AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology Remedies: ಆರ್ಥಿಕ ಸಮಸ್ಯೆಗಳಿಗೆ ವಾರದ 7 ದಿನದಲ್ಲಿ ಈ ಏಳು ಪರಿಹಾರಗಳನ್ನು ಕಂಡುಕೊಳ್ಳಿ, ಕೇವಲ 45 ದಿನಗಳಲ್ಲಿ ನಿಮಗೆ ಫಲಿತಾಂಶ ಸಿಗುತ್ತದೆ!

ಆದರೆ ವಾರದಲ್ಲಿ ಏಳು ದಿನವೂ ಮಾಡುವ ಈ ಪರಿಹಾರಗಳನ್ನು ಮುಂದಿನ 45 ದಿನಗಳ ಕಾಲವೂ ನಿರಂತರವಾಗಿ ಮಾಡಬೇಕು.

Astrology Remedies: ಆರ್ಥಿಕ ಸಮಸ್ಯೆಗಳಿಗೆ ವಾರದ 7 ದಿನದಲ್ಲಿ ಈ ಏಳು ಪರಿಹಾರಗಳನ್ನು ಕಂಡುಕೊಳ್ಳಿ, ಕೇವಲ 45 ದಿನಗಳಲ್ಲಿ ನಿಮಗೆ ಫಲಿತಾಂಶ ಸಿಗುತ್ತದೆ!
ಆರ್ಥಿಕ ಸಮಸ್ಯೆಗಳಿಗೆ ವಾರದ 7 ದಿನದಲ್ಲಿ ಈ ಏಳು ಪರಿಹಾರಗಳನ್ನು ಕಂಡುಕೊಳ್ಳಿ
ಸಾಧು ಶ್ರೀನಾಥ್​
|

Updated on: May 15, 2023 | 11:40 AM

Share

ಯಾರ ಮುಂದೆಯೂ ಕೈ ಚಾಚದೆ ತನ್ನ ಸಂಸಾರಕ್ಕೆ ಸುಖ-ಸಂತೋಷಗಳನ್ನು ಒದಗಿಸಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಅಂತಹ ಬಯಕೆಯನ್ನು ಪೂರೈಸಲು, ಜ್ಯೋತಿಷ್ಯದಲ್ಲಿ (Astrology) ಕೆಲವು ಪರಿಹಾರಗಳನ್ನು ಸೂಚಿಸಲಾಗುತ್ತದೆ. ಹಣಕ್ಕಾಗಿ (Money) ಒಂದಿಷ್ಟು ಪರಿಹಾರಗಳನ್ನು ಮಾಡಿದರೆ.. ಖಂಡಿತ ನಿಮ್ಮ ಆಸೆ ಈಡೇರುತ್ತದೆ. ಆದರೆ ಪರಿಹಾರಗಳನ್ನು ಸರಿಯಾದ ರೀತಿಯಲ್ಲಿ ಮಾಡಬೇಕು ಅಷ್ಟೆ. ಹಾಗಾದರೆ ಇಂದು ನಿಮಗೆ ಹಣದ ಕೊರತೆಯಾಗದಂತೆ (rich) ಮಾಡುವ ಪರಿಹಾರಗಳ ಬಗ್ಗೆ ತಿಳಿದುಕೊಳ್ಳೋಣ.

ವಾರದ ಒಂದು ದಿನ ಒಂದೊಂದು ದೇವರಿಗೆ ಮೀಸಲಿಡಲಾಗುತ್ತದೆ. ಇಡೀ ವಾರದ 7 ದಿನಗಳು ಏಳು ಗ್ರಹಗಳಿಗೆ ಸಂಬಂಧಿಸಿವೆ. ಅವುಗಳ ಪ್ರಕಾರ ನಮ್ಮ ಜೀವನ ಕ್ರಮ ಇರುತ್ತದೆ ಎಂದು ನಂಬಲಾಗಿದೆ. ಪ್ರತಿದಿನ ಆಯಾ ಗ್ರಹಗಳಿಗೆ ಆಯಾ ವಿಧದ ಪರಿಹಾರಗಳಿವೆ. ಆದ್ದರಿಂದ ಗಳಿಸಿದ ಹಣವನ್ನು ಉಳಿಸಲು ಮತ್ತು ಗಳಿಕೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಲು ಕೆಲವು ಮಾರ್ಗಗಳಿವೆ. ಆ ಮಾರ್ಗಗಳು ಯಾವುವು ಎಂಬುದನ್ನು ಇಂದು ತಿಳಿದುಕೊಳ್ಳೋಣ.

