AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯವರ್ತಿಗಳ ಆಟಕ್ಕೆ ಬ್ರೇಕ್​.. ಕೊಪ್ಪಳದಲ್ಲಿ ಶುರುವಾಗುತ್ತಿದೆ ನೂತನ ರೈತ ಮಾರುಕಟ್ಟೆ!

ರಾಸಾಯನಿಕಗಳಿಂದ ತುಂಬಿದ ವಿಷಯುಕ್ತ ಆಹಾರವನ್ನೇ ಸೇವಿಸುತ್ತಿರುವ ಈ ಕಾಲದಲ್ಲಿ ಪೌಷ್ಠಿಕ, ಸಾವಯವ ಆಹಾರವು ಶ್ರೀಮಂತರಿಗೆ ಎನ್ನುವಂತೆ ಬಿಂಬಿತವಾಗುತ್ತಿದೆ. ಇದನ್ನು ಸರ್ವರೂ ಬಳಕೆ ಮಾಡಬೇಕು.

ಮಧ್ಯವರ್ತಿಗಳ ಆಟಕ್ಕೆ ಬ್ರೇಕ್​.. ಕೊಪ್ಪಳದಲ್ಲಿ ಶುರುವಾಗುತ್ತಿದೆ ನೂತನ ರೈತ ಮಾರುಕಟ್ಟೆ!
ಇದೇ ಮಾದರಿಯಲ್ಲಿ ಸಿದ್ಧಗೊಳ್ಳಲಿದೆ ರೈತ ಮಾರುಕಟ್ಟೆ
Skanda
|

Updated on:Jan 23, 2021 | 3:36 PM

Share

ಕೊಪ್ಪಳ: ಕೊಪ್ಪಳದಲ್ಲಿ ರೈತರಿಗಾಗಿ ವಿಶೇಷ ಮಾರುಕಟ್ಟೆಯೊಂದು ಶುರುವಾಗುತ್ತಿದೆ. ಮಧ್ಯವರ್ತಿಗಳ ಹಾವಳಿ ತಡೆಯುವ ಉದ್ದೇಶದಿಂದ ಆರಂಭವಾಗುತ್ತಿರುವ ರೈತ ಮಾರುಕಟ್ಟೆಗೆ ಜನವರಿ 26 ರಂದು ಚಾಲನೆ ದೊರೆಯಲಿದೆ. ರೈತ ಹಾಗೂ ಗ್ರಾಹಕನ ನಡುವೆ ನೇರ ವ್ಯಾಪಾರ ವಹಿವಾಟು ಏರ್ಪಡಿಸಿ, ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ರೂಪುಗೊಂಡಿರುವ ಮಾರುಕಟ್ಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಮೂಲಕ ಚಾಲನೆ ಕೊಡಿಸಲು ವ್ಯವಸ್ಥೆ ಮಾಡಲಾಗಿದೆ.

ಪ್ರತಿ ಗುರುವಾರ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಮಾರುಕಟ್ಟೆ ಏರ್ಪಡಿಸಲು ನಿರ್ಧರಿಸಲಾಗಿದ್ದು, ಸಾವಯವ, ಶುದ್ಧ ಉತ್ಪನ್ನಗಳನ್ನ ರೈತ ನಿಗದಿಪಡಿಸಿದ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡಲು ಯೋಜನೆ ರೂಪಿಸಲಾಗಿದೆ. ಬಿಸಿಲು, ಮಳೆ, ಚಳಿ ಎನ್ನದೇ ಹೊಲದಲ್ಲಿ ಕಷ್ಟಪಟ್ಟು ಬೆಳೆ ಬೆಳೆದು ಮಾರುಕಟ್ಟೆಗೆ ತಂದರೆ ಉತ್ತಮ ಬೆಲೆ ಸಿಗದೆ ಸಂಕಷ್ಟ ಎದುರಿಸುವಂತ ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಸಮಾನ ಮನಸ್ಕರ ಬಳಗ ಜಾರಿಗೆ ತರಲು ಉದ್ದೇಶಿಸಿರುವ ಈ ಯೋಜನೆ ರೈತರ ಪಾಲಿಗೆ ಆಶಾದಾಯಕ ಬೆಳವಣಿಗೆಯಾಗಿದೆ.

