AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಗವಂತನಿಗೆ ಕುಳಿತುಕೊಂಡು ಪೂಜೆ ಮಾಡಬೇಕಾ, ನಿಂತುಕೊಂಡು ಪೂಜೆ ಮಾಡಬಹುದಾ? ಮನೆಯಲ್ಲಿ ಪೂಜಾ ಸ್ಥಳ ಹೇಗಿರಬೇಕು?

Puja Room: ದೇವರ ಕೋಣೆಯ ಎತ್ತರ: ಮನೆಯಲ್ಲಿ ಪೂಜೆ ಮಾಡುವ ಸ್ಥಳವನ್ನು ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ಮಾಡಬೇಕು. ಈ ದಿಕ್ಕನ್ನು ವಾಸ್ತು ಶಾಸ್ತ್ರದಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ. ಅದೇ ಸಮಯದಲ್ಲಿ, ಮನೆಯಲ್ಲಿರುವ ದೇವರ ಕೋಣೆಯ ಎತ್ತರಕ್ಕಿಂತ ಎರಡು ಪಟ್ಟು ಹೆಚ್ಚು ಅಗಲ ಇರಬೇಕು.

ಭಗವಂತನಿಗೆ ಕುಳಿತುಕೊಂಡು ಪೂಜೆ ಮಾಡಬೇಕಾ, ನಿಂತುಕೊಂಡು ಪೂಜೆ ಮಾಡಬಹುದಾ? ಮನೆಯಲ್ಲಿ ಪೂಜಾ ಸ್ಥಳ ಹೇಗಿರಬೇಕು?
ಮನೆಯಲ್ಲಿ ಪೂಜಾ ಸ್ಥಳ ಹೇಗಿರಬೇಕು?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: May 31, 2023 | 6:12 PM

Share

ಹಿಂದೂ ಧರ್ಮದಲ್ಲಿ (Hindu) ಭಕ್ತರು (Devotee) ಮಾಡುವ ದೈನಂದಿನ ಪೂಜೆಗೆ ತನ್ನದೇ ಆದ ಪ್ರಾಮುಖ್ಯತೆ ಇದೆ, ವೈಶಿಷ್ಟ್ಯತೆ ಇದೆ. ನಾವು ಮನೆಯಲ್ಲಿ ಮಾಡುವ ಈ ಸರಳ ಪೂಜೆಯು ನಮ್ಮ ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ಹೊಂದಿದೆ. ಅದೇ ರೀತಿ ನಾವು ಪೂಜೆಯಲ್ಲಿ ಹಲವು ನಿಯಮಗಳನ್ನು ಪಾಲಿಸುವುದು ಕೂಡ ಅಷ್ಟೇ ಮುಖ್ಯ. ನಿಯಮಗಳು ಅಥವಾ ಆಚರಣೆಗಳ ಪ್ರಕಾರ ಪೂಜಾ ಕೈಂಕರ್ಯವನ್ನು ಪೂರ್ಣಗೊಳಿಸುವುದರಿಂದ ಮಾತ್ರ ನಾವು ಪೂಜೆಯ ಸಂಪೂರ್ಣ ಫಲವನ್ನು ಪಡೆಯುತ್ತೇವೆ. ಆದರೆ, ತಿಳಿದೋ ತಿಳಿಯದೆಯೋ ಕೆಲವರು ಪೂಜೆಯ ವೇಳೆ ತಪ್ಪು ಮಾಡುತ್ತಾರೆ. ಇದರಿಂದ ಅವರಿಗೆ ಪೂಜೆಯ ಫಲ ಸಿಗುವುದಿಲ್ಲ. ಪೂಜೆ ಅಪೂರ್ಣ. ಅಂತಹ ಪರಿಸ್ಥಿತಿಯಲ್ಲಿ, ನೀವು ತಪ್ಪು ವಿಧಾನ ಮತ್ತು ನಿಯಮಗಳೊಂದಿಗೆ ಪೂಜೆಯನ್ನು ಮಾಡಿದರೆ, ನೀವು ತುಂಬಾ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪೂಜೆಯನ್ನು ಮಾಡಲು ಸರಿಯಾದ ಮಾರ್ಗಗಳು ಯಾವುವು? ಭಗವಂತನಿಗೆ ಕುಳಿತುಕೊಂಡು ಪೂಜೆ ಮಾಡಬೇಕಾ, ಎದ್ದು ನಿಂತುಕೊಂಡು ಪೂಜೆ ಮಾಡಬಹುದಾ? ವಿಜ್ಞಾನ ಏನು ಹೇಳುತ್ತದೆ? ಈಗ ಕಂಡುಕೊಳ್ಲೋಣ. ಕುಳಿತುಕೊಂಡೋ ಅಥವಾ ನಿಂತುಕೊಂಡೊ ದೇವರ ಪೂಜೆ ಮಾಡುವುದು ಹೇಗೆ..? ನಂಬಿಕೆಗಳ ಪ್ರಕಾರ ಮನೆಯಲ್ಲಿ ನಿಂತು ಪೂಜೆ ಮಾಡಬಾರದು. ಏಕೆಂದರೆ ದೇವರನ್ನು ನಿಂತು ಪೂಜಿಸುವುದು ಒಳ್ಳೆಯದಲ್ಲ. ಹೀಗೆ ಪೂಜಿಸುವುದರಿಂದ ಕೋರಿದ ಫಲ ಸಿಗುವುದಿಲ್ಲ. ಹಾಗಾಗಿ ಪೂಜಾ ಸಮಯದಲ್ಲಿ ಮನೆಯಲ್ಲಿ ನಿಂತು ಪೂಜೆ ಮಾಡಬೇಡಿ. ನೀವು ಪೂಜೆ ಮಾಡುವಾಗ, ನೀವು ಮೊದಲು ಆಸನವನ್ನು (ಪೀಠ) ನೆಲದ ಮೇಲೆ ಇರಿಸಬೇಕು ಮತ್ತು ಅದರ ಮೇಲೆ ಕುಳಿತು ಮಾತ್ರ ಪೂಜೆ ಮಾಡಬೇಕು ಎಂಬುದನ್ನು ನೆನಪಿಡಿ (Spiritual).