ಸೋಮವಾರ ಮಾಡಬೇಕಾದ ಪರಿಹಾರ: ಸೋಮವಾರ ಶಿವನ ದಿನ. ಈ ದಿನದಂದು ಶಿವನ ಪೂಜೆಯು ಇಷ್ಟಾರ್ಥಗಳ ಈಡೇರಿಕೆಗೆ ಅತ್ಯಂತ ಫಲಪ್ರದವಾಗಿದೆ ಎಂದು ಹೇಳಲಾಗುತ್ತದೆ. ಈ ದಿನ.. ಶಿವಾಲಯದಲ್ಲಿರುವ ಶಿವಲಿಂಗಕ್ಕೆ ಭಕ್ತರೊಂದಿಗೆ ಅಭಿಷೇಕ ಮಾಡಿ. ಹಾಗೆಯೇ ಬಿಲ್ವ ಪತ್ರೆ, ಧತ್ತೂರಿ, ತುಂಬೆ ಹೂವು, ಬಿಲ್ವಪತ್ರೆಯನ್ನು ಅರ್ಪಿಸಿ. ನಿಮ್ಮ ಆಸೆಗಳನ್ನು ದೇವರಿಗೆ ತಿಳಿಸಿ. ಅವು ನೆರವೇರುತ್ತವೆ.

ಮಂಗಳವಾರ ಮಾಡಬೇಕಾದ ಪರಿಹಾರ: ಮಂಗಳವಾರ ಹನುಮಂತನ ದಿನ. ಈ ದಿನ ಹನುಮಾನ್ ಚಾಲೀಸಾ ಪಠಿಸಿ, ಕೆಂಪು ಬಟ್ಟೆ ಧರಿಸಿ. ಅದೇ ಸಮಯದಲ್ಲಿ ದೇವರಿಗೆ ಮೋತಿ ಚೂರ್ ಲಡ್ಡುಗಳನ್ನು ಅರ್ಪಿಸಿ. ಪೂಜೆಯ ನಂತರ ಆಲದ ಮರ ಕಡ್ಡಿಗಳಿಂದ ಧೂಪವನ್ನು ಮಾಡಿ ಮನೆಯಲ್ಲೆಲ್ಲ ಹರಡುವಂತೆ ಮಾಡಿ.

ಬುಧವಾರದಂದು ಮಾಡಬೇಕಾದ ಪರಿಹಾರ: ಬುಧವಾರ ಗಣಪತಿಯ ದಿನ. ಇದು ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಈ ದಿನ ಹಸಿರು ಬಟ್ಟೆ ಅಥವಾ ಹಸಿರು ವಸ್ತುಗಳನ್ನು ದಾನ ಮಾಡಿ. ಬುಧವಾರದಂದು ಗಣಪತಿಗೆ 21 ಗರಿಕೆಯನ್ನು ಅರ್ಪಿಸಿ. ಏಕೆಂದರೆ ಗಣಪತಿಯು ಗರಿಕೆಯನ್ನು ಪ್ರೀತಿಸುತ್ತಾನೆ. ಹೀಗೆ ಮಾಡುವುದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ.

