AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿಯ ನನ್ನ ಕರವಾ ಚೌತ್ ಸುದೀರ್ಘವಾಗಿತ್ತು: ಪ್ರೀಟಿ ಜಿಂಟಾ | It was the longest Karwa Chouth for me: Preity Zinta

ಕಿಂಗ್ಸ್ ಇಲೆವೆನ್ ಪಂಜಾಬ್ ಪ್ರಾಂಚೈಸಿಯ ಮಾಲೀಕರಲ್ಲೊಬರಾಗಿರುವ ಸಿನಿಮಾ ತಾರೆ ಮತ್ತು ಸೌಂದರ್ಯದ ಖನಿ ಪ್ರೀಟಿ ಜಿಂಟಾ ಅವರಿಗೆ ಇಂಡಿಯನ್ ಪ್ರಿಮೀಯರ್ ಲೀಗಿನ 13 ನೇ ಆವೃತ್ತಿ ಮಿಶ್ರ ಭಾವನೆಗಳನ್ನು ಒದಗಿಸಿದೆ. ಈ ಬಾರಿ ಅಕೆಯ ಟೀಮು ಪ್ಲೇ ಆಫ್ ಹಂತಕ್ಕೆ ಅರ್ಹತೆ ಗಳಿಸಲಿಲ್ಲ. ಕಳೆದ ಆರು ವರ್ಷಗಳಿಂದ ಅದು ಲೀಗ್ ಹಂತದಲ್ಲೇ ನಿರ್ಗಮಿಸುತ್ತಿರುವುದು ಬೇರೆ ವಿಷಯ. ಕೊನೆಯ ಬಾರಿ ಪ್ರೀಟಿಯ ಟೀಮು ಪ್ಲೇ ಆಫ್​ನಲ್ಲಿ ಆಡಿದ್ದು 2014ರಲ್ಲಿ, ಆ ಸೀಸನ್​ನಲ್ಲಿ ಅದು ಫೈನಲ್ ಕೂಡ ಪ್ರವೇಶಿಸಿತಾದರೂ ಎರಡನೇ […]

ಈ ಬಾರಿಯ ನನ್ನ ಕರವಾ ಚೌತ್ ಸುದೀರ್ಘವಾಗಿತ್ತು: ಪ್ರೀಟಿ ಜಿಂಟಾ | It was the longest Karwa Chouth for me: Preity Zinta
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 06, 2020 | 6:59 PM

Share

ಕಿಂಗ್ಸ್ ಇಲೆವೆನ್ ಪಂಜಾಬ್ ಪ್ರಾಂಚೈಸಿಯ ಮಾಲೀಕರಲ್ಲೊಬರಾಗಿರುವ ಸಿನಿಮಾ ತಾರೆ ಮತ್ತು ಸೌಂದರ್ಯದ ಖನಿ ಪ್ರೀಟಿ ಜಿಂಟಾ ಅವರಿಗೆ ಇಂಡಿಯನ್ ಪ್ರಿಮೀಯರ್ ಲೀಗಿನ 13 ನೇ ಆವೃತ್ತಿ ಮಿಶ್ರ ಭಾವನೆಗಳನ್ನು ಒದಗಿಸಿದೆ. ಈ ಬಾರಿ ಅಕೆಯ ಟೀಮು ಪ್ಲೇ ಆಫ್ ಹಂತಕ್ಕೆ ಅರ್ಹತೆ ಗಳಿಸಲಿಲ್ಲ. ಕಳೆದ ಆರು ವರ್ಷಗಳಿಂದ ಅದು ಲೀಗ್ ಹಂತದಲ್ಲೇ ನಿರ್ಗಮಿಸುತ್ತಿರುವುದು ಬೇರೆ ವಿಷಯ. ಕೊನೆಯ ಬಾರಿ ಪ್ರೀಟಿಯ ಟೀಮು ಪ್ಲೇ ಆಫ್​ನಲ್ಲಿ ಆಡಿದ್ದು 2014ರಲ್ಲಿ, ಆ ಸೀಸನ್​ನಲ್ಲಿ ಅದು ಫೈನಲ್ ಕೂಡ ಪ್ರವೇಶಿಸಿತಾದರೂ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಅದಕ್ಕಿಂತ ಮೊದಲು ಒಮ್ಮೆ, 2008ರ ಉದ್ಘಾಟನಾ ಆವೃತ್ತಿಯಲ್ಲಿ ಅದು ಸೆಮಿಫೈನಲ್ ಹಂತವನ್ನು ತಲುಪಿತ್ತು.

