 / 5
ಓಮದ ಕಾಳು ಮತ್ತು ಕಪ್ಪು ಉಪ್ಪು: ಈ ಎರಡೂ ವಸ್ತುಗಳು ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುತ್ತವೆ. ಗ್ಯಾಸ್ ಮೇಲೆ ಒಂದು ಗ್ಲಾಸ್ ನೀರನ್ನು ಇಟ್ಟು ಕಾಯಲು ಬಿಡಿ. ಮತ್ತು ಅದಕ್ಕೆ ಎರಡು ಚಮಚ ಓಮದ ಕಾಳು ಹಾಗೂ ಅರ್ಧ ಚಮಚ ಕಪ್ಪು ಉಪ್ಪನ್ನು ಬೆರೆಸಿ ಕುದಿಸಿ. ನಂತರ ಕುಡಿಯಿರಿ. ಇದರಿಂದ ಹೊಟ್ಟೆ ಭಾರವಾಗುವಂತಹ ಸಮಸ್ಯೆಗಳು ಪರಿಹಾರ ಆಗುತ್ತವೆ.

ಓಮದ ಕಾಳು ಮತ್ತು ಕಪ್ಪು ಉಪ್ಪು: ಈ ಎರಡೂ ವಸ್ತುಗಳು ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುತ್ತವೆ. ಗ್ಯಾಸ್ ಮೇಲೆ ಒಂದು ಗ್ಲಾಸ್ ನೀರನ್ನು ಇಟ್ಟು ಕಾಯಲು ಬಿಡಿ. ಮತ್ತು ಅದಕ್ಕೆ ಎರಡು ಚಮಚ ಓಮದ ಕಾಳು ಹಾಗೂ ಅರ್ಧ ಚಮಚ ಕಪ್ಪು ಉಪ್ಪನ್ನು ಬೆರೆಸಿ ಕುದಿಸಿ. ನಂತರ ಕುಡಿಯಿರಿ. ಇದರಿಂದ ಹೊಟ್ಟೆ ಭಾರವಾಗುವಂತಹ ಸಮಸ್ಯೆಗಳು ಪರಿಹಾರ ಆಗುತ್ತವೆ.

3 / 5
ಸೋಂಪು ಕಾಳುಗಳು ಮತ್ತು ಸಕ್ಕರೆ ಕ್ಯಾಂಡಿ: ಸಾಮಾನ್ಯವಾಗಿ ಹೊಟೇಲುಗಳಲ್ಲಿ ಊಟ, ತಿಂಡಿಯ ನಂತರ ಈ ಕಾಳುಗಳನ್ನು ಬಿಲ್ ಜೊತೆಗೆ ನೀಡುತ್ತಾರೆ. ಅದನ್ನು ನೀವು ತಿಂದೂ ಇರುತ್ತೀರಿ. ಸೋಂಪು ಮತ್ತು ಸಕ್ಕರೆ ಮಿಠಾಯಿಗಳನ್ನು ಒಟ್ಟಿಗೆ ತಿಂದರೆ ಹೊಟ್ಟೆಯ ಭಾರ ಹಗುರಾದಂತೆ ಆಗುತ್ತದೆ. ಊಟ ಅಥವಾ ತಿಂಡಿಯ ನಂತರ ಸೋಂಪು ಕಾಳುಗಳನ್ನು ತುಂಡು ಕಲ್ಲುಸಕ್ಕರೆಯೊಂದಿಗೆ ಕೂಡ ತಿನ್ನಬಹುದು. ಇದರಿಂದ ಇತರ ಹೊಟ್ಟೆಯ ಸಮಸ್ಯೆಗಳು ಸಹ ಕಡಿಮೆ ಆಗುತ್ತದೆ.

ಸೋಂಪು ಕಾಳುಗಳು ಮತ್ತು ಸಕ್ಕರೆ ಕ್ಯಾಂಡಿ: ಸಾಮಾನ್ಯವಾಗಿ ಹೊಟೇಲುಗಳಲ್ಲಿ ಊಟ, ತಿಂಡಿಯ ನಂತರ ಈ ಕಾಳುಗಳನ್ನು ಬಿಲ್ ಜೊತೆಗೆ ನೀಡುತ್ತಾರೆ. ಅದನ್ನು ನೀವು ತಿಂದೂ ಇರುತ್ತೀರಿ. ಸೋಂಪು ಮತ್ತು ಸಕ್ಕರೆ ಮಿಠಾಯಿಗಳನ್ನು ಒಟ್ಟಿಗೆ ತಿಂದರೆ ಹೊಟ್ಟೆಯ ಭಾರ ಹಗುರಾದಂತೆ ಆಗುತ್ತದೆ. ಊಟ ಅಥವಾ ತಿಂಡಿಯ ನಂತರ ಸೋಂಪು ಕಾಳುಗಳನ್ನು ತುಂಡು ಕಲ್ಲುಸಕ್ಕರೆಯೊಂದಿಗೆ ಕೂಡ ತಿನ್ನಬಹುದು. ಇದರಿಂದ ಇತರ ಹೊಟ್ಟೆಯ ಸಮಸ್ಯೆಗಳು ಸಹ ಕಡಿಮೆ ಆಗುತ್ತದೆ.

4 / 5
ಅಗಸೆ ಬೀಜಗಳು: ಆಗಾಗ್ಗೆ ನಿಮಗೆ ಹೊಟ್ಟೆ ಭಾರವಾದಂತೆ ಅನುಭವ ಆಗುವ ಸಮಸ್ಯೆ ಇರಬಹುದು. ನೀವು ಅದನ್ನು ಮೂಲದಿಂದ ತೊಡೆದುಹಾಕಲು ಅಗಸೆ ಬೀಜಗಳ ಸಹಾಯವನ್ನು ಪಡೆದುಕೊಳ್ಳಬಹುದು. ಅಗಸೆ ಬೀಜಗಳನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯಬಹುದು.

ಅಗಸೆ ಬೀಜಗಳು: ಆಗಾಗ್ಗೆ ನಿಮಗೆ ಹೊಟ್ಟೆ ಭಾರವಾದಂತೆ ಅನುಭವ ಆಗುವ ಸಮಸ್ಯೆ ಇರಬಹುದು. ನೀವು ಅದನ್ನು ಮೂಲದಿಂದ ತೊಡೆದುಹಾಕಲು ಅಗಸೆ ಬೀಜಗಳ ಸಹಾಯವನ್ನು ಪಡೆದುಕೊಳ್ಳಬಹುದು. ಅಗಸೆ ಬೀಜಗಳನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯಬಹುದು.

5 / 5
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