AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದಲ್ಲಿ ಕಥೆಗಾರ ಎಸ್​. ಗಂಗಾಧರಯ್ಯ

’ಈ ವರ್ಷ ಓದಿದ ಹಲವು ಪುಸ್ತಕಗಳಲ್ಲಿ ಸುಮಾರು ಪುಸ್ತಕಗಳನ್ನು ಈ ಪಟ್ಟಿಗೆ ಸೇರಿಸಬಹುದು. ಆದರೂ ಈ ಎರಡು ಪುಸ್ತಕಗಳ ಬಗ್ಗೆಯೇ ಯಾಕೆ ಇಲ್ಲಿ ಬರೆದಿದ್ದೇನೆ?‘ ಕಥೆಗಾರ ಎಸ್​. ಗಂಗಾಧರಯ್ಯ,

ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದಲ್ಲಿ ಕಥೆಗಾರ ಎಸ್​. ಗಂಗಾಧರಯ್ಯ
ಕಥೆಗಾರ, ಅನುವಾದಕ ಎಸ್​. ಗಂಗಾಧರಯ್ಯ
ಶ್ರೀದೇವಿ ಕಳಸದ
|

Updated on:Dec 30, 2020 | 12:49 PM

Share

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಲೇಖಕರು, ಕವಿಗಳು, ಕಲಾವಿದರು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಕಥೆಗಾರ, ಅನುವಾದಕ ಎಸ್. ಗಂಗಾಧರಯ್ಯ ಅವರ ಆಯ್ಕೆಗಳು ಇಲ್ಲಿವೆ.

ನಾನು ಈ ವರ್ಷ ಓದಿದ ಹಲವು ಪುಸ್ತಕಗಳಲ್ಲಿ ಸುಮಾರು ಪುಸ್ತಕಗಳನ್ನು ಈ ಪಟ್ಟಿಗೆ ಸೇರಿಸಬಹುದು. ಆದರೂ ಕೆಳಕಂಡ ಎರಡು ಪುಸ್ತಕಗಳನ್ನಿಲ್ಲಿ ಸೂಚಿಸುತ್ತಿದ್ದೇನೆ.

ಇದಕ್ಕೆ ಕಾರಣ:

1.ಇವು ಆಯಾ ಪ್ರಕಾರಗಳಲ್ಲಿ ಇವರಿಬ್ಬರುಗಳ ಮೊದಲ ಸಂಕಲನಗಳು.

2.ಹಾಗಂತ ಯಾವ ರಿಯಾಯ್ತಿಯನ್ನು ಬೇಡದಿರುವುಗಳು.

3. ಸದರಿ ಪ್ರಕಾರಗಳಲ್ಲಿ ಇವರಿಬ್ಬರಿಗೂ ದಕ್ಕಿರುವ ಅಭಿವ್ಯಕ್ತಿ ಹಾಗೂ ಮಾನವೀಯ ಮೌಲ್ಯಗಳ ಬಗೆಗಿನ ಕಾಳಜಿ.

5. ಪಳಗಿದ ಕೈಗಳಷ್ಟೇ ಮಾಗಿದಕ ಲಾತ್ಮಕತೆ.

6. ಭಾಷೆಯ ಲವಲವಿಕೆ.

7. ಅಭಿವ್ಯಕ್ತಿಗಳಲ್ಲಿನ ಪ್ರಾಮಾಣಿಕತೆ.

ಕೃ: ಹಿಂಡೆಕುಳ್ಳು (ಕಥಾ ಸಂಕಲನ) ಲೇ: ಅಮರೇಶ ಗಿಣಿವಾರ  ಪ್ರ: ಸಂಗಾತ

ಇದು ಅಮರೇಶ ಗಿಣಿವಾರರ ಮೊದಲ ಕಥಾ ಸಂಕಲನ. ಇಲ್ಲಿ ವ್ಯಂಗ್ಯ, ವಿಷಾದ, ಹೆಪ್ಪುಗಟ್ಟಿದ ನೋವು, ಹತಾಶೆ, ಹಸಿವು, ಬಡತನ, ಕಾಮ ಮುಂತಾವುಗಳನ್ನು ಕಥೆಗಾರ ನಿಭಾಯಿಸಿರುವ ಹಾಗೂ ಉಪದೇಶದ ಬದಲಿಗೆ ನಿಜ ಚಿತ್ರಣವನ್ನುಕೊಟ್ಟು ತೀರ್ಮಾನವನ್ನು ಓದುಗನ ಮರ್ಜಿಗೆ ಬಿಡುವಂಥ ತಾಳ್ಮೆ ಈ ಕಥೆಗಾರನಿಂದ ಬರೆಸಿಕೊಳ್ಳಬಹುದಾದ ಸರಕು ಬಹಳಷ್ಟಿದೆ ಅಂತೆಯೇ ಅದನ್ನು ನಿಭಾಯಿಸಬಲ್ಲ ಕಸುವಿದೆ ಅನ್ನುದನ್ನು ಸಾಬೀತುಪಡಿಸುತ್ತದೆ. ಇಲ್ಲಿ ಅನಾವರಣಗೊಳ್ಳುವ ಹಳ್ಳಿಯ ಬದುಕು ಮಾಸದ ಚಿತ್ರದಂತೆ ಮನದೊಳಗೆ ನೆಲಸುತ್ತದೆ.

ಕೃ: ಬಾನ ಸಮುದ್ರಕೆ ಗಾಳನೋಟ (ಕವನ ಸಂಕಲನ) ಲೇ: ಪ್ರವೀಣ  ಪ್ರ: ಸಲೀಲ ಪ್ರಕಾಶನ

ಮೊದಲ ಕವಿತೆಯನ್ನು ಬರೆದ ಇಪ್ಪತ್ತೆಂಟು ವರ್ಷಗಳ ತರುವಾಯ ಪ್ರಕಟವಾದ ಪ್ರವೀಣರ ಮೊದಲ ಕವನ ಸಂಕಲನವಿದು! ಇದುಕವಿಯ ಸಂಯಮಕ್ಕೆ ಸಾಕ್ಷಿ. ಅದೇ ರೀತಿ, ಲೋಕದೃಷ್ಟಿ, ಸ್ವಮರುಕದಲ್ಲಿ ಮುಳುಗದ ಅನುಭವ, ತರ್ಕದೊಳಗೆ ಕವಿತೆಯನ್ನು ಬಂದಿಸಲಿಚ್ಛಿಸದ ಕವಿಯ ಗುಣದೊಂದಿಗೆದುಃಖ ಹಾಗೂ ಹತಾಶೆಗಳನ್ನು ಹಳಹಳಿಕೆ ಮಾಡದಿರುವ ಕಲಾತ್ಮಕತೆ ಮತ್ತು ತಾಜಾ ರೂಪಕಗಳೊಂದಿಗೆ ಇಲ್ಲಿನ ಕವಿತೆಗಳು ನಿಜ ಕವಿತೆಗಳಾಗಿವೆ.

ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದಲ್ಲಿ ಕಥೆಗಾರ ಶ್ರೀಧರ ಬಳಗಾರ

Published On - 12:08 pm, Wed, 30 December 20

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್