ನಿಮ್ಮ ಕಾಲದಲ್ಲೂ ಎಲ್ಲವನ್ನೂ ಮಾಡಿದ್ದೀರಿ. ಚುನಾವಣಾ ಆಯೋಗ ಮಾಡಿ ಸೂಕ್ತ ನಿಯಮ ಮಾಡಿಲ್ಲ. ಈಗ ನಿಯಮದ ಮೂಲಕ ಆಯೋಗ ರಚಿಸುತ್ತೇವೆ ಎಂದು ಬಿಜೆಪಿ ಸದಸ್ಯರು ಸಭೆಯಲ್ಲಿ ನಿಲುವು ವ್ಯಕ್ತಪಡಿಸಿದರು. ಆದರೆ ಕಾಂಗ್ರೆಸ್ ವಿರೋಧದ ನಡುವೆಯೂ ಬಿಲ್ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ.
11 ಮೀನುಗಾರರ ರಕ್ಷಣೆ
ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಕಳೆದ 24 ಗಂಟೆಗಳಿಂದ ಸಿಲುಕಿದ್ದ 11 ಮೀನುಗಾರರನ್ನು ರಕ್ಷಿಸಲಾಗಿದೆ. ಹವಾಮಾನ ವೈಪರೀತ್ಯದಿಂದ ಅರಬ್ಬೀ ಸಮುದ್ರದ 35 ನಾಟಿಕಲ್ ಮೈಲಿ ದೂರದಲ್ಲಿ IND-KA 02 MM 4294 ‘ಸಾಗರ್ ಸಾಮ್ರಾಟ್’ ಮೀನುಗಾರರ ದೋಣಿ ಕೆಟ್ಟು ನಿಂತಿತ್ತು. ಮೀನುಗಾರರನ್ನು ರಕ್ಷಿಸಿ ಉಡುಪಿ ಜಿಲ್ಲೆಯ ಮಲ್ಪೆಗೆ ಕರೆ ತರಲಾಗಿದೆ. ರೋಪ್ ಹಾಕಿ ಎಳೆದು ಮೀನುಗಾರರ ದೋಣಿಯನ್ನು ಸಹ ಎಳೆದುತರಲಾಗಿದೆ.
ಇದನ್ನೂ ಓದಿ:
Opinion: ಯುವ ರಾಜಕಾರಣಿಗಳಿಗೆ ಕೊಂಚ ನಿರಾಸೆ ಮೂಡಿಸಿದ ರಾಜ್ಯ ಸರ್ಕಾರ; ಏಕೆ? ಇಲ್ಲಿದೆ ಓದಿ
ವಿಧಾನಸಭೆಯಲ್ಲಿ ಜಿಪಂ, ತಾಪಂ ಚುನಾವಣೆ ಮುಂದೂಡಿಕೆ, ಮಳೆನೀರು ಕೊಯ್ಲು ಕಡ್ಡಾಯ ಪ್ರಸ್ತಾಪವಿರುವ ವಿಧೇಯಕಗಳ ಮಂಡನೆ
(CM Basavaraj Bommai says Zilla Panchayat and Taluka Panchayat Election did not delay by delimitation commission)