ಜಿಲ್ಲೆಯ ಸಮಾನ ಮನಸ್ಕರ ಬಳಗ ಇತ್ತೀಚೆಗೆ ಒಂದೆಡೆ ಸೇರಿ ಮಣ್ಣಿನೊಂದಿಗೆ ಮಾತುಕತೆ ಎಂಬ ಪರಿಕಲ್ಪನೆಯಡಿ ಪ್ರತಿ ವಾರ ರೈತರ ಜಮೀನಿಗೆ ಭೇಟಿ ನೀಡಿ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸುತ್ತಿದ್ದರು. ಈ ವೇಳೆ ರೈತರ ಮಾರುಕಟ್ಟೆ ಸ್ಥಾಪನೆಯ ವಿಚಾರವು ಪ್ರಸ್ತಾಪಕ್ಕೆ ಬಂದಿತ್ತು. ಲಗುಬಗೆಯಿಂದ ಅದನ್ನು ಈಡೇರಿಸಲು ಹೊರಟ ತಂಡ ಇದೇ ಜ. 26 ರಂದು ರೈತರ ಮಾರುಕಟ್ಟೆ ಲೋಕಾರ್ಪಣೆ ಮಾಡಲು ಸಿದ್ದತೆ ನಡೆಸಿದೆ.

ರಾಸಾಯನಿಕಗಳಿಂದ ತುಂಬಿದ ವಿಷಯುಕ್ತ ಆಹಾರವನ್ನೇ ಸೇವಿಸುತ್ತಿರುವ ಈ ಕಾಲದಲ್ಲಿ ಪೌಷ್ಠಿಕ, ಸಾವಯವ ಆಹಾರವು ಶ್ರೀಮಂತರಿಗೆ ಎನ್ನುವಂತೆ ಬಿಂಬಿತವಾಗುತ್ತಿದೆ. ಇದನ್ನು ಸರ್ವರೂ ಬಳಕೆ ಮಾಡಬೇಕು. ವಿಷಮುಕ್ತ ಆಹಾರವನ್ನು ದೂರ ಮಾಡಿ, ಶುದ್ಧತೆಯಿಂದ ಕೂಡಿರುವ ಪೌಷ್ಠಿಕ ಆಹಾರವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಮಾನ ಮನಸ್ಕರ ಬಳಗ ಹೊಸ ಪರಿಕಲ್ಪನೆಯಡಿ ರೈತರು ಹಾಗೂ ಗ್ರಾಹಕರ ನಡುವೆ ಬಾಂಧವ್ಯ ಬೆಳೆಸಲು ರೈತ ಮಾರುಕಟ್ಟೆ ಸ್ಥಾಪನೆ ಮಾಡಿದೆ ಎಂದು ಬಳಗದ ಸದಸ್ಯರು ತಿಳಿಸಿದ್ದಾರೆ.

ಕೊಪ್ಪಳ ರೈತ ಮಾರುಕಟ್ಟೆ ಸಮಿತಿ ಈಗಾಗಲೇ ನೋಂದಣಿಯಾಗಿದ್ದು, ಮಾರುಕಟ್ಟೆಯ ನಿರ್ವಹಣೆ ನೋಡಿಕೊಳ್ಳಲಿದೆ. ಇದು ಲಾಭದಾಯಕ ಉದ್ದೇಶಕ್ಕಾಗಿ ಸ್ಥಾಪಿತವಾಗದೆ ರೈತನ ಉತ್ಪನ್ನದ ಜೊತೆಗೆ ಗ್ರಾಹಕರಿಗೆ ಶುದ್ಧ ಉತ್ಪನ್ನ ಸಿಗಬೇಕೆನ್ನುವ ಧ್ಯೇಯವನ್ನಿಟ್ಟುಕೊಂಡಿದೆ. ವಿಜ್ಞಾನಿಗಳು, ಕೃಷಿ ತಜ್ಞರು ಹಾಗೂ ಅನುಭವಿ ರೈತರ ಸಲಹೆ, ಮಾರ್ಗದರ್ಶನದ ಮೇರೆಗೆ ರೈತರಿಂದಲೇ ಮಾರುಕಟ್ಟೆ ಸೃಷ್ಟಿಯಾಗುತ್ತಿದೆ.

ಇಲ್ಲಿ ಯಾವುದೇ ಮಧ್ಯವರ್ತಿಗಳು ಇರುವುದಿಲ್ಲ, ಕಮಿಷನ್ ಆಟವೂ ನಡೆಯಲ್ಲ. ಗ್ರಾಹಕನಿಂದ ಬಂದ ಎಲ್ಲ ಹಣವೂ ನೇರ ರೈತರಿಗೆ ಸಿಗಲಿದ್ದು, ಗಣರಾಜ್ಯೋತ್ಸವದ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ರೈತ ಮಾರುಕಟ್ಟೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಂಬಂಧಿಸಿದವರು ಸ್ಪಷ್ಟಪಡಿಸಿದ್ದಾರೆ.

