NDA vs INDIA: ಲೋಕಸಭೆ ಚುನಾವಣೆ ಜಯಿಸಲು ಉಭಯ ಮೈತ್ರಿಕೂಟಗಳ ತಂತ್ರಗಾರಿಕೆ ಏನು?

ಲೋಕಸಭೆ ಚುನಾವಣೆ ಜಯಿಸಲು ಉಭಯ ಮೈತ್ರಿಕೂಟಗಳ ತಂತ್ರಗಾರಿಕೆ ಏನು? ಏನೇನು ತಂತ್ರ ಪ್ರತಿತಂತ್ರ ಹಾಕಿಕೊಂಡಿವೆ ಎಂಬುದರ ಇಣುಕುನೋಟ ಇಲ್ಲಿದೆ.

NDA vs INDIA: ಲೋಕಸಭೆ ಚುನಾವಣೆ ಜಯಿಸಲು ಉಭಯ ಮೈತ್ರಿಕೂಟಗಳ ತಂತ್ರಗಾರಿಕೆ ಏನು?
ಮಲ್ಲಿಕಾರ್ಜುನ ಖರ್ಗೆ ಮತ್ತು ನರೇಂದ್ರ ಮೋದಿImage Credit source: PTI
Follow us
| Updated By: ಗಣಪತಿ ಶರ್ಮ

Updated on:Jul 19, 2023 | 9:51 PM

ಬೆಂಗಳೂರು, ಜುಲೈ 19: ಲೋಕಸಭೆ ಚುನಾವಣೆ (Lok Sabha Election 2024) ಸಮೀಪಿಸುತ್ತಿದ್ದಂತೆಯೇ ಆಡಳಿತಾರೂಢ ಎನ್​ಡಿಎ ಮತ್ತು ಪ್ರತಿಪಕ್ಷಗಳ ಮೈತ್ರಿಕೂಟ ಭರ್ಜರಿ ಸಿದ್ಧತೆ ಆರಂಭಿಸಿವೆ. ಕಾಂಗ್ರೆಸ್, ಟಿಎಂಸಿ ಸೇರಿದಂತೆ 26 ಪಕ್ಷಗಳ ಮಹಾ ಮೈತ್ರಿಕೂಟ ಬೆಂಗಳೂರಿನಲ್ಲಿ ಎರಡನೇ ಸಭೆ ನಡೆಸಿದ್ದು, ತಮ್ಮ ಮೈತ್ರಿಕೂಟಕ್ಕೆ ‘ಇಂಡಿಯನ್​ ನ್ಯಾಷನಲ್ ಡೆಮಾಕ್ರಟಿಕ್​​ ಇನ್​ಕ್ಲೂಸಿವ್​​​​ ಅಲೈನ್ಸ್ (INDIA / Indian National Developmental Inclusive Alliance) ಎಂದು ನಾಮಕರಣ ಮಾಡಿದೆ. ಈ ಮಧ್ಯೆ ಎನ್​​ಡಿಎ (NDA) ಮಿತ್ರಪಕ್ಷಗಳು ದೆಹಲಿಯಲ್ಲಿ ಸಭೆ ಸೇರಿ ಚುನಾವಣಾ ತಾಲೀಮಿಗೆ ರಣಕಹಳೆ ಮೊಳಗಿಸಿವೆ.

ಲೋಕಸಭೆ ಚುನಾವಣೆ ಜಯಿಸಲು ಉಭಯ ಮೈತ್ರಿಕೂಟಗಳ ತಂತ್ರಗಾರಿಕೆ ಏನು? ಏನೇನು ತಂತ್ರ ಪ್ರತಿತಂತ್ರ ಹಾಕಿಕೊಂಡಿವೆ ಎಂಬುದರ ಇಣುಕುನೋಟ ಇಲ್ಲಿದೆ.

INDIA ಮೈತ್ರಿಕೂಟದ ತಂತ್ರಗಾರಿಕೆ ಏನು?

