ಜೀವನದಲ್ಲಿ ಯಶಸ್ಸು ಸಾಧಿಸಲು ಈ ಅಮೂಲ್ಯ ಸಂಗತಿಗಳನ್ನು ಅನುಸರಿಸಿ

| Updated By: ಸಾಧು ಶ್ರೀನಾಥ್​

Updated on: Oct 11, 2024 | 2:03 AM

ಚಾಣಕ್ಯನ ಪ್ರಕಾರ ಯಶಸ್ಸು, ಖ್ಯಾತಿ ಮತ್ತು ಗೌರವವನ್ನು ಪಡೆಯುವುದು ಬಾಳೆಹಣ್ಣಿನ ಸಿಪ್ಪೆ ಸುಲಿದಂತೆ ಸುಲಲಿತವಾದುದು. ಆದರೆ ಜಸ್ಟ್​ ನೀವು ಸರಿಯಾದ ತಂತ್ರವನ್ನು ತಿಳಿದು, ಅಳವಡಿಸಿಕೊಳ್ಳಬೇಕು ಮತ್ತು ಆ ದಿಕ್ಕಿನಲ್ಲಿ ಶ್ರಮವಹಿಸಲು ಸಿದ್ಧರಾಗಿರಬೇಕು ಅಷ್ಟೇ.

ಜೀವನದಲ್ಲಿ ಯಶಸ್ಸು ಸಾಧಿಸಲು ಈ ಅಮೂಲ್ಯ ಸಂಗತಿಗಳನ್ನು ಅನುಸರಿಸಿ
ಜೀವನದಲ್ಲಿ ಯಶಸ್ಸು ಸಾಧಿಸಲು ಈ ಅಮೂಲ್ಯ ಸಂಗತಿಗಳನ್ನು ಅನುಸರಿಸಿ
Follow us on

Chanakya Niti: ಚಾಣಕ್ಯ ನೀತಿ – ಆಚಾರ್ಯ ಚಾಣಕ್ಯ ಮಹಾನ್ ವ್ಯಕ್ತಿ. ಅವರು ರಾಜ ಸಲಹೆಗಾರ, ಶಿಕ್ಷಕ, ತತ್ವಜ್ಞಾನಿ, ಅರ್ಥಶಾಸ್ತ್ರಜ್ಞ ಮತ್ತು ಮಾಸ್ಟರ್ ಸ್ಟ್ರಾಟಜಿಸ್ಟ್ ಆಗಿದ್ದರು. ಅವರ ಬುದ್ಧಿವಂತಿಕೆ ಮತ್ತು ಸಾಮರ್ಥ್ಯಗಳು ಭಾರತೀಯ ಇತಿಹಾಸದ ಹಾದಿಯನ್ನು ಬದಲಾಯಿಸಿದವು. ಚಾಣಕ್ಯನ ಪ್ರಕಾರ ಯಶಸ್ಸು, ಖ್ಯಾತಿ ಮತ್ತು ಗೌರವವನ್ನು ಪಡೆಯುವುದು ಬಾಳೆಹಣ್ಣಿನ ಸಿಪ್ಪೆ ಸುಲಿದಂತೆ ಸುಲಲಿತವಾದುದು. ಆದರೆ ಜಸ್ಟ್​ ನೀವು ಸರಿಯಾದ ತಂತ್ರವನ್ನು ತಿಳಿದು, ಅಳವಡಿಸಿಕೊಳ್ಳಬೇಕು ಮತ್ತು ಆ ದಿಕ್ಕಿನಲ್ಲಿ ಶ್ರಮವಹಿಸಲು ಸಿದ್ಧರಾಗಿರಬೇಕು ಅಷ್ಟೇ.

ನೀವು ಜೀವನದಲ್ಲಿ ತತಕ್ಷಣದ ಯಶಸ್ಸನ್ನು ಪಡೆಯಲು ಬಯಸುವವರಾಗಿದ್ದರೆ, ಚಾಣಕ್ಯನ ಈ ನೀತಿ ಪಾಠಗಳು ಊರುಗೋಲು ಆಗುತ್ತದೆ.

  • ಯಾವುದೇ ವ್ಯಕ್ತಿಯು ಜೀವನದಲ್ಲಿ ಪ್ರಾಮಾಣಿಕವಾಗಿರಬೇಕು.
  • ಬುದ್ಧಿವಂತ ವ್ಯಕ್ತಿಯು ತನ್ನ ಹಣಕಾಸಿನ ತೊಂದರೆಗಳ ಬಗ್ಗೆ ಎಂದಿಗೂ ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ. ನೀವು ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದರೆ, ಆ ಸಂಗತಿಯನ್ನು ನಿಮ್ಮ ಆಂತರ್ಯದಲ್ಲಿಯೇ ಇಟ್ಟುಕೊಳ್ಳಿ.
  • ನಿಮ್ಮ ದೊಡ್ಡ ಯೋಜನೆಗಳನ್ನು ಯಾವಾಗಲೂ ರಹಸ್ಯವಾಗಿಡಿ. ಅದರ ಬಗ್ಗೆ ಹೆಚ್ಚಾಗಿ ಜನರ ಗಮನ ಸೆಳೆಯದೆ ಕೆಲಸವನ್ನು ಮುಂದುವರಿಸುವುದು ಸರಳವಾದ ಸಲಹೆಯಾಗಿದೆ.Also

    Read: ದಸರಾ ಶಬ್ದದ ಉತ್ಪತ್ತಿ: ನವರಾತ್ರಿಯ ಬಗ್ಗೆ ಧರ್ಮಶಾಸ್ತ್ರ ಏನು ಹೇಳುತ್ತದೆ? ಈ ಹಿಂದೆ ಒಟ್ಟು ಎಷ್ಟು ನವರಾತ್ರಿಗಳನ್ನು ಆಚರಿಸುತ್ತಿದ್ದರು?

  • ಪ್ರಸ್ತುತ ನೀವು ಶ್ರೀಮಂತಿಕೆ ಹೊಂದಿಲ್ಲದಿದ್ದರೂ ಸಹ, ನೀವು ತಕ್ಷಣದ ಯಶಸ್ಸನ್ನು ಪಡೆಯಲು ಬಯಸಿದರೆ ನಿಮ್ಮ ಸುತ್ತಲೂ ಸಂಪತ್ತಿನ ಭ್ರಮಾ ಕೋಟೆಯನ್ನು ಸೃಷ್ಟಿಸುವುದು ಮುಖ್ಯ ಎಂದು ಚಾಣಕ್ಯ ಹೇಳುತ್ತಾರೆ. ಜಗತ್ತು ಶ್ರೀಮಂತರನ್ನು ಕುರುಡಾಗಿ ಗೌರವಿಸುತ್ತದೆ ಮತ್ತು ನಂಬುತ್ತದೆ.
  • ಯಾರ ಜ್ಞಾನವು ಪುಸ್ತಕಗಳಿಗೆ ಸೀಮಿತವಾಗಿದೆಯೋ, ಮತ್ತು ಯಾರ ಸಂಪತ್ತು ಬೇರೆಯವರ ಸ್ವಾಧೀನದಲ್ಲಿ ಇರುತ್ತದೆಯೋ ಅವರು ಜ್ಞಾನ ಅಥವಾ ಸಂಪತ್ತನ್ನು ಅಗತ್ಯವಿದ್ದಾಗ ಬಳಸಲಾಗುವುದಿಲ್ಲ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)