ಸರಿಯಾದ ಪೂಜಾ ವಿಧಾನ ಯಾವುದು? ವಾಸ್ತು ಶಾಸ್ತ್ರದ ಪ್ರಕಾರ, ಪೂಜೆಯ ಸಮಯದಲ್ಲಿ, ನೀವು ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಬೇಕು. ಗಂಟೆ, ಧೂಪ, ದೀಪ ಇತ್ಯಾದಿಗಳನ್ನು ನಿಮ್ಮ ಬಲಭಾಗದಲ್ಲಿ ಇಡಬೇಕು. ಈ ದಿಕ್ಕಿಗೆ ಮುಖ ಮಾಡಿ ಪೂಜೆ ಮಾಡುವುದು ಉತ್ತಮವೆಂದು ಪರಿಗಣಿಸಲಾಗಿದೆ. ಏಕೆಂದರೆ ಪೂರ್ವ ದಿಕ್ಕು ಶಕ್ತಿ ಮತ್ತು ಧೈರ್ಯದ ಸಂಕೇತವಾಗಿದೆ. ಈ ದಿಕ್ಕಿನಲ್ಲಿ ಪೂಜಾ ಮಂದಿರವನ್ನು ಮಾಡುವುದರಿಂದ ಮನೆಯಲ್ಲಿ ವಾಸಿಸುವ ಜನರಿಗೆ ಶಾಂತಿ, ನೆಮ್ಮದಿ, ಸಂಪತ್ತು, ಸಂತೋಷ ಮತ್ತು ಆರೋಗ್ಯವು ದೊರೆಯುತ್ತದೆ.

ಹಣೆಗೆ ಕುಂಕುಮವಿಟ್ಟುಕೊಳ್ಳದೆ ಪೂಜೆ ಮಾಡಬೇಡಿ: ಶಾಸ್ತ್ರಗಳ ಪ್ರಕಾರ ಪೂಜೆಯ ಸಮಯದಲ್ಲಿ ಪೂಜೆಗೆ ಬಳಸುವ ಹಣ್ಣುಗಳು, ಹೂವುಗಳು, ನೀರಿನ ಪಾತ್ರೆ, ಶಂಖವನ್ನು ನಿಮ್ಮ ಎಡಭಾಗದಲ್ಲಿ ಇಡಬೇಕು. ನಮ್ಮ ನಿತ್ಯದ ಪೂಜೆಯಲ್ಲಿ ಈ ಕ್ರಮಗಳನ್ನು ಅನುಸರಿಸಿದರೆ ನಮ್ಮ ಪೂಜೆಯಿಂದ ಒಳ್ಳೆಯ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ಪೂಜೆ ಮಾಡುವಾಗ ನಿಮ್ಮ ಹಣೆಯ ಮೇಲೆ ತಿಲಕವನ್ನು ಇಟ್ಟುಕೊಳ್ಳಲು ಮರೆಯದಿರಿ. ಅಲ್ಲದೆ, ಖಾಲಿ ಹಣೆಯೊಂದಿಗೆ ದೇವಸ್ಥಾನಕ್ಕೆ ಹೋಗಬಾರದು.

ದೇವರ ಕೋಣೆಯ ಎತ್ತರ: ಮನೆಯಲ್ಲಿ ಪೂಜೆ ಮಾಡುವ ಸ್ಥಳವನ್ನು ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ಮಾಡಬೇಕು. ಈ ದಿಕ್ಕನ್ನು ವಾಸ್ತು ಶಾಸ್ತ್ರದಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿಕ್ಕಿನಲ್ಲಿ ಪೂಜಾ ಮಂದಿರವಿದ್ದರೆ ಮನೆಯಲ್ಲಿ ವಾಸಿಸುವವರಿಗೆ ಶಾಂತಿ, ಐಶ್ವರ್ಯ, ಸಂತೋಷ ಮತ್ತು ಆರೋಗ್ಯ ದೊರೆಯುತ್ತದೆ. ಅದೇ ಸಮಯದಲ್ಲಿ, ಮನೆಯಲ್ಲಿರುವ ದೇವರ ಕೋಣೆಯ ಎತ್ತರಕ್ಕಿಂತ ಎರಡು ಪಟ್ಟು ಹೆಚ್ಚು ಅಗಲ ಇರಬೇಕು.

ಎಂತಹ ಸ್ಥಳದಲ್ಲಿ ದೇವರ ಗುಡಿ ಕಟ್ಟಬಾರದು? ಮನೆಯೊಳಗೆ ಪೂಜಾ ಕೋಣೆ ಅಥವಾ ದೇವರ ಕೋಣೆಯನ್ನು ನಿರ್ಮಿಸುವಾಗ ಅದರ ಕೆಳಗೆ ಅಥವಾ ಮೇಲೆ ಅಥವಾ ಪಕ್ಕದಲ್ಲಿ ಶೌಚಾಲಯ ಇರಬಾರದು ಎಂಬುದನ್ನು ನೆನಪಿಡಿ. ಇದರ ಹೊರತಾಗಿ ಮನೆಯ ಮೆಟ್ಟಿಲುಗಳ ಕೆಳಗೆ ಪೂಜಾ ಕೊಠಡಿಯನ್ನು ನಿರ್ಮಿಸಬಾರದು. ಅಂತಹ ಸ್ಥಳಗಳಲ್ಲಿ ದೇವರ ಕೋಣೆ ಇದ್ದರೆ, ದೇವರು ಅಲ್ಲಿ ವಾಸಿಸುತ್ತಿದ್ದರೆ ಮನೆಯ ಮೆಟ್ಟಿಲುಗಳ ಕೆಳಗೆ ದೇವರ ಕೋಣೆ ಇದ್ದರೆ, ಮೆಟ್ಟಿಲುಗಳ ಮೇಲೆ ನಡೆದರೆ ದೇವರ ಕೋಣೆಯ ಮೇಲೆ ನಡೆದಂತೆ. ಅದಕ್ಕೇ ಮೆಟ್ಟಿಲುಗಳ ಕೆಳಗೆ ದೇವರ ಕೋಣೆ ಕಟ್ಟಬಾರದು.

Follow Us
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್
ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್
ಹೆಚ್ಚುತ್ತಿರುವ ಕಸ್ತೂರಿ ರಂಗನ್ ಕಿಚ್ಚು ನಾಳೆ ಶೃಂಗೇರಿ ಬಂದ್​​ಗೆ ಕರೆ!
ಹೆಚ್ಚುತ್ತಿರುವ ಕಸ್ತೂರಿ ರಂಗನ್ ಕಿಚ್ಚು ನಾಳೆ ಶೃಂಗೇರಿ ಬಂದ್​​ಗೆ ಕರೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!