  • ಎನ್​​ಡಿಎ ರಾಷ್ಟ್ರೀಯವಾದಿ ರಾಜಕಾರಣಕ್ಕೆ ರಾಷ್ಟ್ರೀಯವಾದದಿಂದಲೇ ತಿರುಗೇಟು ನೀಡಲು ಯೋಜನೆ
  • ಇಂಡಿಯಾ ಎಂಬ ಹೆಸರಿನ ಮೂಲಕ ಭಾವನಾತ್ಮಕ, ರಾಷ್ಟ್ರೀಯವಾದಿ ಸ್ಪರ್ಶ ನೀಡಿ ಮೊದಲ ತಂತ್ರ
  • ಭಾರತ್ ಜೋಡೋ ಮಾದರಿಯಲ್ಲೇ ಹೋರಾಟಗಳನ್ನು ರೂಪಿಸಲು ಚಿಂತನೆ
  • ಬಿಜೆಪಿ ವಿರುದ್ದ ಎಲ್ಲ ರಾಜ್ಯಗಳಲ್ಲೂ ಕಾಮನ್ ಮಿನಿಮಮ್ ಪ್ರೋಗ್ರಾಂ ಅಡಿಯಲ್ಲಿ ಹೋರಾಟ
  • ಮಣಿಪುರ ಗಲಭೆ ಸೇರಿದಂತೆ ಹಲವು ಅಂಶಗಳನ್ನು ಇಟ್ಟುಕೊಂಡು ಹೋರಾಟ ನಡೆಸಲು ಪ್ಲ್ಯಾನ್
  • ಆರ್ಥಿಕ ಹಿಂಜರಿತ, ಬೆಲೆ ಏರಿಕೆ ಉಂಟಾಗಲು ಪ್ರಧಾನಿ ಮೋದಿಯೇ ನೇರ ಕಾರಣ ಎಂದು ಬಿಂಬಿಸುವ ಪ್ರಯತ್ನ
  • ಸಾಮಾನ್ಯ ಜನರ ಮನಸ್ಸಿನಲ್ಲಿ ಇಂಡಿಯಾ ಒಕ್ಕೂಟದ ಬಗ್ಗೆ ಭರವಸೆ ಮೂಡಿಸುವುದು
  • ಲೋಕಸಭೆ ಸೀಟು ಹಂಚಿಕೆ ಸಂಬಂಧ ಪ್ರತ್ಯೇಕ ಸಮಿತಿ ರಚನೆ ಮಾಡಿಕೊಂಡು ತೀರ್ಮಾನ
  • ಯಾವ ಯಾವ ರಾಜ್ಯಗಳಲ್ಲಿ ಸೀಟು ಹಂಚಿಕೆಗೆ ಕೈ ಜೋಡಿಸಬೇಕು ಎಂದು ತೀರ್ಮಾನಿಸಲಿರುವ ಸಮಿತಿ
  • ಆಯಾಯ ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ಸೀಟು ಹಂಚಿಕೆ ಪ್ರಕ್ರಿಯೆ
  • ಇಂಡಿಯಾ ಒಕ್ಕೂಟ ಈಗ ಸರಿಸುಮಾರು 150 ಲೋಕಸಭೆ ಸದಸ್ಯರನ್ನು ಹೊಂದಿದೆ
  • ಈ ಸಂಖ್ಯೆಯನ್ನು ಕನಿಷ್ಟ 260 ಕ್ಕೆ ಹೆಚ್ಚಿಸುವುದು
  • ಚುನಾವಣಾ ಸುಧಾರಣೆಗಳ ಹೆಸರಲ್ಲಿ ಇವಿಎಂ ಮಷಿನ್​​ಗಳ ದುರ್ಬಳಕೆ ವಿರುದ್ದವೂ ಹೋರಾಟ ರೂಪಿಸುವುದು
  • ಎನ್​ಡಿಎ ಮೈತ್ರಿಕೂಟದಿಂದ ಬೇಸರಗೊಂಡಿರುವ ಬೇರೆ ಬೇರೆ ಪಕ್ಷಗಳನ್ನು ತಮ್ಮತ್ತ ಸೆಳೆಯುವುದು

2024ರ ಚುನಾವಣೆ ಗೆಲ್ಲಲು ಎನ್​​ಡಿಎ ಮಾಸ್ಟರ್ ಪ್ಲಾನ್ ಏನು?

