ಚಿನ್ನದ ನಾಡಲ್ಲಿ ಸ್ಪರ್ಧೆಗೆ ಸಿದ್ದರಾಮಯ್ಯ ಚಿಂತನೆ: ಕೋಲಾರದಲ್ಲಿ ಸ್ಪರ್ಧಿಸಿದ್ರೆ ಪ್ಲಸ್, ಮೈನಸ್ ಏನು? ಇಲ್ಲಿದೆ ಗ್ರೌಂಡ್ ರಿಪೋರ್ಟ್

Edited By:

Updated on: Nov 14, 2022 | 7:32 AM

ಸಿದ್ದು ಹಾಕಿರೋ ಜಾತಿ ಲೆಕ್ಕಾಚಾರವೇನು..? ಸರ್ವೆ ರಿಪೋರ್ಟ್ ನಲ್ಲಿ ಏನಿದೆ..? ಕೋಲಾರ ಸ್ಪರ್ಧೆ ಬಗ್ಗೆ ಪ್ಲಸ್ ಮತ್ತು ಮೈನಸ್ ಪಾಯಿಂಟ್ಸ್​ ಏನು..? ಇಲ್ಲಿದೆ ನೋಡಿ ರಿಪೋರ್ಟ್

ಕೋಲಾರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಅಖಾಡಕ್ಕಿಳಿಯುತ್ತಾರೆ ಎನ್ನುವ ಪ್ರಶ್ನೆಗೆ ಇಂದು(ನವೆಂಬರ್ 13) ಸ್ವಲ್ಪ ಉತ್ತರ ಸಿಕ್ಕಂತಾಗಿದೆ. ಹೌದು… ಸಿದ್ದರಾಮಯ್ಯನವರು ಇಂದು ಕೋಲಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಈ ವೇಳೆ ನಾಮಿನೇಷನ್ ಸ್ಟೇಟ್ ಮೆಂಟ್ ಕೊಟ್ಟಿರೋ ಹಿಂದೆ ಬೇರೆಯೇ ಲೆಕ್ಕಾಚಾರವಿದೆ.

ಬಾದಾಮಿಯಿಂದ ಸ್ಪರ್ಧೆ ಮಾಡಲ್ಲ: ಮೊದಲ ಬಾರಿಗೆ ಬಹಿರಂಗವಾಗಿ ಘೋಷಿಸಿದ ಸಿದ್ದರಾಮಯ್ಯ

ಇವತ್ತು ಕೋಲಾರ ಪಿಚ್ ಗೆ ಇಳಿದಿದ್ದ ಸಿದ್ದು, ಹವಾ ಹೇಗಿದೆ ಅನ್ನೋ ರಿಪೋರ್ಟ್ ಪಡೆದುಕೊಂಡು ಬಂದಿದ್ದಾರೆ. ಹಾಗಾದ್ರೆ, ಕೋಲಾರದಿಂದಲೇ ಸಿದ್ದರಾಮಯ್ಯ ಕಣಕ್ಕಿಳಿಯುತ್ತಾರಾ? ಸಿದ್ದು ಹಾಕಿರೋ ಜಾತಿ ಲೆಕ್ಕಾಚಾರವೇನು..? ಸರ್ವೆ ರಿಪೋರ್ಟ್ ನಲ್ಲಿ ಏನಿದೆ..? ಕೋಲಾರ ಸ್ಪರ್ಧೆ ಬಗ್ಗೆ ಪ್ಲಸ್ ಮತ್ತು ಮೈನಸ್ ಪಾಯಿಂಟ್ಸ್​ ಏನು..? ಸಂಪೂರ್ಣ ವಿವರಕ್ಕಾಗಿ ವಿಡಿಯೊ ನೋಡಿ.

Published on: Nov 13, 2022 10:31 PM
Follow Us
Web contact

TV9 Kannada

Read More