AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರನ್ ಬಫೆ ಕೈಲಿರೋ ಕ್ಯಾಷ್ ಎಷ್ಟು ಗೊತ್ತಾ? ಭಾರತ ಸರ್ಕಾರದ ವಾರ್ಷಿಕ ಬಜೆಟ್​ನ ಅರ್ಧ ಮೊತ್ತದ ನಗದು ಇಟ್ಟುಕೊಂಡಿದ್ದಾರೆ ಹೂಡಿಕೆ ಮಾಂತ್ರಿಕ

ವಾಷಿಂಗ್ಟನ್, ಆಗಸ್ಟ್ 16: ವಿಶ್ವದ ಅತೀ ಶ್ರೀಮಂತರಲ್ಲಿ ಒಬ್ಬರಾದ ವಾರನ್ ಬಫೆ ಮಾಲಕತ್ವದ ಬರ್ಕ್​ಶೈರ್ ಹಾಥವೇ ಒಂದು ಟ್ರಿಲಿಯನ್ ಡಾಲರ್​ಗೂ ಹೆಚ್ಚು ಮೊತ್ತದ ಹೂಡಿಕೆ ಆಸ್ತಿಗಳನ್ನು ಹೊಂದಿದೆ. ಕಳೆದ ಒಂದೆರಡು ವರ್ಷದಲ್ಲಿ ಅವರು ಆ್ಯಪಲ್ ಸೇರಿದಂತೆ ಬಹಳಷ್ಟು ಕಂಪನಿಗಳಲ್ಲಿನ ಷೇರುಪಾಲನ್ನು ಮಾರಿದ್ದಾರೆ. ಈಗ ಅವರ ಬಳಿ ಇರುವ ಕ್ಯಾಷ್ ಬರೋಬ್ಬರಿ 277 ಬಿಲಿಯನ್ ಡಾಲರ್.

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 16, 2024 | 1:06 PM

ವಿಶ್ವದ ಅತಿದೊಡ್ಡ ಹೂಡಿಕೆದಾರರಲ್ಲಿ ಒಬ್ಬರೆನಿಸಿರುವ ವಾರನ್ ಬಫೆ ಅವರ ಬರ್ಕ್​ಶೈರ್ ಹಾಥವೇ ಇತ್ತೀಚೆಗೆ ತನ್ನ ಪಾಲಿನ ಬಹಳಷ್ಟು ಷೇರುಗಳನ್ನು ಮಾರಿದೆ. ಇದೀಗ ಹಾಥವೇ ಬಳಿ ಕ್ಯಾಷ್ ಹಣ ದಂಡಿಯಾಗಿ ಸಂಗ್ರಹವಾಗಿದೆ. ಜೂನ್ ಅಂತ್ಯದ ಕ್ವಾರ್ಟರ್​ನಲ್ಲಿ 276.9 ಬಿಲಿಯನ್ ಡಾಲರ್​ನಷ್ಟು ನಗದು ಹಣವನ್ನು ಇಟ್ಟುಕೊಂಡಿದೆ. ಈ ಹಣವನ್ನು ಅದು ಸೂಕ್ತ ಕಾಲಕ್ಕೆ ಸೂಕ್ತ ಷೇರುಗಳಲ್ಲಿ ಹೂಡಿಕೆ ಮಾಡಲು ಕಾದು ಕೂತಂದಿದೆ.

ವಿಶ್ವದ ಅತಿದೊಡ್ಡ ಹೂಡಿಕೆದಾರರಲ್ಲಿ ಒಬ್ಬರೆನಿಸಿರುವ ವಾರನ್ ಬಫೆ ಅವರ ಬರ್ಕ್​ಶೈರ್ ಹಾಥವೇ ಇತ್ತೀಚೆಗೆ ತನ್ನ ಪಾಲಿನ ಬಹಳಷ್ಟು ಷೇರುಗಳನ್ನು ಮಾರಿದೆ. ಇದೀಗ ಹಾಥವೇ ಬಳಿ ಕ್ಯಾಷ್ ಹಣ ದಂಡಿಯಾಗಿ ಸಂಗ್ರಹವಾಗಿದೆ. ಜೂನ್ ಅಂತ್ಯದ ಕ್ವಾರ್ಟರ್​ನಲ್ಲಿ 276.9 ಬಿಲಿಯನ್ ಡಾಲರ್​ನಷ್ಟು ನಗದು ಹಣವನ್ನು ಇಟ್ಟುಕೊಂಡಿದೆ. ಈ ಹಣವನ್ನು ಅದು ಸೂಕ್ತ ಕಾಲಕ್ಕೆ ಸೂಕ್ತ ಷೇರುಗಳಲ್ಲಿ ಹೂಡಿಕೆ ಮಾಡಲು ಕಾದು ಕೂತಂದಿದೆ.

