AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಸಿದ ಕೊಬ್ಬರಿ ಬೆಳೆ, ಬೆಂಬಲ ಬೆಲೆ ಘೋಷಿಸುವಂತೆ ಪ್ರಧಾನಿಗೆ ಪತ್ರ: ಮಾಜಿ ಸಂಸದ ಮುದ್ದಹನುಮೇಗೌಡ

ಕೊಬ್ಬರಿ ಬೆಳೆ ಪಾತಾಳಕ್ಕೆ ಇಳಿಯುತ್ತಿದ್ದು, ಕೂಡಲೇ ನಫೇಡ್ ಮಧ್ಯ ಪ್ರವೇಶಿಸಿ ಬೆಂಬಲ‌ ಬೆಲೆ‌ ಘೋಷಿಸಬೇಕು ಎಂದು ಮಾಜಿ ಸಂಸದ ಮುದ್ದಹನುಮೇಗೌಡ ಆಗ್ರಹಿಸಿದರು.

ಕುಸಿದ ಕೊಬ್ಬರಿ ಬೆಳೆ, ಬೆಂಬಲ ಬೆಲೆ ಘೋಷಿಸುವಂತೆ ಪ್ರಧಾನಿಗೆ ಪತ್ರ: ಮಾಜಿ ಸಂಸದ ಮುದ್ದಹನುಮೇಗೌಡ
ಮಾಜಿ ಸಂಸದ ಮುದ್ದಹನುಮೇಗೌಡ
ಗಂಗಾಧರ​ ಬ. ಸಾಬೋಜಿ
|

Updated on:Jun 08, 2023 | 7:18 PM

Share

ತುಮಕೂರು: 14 ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ‌ ಬೆಲೆ ಹೆಚ್ಚಳ ಮಾಡಿದೆ. ಆದರೆ ಕೊಬ್ಬರಿ ಬೆಳೆ ಪಾತಾಳಕ್ಕೆ ಇಳಿಯುತ್ತಿದೆ. ಕೂಡಲೇ ನಫೇಡ್ ಮಧ್ಯ ಪ್ರವೇಶಿಸಿ ಬೆಂಬಲ‌ ಬೆಲೆ‌ ಘೋಷಿಸಬೇಕು ಎಂದು ಮಾಜಿ ಸಂಸದ ಮುದ್ದಹನುಮೇಗೌಡ (S. P. Muddahanumegowda) ಆಗ್ರಹಿಸಿದರು. ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 18 ಸಾವಿರದಿಂದ 8 ಸಾವಿರ ಬೆಲೆಗೆ ಇಳಿದಿದೆ. ಕೊಬ್ಬರಿ ಇಳುವರಿ‌ ಹಾಗೂ ಬೆಲೆ ಎರಡು ಕುಸಿದಿದೆ. ಕೊಬ್ಬರಿಗೆ ಬೆಂಬಲ‌ ಬೆಲೆ 11.720 ರೂಪಾಯಿಯನ್ನು ಘೋಷಣೆ ಮಾಡಲಾಗಿದೆ. 16,300    ರೂಪಾಯಿನಷ್ಟು ಬೆಂಬಲ‌ ಬೆಲೆಯನ್ನು ನೀಡಬೇಕೆಂದು ಕೃಷಿ ಇಲಾಖೆ ಹೇಳಿದೆ ಎಂದರು.

ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ಕೂಡ ಕೇಂದ್ರಕ್ಕೆ ಬೆಂಬಲ‌ ಬೆಲೆ ನೀಡುವಂತೆ ಮನವಿ ಮಾಡಿದ್ದಾರೆ. ಬೆಲೆ ಕಡಿಮೆ‌ ಪರಿಣಾಮ ಉತ್ಪಾದನೆ ಕೂಡ ಕಡಿಮೆಯಾಗುತ್ತಿದೆ. ಬೆಲೆ ಕುಸಿತದ ಹಿಂದಿನ ಕಾರಣ ಕಂಡುಹಿಡಿಯ ಬೇಕು.‌ ಇಲ್ಲದಿದ್ದರೆ ಜಿಲ್ಲೆಯಲ್ಲಿ ತೆಂಗು ಬೆಳೆ ಕಡಿಮೆಯಾಗಲಿದೆ. ಬೆಂಬಲ ಬೆಲೆ ಘೋಷಿಸುವಂತೆ ಪ್ರಧಾನಿಗೆ ಪತ್ರ ಬರೆಯುತ್ತಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: MSP List: ಕೇಂದ್ರದಿಂದ ಎಂಎಸ್​ಪಿ ಹೆಚ್ಚಳ; ರಾಗಿ, ಭತ್ತ ಸೇರಿ ಯಾವ್ಯಾವ ಬೆಳೆಗೆ ಕನಿಷ್ಠ ಬೆಲೆ ಎಷ್ಟಿದೆ? ಇಲ್ಲಿದೆ ಪಟ್ಟಿ