ಓಕೆ, ಪ್ರೀಟಿಯ ವಿಷಯಕ್ಕೆ ಬರುವ, ಈಕೆ 2016ರಲ್ಲಿ ಅಮೆರಿಕಾದ ಉದ್ಯಮಿ ಜೀನೆ ಗುಡೆನೌ ಅವರನ್ನು ಮದುವೆಯಾಗಿದ್ದು ಎಲ್ಲ ಭಾರತೀಯರಿಗೆ ಗೊತ್ತು, ಅಕೆಯನ್ನು ಆರಾಧಿಸುತ್ತಿದ್ದವರಿಗೆ ಮತ್ತೂ ಚೆನ್ನಾಗಿ ನೆನಪಿದೆ! ಪಂಜಾಬಿನ ಹುಡುಗಿ ಅಮೆರಿಕನ್ ಪ್ರಜೆಯನ್ನು ಮದುವೆಯಾಗಿದ್ದರೂ ಭಾರತದ ಸಂಪ್ರದಾಯಗಳನ್ನು ಚಾಚೂತಪ್ಪದೆ ಪಾಲಿಸುತ್ತಾರೆ. ಉತ್ತರ ಭಾರತದಲ್ಲಿ ಕರವಾ ಚೌತ್ ಒಂದು ಪ್ರಮುಖ ಹಬ್ಬ. ಕಾರ್ತೀಕ ಮಾಸದಲ್ಲಿ ಹಿಂದೂ ಸಮುದಾಯದ ಮಹಿಳೆಯರು ಬಹಳ ಶ್ರದ್ಧೆ ಮತ್ತು ಭಕ್ತಿಭಾವದಿಂದ ಪತಿಯ ದೀರ್ಘಾಯುಷ್ಯಕ್ಕಾಗಿ, ಆರೋಗ್ಯಕ್ಕಾಗಿ ಉಪವಾಸ ವ್ರತ ಆಚರಿಸುವ ಸಂದರ್ಭವಿದು.

ಈ ವರ್ಷದ ಕರವಾ ಚೌತ್ ಮೂರು ನಾನು ಮೂರು ಕಡೆ ಆಚರಿಸಿದೆ ಅಂತ ಪ್ರೀಟಿ ತಮ್ಮ ಇನ್ಸ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ. ಪ್ರತಿ ಐಪಿಎಲ್ ಸೀಸನ್ ನಡೆಯುವಾಗ ಟೀಮಿನೊಂದಿಗೆ ಇರುವ ಪ್ರೀಟಿ ಹಬ್ಬದ ದಿನವೂ ದುಬೈನಲ್ಲಿದ್ದರು. ಆದರೆ, ಅವತ್ತೇ ಲಾಸ್ ಏಂಜೆಲಿಸ್ ವಿಮಾನ ಹತ್ತಿದ ಅವರು ಹಬ್ಬ ಮುಗಿಯುವುದರೊಳಗೆ ತಮ್ಮ ಪತಿಯನ್ನು ಸೇರಿಕೊಂಡೆನೆಂದು ಬರೆದುಕೊಂಡಿದ್ದಾರೆ.

