AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanting of Hanuman Chalisa: ಹನುಮಾನ್ ಚಾಲೀಸಾ ಪಠಿಸುವುದರಿಂದಾಗುವ ಪ್ರಯೋಜನಗಳೇನು?

ಹನುಮಂತನನ್ನು ಸ್ಮರಿಸುವ ಮತ್ತು ಸ್ತುತಿಸುವ 40 ಪದ್ಯಗಳ ಭಕ್ತಿಗೀತೆಯೇ ಹನುಮಾನ್ ಚಾಲೀಸಾ. ಸಂತ ತುಳಸಿದಾಸರು ಮೊಘಲ್ ಚಕ್ರವರ್ತಿ ಜೌರಂಗಜೇಬನ ಸೆರೆವಾಸದ ಸಮಯದಲ್ಲಿ ಇದನ್ನು ಬರೆದಿದ್ದರು.

Chanting of Hanuman Chalisa: ಹನುಮಾನ್ ಚಾಲೀಸಾ ಪಠಿಸುವುದರಿಂದಾಗುವ ಪ್ರಯೋಜನಗಳೇನು?
ವೀರಾಂಜನೇಯ
TV9 Web
| Edited By: ಸಾಧು ಶ್ರೀನಾಥ್​|

Updated on: Feb 26, 2022 | 6:30 AM

Share

ಹಿಂದೂ ಪುರಾಣಗಳಲ್ಲಿ ಭಗವಾನ್ ಹನುಮಾನ್​ನನ್ನು(Lord Hanuman) ಸಂಕಟ ಮೋಚನ ಎಂದ ಕರೆಯಲಾಗುತ್ತೆ. ಜೀವನದಲ್ಲಿ ಎಲ್ಲಾ ಸಮಸ್ಯೆಗಳು ದೂರವಾಗಿ ಸುಖ, ಶಾಂತಿ ನೆಲೆಸಲು ಹನುಮಾನ್ ಚಾಲೀಸಾ(Hanuman Chalisa) ಪಠಣೆ ಮಾಡಬೇಕು. ಹನುಮಂತನನ್ನು ಸ್ಮರಿಸುವ ಮತ್ತು ಸ್ತುತಿಸುವ 40 ಪದ್ಯಗಳ ಭಕ್ತಿಗೀತೆಯೇ ಹನುಮಾನ್ ಚಾಲೀಸಾ. ಸಂತ ತುಳಸಿದಾಸರು ಮೊಘಲ್ ಚಕ್ರವರ್ತಿ ಜೌರಂಗಜೇಬನ ಸೆರೆವಾಸದ ಸಮಯದಲ್ಲಿ ಇದನ್ನು ಬರೆದಿದ್ದರು. ಸಂತ ತುಳಸಿದಾಸರು ಭಗವಾನ್ ರಾಮನ ಅತ್ಯಂತ ಉತ್ಕಟ ಭಕ್ತರಲ್ಲಿ ಒಬ್ಬರು ಎಂದು ಪ್ರಶಂಸಿಸಲಾಗುತ್ತದೆ. ಭಗವಾನ್ ಹನುಮಂತನಿಗೆ ಸಮರ್ಪಿತವಾದ ಅತ್ಯಂತ ಶಕ್ತಿಶಾಲಿ ಕಾವ್ಯಗಳಲ್ಲಿ ಒಂದಾದ ಹನುಮಾನ್ ಚಾಲೀಸಾ 16ನೇ ಶತಮಾನದಲ್ಲಿ ಬರೆಯಲಾಗಿದೆ. ಹಾಗಾದ್ರೆ ಬನ್ನಿ ಭಕ್ತರು ಈ ಹನುಮಾನ್ ಚಾಲೀಸಾವನ್ನು ಏಕೆ ಪಠಿಸುತ್ತಾರೆ ಮತ್ತು ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳನ್ನು ಇಲ್ಲಿ ತಿಳಿಯಿರಿ.

ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳು:

  1. ಭಗವಾನ್ ಹನುಮಂತನನ್ನು ಚಿರಂಜೀವಿ, ಅಮರ ಎನ್ನಲಾಗುತ್ತದೆ. ಆದ್ದರಿಂದ, ಹನುಮಾನ್ ಚಾಲೀಸಾವನ್ನು ಪ್ರಾಮಾಣಿಕ ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಪಠಿಸುವುದರಿಂದ ಭಕ್ತರು ಹನುಮಂತನ ಕೃಪೆಗೆ ಪಾತ್ರರಾಗುತ್ತಾರೆ.
  2. ಶನಿ ಗ್ರಹದ ಅಧಿಪತಿ ಭಗವಾನ್ ಶನಿಯನ್ನು ಕಂಡರೆ ಇಡೀ ಬ್ರಹ್ಮಾಂಡವೇ ಹೆದರುತ್ತದೆ. ಆದ್ರೆ ಭಗವಾನ್ ಶನಿಗೆ ಹನುಮಾನ್ ಎಂದರೆ ಭಯ. ಹೀಗಾಗಿ ಹನುಮಾನ್ ಚಾಲೀಸಾ ಪಠಣೆಯಿಂದ ಶನಿ ದೋಷದಿಂದ ಮುಕ್ತರಾಗುತ್ತಾರೆ. ಅಲ್ಲದೆ ಸಾಡೇ ಸಾತಿ ಶನಿ ದೋಷದ ಪರಿಣಾಮ, ಕುಂಡಲಿಯಲ್ಲಿನ ಶನಿಯ ದುಷ್ಪರಿಣಾಮದಿಂದ ಪಾರಾಗಿ ಶಂತಿ ಸಮೃದ್ಧಿಗಾಗಿ ಶನಿವಾರದಂದು ಹನುಮಾನ್ ಚಾಲೀಸಾ ಪಠಿಸಬೇಕು.
  3. ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ, ಹನುಮಂತನಿಗೆ ಅತ್ಯಂತ ಪ್ರಿಯ ಆತ್ಮೀಯ ಸ್ನೇಹಿತ ಎಂದು ಪರಿಗಣಿಸುವ ಭಗವಾನ್ ರಾಮನ ಆಶೀರ್ವಾದವೂ ಸಹ ಸಿಗುತ್ತದೆ.
  4. ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ಮಾನಸಿಕ ಒತ್ತಡ ಮತ್ತು ದೈಹಿಕ ಕಾಯಿಲೆಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಪಡೆಯಬಹುದು. ಹನುಮಂತನು ತನ್ನ ಭಕ್ತರ ರೋಗಗಳು, ನೋವು ಮತ್ತು ಸಂಕಟಗಳನ್ನು ದೂರ ಮಾಡಿ ರಕ್ಷಿಸುತ್ತಾನೆ.
  5. ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ನಕಾರಾತ್ಮಕತೆ ಮತ್ತು ದುಷ್ಟಶಕ್ತಿಗಳನ್ನು ದೂರವಿಡಬಹುದು.
  6. ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸುವ ಮೂಲಕ ಗ್ರಹಿಕಾಶಕ್ತಿಯನ್ನು ಪಡೆಯಬಹುದು.
  7. ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಚಂಚಲ ಮನಸ್ಸು ಶಾಂತವಾಗುತ್ತದೆ.
  8. ಹನುಮಾನ್ ಚಾಲೀಸಾ ಪಠಿಸುವುದರಿಂದ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳು ಹಾಗೂ ಈ ಜನ್ಮದಲ್ಲಿ ಮಾಡಿದ ಪಾಪಗಳು ನಾಶವಾಗುತ್ತವೆ.
  9. ಜೀವನದಲ್ಲಿನ ಅಡೆತಡೆಗಳು, ತೊಂದರೆಗಳು ನಿವಾರಣೆಯಾಗಲು ಹನುಮಾನ್ ಚಾಲೀಸಾ ಪಠಿಸಬೇಕು.
  10. ಸುರಕ್ಷಿತ ಪ್ರಯಾಣಕ್ಕೆ ಹಾಗೂ ಮನೋಕಾಮನೆಗಳ ಈಡೇರಿಕೆಗಾಗಿ ಹನುಮಾನ್ ಚಾಲೀಸಾ ಪಠಿಸಬೇಕು. ಇಲ್ಲವೇ ಕೇಳ ಬೇಕು. ಹಾಗೂ ಕುಟುಂಬದಲ್ಲಿ ಸಮಸ್ಯೆಗಳು ದೂರವಾಗಿ ಸುಖ, ಶಾಂತಿ, ಸಮೃದ್ಧಿ ನೆಲೆಸಲು ಹನುಮಾನ್ ಚಾಲೀಸಾ ಓದಬೇಕು.

Follow Us
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು