AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

16 ವರ್ಷಗಳ ಬಳಿಕ ತನ್ನ ಪ್ರಿಯತಮನನ್ನ ವರಿಸಿದ ಜಗತ್ತಿನ ಅತಿ ಕಿರಿಯ ಪ್ರಧಾನಿ!

ಬರೋಬ್ಬರಿ 16 ವರ್ಷಗಳ ಬಳಿಕ ಫಿನ್​ಲ್ಯಾಂಡ್​ ಪ್ರಧಾನಿ ಸನ್ನಾ ಮರಿನ್ ತನ್ನ ಪ್ರಿಯಕರನನ್ನ ವರಿಸಿದ್ದಾರೆ. ಕಳೆದ ಶನಿವಾರ ನಡೆದ ಸರಳ ವಿವಾಹ ಸಮಾರಂಭದಲ್ಲಿ 34 ವರ್ಷದ ಪ್ರಧಾನಿ ಮರಿನ್​ ತನ್ನ ಬಹುದಿನಗಳ ಸಂಗಾತಿ ಹಾಗೂ ಮಾಜಿ ಫುಟ್​ಬಾಲ್​ ಆಟಗಾರ ಮಾರ್ಕಸ್​ ರಾಯಿಕೋನೆನ್​ರನ್ನ ವರಿಸಿದ್ದಾರೆ. ವಿವಾಹದ ಬಳಿಕ ಮಾತನಾಡಿದ ಸನ್ನಾ ಮರಿನ್ ನಾನು ಪ್ರೀತಿಸಿದ ಪುರುಷನೊಟ್ಟಿಗೆ ಬದುಕು ಹಂಚಿಕೊಳ್ಳುವ ಅವಕಾಶ ದೊರೆತಿರುವುದು ಸಂತಸ ತಂದುಕೊಟ್ಟಿದೆ ಎಂದು ತಮ್ಮ ಸಂತೋಷವನ್ನ ವ್ಯಕ್ತಪಡಿಸಿದರು. ನಾನು ಹಾಗೂ ನನ್ನ ಬಾಳ ಸಂಗಾತಿ ಜೀವನದಲ್ಲಿ […]

16 ವರ್ಷಗಳ ಬಳಿಕ ತನ್ನ ಪ್ರಿಯತಮನನ್ನ ವರಿಸಿದ ಜಗತ್ತಿನ ಅತಿ ಕಿರಿಯ ಪ್ರಧಾನಿ!
KUSHAL V
|

Updated on: Aug 03, 2020 | 6:55 PM

Share

ಬರೋಬ್ಬರಿ 16 ವರ್ಷಗಳ ಬಳಿಕ ಫಿನ್​ಲ್ಯಾಂಡ್​ ಪ್ರಧಾನಿ ಸನ್ನಾ ಮರಿನ್ ತನ್ನ ಪ್ರಿಯಕರನನ್ನ ವರಿಸಿದ್ದಾರೆ. ಕಳೆದ ಶನಿವಾರ ನಡೆದ ಸರಳ ವಿವಾಹ ಸಮಾರಂಭದಲ್ಲಿ 34 ವರ್ಷದ ಪ್ರಧಾನಿ ಮರಿನ್​ ತನ್ನ ಬಹುದಿನಗಳ ಸಂಗಾತಿ ಹಾಗೂ ಮಾಜಿ ಫುಟ್​ಬಾಲ್​ ಆಟಗಾರ ಮಾರ್ಕಸ್​ ರಾಯಿಕೋನೆನ್​ರನ್ನ ವರಿಸಿದ್ದಾರೆ.

ವಿವಾಹದ ಬಳಿಕ ಮಾತನಾಡಿದ ಸನ್ನಾ ಮರಿನ್ ನಾನು ಪ್ರೀತಿಸಿದ ಪುರುಷನೊಟ್ಟಿಗೆ ಬದುಕು ಹಂಚಿಕೊಳ್ಳುವ ಅವಕಾಶ ದೊರೆತಿರುವುದು ಸಂತಸ ತಂದುಕೊಟ್ಟಿದೆ ಎಂದು ತಮ್ಮ ಸಂತೋಷವನ್ನ ವ್ಯಕ್ತಪಡಿಸಿದರು. ನಾನು ಹಾಗೂ ನನ್ನ ಬಾಳ ಸಂಗಾತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನ ಕಂಡಿದ್ದೇವೆ. ಆದರೆ, ಈ ಪಯಣದಲ್ಲಿ ನನ್ನೊಟ್ಟಿಗೆ ಸದಾ ಇದ್ದ ಮಾರ್ಕಸ್​ಗೆ ತುಂಬು ಹೃದಯದಿಂದ ಧನ್ಯವಾದ ಹೇಳುತ್ತೇನೆ ಎಂದರು.

ತಮ್ಮ 18 ನೇ ವಯಸ್ಸಿಗೇ ಪ್ರೀತಿಯಲ್ಲಿ ಬಿದ್ದ ಮರಿನ್​ ಹಾಗೂ ಮಾರ್ಕಸ್​ ಕಳೆದ 16 ವರ್ಷಗಳಿಂದ ಒಟ್ಟಾಗಿದ್ದಾರೆ. ಪ್ರೇಮ ಪಕ್ಷಿಗಳಿಗೆ ಮುದ್ದಾದ ಎರಡು ವರ್ಷದ ಹೆಣ್ಣುಮಗಳು ಸಹ ಇದ್ದಾಳೆ. ಕಳೆದ ಡಿಸೆಂಬರ್​ನಲ್ಲಿ ದೇಶದ ಪ್ರಧಾನ ಮಂತ್ರಿಯಾದ ಮರಿನ್​ ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೇವಲ 40 ಅತಿಥಿಗಳನ್ನ ಒಳಗೊಂಡ ಮದುವೆ ಸಮಾರಂಭದಲ್ಲಿ ಸನ್ನಾ ಮರೀನ್​ ಆಕರ್ಷಕ ವೈಟ್​ ಗೌನ್​ ಧರಿಸಿದ್ದು ಮಾರ್ಕಸ್​ ಟಕ್ಸೀಡೋದಲ್ಲಿ ಮಿಂಚುತ್ತಿದ್ದರು. ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ವಿವಾಹದ ಫೋಟೋಗಳನ್ನ ದಂಪತಿ ಹಂಚಿಕೊಂಡಿದ್ದು ಹಸನ್ಮುಖಿ ದಂಪತಿಯ ಕ್ಯೂಟ್​ ಫೋಟೋಗಳು ಇದೀಗ ಸಖತ್​ ಟ್ರೆಂಡ್​ ಆಗ್ತಿದೆ.

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