  • 2024 ರಲ್ಲಿಯೂ ನರೇಂದ್ರ ಮೋದಿಯವರ ನೇತೃತ್ವದಲ್ಲೇ ಚುನಾವಣೆ ಎದುರಿಸುವುದು
  • ಎನ್​ಡಿಎಗೆ ಶೇ 50 ಓಟ್ ಶೇರ್ ಬರುವಂತೆ ಪ್ರಯತ್ನ ಪಡುವುದು
  • ಪ್ರಧಾನಿ ಮೋದಿ‌ಯನ್ನು ಸೋಲಿಸುವುದಕ್ಕೆ ವಿರೋಧ ಪಕ್ಷಗಳು ಒಗ್ಗಟಾಗಿವೆ ಎಂದು ಬಿಂಬಿಸುವುದು
  • ರಾಷ್ಟ್ರೀಯವಾದಿ ರಾಜಕಾರಣವನ್ನು ಮುನ್ನೆಲೆಗೆ ತರುವುದು
  • ವಿರೋಧ ಪಕ್ಷಗಳ ಒಕ್ಕೂಟವನ್ನು ‘ಕುಟುಂಬದ ಪರವಾಗಿ ಒಕ್ಕೂಟ’ ಎಂದು ಬಿಂಬಿಸುವುದು
  • ಪಕ್ಷ ದುರ್ಬಲ‌ ಇರುವ ಕಡೆ ಸಣ್ಣ ಸಣ್ಣ ಪಕ್ಷಗಳಿಗೂ ಮಹತ್ವ ನೀಡಿ, ಟಿಕೆಟ್ ನೀಡುವುದು
  • ಹೀಗಾಗಿ ಸಣ್ಣ, ಸಣ್ಣ ಪಕ್ಷಗಳು ಸೇರಿ‌ಸಿಕೊಂಡು 38 ಪಕ್ಷಗಳ ಒಕ್ಕೂಟ
  • ನಿರ್ದಿಷ್ಟ ಜಾತಿಯ ಮೇಲೆ‌ ಪ್ರಭಾವ ಇರುವ ಪಕ್ಷಗಳನ್ನು ಎನ್​​ಡಿಎ ಫೋಕಸ್ ಮಾಡಿದೆ
  • ಉತ್ತರಪ್ರದೇಶ, ಬಿಹಾರದಲ್ಲಿ ನಿರ್ದಿಷ್ಟ ಜಾತಿಗಳ ನಾಯಕರನ್ನು ಸೇರಿಸಿಕೊಂಡಿದೆ
  • ಸಣ್ಣ ಜಾತಿಗಳ ಪಕ್ಷವಾಗಿದ್ದರೂ ಮನ್ನಣೆ ನೀಡಿದೆ

NDA ಅಥವಾ INDIA ಮೈತ್ರಿಕೂಟಕ್ಕೆ‌ ಸೇರದ ಪಕ್ಷಗಳು ಯಾವುವು?

  • ಒಡಿಶಾದ ಬಿಜು ಜನತಾ ದಳ
  • ಆಂಧ್ರದ ವೈಎಸ್‌ಆರ್ ಕಾಂಗ್ರೆಸ್
  • ಕರ್ನಾಟಕದ ಜೆಡಿಎಸ್
  • ಉತ್ತರಪ್ರದೇಶದಲ್ಲಿ ಬಿಎಸ್‌ಪಿ
  • ಪಂಜಾಬ್‌ನ ಅಕಾಲಿದಳ
  • ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ
  • ತೆಲಂಗಾಣದ ಬಿಆರ್​​​ಎಸ್

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:15 pm, Wed, 19 July 23

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