1 / 6
276 ಬಿಲಿಯನ್ ಡಾಲರ್ ಎಂದರೆ ಸುಮಾರು 23 ಲಕ್ಷ ಕೋಟಿ ರೂಪಾಯಿ ಆಗುತ್ತದೆ. ಈ ಬಾರಿ ಭಾರತದ ಕೇಂದ್ರ ಬಜೆಟ್ ಗಾತ್ರ 46 ಲಕ್ಷ ಕೋಟಿ ರೂ. ಇದರ ಅರ್ಧದಷ್ಟು ಹಣವನ್ನು ವಾರನ್ ಬಫೆಟ್ ಇಟ್ಟುಕೊಂಡು ಕೂತಿದ್ದಾರೆ.

276 ಬಿಲಿಯನ್ ಡಾಲರ್ ಎಂದರೆ ಸುಮಾರು 23 ಲಕ್ಷ ಕೋಟಿ ರೂಪಾಯಿ ಆಗುತ್ತದೆ. ಈ ಬಾರಿ ಭಾರತದ ಕೇಂದ್ರ ಬಜೆಟ್ ಗಾತ್ರ 46 ಲಕ್ಷ ಕೋಟಿ ರೂ. ಇದರ ಅರ್ಧದಷ್ಟು ಹಣವನ್ನು ವಾರನ್ ಬಫೆಟ್ ಇಟ್ಟುಕೊಂಡು ಕೂತಿದ್ದಾರೆ.

2 / 6
ಬರ್ಕ್​ಶೈರ್ ಹಾಥವೇ ಸಂಸ್ಥೆ ಬಳಿ ಇರುವ ಒಟ್ಟಾರೆ ಆಸ್ತಿಮೌಲ್ಯ ಒಂದು ಟ್ರಿಲಿಯನ್ ಡಾಲರ್​ಗೂ ಹೆಚ್ಚು. ತನ್ನ ಆಸ್ತಿಯಲ್ಲಿ ಶೇ. 25ರಷ್ಟು ಮೊತ್ತದ ಕ್ಯಾಷ್ ಅನ್ನು ಇಟ್ಟುಕೊಂಡಿದೆ. ಇಷ್ಟು ಪ್ರಮಾಣದ ನಗದನ್ನು ಸಂಸ್ಥೆ 2005ರ ಬಳಿಕ ಇದೇ ಮೊದಲ ಬಾರಿಗೆ ಹೊಂದಿರುವುದು.

ಬರ್ಕ್​ಶೈರ್ ಹಾಥವೇ ಸಂಸ್ಥೆ ಬಳಿ ಇರುವ ಒಟ್ಟಾರೆ ಆಸ್ತಿಮೌಲ್ಯ ಒಂದು ಟ್ರಿಲಿಯನ್ ಡಾಲರ್​ಗೂ ಹೆಚ್ಚು. ತನ್ನ ಆಸ್ತಿಯಲ್ಲಿ ಶೇ. 25ರಷ್ಟು ಮೊತ್ತದ ಕ್ಯಾಷ್ ಅನ್ನು ಇಟ್ಟುಕೊಂಡಿದೆ. ಇಷ್ಟು ಪ್ರಮಾಣದ ನಗದನ್ನು ಸಂಸ್ಥೆ 2005ರ ಬಳಿಕ ಇದೇ ಮೊದಲ ಬಾರಿಗೆ ಹೊಂದಿರುವುದು.

3 / 6
ವಾರನ್ ಬಫೆ ಅವರು ಆ್ಯಪಲ್ ಕಂಪನಿಯಲ್ಲಿ ಸಾಕಷ್ಟು ಷೇರುಗಳನ್ನು ಹೊಂದಿದ್ದರು. ತನ್ನ ಅರ್ಧದಷ್ಟು ಷೇರುಗಳನ್ನು ಅವರು ಇತ್ತೀಚೆಗೆ ಬಿಕರಿ ಮಾಡಿದ್ದರು. ಅವರ ಈ ನಡೆ ಬಹಳ ಜನರಿಗೆ ಸೋಜಿತ ಎನಿಸಿದೆ. ಬ್ಯಾಂಕ್ ಆಫ್ ಅಮೆರಿಕದ ಸಾಕಷ್ಟು ಷೇರುಗಳನ್ನೂ ವಾರನ್ ಬಫೆ ಮಾರಿದ್ದಾರೆ.

