AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Year Resolution | ಕಾತರದಿಂದ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇನೆ

ರಕ್ಕಸ ಸೋಂಕು ಇಷ್ಟರ ಮಟ್ಟಿಗೆ ಆಟವಾಡಿಸುತ್ತದೆ ಎಂದು ಯಾರೊಬ್ಬರು ಊಹಿಸಿರಲಿಲ್ಲ. ಆದರೂ ಜೀವನ ಹಾಗೂ ಸಂಬಂಧದ ಮೌಲ್ಯಗಳ ಬೆಲೆ ಸೇರಿದಂತೆ ಹಲವು ಪಾಠಗಳನ್ನು ಕೊರೊನಾ ಸೋಂಕು ಕಲಿಸಿದೆ.

New Year Resolution | ಕಾತರದಿಂದ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇನೆ
ಕಂಡಕ್ಟರ್ ಆನಂದ ಮಾಲಗತ್ತಿ
Ghanashyam D M | ಡಿ.ಎಂ.ಘನಶ್ಯಾಮ
|

Updated on:Jan 01, 2021 | 9:39 PM

Share

2021ಕ್ಕೆ ಕಾಲಿಟ್ಟ ಮೊದಲ ದಿನ ಒಂದಿಡೀ ವರ್ಷದ ತಮ್ಮ ಪ್ಲಾನ್ ಹಂಚಿಕೊಂಡರು ಬಿಎಂಟಿಸಿ ಬಸ್ ಕಂಡಕ್ಟರ್ ಆನಂದ್ ಮಾಲಗತ್ತಿ. ವೈಯಕ್ತಿಕವಾಗಿ ಎಂಥ ಬದಲಾವಣೆಗಳನ್ನು ಬಯಸುತ್ತಿದ್ದಾರೆ? ಸಮಾಜದಲ್ಲಿ ಏನೆಲ್ಲಾ ಅಂಶಗಳು ಬದಲಾಗಬೇಕೆಂದು ನಿರೀಕ್ಷಿಸುತ್ತಾರೆ? ಅದಕ್ಕಾಗಿ ಅವರೇನು ಮಾಡಬೇಕೆಂದಿದ್ದಾರೆ ಎಂಬ ಪ್ರಶ್ನೆಗಳಿಗೆ ಈ ಯುವ ಕಂಡಕ್ಟರ್​ ಕೊಟ್ಟ ಉತ್ತರಗಳಿವು..

ಹಲವು ಕನಸುಗಳನ್ನು ಹೊತ್ತಿದ್ದ ನಾನು 2020ರಲ್ಲಿ ಅವುಗಳನ್ನು ಈಡೇರಿಕೊಳ್ಳಬೇಕೆಂಬ ಕಾತರದಲ್ಲಿದ್ದೆ. ಬಹು ಮುಖ್ಯವಾಗಿ ವಿದೇಶಗಳಿಗೆ ಪ್ರವಾಸ ಹೋಗಬೇಕೆಂಬ ಆಸೆಯಿತ್ತು. ಕೊರೊನಾ ಕಾರಣದಿಂದ ಅದು ಈಡೇರಲಿಲ್ಲ. 2020ರ ವರ್ಷ ಪೂರ್ತಿ ನಿರೀಕ್ಷೆ ಮಾಡದ ಸ್ಥಿತಿಯಲ್ಲಿ ಅತ್ಯಂತ ಹೀನಾಯವಾಗಿ ಕಳೆದಿದೆ. ಕೊರೊನಾ ಮಹಾಮಾರಿಯು ಆಸೆ ಆಕಾಂಕ್ಷೆಗಳಿಗೆ ತಣ್ಣೀರು ಎರಚಿತ್ತು. ಸಾಧ್ಯವಾದಷ್ಟು ಮಟ್ಟಿಗೆ ನನ್ನ ಗುರಿ ಮತ್ತು ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ 2021ರ ಹೊಸ ವರ್ಷಕ್ಕೆ ಕಾತರದಿಂದ ಕಾಲಿಡುತ್ತಿದ್ದೇನೆ.

ರಕ್ಕಸ ಸೋಂಕು ಇಷ್ಟರ ಮಟ್ಟಿಗೆ ಆಟವಾಡಿಸುತ್ತದೆ ಎಂದು ಯಾರೊಬ್ಬರು ಊಹಿಸಿರಲಿಲ್ಲ. ಆದರೂ ಜೀವನ ಹಾಗೂ ಸಂಬಂಧದ ಮೌಲ್ಯಗಳ ಬೆಲೆ ಸೇರಿದಂತೆ ಹಲವು ಪಾಠಗಳನ್ನು ಕೊರೊನಾ ಸೋಂಕು ಕಲಿಸಿದೆ.

ಸಮಾಜ ಬದಲಾಗಬೇಕಾದರೆ ಮೊದಲು ಭ್ರಷ್ಟಾಚಾರ ಸಂಪೂರ್ಣವಾಗಿ ಮಣ್ಣು ಪಾಲಾಗಬೇಕು. ಸಾಮಾನ್ಯ ಜನರನ್ನು ತುಳಿಯುತ್ತಿರುವ ಭ್ರಷ್ಟಾಚಾರ ದೇಶದಿಂದ ಕಣ್ಮರೆಯಾದಾಗ ಮಾತ್ರ ದೇಶವು ಅಭಿವೃದ್ದಿ ಪಥದತ್ತ ಸಾಗಲು ಸಾಧ್ಯ. ರಾಜ್ಯ ಅಥವಾ ದೇಶವನ್ನಾಳುವ ಅಧಿಕಾರಿಗಳು ತಮ್ಮತಮ್ಮ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುವ ಮನಸ್ಥಿತಿಯನ್ನು ತೆಗೆದು ಸಮಾಜದ ಹಿತಕ್ಕಾಗಿ ದುಡಿದರೆ ಅಭಿವೃದ್ದಿ ಪಥದತ್ತ ಸಾಗಲು ಸಾಧ್ಯ. 2021 ರಲ್ಲಿ ನಿರ್ಗತಿಕರಿಗೆ ಅಥವಾ ಬಡವರಿಗೆ ನನ್ನ ಕೈಯಲಾದಷ್ಟು ಸಹಾಯ ಮಾಡಬೇಕೆಂದುಕೊಂಡಿದ್ದೇನೆ.

Published On - 9:37 pm, Fri, 1 January 21

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