AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

16 ವರ್ಷಗಳ ಬಳಿಕ ತನ್ನ ಪ್ರಿಯತಮನನ್ನ ವರಿಸಿದ ಜಗತ್ತಿನ ಅತಿ ಕಿರಿಯ ಪ್ರಧಾನಿ!

ಬರೋಬ್ಬರಿ 16 ವರ್ಷಗಳ ಬಳಿಕ ಫಿನ್​ಲ್ಯಾಂಡ್​ ಪ್ರಧಾನಿ ಸನ್ನಾ ಮರಿನ್ ತನ್ನ ಪ್ರಿಯಕರನನ್ನ ವರಿಸಿದ್ದಾರೆ. ಕಳೆದ ಶನಿವಾರ ನಡೆದ ಸರಳ ವಿವಾಹ ಸಮಾರಂಭದಲ್ಲಿ 34 ವರ್ಷದ ಪ್ರಧಾನಿ ಮರಿನ್​ ತನ್ನ ಬಹುದಿನಗಳ ಸಂಗಾತಿ ಹಾಗೂ ಮಾಜಿ ಫುಟ್​ಬಾಲ್​ ಆಟಗಾರ ಮಾರ್ಕಸ್​ ರಾಯಿಕೋನೆನ್​ರನ್ನ ವರಿಸಿದ್ದಾರೆ. ವಿವಾಹದ ಬಳಿಕ ಮಾತನಾಡಿದ ಸನ್ನಾ ಮರಿನ್ ನಾನು ಪ್ರೀತಿಸಿದ ಪುರುಷನೊಟ್ಟಿಗೆ ಬದುಕು ಹಂಚಿಕೊಳ್ಳುವ ಅವಕಾಶ ದೊರೆತಿರುವುದು ಸಂತಸ ತಂದುಕೊಟ್ಟಿದೆ ಎಂದು ತಮ್ಮ ಸಂತೋಷವನ್ನ ವ್ಯಕ್ತಪಡಿಸಿದರು. ನಾನು ಹಾಗೂ ನನ್ನ ಬಾಳ ಸಂಗಾತಿ ಜೀವನದಲ್ಲಿ […]

16 ವರ್ಷಗಳ ಬಳಿಕ ತನ್ನ ಪ್ರಿಯತಮನನ್ನ ವರಿಸಿದ ಜಗತ್ತಿನ ಅತಿ ಕಿರಿಯ ಪ್ರಧಾನಿ!
KUSHAL V
|

Updated on: Aug 03, 2020 | 6:55 PM

Share

ಬರೋಬ್ಬರಿ 16 ವರ್ಷಗಳ ಬಳಿಕ ಫಿನ್​ಲ್ಯಾಂಡ್​ ಪ್ರಧಾನಿ ಸನ್ನಾ ಮರಿನ್ ತನ್ನ ಪ್ರಿಯಕರನನ್ನ ವರಿಸಿದ್ದಾರೆ. ಕಳೆದ ಶನಿವಾರ ನಡೆದ ಸರಳ ವಿವಾಹ ಸಮಾರಂಭದಲ್ಲಿ 34 ವರ್ಷದ ಪ್ರಧಾನಿ ಮರಿನ್​ ತನ್ನ ಬಹುದಿನಗಳ ಸಂಗಾತಿ ಹಾಗೂ ಮಾಜಿ ಫುಟ್​ಬಾಲ್​ ಆಟಗಾರ ಮಾರ್ಕಸ್​ ರಾಯಿಕೋನೆನ್​ರನ್ನ ವರಿಸಿದ್ದಾರೆ.

ವಿವಾಹದ ಬಳಿಕ ಮಾತನಾಡಿದ ಸನ್ನಾ ಮರಿನ್ ನಾನು ಪ್ರೀತಿಸಿದ ಪುರುಷನೊಟ್ಟಿಗೆ ಬದುಕು ಹಂಚಿಕೊಳ್ಳುವ ಅವಕಾಶ ದೊರೆತಿರುವುದು ಸಂತಸ ತಂದುಕೊಟ್ಟಿದೆ ಎಂದು ತಮ್ಮ ಸಂತೋಷವನ್ನ ವ್ಯಕ್ತಪಡಿಸಿದರು. ನಾನು ಹಾಗೂ ನನ್ನ ಬಾಳ ಸಂಗಾತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನ ಕಂಡಿದ್ದೇವೆ. ಆದರೆ, ಈ ಪಯಣದಲ್ಲಿ ನನ್ನೊಟ್ಟಿಗೆ ಸದಾ ಇದ್ದ ಮಾರ್ಕಸ್​ಗೆ ತುಂಬು ಹೃದಯದಿಂದ ಧನ್ಯವಾದ ಹೇಳುತ್ತೇನೆ ಎಂದರು.

ತಮ್ಮ 18 ನೇ ವಯಸ್ಸಿಗೇ ಪ್ರೀತಿಯಲ್ಲಿ ಬಿದ್ದ ಮರಿನ್​ ಹಾಗೂ ಮಾರ್ಕಸ್​ ಕಳೆದ 16 ವರ್ಷಗಳಿಂದ ಒಟ್ಟಾಗಿದ್ದಾರೆ. ಪ್ರೇಮ ಪಕ್ಷಿಗಳಿಗೆ ಮುದ್ದಾದ ಎರಡು ವರ್ಷದ ಹೆಣ್ಣುಮಗಳು ಸಹ ಇದ್ದಾಳೆ. ಕಳೆದ ಡಿಸೆಂಬರ್​ನಲ್ಲಿ ದೇಶದ ಪ್ರಧಾನ ಮಂತ್ರಿಯಾದ ಮರಿನ್​ ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೇವಲ 40 ಅತಿಥಿಗಳನ್ನ ಒಳಗೊಂಡ ಮದುವೆ ಸಮಾರಂಭದಲ್ಲಿ ಸನ್ನಾ ಮರೀನ್​ ಆಕರ್ಷಕ ವೈಟ್​ ಗೌನ್​ ಧರಿಸಿದ್ದು ಮಾರ್ಕಸ್​ ಟಕ್ಸೀಡೋದಲ್ಲಿ ಮಿಂಚುತ್ತಿದ್ದರು. ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ವಿವಾಹದ ಫೋಟೋಗಳನ್ನ ದಂಪತಿ ಹಂಚಿಕೊಂಡಿದ್ದು ಹಸನ್ಮುಖಿ ದಂಪತಿಯ ಕ್ಯೂಟ್​ ಫೋಟೋಗಳು ಇದೀಗ ಸಖತ್​ ಟ್ರೆಂಡ್​ ಆಗ್ತಿದೆ.

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು