AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸಂಕಷ್ಟದಲ್ಲೂ ಎದೆಮಟ್ಟಕ್ಕಿಂತ ಎತ್ತರದ ಕೊತ್ತಂಬರಿ ಬೆಳೆದ ರೈತ! ಎಲ್ಲಿ?

ಕೊರೊನಾ ಅನ್ನೋ ಹೆಮ್ಮಾರಿ ಇಡೀ ದೇಶವನ್ನೇ ಕಂಪಿಸುತ್ತಿದೆ. ಲಾಕ್​​ಡೌನ್ ದಿಗ್ಬಂಧನದಿಂದ ಜನರು ಕಂಗೆಟ್ಟು ಕೂತಿದ್ದಾರೆ. ಜನ ಮುಂದೇನಪ್ಪಾ ಅಂತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಆದ್ರೆ ಉತ್ತರಾಖಂಡ ರಾಜ್ಯದ ರೈತನೊಬ್ಬ ಏನಾದರೂ ಮಾಡುತಿರು, ಸುಮ್ಮನೇ ಕುಳಿತಿರಬೇಡ ಎಂಬ ನಾಣ್ಣುಡಿಯಂತೆ ಕೃಷಿಯಲ್ಲಿ ತೊಡಗಿಸಿಕೊಂಡು ದಾಖಲೆ ನಿರ್ಮಿಸಿದ್ದಾನೆ.  ಆ ರೈತ ತನ್ನ ಎದೆಮಟ್ಟಕ್ಕಿಂತ ಎತ್ತರವಾಗಿ, ಬರೋಬ್ಬರಿ 7 ಅಡಿ ಎತ್ತರದ ಕೊತ್ತಂಬರಿ ಬೆಳೆ ಬೆಳೆದು ದಾಖಲೆ ನಿರ್ಮಿಸಿದ್ದಾನೆ! ಇಂದಿನ ದಿನಗಳಲ್ಲಿ ಅನೇಕ ರೈತರು ತಮ್ಮ ಹಳ್ಳಿಗಳನ್ನು ತ್ಯಜಿಸಿ ನಗರಗಳತ್ತ ಮುಖ […]

ಕೊರೊನಾ ಸಂಕಷ್ಟದಲ್ಲೂ ಎದೆಮಟ್ಟಕ್ಕಿಂತ ಎತ್ತರದ ಕೊತ್ತಂಬರಿ ಬೆಳೆದ ರೈತ! ಎಲ್ಲಿ?
ಸಾಧು ಶ್ರೀನಾಥ್​
|

Updated on:May 13, 2020 | 1:02 PM

Share

ಕೊರೊನಾ ಅನ್ನೋ ಹೆಮ್ಮಾರಿ ಇಡೀ ದೇಶವನ್ನೇ ಕಂಪಿಸುತ್ತಿದೆ. ಲಾಕ್​​ಡೌನ್ ದಿಗ್ಬಂಧನದಿಂದ ಜನರು ಕಂಗೆಟ್ಟು ಕೂತಿದ್ದಾರೆ. ಜನ ಮುಂದೇನಪ್ಪಾ ಅಂತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಆದ್ರೆ ಉತ್ತರಾಖಂಡ ರಾಜ್ಯದ ರೈತನೊಬ್ಬ ಏನಾದರೂ ಮಾಡುತಿರು, ಸುಮ್ಮನೇ ಕುಳಿತಿರಬೇಡ ಎಂಬ ನಾಣ್ಣುಡಿಯಂತೆ ಕೃಷಿಯಲ್ಲಿ ತೊಡಗಿಸಿಕೊಂಡು ದಾಖಲೆ ನಿರ್ಮಿಸಿದ್ದಾನೆ.  ಆ ರೈತ ತನ್ನ ಎದೆಮಟ್ಟಕ್ಕಿಂತ ಎತ್ತರವಾಗಿ, ಬರೋಬ್ಬರಿ 7 ಅಡಿ ಎತ್ತರದ ಕೊತ್ತಂಬರಿ ಬೆಳೆ ಬೆಳೆದು ದಾಖಲೆ ನಿರ್ಮಿಸಿದ್ದಾನೆ!

ಇಂದಿನ ದಿನಗಳಲ್ಲಿ ಅನೇಕ ರೈತರು ತಮ್ಮ ಹಳ್ಳಿಗಳನ್ನು ತ್ಯಜಿಸಿ ನಗರಗಳತ್ತ ಮುಖ ಮಾಡುವುದೇ ಹೆಚ್ಚು. ಆದ್ರೆ ಇಲ್ಲೊಬ್ಬ ರೈತ ದೆಹಲಿಯಲ್ಲಿ ಮಾಡುತ್ತಿದ್ದ ಕಾರ್ಪೊರೇಟ್​ ಕೆಲಸವನ್ನು ತ್ಯಜಿಸಿ, ತನ್ನ ಹಳ್ಳಿಗೆ ಮರಳಿದ್ದಾನೆ. ಅಲ್ಮೋರಾ ಜಿಲ್ಲೆಯ ರಾಣಿಖೇತ್‌ ನಗರದ ಸಮೀಪವಿರುವ ಬಿಲ್ಲೆಕ್ ಗ್ರಾಮದಲ್ಲಿ ಸಾವಯವ ಕೃಷಿ ಮಾಡುವ ಮೂಲಕ ರೈತ ಗೋಪಾಲ್ ಉಪ್ರೇತಿ ಇತಿಹಾಸ ನಿರ್ಮಿಸಿದ್ದಾನೆ.

Coriander Guinness Record:

ಸಾವಯವ ಕೃಷಿ ಮೂಲಕ 7 ಅಡಿ ಎತ್ತರದ ಕೊತ್ತಂಬರಿ ಬೆಳೆಸಿದ್ದಕ್ಕಾಗಿ ಗೋಪಾಲ್ ಉಪ್ರೇತಿ ಭಾರತದ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ತಮ್ಮ ಹೆಸರು ದಾಖಲಾಗುವಂತೆ ಮಾಡಿದ್ದಾರೆ. ಮುಂದೆ ಇದು ಗಿನ್ನಿಸ್ ಬುಕ್ ಆಫ್​ ವರ್ಲ್ಡ್​ ರೆಕಾರ್ಡ್ಸ್​ ಗೂ ಸೇರ್ಪಡೆಗೊಳಿಸುವ ಪ್ರಯತ್ನದಲ್ಲಿದ್ದಾರೆ. ಇದರಿಂದ, ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಸಾವಯವ ಕೃಷಿಯಲ್ಲಿ ರೈತನ ಸಾಹಸ: ಗೋಪಾಲ್ ಉಪ್ರೇತಿ ಅವರು 2016ರಲ್ಲಿ ಸ್ವಂತ ಸೇಬು ತೋಟಗಳನ್ನು ಮಾಡಿದರು. ಇದೀಗ ತನ್ನ ಹಳ್ಳಿಯಲ್ಲಿ ಸಾವಯವ ಕೃಷಿಯ ಮೂಲಕ ಸೇಬಿನ ಜೊತೆಗೆ ಆವಕಾಡೊ, ಜಲ್ದರು ಹಣ್ಣು (Apricot) ಮತ್ತು ರುಚಿಕರವಾದ ಪೀಚ್ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಅಲ್ಲದೆ, ಇವರ ಸಾವಯವ ತೋಟದಲ್ಲಿ ಬೆಳ್ಳುಳ್ಳಿ, ಎಲೆಕೋಸು, ಮೆಂತ್ಯ ಬೆಳೆಯುತ್ತಿದ್ದಾರೆ.

ಕೊತ್ತಂಬರಿ ಮೂಲಕ ದಾಖಲೆ: ಕೃಷಿ ತಜ್ಞರ ಪ್ರಕಾರ ಅತ್ಯುತ್ತಮವಾದ ಕೊತ್ತೊಂಬರಿ ಗಿಡವು ಸುಮಾರು 4 ಅಡಿ ವರೆಗೆ ಮಾತ್ರ ಬೆಳೆಯುತ್ತದೆ. ಆದ್ರೆ ಗೋಪಾಲ್ ಅವರು ಸಾವಯವ ಕೃಷಿ ಮೂಲಕ 7 ಅಡಿ ಎತ್ತರದ ಕೊತ್ತಂಬರಿ ಬೆಳೆದಿದ್ದಾರೆ. ಹಾಗಾಗಿ ಇದನ್ನು ಗಣನೀಯ ಸಾಧನೆ ಎಂದು ಕೃಷಿ ತಜ್ಞರು ಪರಿಗಣಿಸಿದ್ದಾರೆ. ಈ ಹಿಂದೆ 5 ಅಡಿ 11 ಇಂಚು ಇದ್ದ ದಾಖಲೆಯನ್ನು ಗೋಪಾಲ್ ಮುರಿದಿದ್ದಾರೆ.

ವಾರ್ಷಿಕ ಆದಾಯ 1 ಕೋಟಿಗೂ ಹೆಚ್ಚು: ತೋಟಗಾರಿಕೆಯಲ್ಲಿ ಗೋಪಾಲ್ ಅವರು ಹಲವು ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ. ಸಾವಯವ ಕೃಷಿ ಮೂಲಕ ವಾರ್ಷಿಕ ಆದಾಯ 1 ಕೋಟಿ ರೂಪಾಯಿಗಿಂತಲೂ ಹೆಚ್ಚಾಗಿದೆ. ಗೋಪಾಲ್​ಗೆ ಕಾರ್ಪೊರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗಲೂ ಇಷ್ಟೊಂದು ಆದಾಯ ಇರಲಿಲ್ಲವಂತೆ!

Published On - 4:59 pm, Tue, 12 May 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