ಗುರುವಾರದಂದು ಮಾಡಬೇಕಾದ ಪರಿಹಾರಗಳು: ಈ ದಿನ ಶ್ರೀ ಹರಿಗೆ ಸೇರಿದ್ದು. ಗುರುವಾರದ ಪೂಜೆ ದೋಷ ನಿವಾರಣೆಗೆ ಪರಿಹಾರ ಎಂದು ಹೇಳಲಾಗುತ್ತದೆ. ಈ ದಿನ ಹಳದಿ ಬಟ್ಟೆಗಳನ್ನು ಧರಿಸಿ, ಹಳದಿ ವಸ್ತುಗಳನ್ನು ದಾನ ಮಾಡಿ. ಇಂದು ಪೂಜೆಯನ್ನು ಮಾಡಿದ ನಂತರ, ಮನೆಯಲ್ಲಿ ಆಲದ ಮರ ಕಡ್ಡಿಗಳಿಂದ ಮಾಡಿದ ಧೂಪವನ್ನು ಹಚ್ಚಬೇಕು. ಈ ದಿನ ಸ್ನಾನದ ನೀರಿನಲ್ಲಿ ಅರಿಶಿನ ಪುಡಿ ಹಾಕಿ ಸ್ನಾನ ಮಾಡಿ.

ಶುಕ್ರವಾರ ಮಾಡಬೇಕಾದ ಪರಿಹಾರ: ಶುಕ್ರವಾರ ಲಕ್ಷ್ಮಿ ದೇವಿಯ ದಿನ. ಇಂದು ಅನೇಕ ಪರಿಹಾರಗಳು ಲಭ್ಯವಿವೆ. ಇಂದು ದೇವಸ್ಥಾನಕ್ಕೆ ಹೋಗಿ ದೇವಿಗೆ ಕಮಲದ ಹೂವುಗಳನ್ನು ಅರ್ಪಿಸಿ. ವ್ಯವಹಾರದಲ್ಲಿ ನೀವು ಯಶಸ್ವಿಯಾಗುತ್ತೀರಿ. ಈ ದಿನ ಅರಿಶಿನ ಕುಂಕುಮ ಸೇರಿದಂತೆ ಮಹಿಳೆಯರ ಅಲಂಕಾರಿಕ ವಸ್ತುಗಳನ್ನು ದಾನ ಮಾಡಿ. ಈ ದಿನ ಮಾಡುವ ಪೂಜೆಯಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಶಾಶ್ವತವಾಗಿ ಉಳಿಯುತ್ತದೆ.

ಶನಿವಾರ ಮಾಡಬೇಕಾದ ಪರಿಹಾರ: ಶನಿವಾರ ಶನಿಗ್ರಹದ ದಿನ. ಇಂದು ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯಿಂದ ದೀಪವನ್ನು ಹಚ್ಚಿ. ದಾನ ಮಾಡಿ. ಇದರಿಂದ ದಿನದ ಶನಿಯ ದೋಷಗಳು ಕಡಿಮೆಯಾಗುತ್ತವೆ. ಈ ದಿನ ನೀಲಿ ವಸ್ತುಗಳನ್ನು ದಾನ ಮಾಡಿ.

ಭಾನುವಾರದಂದು ಮಾಡಬೇಕಾದ ಪರಿಹಾರ: ಭಾನುವಾರ ಸೂರ್ಯ ಭಗವಂತನ ದಿನ. ಪ್ರತಿದಿನ ಬೆಳಿಗ್ಗೆ ಎದ್ದು ಸ್ನಾನ ಮಾಡಿದ ನಂತರ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ. ಸೂರ್ಯ ದೇವರನ್ನು ಮೆಚ್ಚಿಸಲು ಕೆಂಪು ಬಟ್ಟೆಗಳನ್ನು ಧರಿಸಿ. ಇಷ್ಟಾರ್ಥಗಳನ್ನು ಈಡೇರಿಸಲು ಈ ದಿನದ ಉಪವಾಸ ಅತ್ಯಂತ ಫಲಪ್ರದವಾಗಿದೆ.

ಆದರೆ ವಾರದಲ್ಲಿ ಏಳು ದಿನವೂ ಮಾಡುವ ಈ ಪರಿಹಾರಗಳನ್ನು ಮುಂದಿನ 45 ದಿನಗಳ ಕಾಲವೂ ನಿರಂತರವಾಗಿ ಮಾಡಬೇಕು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು