AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NDA vs INDIA: ಲೋಕಸಭೆ ಚುನಾವಣೆ ಜಯಿಸಲು ಉಭಯ ಮೈತ್ರಿಕೂಟಗಳ ತಂತ್ರಗಾರಿಕೆ ಏನು?

ಲೋಕಸಭೆ ಚುನಾವಣೆ ಜಯಿಸಲು ಉಭಯ ಮೈತ್ರಿಕೂಟಗಳ ತಂತ್ರಗಾರಿಕೆ ಏನು? ಏನೇನು ತಂತ್ರ ಪ್ರತಿತಂತ್ರ ಹಾಕಿಕೊಂಡಿವೆ ಎಂಬುದರ ಇಣುಕುನೋಟ ಇಲ್ಲಿದೆ.

NDA vs INDIA: ಲೋಕಸಭೆ ಚುನಾವಣೆ ಜಯಿಸಲು ಉಭಯ ಮೈತ್ರಿಕೂಟಗಳ ತಂತ್ರಗಾರಿಕೆ ಏನು?
ಮಲ್ಲಿಕಾರ್ಜುನ ಖರ್ಗೆ ಮತ್ತು ನರೇಂದ್ರ ಮೋದಿImage Credit source: PTI
Follow us
ಪ್ರಸನ್ನ ಗಾಂವ್ಕರ್​
| Updated By: Ganapathi Sharma

Updated on:Jul 19, 2023 | 9:51 PM

ಬೆಂಗಳೂರು, ಜುಲೈ 19: ಲೋಕಸಭೆ ಚುನಾವಣೆ (Lok Sabha Election 2024) ಸಮೀಪಿಸುತ್ತಿದ್ದಂತೆಯೇ ಆಡಳಿತಾರೂಢ ಎನ್​ಡಿಎ ಮತ್ತು ಪ್ರತಿಪಕ್ಷಗಳ ಮೈತ್ರಿಕೂಟ ಭರ್ಜರಿ ಸಿದ್ಧತೆ ಆರಂಭಿಸಿವೆ. ಕಾಂಗ್ರೆಸ್, ಟಿಎಂಸಿ ಸೇರಿದಂತೆ 26 ಪಕ್ಷಗಳ ಮಹಾ ಮೈತ್ರಿಕೂಟ ಬೆಂಗಳೂರಿನಲ್ಲಿ ಎರಡನೇ ಸಭೆ ನಡೆಸಿದ್ದು, ತಮ್ಮ ಮೈತ್ರಿಕೂಟಕ್ಕೆ ‘ಇಂಡಿಯನ್​ ನ್ಯಾಷನಲ್ ಡೆಮಾಕ್ರಟಿಕ್​​ ಇನ್​ಕ್ಲೂಸಿವ್​​​​ ಅಲೈನ್ಸ್ (INDIA / Indian National Developmental Inclusive Alliance) ಎಂದು ನಾಮಕರಣ ಮಾಡಿದೆ. ಈ ಮಧ್ಯೆ ಎನ್​​ಡಿಎ (NDA) ಮಿತ್ರಪಕ್ಷಗಳು ದೆಹಲಿಯಲ್ಲಿ ಸಭೆ ಸೇರಿ ಚುನಾವಣಾ ತಾಲೀಮಿಗೆ ರಣಕಹಳೆ ಮೊಳಗಿಸಿವೆ.

ಲೋಕಸಭೆ ಚುನಾವಣೆ ಜಯಿಸಲು ಉಭಯ ಮೈತ್ರಿಕೂಟಗಳ ತಂತ್ರಗಾರಿಕೆ ಏನು? ಏನೇನು ತಂತ್ರ ಪ್ರತಿತಂತ್ರ ಹಾಕಿಕೊಂಡಿವೆ ಎಂಬುದರ ಇಣುಕುನೋಟ ಇಲ್ಲಿದೆ.

INDIA ಮೈತ್ರಿಕೂಟದ ತಂತ್ರಗಾರಿಕೆ ಏನು?

  • ಎನ್​​ಡಿಎ ರಾಷ್ಟ್ರೀಯವಾದಿ ರಾಜಕಾರಣಕ್ಕೆ ರಾಷ್ಟ್ರೀಯವಾದದಿಂದಲೇ ತಿರುಗೇಟು ನೀಡಲು ಯೋಜನೆ
  • ಇಂಡಿಯಾ ಎಂಬ ಹೆಸರಿನ ಮೂಲಕ ಭಾವನಾತ್ಮಕ, ರಾಷ್ಟ್ರೀಯವಾದಿ ಸ್ಪರ್ಶ ನೀಡಿ ಮೊದಲ ತಂತ್ರ
  • ಭಾರತ್ ಜೋಡೋ ಮಾದರಿಯಲ್ಲೇ ಹೋರಾಟಗಳನ್ನು ರೂಪಿಸಲು ಚಿಂತನೆ
  • ಬಿಜೆಪಿ ವಿರುದ್ದ ಎಲ್ಲ ರಾಜ್ಯಗಳಲ್ಲೂ ಕಾಮನ್ ಮಿನಿಮಮ್ ಪ್ರೋಗ್ರಾಂ ಅಡಿಯಲ್ಲಿ ಹೋರಾಟ
  • ಮಣಿಪುರ ಗಲಭೆ ಸೇರಿದಂತೆ ಹಲವು ಅಂಶಗಳನ್ನು ಇಟ್ಟುಕೊಂಡು ಹೋರಾಟ ನಡೆಸಲು ಪ್ಲ್ಯಾನ್
  • ಆರ್ಥಿಕ ಹಿಂಜರಿತ, ಬೆಲೆ ಏರಿಕೆ ಉಂಟಾಗಲು ಪ್ರಧಾನಿ ಮೋದಿಯೇ ನೇರ ಕಾರಣ ಎಂದು ಬಿಂಬಿಸುವ ಪ್ರಯತ್ನ
  • ಸಾಮಾನ್ಯ ಜನರ ಮನಸ್ಸಿನಲ್ಲಿ ಇಂಡಿಯಾ ಒಕ್ಕೂಟದ ಬಗ್ಗೆ ಭರವಸೆ ಮೂಡಿಸುವುದು
  • ಲೋಕಸಭೆ ಸೀಟು ಹಂಚಿಕೆ ಸಂಬಂಧ ಪ್ರತ್ಯೇಕ ಸಮಿತಿ ರಚನೆ ಮಾಡಿಕೊಂಡು ತೀರ್ಮಾನ
  • ಯಾವ ಯಾವ ರಾಜ್ಯಗಳಲ್ಲಿ ಸೀಟು ಹಂಚಿಕೆಗೆ ಕೈ ಜೋಡಿಸಬೇಕು ಎಂದು ತೀರ್ಮಾನಿಸಲಿರುವ ಸಮಿತಿ
  • ಆಯಾಯ ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ಸೀಟು ಹಂಚಿಕೆ ಪ್ರಕ್ರಿಯೆ
  • ಇಂಡಿಯಾ ಒಕ್ಕೂಟ ಈಗ ಸರಿಸುಮಾರು 150 ಲೋಕಸಭೆ ಸದಸ್ಯರನ್ನು ಹೊಂದಿದೆ
  • ಈ ಸಂಖ್ಯೆಯನ್ನು ಕನಿಷ್ಟ 260 ಕ್ಕೆ ಹೆಚ್ಚಿಸುವುದು
  • ಚುನಾವಣಾ ಸುಧಾರಣೆಗಳ ಹೆಸರಲ್ಲಿ ಇವಿಎಂ ಮಷಿನ್​​ಗಳ ದುರ್ಬಳಕೆ ವಿರುದ್ದವೂ ಹೋರಾಟ ರೂಪಿಸುವುದು
  • ಎನ್​ಡಿಎ ಮೈತ್ರಿಕೂಟದಿಂದ ಬೇಸರಗೊಂಡಿರುವ ಬೇರೆ ಬೇರೆ ಪಕ್ಷಗಳನ್ನು ತಮ್ಮತ್ತ ಸೆಳೆಯುವುದು

2024ರ ಚುನಾವಣೆ ಗೆಲ್ಲಲು ಎನ್​​ಡಿಎ ಮಾಸ್ಟರ್ ಪ್ಲಾನ್ ಏನು?

