AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ನುಸ್ರತ್​ ಜಹಾನ್​​ ಮಗುವಿನ ತಂದೆ ಹೆಸರು ಅಂತೂ ಬಹಿರಂಗವಾಯ್ತು; ರೂಮರ್​ ನಿಜವಾಯ್ತು !

Nusrat Jahan: ಕೆಲವೇ ದಿನಗಳ ಹಿಂದೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನುಸ್ರತ್​ ಬಳಿ, ಮಗುವಿನ ಮುಖ ಯಾವಾಗ ತೋರಿಸುತ್ತೀರಿ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಅದನ್ನು ಅವನ ತಂದೆಯ ಬಳಿಯೇ ಕೇಳಬೇಕು ಎಂದಿದ್ದರು.  

ನಟಿ ನುಸ್ರತ್​ ಜಹಾನ್​​ ಮಗುವಿನ ತಂದೆ ಹೆಸರು ಅಂತೂ ಬಹಿರಂಗವಾಯ್ತು; ರೂಮರ್​ ನಿಜವಾಯ್ತು !
ನುಸ್ರತ್​ ಜಹಾನ್
TV9 Web
| Edited By: |

Updated on:Sep 16, 2021 | 3:07 PM

Share

ಪಶ್ಚಿಮ ಬಂಗಾಳ ಟಿಎಂಸಿ ನಾಯಕಿ, ನಟಿ ನುಸ್ರತ್​ ಜಹಾನ್​ (Nusrat Jahan) ವೈಯಕ್ತಿಕ ಜೀವನ ಸುದ್ದಿಯಾಗಿದ್ದು ಗೊತ್ತೇ ಇದೆ. ಆಗಸ್ಟ್​​ 26ರಂದು ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಆ ಮಗುವಿನ ತಂದೆ ಯಾರು ಎಂಬುದನ್ನು ಅವರು ಹೇಳಿರಲಿಲ್ಲ. 2019ರಲ್ಲಿ ನಿಖಿಲ್​ ಜೈನ್​ ಎಂಬ ಉದ್ಯಮಿಯನ್ನು ಟರ್ಕಿಯಲ್ಲಿ ಮದುವೆಯಾಗಿದ್ದರು. ಆದರೆ ಭಾರತೀಯ ಕಾನೂನಿನ ಅನ್ವಯ ಆ ವಿವಾಹ ಮಾನ್ಯವಾಗಿಲ್ಲ ಎಂದು ಹೇಳಿದ್ದ ನುಸ್ರತ್ ಜಹಾನ್​, 2020ರ ನವೆಂಬರ್​​ ತಿಂಗಳಿಂದಲೂ ತಾವಿಬ್ಬರೂ ಪ್ರತ್ಯೇಕವಾಗಿದ್ದಾಗಿಯೇ ತಿಳಿಸಿದ್ದರು. ಆದರೆ ನಂತರ ತಾನು ಗರ್ಭಿಣಿ ಎಂದು ಹೇಳಿಕೊಂಡಿದ್ದರು. ಆಗಸ್ಟ್​ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. 

ನುಸ್ರತ್​ಗೆ ಮಗು ಹುಟ್ಟುತ್ತಿದ್ದಂತೆ ಇಂಟರ್​ನೆಟ್​ನಲ್ಲಿ ಅನೇಕರು ತಂದೆ ಯಾರು ಎಂದು ಪ್ರಶ್ನೆ ಮಾಡಿದ್ದರು. ಆದರೆ ಈ ಪ್ರಶ್ನೆಗೆ ಏನನ್ನೂ ಉತ್ತರಿಸಿದ ನುಸ್ರತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗೆಲ್ಲ ಪ್ರಶ್ನೆಗಳನ್ನು ಹಾಕಿ ಒಬ್ಬರ ಚಾರಿತ್ರ್ಯಕ್ಕೆ ಕಪ್ಪು ಚುಕ್ಕೆ ಇಡುವುದು ತುಂಬ ಸುಲಭ ಎಂದು ಕಿಡಿಕಾರಿದ್ದರು. ಆದರೆ ಕೊನೆಗೂ ಮಗುವಿನ ತಂದೆ ಯಾರೆಂಬುದು ಗೊತ್ತಾಗಿದೆ. ಅದೂ ಕೂಡ ಮಗುವಿನ ಬರ್ತ್ ಸರ್ಟಿಫಿಕೇಟ್​​ನಿಂದ ಸ್ಪಷ್ಟವಾಗಿದೆ. ನುಸ್ರತ್​ ತಮ್ಮ ಪುತ್ರನಿಗೆ ಯಿಶಾನ್​ ಜೆ.ದಾಸ್​ಗುಪ್ತ ಎಂದು ಹೆಸರಿಟ್ಟಿದ್ದಾರೆ. ತಂದೆಯ ಹೆಸರಿದ್ದಲ್ಲಿ ನಟ ದೇಬಾಶಿಶ್​ ದಾಸ್​ಗುಪ್ತ (ಯಶ್​ ದಾಸ್​ಗುಪ್ತ-Yash Dasgupta) ಎಂಬ ಹೆಸರು ಉಲ್ಲೇಖವಾಗಿದೆ.