ಮಾರುಕಟ್ಟೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ 20 ರೈತರು ನೋಂದಣಿ ಮಣ್ಣಿನೊಂದಿಗೆ ಮಾತುಕತೆಯಲ್ಲಿ ಪಾಲ್ಗೊಂಡ ರೈತ ಸಮೂಹದಲ್ಲಿ 20 ರೈತರು ಈಗಾಗಲೇ ರೈತ ಮಾರುಕಟ್ಟೆಯಲ್ಲಿ ಶುದ್ಧ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದೆ ಬಂದು ಸಮಿತಿಯಲ್ಲಿ ಹೆಸರನ್ನು ನೊಂದಾಯಿಸಿದ್ದಾರೆ. ತರಕಾರಿ, ಸೊಪ್ಪು, ಹಣ್ಣು, ದೇಸಿ ತಳಿಯ ಅಕ್ಕಿ, ಸಿರಿಧಾನ್ಯ, ಬೇಳೆಕಾಳು ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಕೇವಲ ಸಾವಯವ ಉತ್ಪನ್ನಗಳಿಗಷ್ಟೇ ಅವಕಾಶವಿರುವುದರಿಂದ ಉತ್ತಮ ಸ್ಪಂದನೆ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಕೊಪ್ಪಳದಲ್ಲಿ ಮೊದಲ ಬಾರಿಗೆ ರೈತರ ಮಾರುಕಟ್ಟೆ ಸ್ಥಾಪನೆಯಾಗುತ್ತಿರುವುದು ಸಂತಸ ಹಾಗೂ ಒಳ್ಳೆಯ ಬೆಳವಣಿಗೆಯಾಗಿದೆ. ರೈತನ ಶುದ್ಧ ಉತ್ಪನ್ನವು ನೇರ ಗ್ರಾಹಕನಿಗೆ ಉತ್ತಮ ದರದಲ್ಲಿ ಸಿಗಲಿದೆ. ಇದರಿಂದ ರೈತರಿಗೂ ಬೆಲೆ ಸಿಗಲಿದೆ. ಗ್ರಾಹಕನಿಗೆ ಶುದ್ಧ ಆಹಾರವೂ ಸಿಗಲಿದೆ. ಕೆಲ ಹಿತಚಿಂತಕರು ಸೇರಿ ಈ ಮಾರುಕಟ್ಟೆ ಸ್ಥಾಪನೆ ಮಾಡಿರುವುದು ಖುಷಿ ತರಿಸಿದೆ. -ಡಾ.ಬದರಿ ಪ್ರಸಾದ, ಕೃಷಿ ವಿಜ್ಞಾನಿ

ಮಣ್ಣಿನೊಂದಿಗೆ ಮಾತುಕತೆಯ ಹೊಸ ಪರಿಕಲ್ಪನೆಯಡಿ ರೈತರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಲಿ ರೈತರಿಗೆ ಶುದ್ಧ ಉತ್ಪನ್ನವು ಕೈ ಸೇರಲಿ ಎಂಬ ಉದ್ದೇಶದಿಂದ ನಮ್ಮ ಸಮಿತಿಯು ರೈತರ ಮಾರುಕಟ್ಟೆ ಸ್ಥಾಪನೆ ಮಾಡಿದೆ. ಇದರಲ್ಲಿ ಸಾವಯವ ಉತ್ಪನ್ನಗಳನ್ನು ರೈತರೇ ನೇರವಾಗಿ ಗ್ರಾಹಕನಿಗೆ ಮಾರಾಟ ಮಾಡಲಾಗುವುದು. -ಶಂಕರರಡ್ಡಿ ಕಾಟ್ರಳ್ಳಿ, ಕೊಪ್ಪಳ ರೈತ ಮಾರುಕಟ್ಟೆ ಸಮಿತಿ ಅಧ್ಯಕ್ಷ

ಒಟ್ಟಿನಲ್ಲಿ ಮಣ್ಣಿನೊಂದಿಗೆ ಮಾತುಕತೆ ನಡೆಸುವ ವೇಳೆ ಇಂತಹ ಆಲೋಚನೆ ಬಂದು ರೈತ-ಗ್ರಾಹಕರಿಗೆ ನೆರವಾಗುವಂತಹ ರೈತರ ಮಾರುಕಟ್ಟೆಯು ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಥಾಪನೆಯಾಗುತ್ತಿರುವುದು ನಿಜಕ್ಕೂ ಅನ್ನದಾತ ವಲಯಕ್ಕೆ ಸಂತಸ ತರಿಸಿದೆ. ಅಂದುಕೊಂಡಂತೆ ರೈತರ ಉತ್ಪನ್ನಕ್ಕೆ ಸೂಕ್ತ ಬೆಲೆ, ಗ್ರಾಹಕನಿಗೆ ಶುದ್ಧ ಉತ್ಪನ್ನ ದೊರೆತರೆ ರೈತರ ಮಾರುಕಟ್ಟೆ ಸ್ಥಾಪನೆ ಮಾಡಿದ್ದು ನಿಜಕ್ಕೂ ಸಾರ್ಥಕವಾಗಲಿದೆ.

Published On - 3:36 pm, Sat, 23 January 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