AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ನುಸ್ರತ್​ ಜಹಾನ್​​ ಮಗುವಿನ ತಂದೆ ಹೆಸರು ಅಂತೂ ಬಹಿರಂಗವಾಯ್ತು; ರೂಮರ್​ ನಿಜವಾಯ್ತು !

Nusrat Jahan: ಕೆಲವೇ ದಿನಗಳ ಹಿಂದೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನುಸ್ರತ್​ ಬಳಿ, ಮಗುವಿನ ಮುಖ ಯಾವಾಗ ತೋರಿಸುತ್ತೀರಿ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಅದನ್ನು ಅವನ ತಂದೆಯ ಬಳಿಯೇ ಕೇಳಬೇಕು ಎಂದಿದ್ದರು.  

ನಟಿ ನುಸ್ರತ್​ ಜಹಾನ್​​ ಮಗುವಿನ ತಂದೆ ಹೆಸರು ಅಂತೂ ಬಹಿರಂಗವಾಯ್ತು; ರೂಮರ್​ ನಿಜವಾಯ್ತು !
ನುಸ್ರತ್​ ಜಹಾನ್
TV9 Web
| Edited By: |

Updated on:Sep 16, 2021 | 3:07 PM

Share

ಪಶ್ಚಿಮ ಬಂಗಾಳ ಟಿಎಂಸಿ ನಾಯಕಿ, ನಟಿ ನುಸ್ರತ್​ ಜಹಾನ್​ (Nusrat Jahan) ವೈಯಕ್ತಿಕ ಜೀವನ ಸುದ್ದಿಯಾಗಿದ್ದು ಗೊತ್ತೇ ಇದೆ. ಆಗಸ್ಟ್​​ 26ರಂದು ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಆ ಮಗುವಿನ ತಂದೆ ಯಾರು ಎಂಬುದನ್ನು ಅವರು ಹೇಳಿರಲಿಲ್ಲ. 2019ರಲ್ಲಿ ನಿಖಿಲ್​ ಜೈನ್​ ಎಂಬ ಉದ್ಯಮಿಯನ್ನು ಟರ್ಕಿಯಲ್ಲಿ ಮದುವೆಯಾಗಿದ್ದರು. ಆದರೆ ಭಾರತೀಯ ಕಾನೂನಿನ ಅನ್ವಯ ಆ ವಿವಾಹ ಮಾನ್ಯವಾಗಿಲ್ಲ ಎಂದು ಹೇಳಿದ್ದ ನುಸ್ರತ್ ಜಹಾನ್​, 2020ರ ನವೆಂಬರ್​​ ತಿಂಗಳಿಂದಲೂ ತಾವಿಬ್ಬರೂ ಪ್ರತ್ಯೇಕವಾಗಿದ್ದಾಗಿಯೇ ತಿಳಿಸಿದ್ದರು. ಆದರೆ ನಂತರ ತಾನು ಗರ್ಭಿಣಿ ಎಂದು ಹೇಳಿಕೊಂಡಿದ್ದರು. ಆಗಸ್ಟ್​ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. 

ನುಸ್ರತ್​ಗೆ ಮಗು ಹುಟ್ಟುತ್ತಿದ್ದಂತೆ ಇಂಟರ್​ನೆಟ್​ನಲ್ಲಿ ಅನೇಕರು ತಂದೆ ಯಾರು ಎಂದು ಪ್ರಶ್ನೆ ಮಾಡಿದ್ದರು. ಆದರೆ ಈ ಪ್ರಶ್ನೆಗೆ ಏನನ್ನೂ ಉತ್ತರಿಸಿದ ನುಸ್ರತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗೆಲ್ಲ ಪ್ರಶ್ನೆಗಳನ್ನು ಹಾಕಿ ಒಬ್ಬರ ಚಾರಿತ್ರ್ಯಕ್ಕೆ ಕಪ್ಪು ಚುಕ್ಕೆ ಇಡುವುದು ತುಂಬ ಸುಲಭ ಎಂದು ಕಿಡಿಕಾರಿದ್ದರು. ಆದರೆ ಕೊನೆಗೂ ಮಗುವಿನ ತಂದೆ ಯಾರೆಂಬುದು ಗೊತ್ತಾಗಿದೆ. ಅದೂ ಕೂಡ ಮಗುವಿನ ಬರ್ತ್ ಸರ್ಟಿಫಿಕೇಟ್​​ನಿಂದ ಸ್ಪಷ್ಟವಾಗಿದೆ. ನುಸ್ರತ್​ ತಮ್ಮ ಪುತ್ರನಿಗೆ ಯಿಶಾನ್​ ಜೆ.ದಾಸ್​ಗುಪ್ತ ಎಂದು ಹೆಸರಿಟ್ಟಿದ್ದಾರೆ. ತಂದೆಯ ಹೆಸರಿದ್ದಲ್ಲಿ ನಟ ದೇಬಾಶಿಶ್​ ದಾಸ್​ಗುಪ್ತ (ಯಶ್​ ದಾಸ್​ಗುಪ್ತ-Yash Dasgupta) ಎಂಬ ಹೆಸರು ಉಲ್ಲೇಖವಾಗಿದೆ.