ಪತಿ ನಿಖಿಲ್​ರಿಂದ ದೂರವಾದ ನಂತರ ನುಸ್ರತ್​​ ಅವರು ಯಶ್​ ಜತೆ ರಿಲೇಶನ್​ಶಿಪ್​​ನಲ್ಲಿದ್ದಾರೆ ಎಂಬ ರೂಮರ್​ ಹಬ್ಬಿತ್ತು. ಆದರೆ ಅದಕ್ಕೆ ನುಸ್ರತ್​ ಆಗಲೀ, ನಟ ಯಶ್​ ದಾಸ್​ಗುಪ್ತಾ ಆಗಲೀ ಏನೂ ಪ್ರತಿಕ್ರಿಯೆ ನೀಡಿರಲಿಲ್ಲ. ಇನ್ನು ನುಸ್ರತ್​ ಗರ್ಭಿಣಿಯಾಗಿದ್ದಾಲೂ ಯಶ್​ ದಾಸ್​ಗುಪ್ತಾ ತುಂಬ ಕಾಳಜಿ ತೆಗೆದುಕೊಂಡಿದ್ದರು. ಹೆರಿಗೆ ಸಮಯದಲ್ಲೂ ಅವರೇ ನುಸ್ರತ್​ರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕೆಲವೇ ದಿನಗಳ ಹಿಂದೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನುಸ್ರತ್​ ಬಳಿ, ಮಗುವಿನ ಮುಖ ಯಾವಾಗ ತೋರಿಸುತ್ತೀರಿ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಅದನ್ನು ಅವನ ತಂದೆಯ ಬಳಿಯೇ ಕೇಳಬೇಕು ಎಂದಿದ್ದರು.

ಕಳೆದವಾರ ನುಸ್ರತ್​ ಜಹಾನ್​ ಮತ್ತು ಯಶ್​ ಒಟ್ಟಿಗೇ ಕೋಲ್ಕತ್ತ ಮುನ್ಸಿಪಲ್​ ಕಾರ್ಪೋರೇಶನ್​ಗೆ ಬಂದಿದ್ದರು. ಅವರು ಕೊವಿಡ್​ 19 ಲಸಿಕೆ ಎರಡನೇ ಡೋಸ್​ ಪಡೆಯಲು ಬಂದಿದ್ದಾರೆಂದೇ ಹೇಳಲಾಗಿತ್ತು. ಆದರೆ ಅವರು ಮಗುವಿನ ಬರ್ತ್​ ಸರ್ಟಿಫಿಕೇಟ್​ ಸಂಬಂಧ ಕೆಲಸಕ್ಕೆ ಬಂದಿದ್ದರೆಂದು ಹೇಳಲಾಗಿದೆ.

ಇದನ್ನೂ ಓದಿ: ಕೆರಿಬಿಯನ್ ದೈತ್ಯರ ಹೆಸರಲ್ಲಿ ಕೆಟ್ಟ ದಾಖಲೆ! ಟಿ20 ಕ್ರಿಕೆಟ್​ನಲ್ಲಿ ಅತಿಹೆಚ್ಚು ಬಾರಿ ಶೂನ್ಯಕ್ಕೆ ಔಟಾದವರು ಇವರೇ

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 150A ನಲ್ಲಿ ಎರಡು ಎತ್ತಿನಗಾಡಿಗಳ ನಡುವೆ ಸ್ಪರ್ಧೆ, ವಿಡಿಯೋ ವೈರಲ್

Published On - 3:02 pm, Thu, 16 September 21

Follow Us
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ರೈಲು ಸಂಚಾರ ಸ್ಥಗಿತ: ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು
ರೈಲು ಸಂಚಾರ ಸ್ಥಗಿತ: ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು