
ಇಂದು(ಆ.15) ದೇಶಾದ್ಯಂತ 77ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಮುಂಜಾನೆ ದೆಹಲಿಯ ಕೆಂಪುಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಸತತ 10 ನೇ ಬಾರಿಗೆ ಧ್ವಜಾರೋಹಣ ನೆರವೇರಿಸಿದ್ದಾರೆ. ಅದರಂತೆ ರಾಮನಗರದಲ್ಲೂ ಕೆಲ ಯುವಕರು ವಿಶೇಷವಾಗಿ ಬಾವುಟ ಹಾರಿಸಿದ್ದಾರೆ.

ಅದರಂತೆ ಇದೀಗ ರಾಮನಗರ ಜಿಲ್ಲೆಯ ಕೆಲ ಯುವಕರು 600 ಅಡಿ ಎತ್ತರದ ಬೆಟ್ಟದ ಮೇಲೆ 60 ಅಡಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ.

ಹೌದು, ಸ್ವಾತಂತ್ರೋತ್ಸವದ ಅಂಗವಾಗಿ ಬೆಳ್ಳಂ ಬೆಳಗ್ಗೆ ಸಚಿನ್ ಹಾಗೂ ಅವರ ತಂಡದಿಂದ ಬರೊಬ್ಬರಿ 60 ಅಡಿ ಅಗಲದ ತ್ರಿವರ್ಣ ಬಾವುಟವನ್ನು 600 ಅಡಿ ಎತ್ತರದ ಬೆಟ್ಟದ ಮೇಲೆ ಹಾರಿಸಿದ್ದಾರೆ.

ಇನ್ನು ಸಚಿನ್ ಹಾಗೂ ತಂಡದವರು ಪ್ರತಿ ವರ್ಷವು ಇಲ್ಲಿ ಬಾವುಟವನ್ನು ಹಾರಿಸಿಕೊಂಡು ಬಂದಿದ್ದಾರೆ. ಅದರಂತೆ ಈ ವರ್ಷವೂ ಕೂಡ ಎಲ್ಲ ಸ್ನೇಹಿತರು ಸೇರಿ ರಾಷ್ಟ್ರಧ್ವಜವನ್ನು ಹಾರಿಸಿ, ರಾಷ್ಟ್ರಗೀತೆಯನ್ನು ಹಾಡಿದ್ದಾರೆ.

ಈ ತಂಡದವರ ಮತ್ತೊಂದು ವಿಶೇಷವೆಂದರೆ, ಪ್ರತಿ ವರ್ಷವು ಇವರು ಹಾರಿಸುವ ಬಾವುಟಕ್ಕಿಂತ5 ಅಡಿ ಎತ್ತರ ಹೆಚ್ಚಿಸಿಕೊಂಡು ಹೋಗುತ್ತಿದ್ದಾರೆ. ಹೌದು, ಅದರಂತೆ ಈ ಬಾರಿ 60 ಅಡಿ ಧ್ವಜವನ್ನು ಹಾರಿಸಿದ್ದಾರೆ.

ಇನ್ನು ಬೀಸುವ ಆ ಗಾಳಿಯ ಮಧ್ಯೆ, ಬೆಳ್ಳಂ ಬೆಳಗ್ಗೆ ಬರೊಬ್ಬರಿ 600 ಅಡಿ ಎತ್ತರದ ಬೆಟ್ಟ ಹತ್ತಿದ ಯುವಕರು, ಹರಸಾಹಸಪಟ್ಟು ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.