ಪತಿ ನಿಖಿಲ್​ರಿಂದ ದೂರವಾದ ನಂತರ ನುಸ್ರತ್​​ ಅವರು ಯಶ್​ ಜತೆ ರಿಲೇಶನ್​ಶಿಪ್​​ನಲ್ಲಿದ್ದಾರೆ ಎಂಬ ರೂಮರ್​ ಹಬ್ಬಿತ್ತು. ಆದರೆ ಅದಕ್ಕೆ ನುಸ್ರತ್​ ಆಗಲೀ, ನಟ ಯಶ್​ ದಾಸ್​ಗುಪ್ತಾ ಆಗಲೀ ಏನೂ ಪ್ರತಿಕ್ರಿಯೆ ನೀಡಿರಲಿಲ್ಲ. ಇನ್ನು ನುಸ್ರತ್​ ಗರ್ಭಿಣಿಯಾಗಿದ್ದಾಲೂ ಯಶ್​ ದಾಸ್​ಗುಪ್ತಾ ತುಂಬ ಕಾಳಜಿ ತೆಗೆದುಕೊಂಡಿದ್ದರು. ಹೆರಿಗೆ ಸಮಯದಲ್ಲೂ ಅವರೇ ನುಸ್ರತ್​ರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕೆಲವೇ ದಿನಗಳ ಹಿಂದೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನುಸ್ರತ್​ ಬಳಿ, ಮಗುವಿನ ಮುಖ ಯಾವಾಗ ತೋರಿಸುತ್ತೀರಿ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಅದನ್ನು ಅವನ ತಂದೆಯ ಬಳಿಯೇ ಕೇಳಬೇಕು ಎಂದಿದ್ದರು.

ಕಳೆದವಾರ ನುಸ್ರತ್​ ಜಹಾನ್​ ಮತ್ತು ಯಶ್​ ಒಟ್ಟಿಗೇ ಕೋಲ್ಕತ್ತ ಮುನ್ಸಿಪಲ್​ ಕಾರ್ಪೋರೇಶನ್​ಗೆ ಬಂದಿದ್ದರು. ಅವರು ಕೊವಿಡ್​ 19 ಲಸಿಕೆ ಎರಡನೇ ಡೋಸ್​ ಪಡೆಯಲು ಬಂದಿದ್ದಾರೆಂದೇ ಹೇಳಲಾಗಿತ್ತು. ಆದರೆ ಅವರು ಮಗುವಿನ ಬರ್ತ್​ ಸರ್ಟಿಫಿಕೇಟ್​ ಸಂಬಂಧ ಕೆಲಸಕ್ಕೆ ಬಂದಿದ್ದರೆಂದು ಹೇಳಲಾಗಿದೆ.

ಇದನ್ನೂ ಓದಿ: ಕೆರಿಬಿಯನ್ ದೈತ್ಯರ ಹೆಸರಲ್ಲಿ ಕೆಟ್ಟ ದಾಖಲೆ! ಟಿ20 ಕ್ರಿಕೆಟ್​ನಲ್ಲಿ ಅತಿಹೆಚ್ಚು ಬಾರಿ ಶೂನ್ಯಕ್ಕೆ ಔಟಾದವರು ಇವರೇ

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 150A ನಲ್ಲಿ ಎರಡು ಎತ್ತಿನಗಾಡಿಗಳ ನಡುವೆ ಸ್ಪರ್ಧೆ, ವಿಡಿಯೋ ವೈರಲ್

Published On - 3:02 pm, Thu, 16 September 21

ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ
ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ
ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?
ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?
ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಪುಣ್ಯಸ್ನಾನಕ್ಕೂ ಪರದಾಟ
ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಪುಣ್ಯಸ್ನಾನಕ್ಕೂ ಪರದಾಟ
ಪುಸ್ತಕ ಹಿಡಿದುಕೊಂಡು ಓದಲು ಕುಳಿತಾಗಲೇ ನಿದ್ದೆ ಬರುತ್ತಾ?
ಪುಸ್ತಕ ಹಿಡಿದುಕೊಂಡು ಓದಲು ಕುಳಿತಾಗಲೇ ನಿದ್ದೆ ಬರುತ್ತಾ?
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