  • 2024 ರಲ್ಲಿಯೂ ನರೇಂದ್ರ ಮೋದಿಯವರ ನೇತೃತ್ವದಲ್ಲೇ ಚುನಾವಣೆ ಎದುರಿಸುವುದು
  • ಎನ್​ಡಿಎಗೆ ಶೇ 50 ಓಟ್ ಶೇರ್ ಬರುವಂತೆ ಪ್ರಯತ್ನ ಪಡುವುದು
  • ಪ್ರಧಾನಿ ಮೋದಿ‌ಯನ್ನು ಸೋಲಿಸುವುದಕ್ಕೆ ವಿರೋಧ ಪಕ್ಷಗಳು ಒಗ್ಗಟಾಗಿವೆ ಎಂದು ಬಿಂಬಿಸುವುದು
  • ರಾಷ್ಟ್ರೀಯವಾದಿ ರಾಜಕಾರಣವನ್ನು ಮುನ್ನೆಲೆಗೆ ತರುವುದು
  • ವಿರೋಧ ಪಕ್ಷಗಳ ಒಕ್ಕೂಟವನ್ನು ‘ಕುಟುಂಬದ ಪರವಾಗಿ ಒಕ್ಕೂಟ’ ಎಂದು ಬಿಂಬಿಸುವುದು
  • ಪಕ್ಷ ದುರ್ಬಲ‌ ಇರುವ ಕಡೆ ಸಣ್ಣ ಸಣ್ಣ ಪಕ್ಷಗಳಿಗೂ ಮಹತ್ವ ನೀಡಿ, ಟಿಕೆಟ್ ನೀಡುವುದು
  • ಹೀಗಾಗಿ ಸಣ್ಣ, ಸಣ್ಣ ಪಕ್ಷಗಳು ಸೇರಿ‌ಸಿಕೊಂಡು 38 ಪಕ್ಷಗಳ ಒಕ್ಕೂಟ
  • ನಿರ್ದಿಷ್ಟ ಜಾತಿಯ ಮೇಲೆ‌ ಪ್ರಭಾವ ಇರುವ ಪಕ್ಷಗಳನ್ನು ಎನ್​​ಡಿಎ ಫೋಕಸ್ ಮಾಡಿದೆ
  • ಉತ್ತರಪ್ರದೇಶ, ಬಿಹಾರದಲ್ಲಿ ನಿರ್ದಿಷ್ಟ ಜಾತಿಗಳ ನಾಯಕರನ್ನು ಸೇರಿಸಿಕೊಂಡಿದೆ
  • ಸಣ್ಣ ಜಾತಿಗಳ ಪಕ್ಷವಾಗಿದ್ದರೂ ಮನ್ನಣೆ ನೀಡಿದೆ

NDA ಅಥವಾ INDIA ಮೈತ್ರಿಕೂಟಕ್ಕೆ‌ ಸೇರದ ಪಕ್ಷಗಳು ಯಾವುವು?

  • ಒಡಿಶಾದ ಬಿಜು ಜನತಾ ದಳ
  • ಆಂಧ್ರದ ವೈಎಸ್‌ಆರ್ ಕಾಂಗ್ರೆಸ್
  • ಕರ್ನಾಟಕದ ಜೆಡಿಎಸ್
  • ಉತ್ತರಪ್ರದೇಶದಲ್ಲಿ ಬಿಎಸ್‌ಪಿ
  • ಪಂಜಾಬ್‌ನ ಅಕಾಲಿದಳ
  • ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ
  • ತೆಲಂಗಾಣದ ಬಿಆರ್​​​ಎಸ್

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:15 pm, Wed, 19 July 23

ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮನು ರಿಯಾಕ್ಷನ್
‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮನು ರಿಯಾಕ್ಷನ್
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್?
‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್?
ಕಾಲ್ತುಳಿತ ಸಂಭವಿಸಿದಾಗ ಬಚಾವಾಗೋದು ಹೇಗೆ, ಏನು ಮಾಡಬೇಕು? ಇಲ್ಲಿದೆ ಟಿಪ್ಸ್
ಕಾಲ್ತುಳಿತ ಸಂಭವಿಸಿದಾಗ ಬಚಾವಾಗೋದು ಹೇಗೆ, ಏನು ಮಾಡಬೇಕು? ಇಲ್ಲಿದೆ ಟಿಪ್ಸ್
ಪ್ರಿಯಕರನೊಂದಿಗೆ ಬದುಕಿಕೋ ಎಂದು ಪತ್ನಿಯನ್ನು ಕಳಿಸಿದ್ದ ಪತಿ
ಪ್ರಿಯಕರನೊಂದಿಗೆ ಬದುಕಿಕೋ ಎಂದು ಪತ್ನಿಯನ್ನು ಕಳಿಸಿದ್ದ ಪತಿ
ಅಪಘಾತದ ನಂತರ ರಸ್ತೆಬದಿ ಹೋಟೆಲ್​​ಗೆ ನುಗ್ಗಿದ ಒಂದು ಟಿಪ್ಪರ್
ಅಪಘಾತದ ನಂತರ ರಸ್ತೆಬದಿ ಹೋಟೆಲ್​​ಗೆ ನುಗ್ಗಿದ ಒಂದು ಟಿಪ್ಪರ್
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