ನನ್ನ ಈ ಬಾರಿಯ ಕರವಾ ಚೌತ್ ಸುದೀರ್ಘವಾಗಿತ್ತು, ಅದು ದುಬೈನಿಂದ ಅರಂಭಗೊಂಡು, ಮೋಡಗಳ ಮಧ್ಯೆ ಹಾದು ಅಂತಿಮವಾಗಿ ಲಾಸ್ ಏಂಜಲಿಸ್​ನಲ್ಲಿ ಲ್ಯಾಂಡ್ ಆಗುವುದರೊಂದಿಗೆ ಸಂಪನ್ನಗೊಂಡಿತು, ಎಲ್ಲರಿಗೂ ಕರವಾ ಚೌತ್ ಹಬ್ಬದ ಶುಭಾಶಯಗಳು’ ಅಂತ ಪ್ರೀಟಿ ಹೇಳಿಕೊಂಡಿದ್ದಾರೆ. 

ತಮ್ಮ ಎರಡನೇ ಸಂದೇಶದಲ್ಲಿ ಅವರು, ‘ನಾನು ಪಟ್ಟ ಶ್ರಮ ಸಾರ್ಥಕವಾಯಿತು. ಯಾಕೆಂದರೆ ಹಬ್ಬ ಮುಗಿಯವದರೊಳಗೆ ನನ್ನ ಪತಿ ಪರಮೇಶ್ವರ್ ಅವರನ್ನು ಸೇರಿಕೊಂಡೆ. ಐ ಲವ್ ಮೈ ಲವ್,’ ಎಂದು ಬರೆದುಕೊಂಡಿದ್ದಾರೆ.

ದುಬೈಯಲ್ಲಿರುವಾಗಲೂ ಅವರು ತಮ್ಮ ಪತಿಗೆ ‘ಮಿಸ್ ಯೂ,’ ‘ನಮ್ಮ ದಿಢೀರ್ ಪ್ರವಾಸಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ,’ ‘ಹೊರಗಡೆ ಸುತ್ತುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ,’ ‘ನನ್ನ ಪತಿಯನ್ನು ಮಿಸ್ ಮಾಡಿಕೊಳ್ಳತಿದ್ದೇನೆ,’ ಅಂತ ಮೆಸೇಜುಗಳನ್ನು ಇನ್ಸ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡುತ್ತಿದ್ದರು.

ಪ್ರತಿಬಾರಿ ದುಬೈಯಿಂದಲಾಸ್ ಏಂಜಲೀಸ್ ಪ್ರಯಾಣಿಸುವಾಗ ಅವರು ಕೊವಿಡ್-19 ಸಂಬಂಧಿತ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರು. ಅಂಥ ಒಂದು ಟ್ರಿಪ್​ನಲ್ಲಿ ಅವರು ಅಮೆರಿಕ ತಲುಪಿದ ಮೇಲೆ, ‘ಬಯೊ ಬಬಲ್​ನಿಂದ ಆಚೆ ಬಂದು ಲವ್ ಬಬಲ್ ಸೇರಿಕೊಂಡಿದ್ದೇನೆ, ಅಲ್ಪಾವಧಿಗೋಸ್ಕರ ಮನೆಗೆ ಬಂದಿದ್ದರೂ ಬಹಳ ಸಂತೋಷವಾಗುತ್ತಿದೆ,’ ಅಂತ ಬರೆದುಕೊಂಡಿದ್ದಾರೆ.

ಗುಡೆನೌ ಅವರನ್ನು ಮದುವೆಯಾದ ನಂತರ ಅಂದರೆ ಕಳೆದ 4 ವರ್ಷಗಳ ಅವಧಿಯಲ್ಲಿ ಪ್ರೀಟಿ ಕೇವಲ, ‘ಭೈಯಾಜಿ ಸೂಪರ್​ಹಿಟ್’ ಶೀರ್ಷಿಕೆಯ ಒಂದು ಸಿನಿಮಾದಲ್ಲಿ ಮಾತ್ರ ನಟಿಸಿದ್ದಾರೆ.

Follow Us
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