Bedroom Vastu: ಮಲಗುವ ಕೋಣೆಯಲ್ಲಿ ಈ ವಸ್ತು ಇಡಲೇಬೇಡಿ; ದಾಂಪತ್ಯದಲ್ಲಿ ಬಿರುಕಿಗೆ ಇದೇ ಮುಖ್ಯ ಕಾರಣ!

ವಾಸ್ತು ಪ್ರಕಾರ, ಮಲಗುವ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗಿ ದಾಂಪತ್ಯದಲ್ಲಿ ಬಿರುಕು ಮತ್ತು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಕನ್ನಡಿ, ಗಡಿಯಾರ, ದೇವರ ಫೋಟೋ ಹಾಗೂ ಪ್ರಾಣಿಗಳ ಚಿತ್ರಗಳನ್ನು ತೆಗೆದುಹಾಕುವ ಮೂಲಕ ಮನೆಯಲ್ಲಿ ಸಕಾರಾತ್ಮಕ ಶಕ್ತಿ, ನೆಮ್ಮದಿ ಮತ್ತು ಉತ್ತಮ ಸಂಬಂಧಗಳನ್ನು ಕಾಪಾಡಿಕೊಳ್ಳಬಹುದು. ಇದು ಮನಸ್ಸಿನ ಶಾಂತಿಗೂ ಸಹಕಾರಿ.

Bedroom Vastu: ಮಲಗುವ ಕೋಣೆಯಲ್ಲಿ ಈ ವಸ್ತು ಇಡಲೇಬೇಡಿ; ದಾಂಪತ್ಯದಲ್ಲಿ ಬಿರುಕಿಗೆ ಇದೇ ಮುಖ್ಯ ಕಾರಣ!
ಮಲಗುವ ಕೋಣೆ

Updated on: Mar 10, 2026 | 10:28 AM

ಬದಲಾದ ಜೀವನಶೈಲಿಯಲ್ಲಿ ಮಲಗುವ ಕೋಣೆ (Bedroom) ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಇಂದು ಪ್ರತಿಯೊಬ್ಬರಿಗೂ ವೈಯಕ್ತಿಕ ಸ್ಥಳದ (Privacy) ಅಗತ್ಯವಿರುವುದರಿಂದ, ಬೆಡ್‌ರೂಂ ವಿನ್ಯಾಸ ಮತ್ತು ಅಲ್ಲಿನ ಅಲಂಕಾರಿಕ, ಇತರ ವಸ್ತುಗಳ ಜೋಡಣೆಯನ್ನು ತಮ್ಮ ಇಷ್ಟದಂತೆ ಮಾಡಿಬಿಡುತ್ತಾರೆ. ಆದರೆ ವಾಸ್ತು ತಜ್ಞರ ಪ್ರಕಾರ, ಮಲಗುವ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗಿ ದಾಂಪತ್ಯದಲ್ಲಿ ಬಿರುಕು ಅಥವಾ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಬೆಡ್‌ರೂಂನಲ್ಲಿ ಈ 4 ವಸ್ತುಗಳಿದ್ದರೆ ಇಂದೇ ತೆಗೆಯಿರಿ:

ಕನ್ನಡಿ ಮತ್ತು ಪ್ರತಿಬಿಂಬದ ಎಚ್ಚರ:

ಮಲಗುವ ಕೋಣೆಯಲ್ಲಿ ಕನ್ನಡಿ ಇಡುವುದು ಸಾಮಾನ್ಯ. ಆದರೆ, ಹಾಸಿಗೆಯ ಮೇಲೆ ಮಲಗಿರುವ ವ್ಯಕ್ತಿಯ ಪ್ರತಿಬಿಂಬ ಕನ್ನಡಿಯಲ್ಲಿ ಕಂಡರೆ ಅದು ಅಶುಭ. ಇದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಕನ್ನಡಿ ಇಡಲೇಬೇಕೆಂದರೆ ಅದು ಹಾಸಿಗೆಗೆ ಎದುರಾಗಿಲ್ಲದಂತೆ ನೋಡಿಕೊಳ್ಳಿ.

ಎದ್ದ ತಕ್ಷಣ ಗಡಿಯಾರ ನೋಡಬೇಡಿ:

ಹಾಸಿಗೆಯ ಎದುರಿಗಿನ ಗೋಡೆಗೆ ಗಡಿಯಾರ ನೇತುಹಾಕಬೇಡಿ. ನಿದ್ರೆಯಿಂದ ಎದ್ದ ಕೂಡಲೇ ಸಮಯವನ್ನು ನೋಡುವುದರಿಂದ ಮನಸ್ಸಿನಲ್ಲಿ ಅವಸರ ಮತ್ತು ಆತಂಕ ಮೂಡುತ್ತದೆ. ಗಡಿಯಾರವನ್ನು ಕಣ್ಣಿಗೆ ನೇರವಾಗಿ ಕಾಣಿಸದ ಜಾಗದಲ್ಲಿ ಇಡುವುದು ಸೂಕ್ತ.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ದಂಪತಿಗಳ ಕೋಣೆಯಲ್ಲಿ ದೇವರ ಫೋಟೋ ಬೇಡ:

ಧಾರ್ಮಿಕ ನಂಬಿಕೆಯ ಪ್ರಕಾರ, ಮಕ್ಕಳ ಕೋಣೆಯನ್ನು ಹೊರತುಪಡಿಸಿ ದಂಪತಿಗಳ ಮಲಗುವ ಕೋಣೆಯಲ್ಲಿ ದೇವರ ವಿಗ್ರಹ ಅಥವಾ ಚಿತ್ರಗಳನ್ನು ಇಡುವುದು ನಿಷೇಧ. ಬೆಳಿಗ್ಗೆ ಎದ್ದ ತಕ್ಷಣ ಹಸ್ತಗಳನ್ನು ನೋಡಿ ‘ಕರಾಗ್ರೇ ವಸತೇ ಲಕ್ಷ್ಮೀ…’ ಶ್ಲೋಕ ಪಠಿಸುವ ಸಂಪ್ರದಾಯ ಇರುವುದೇ ಇದಕ್ಕಾಗಿ.

ಪ್ರಾಣಿಗಳ ಚಿತ್ರಗಳು ಬಾಂಧವ್ಯಕ್ಕೆ ಅಡ್ಡಿ:

ನಾಯಿ, ಹುಲಿ, ಸಿಂಹ ಅಥವಾ ನವಿಲುಗಳಂತಹ ಪ್ರಾಣಿಗಳ ಪ್ರತಿಮೆಗಳನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಇವುಗಳ ಬದಲಿಗೆ ನವಿಲು ಗರಿಗಳನ್ನು ಇಡಬಹುದು. ಇದು ಗ್ರಹದೋಷಗಳನ್ನು ನಿವಾರಿಸಿ ಗಂಡ-ಹೆಂಡತಿಯ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us