14 ಮುಂಗಾರು ಬೆಳೆಗಳ ಬೆಂಬಲ ಬೆಲೆ ಘೋಷಣೆ

ಕೇಂದ್ರ ಸರ್ಕಾರ ಜೂನ್ 7ರಂದು 14 ಮುಂಗಾರು ಬೆಳೆಗಳಿಗೆ ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಿದೆ. ಭತ್ತ, ರಾಗಿ, ಜೋಳ, ಹೆಸರುಕಾಳು ಇತ್ಯಾದಿ ಬೆಳೆಗಳಿವೆ. ಭತ್ತಕ್ಕೆ ಎಂಎಸ್​ಪಿಯನ್ನು ಕ್ವಿಂಟಾಲ್​ಗೆ 143 ರೂನಷ್ಟು ಏರಿಸಲಾಗಿದೆ.

ಹೆಸರುಕಾಳಿಗೆ ಬೆಂಬಲ ಬೆಲೆ ಬರೋಬ್ಬರಿ 803 ರೂನಷ್ಟು ಹೆಚ್ಚಳವಾಗಿದೆ. ಕ್ವಿಂಟಾಲ್ ರಾಗಿಗೆ 268 ರೂಗಳಷ್ಟು ಎಂಎಸ್​ಪಿ ಹೆಚ್ಚಿಸಲಾಗಿದೆ. ಈ ವರ್ಷದ ಹಿಂಗಾರು ಬೆಳೆಗಳಿಗೆ ಸರ್ಕಾರ 2022ರ ನವೆಂಬರ್​ನಲ್ಲಿ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿತ್ತು.

2023-24ರಲ್ಲಿ ಮುಂಗಾರು ಬೆಳೆಗೆ ಸರ್ಕಾರ ಪರಿಷ್ಕರಿಸಿರುವ ಎಂಎಸ್​ಪಿ ದರ (ಕ್ವಿಂಟಾಲ್​ಗೆ):

  1. ಭತ್ತ ಸಾಮಾನ್ಯ: 2040 ರೂನಿಂದ 2183 ರೂಗೆ ಏರಿಕೆ
  2. ಭತ್ತ ಗ್ರೇಡ್ ಎ: 2060ರಿಂದ 2203 ರೂಗೆ ಏರಿಕೆ
  3. ಜೋಳ (ಹೈಬ್ರಿಡ್): 2970 ರೂನಿಂದ 3180 ರೂಗೆ ಏರಿಕೆ
  4. ಜೋಳ (ಮಾಳದಂಡಿ): 2990 ರೂನಿಂದ 3225 ರೂಗೆ ಏರಿಕೆ
  5. ಮೆಕ್ಕೆ ಜೋಳ: 1,962 ರೂನಿಂದ 2090 ರೂಗೆ ಏರಿಕೆ
  6. ಬಿಳಿ ಜೋಳ (ಬಾಜ್ರ): 2,350 ರೂನಿಂದ 2500 ರೂಗೆ ಏರಿಕೆ
  7. ರಾಗಿ: 3578 ರೂನಿಂದ 3846 ರೂಗೆ ಏರಿಕೆ
  8. ತೊಗರಿಬೇಳೆ: 6,600 ರೂನಿಂದ 7,000 ರೂಗೆ ಏರಿಕೆ
  9. ಹೆಸರುಕಾಳು: 7,755 ರೂನಿಂದ 8558 ರೂಗೆ ಏರಿಕೆ
  10. ಶೇಂಗಾ: 5,850 ರೂ
  11. ಉದ್ದಿನಬೇಳೆ: 6,600 ರೂನಿಂದ 6950 ರೂಗೆ ಏರಿಕೆ
  12. ಸೋಯಾಬೀನ್ (ಹಳದಿ): 4,300 ರೂನಿಂದ 4600 ರೂಗೆ ಏರಿಕೆ
  13. ಕಡಲೆಕಾಯಿ: 5850 ರೂನಿಂದ 6377 ರೂಗೆ ಏರಿಕೆ
  14. ಸೂರ್ಯಕಾಂತಿ ಬೀಜ: 6400 ರೂನಿಂದ 6760 ರೂಗೆ ಏರಿಕೆ
  15. ಬಿಳಿ ಎಳ್ಳು: 7830 ರೂನಿಂದ 8635 ರೂಗೆ ಏರಿಕೆ
  16. ಕಪ್ಪು ಎಳ್ಳು: 7287 ರೂನಿಂದ 7734 ರೂಗೆ ಏರಿಕೆ
  17. ಹತ್ತಿ (ಮಧ್ಯಮ): 6080ರೂನಿಂದ 6620 ರೂಗೆ ಏರಿಕೆ
  18. ಹತ್ತಿ (ಉದ್ದದ್ದು): 6380 ರೂನಿಂದ 7020 ರೂಗೆ ಏರಿಕೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:11 pm, Thu, 8 June 23

Follow Us
Gangadhar Saboji
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