ವಾರನ್ ಬಫೆ ಅವರು ಆ್ಯಪಲ್ ಕಂಪನಿಯಲ್ಲಿ ಸಾಕಷ್ಟು ಷೇರುಗಳನ್ನು ಹೊಂದಿದ್ದರು. ತನ್ನ ಅರ್ಧದಷ್ಟು ಷೇರುಗಳನ್ನು ಅವರು ಇತ್ತೀಚೆಗೆ ಬಿಕರಿ ಮಾಡಿದ್ದರು. ಅವರ ಈ ನಡೆ ಬಹಳ ಜನರಿಗೆ ಸೋಜಿತ ಎನಿಸಿದೆ. ಬ್ಯಾಂಕ್ ಆಫ್ ಅಮೆರಿಕದ ಸಾಕಷ್ಟು ಷೇರುಗಳನ್ನೂ ವಾರನ್ ಬಫೆ ಮಾರಿದ್ದಾರೆ.

4 / 6
ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಅಪಾಯ ಕಾಣುತ್ತಿದೆ. ಹೆಚ್ಚು ಕಾರ್ಪೊರೇಟ್ ತೆರಿಗೆಗಳನ್ನು ಹೇರಲಾಗುವ ಸಾಧ್ಯತೆ ಮುಂದಿನ ದಿನಗಳಲ್ಲಿ ಇದೆ. ಈ ಕಾರಣಕ್ಕೆ ಸಾಕಷ್ಟು ಷೇರುಗಳನ್ನು ಅವರು ಮಾರಿ ಹಣ ಇಟ್ಟುಕೊಂಡಿರಬಹುದು ಎನ್ನಲಾಗುತ್ತಿದೆ. ಬರ್ಕ್​ಶೈರ್ ಹಾಥವೇ ಕಂಪನಿಯ ವಾರ್ಷಿಕ ಸಭೆಯಲ್ಲಿ ಅವರು ಈ ಬಗ್ಗೆ ಬಫೆ ಪರೋಕ್ಷವಾಗಿ ಸುಳಿವು ನೀಡಿದ್ದರು.

ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಅಪಾಯ ಕಾಣುತ್ತಿದೆ. ಹೆಚ್ಚು ಕಾರ್ಪೊರೇಟ್ ತೆರಿಗೆಗಳನ್ನು ಹೇರಲಾಗುವ ಸಾಧ್ಯತೆ ಮುಂದಿನ ದಿನಗಳಲ್ಲಿ ಇದೆ. ಈ ಕಾರಣಕ್ಕೆ ಸಾಕಷ್ಟು ಷೇರುಗಳನ್ನು ಅವರು ಮಾರಿ ಹಣ ಇಟ್ಟುಕೊಂಡಿರಬಹುದು ಎನ್ನಲಾಗುತ್ತಿದೆ. ಬರ್ಕ್​ಶೈರ್ ಹಾಥವೇ ಕಂಪನಿಯ ವಾರ್ಷಿಕ ಸಭೆಯಲ್ಲಿ ಅವರು ಈ ಬಗ್ಗೆ ಬಫೆ ಪರೋಕ್ಷವಾಗಿ ಸುಳಿವು ನೀಡಿದ್ದರು.

5 / 6
ಕೈಯಲ್ಲಿ ದಂಡಿ ಹಣ ಇಟ್ಟುಕೊಂಡಿರುವ ಬರ್ಕ್​ಶೈರ್ ಸಂಸ್ಥೆ ಆತುರವಾಗಿ ಹೂಡಿಕೆ ಮಾಡದಿರಲು ನಿರ್ಧರಿಸಿದೆ. ಬಹಳ ಕಡಿಮೆ ರಿಸ್ಕ್ ಅಂತ ಅನಿಸಿ, ಸಾಕಷ್ಟು ರಿಟರ್ನ್ ಸಿಗಬಹುದು ಎನ್ನುವ ವಿಶ್ವಾಸ ಮೂಡಿದರೆ ಮಾತ್ರ ಅಂತಹ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದಾಗಿ ವಾರನ್ ಬಫೆಟ್ ಎಜಿಎಂ ಸಭೆಯಲ್ಲಿ ಹೇಳೀದ್ದರು.

ಕೈಯಲ್ಲಿ ದಂಡಿ ಹಣ ಇಟ್ಟುಕೊಂಡಿರುವ ಬರ್ಕ್​ಶೈರ್ ಸಂಸ್ಥೆ ಆತುರವಾಗಿ ಹೂಡಿಕೆ ಮಾಡದಿರಲು ನಿರ್ಧರಿಸಿದೆ. ಬಹಳ ಕಡಿಮೆ ರಿಸ್ಕ್ ಅಂತ ಅನಿಸಿ, ಸಾಕಷ್ಟು ರಿಟರ್ನ್ ಸಿಗಬಹುದು ಎನ್ನುವ ವಿಶ್ವಾಸ ಮೂಡಿದರೆ ಮಾತ್ರ ಅಂತಹ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದಾಗಿ ವಾರನ್ ಬಫೆಟ್ ಎಜಿಎಂ ಸಭೆಯಲ್ಲಿ ಹೇಳೀದ್ದರು.

6 / 6
Follow us
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