AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Naga Panchami 2021: ಕೃಷಿಕ ಮಹಿಳೆಯರ ಹಬ್ಬ ನಾಗರಪಂಚಮಿ, ಶ್ರಾವಣ ಮಾಸದಲ್ಲಿ ಆಚರಿಸುವ ನಾಗಪೂಜೆಯ ವಿಶೇಷವೇನು?

ಶ್ರಾವಣ ಮಾಸದಲ್ಲಿ ರೈತಾಪಿ ಜನರೆಲ್ಲರೂ ಸಂಜೆಯವರೆಗೂ ಹೊಲ-ಗದ್ದೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಶ್ರಾವಣದ ಮಳೆಯಿಂದಾಗಿ ಸಂಧ್ಯಾ ಕಾಲದಲ್ಲಿ ನಾಗರಹಾವುಗಳು ತಮ್ಮ ಭದ್ರತೆಗಾಗಿ ಹುತ್ತಗಳನ್ನು ಹುಡುಕುತ್ತಾ ಓಡಾಡುತ್ತಿರುತ್ತವೆ. ಹೀಗಾಗಿ ಹೊಲ-ಗದ್ದೆಯಲ್ಲಿ ಕೆಲಸ ಮಾಡುವವರಿಗೆ ತೊಂದರೆಯನ್ನು ನೀಡಬಾರದೆಂದು ಬೇಡುತ್ತ ಕೃಷಿ ಮಹಿಳೆಯರು ನಾಗರಪಂಚಮಿಯನ್ನು ಆಚರಿಸುತ್ತಾರೆ.

Naga Panchami 2021: ಕೃಷಿಕ ಮಹಿಳೆಯರ ಹಬ್ಬ ನಾಗರಪಂಚಮಿ, ಶ್ರಾವಣ ಮಾಸದಲ್ಲಿ ಆಚರಿಸುವ ನಾಗಪೂಜೆಯ ವಿಶೇಷವೇನು?
ನಾಗರಪಂಚಮಿ
Follow us
TV9 Web
| Updated By: ಆಯೇಷಾ ಬಾನು

Updated on: Aug 13, 2021 | 6:41 AM

ಶ್ರಾವಣ ಮಾಸ ಶಿವ, ವಿಷ್ಣುವನ್ನು ಆರಾಧಿಸುವ ಮಾಸ. ಶ್ರಾವಣವನ್ನು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಶ್ರಾವಣ ಬಂತೆಂದರೆ ಸಾಕು ಹಬ್ಬಗಳು ಹರಿದು ಬರುತ್ತವೆ. ಹಬ್ಬಗಳ ಮಾಸವೇ ಶ್ರಾವಣ. ಶ್ರಾವಣ ಶುಕ್ಲ ಪಂಚಮಿಯನ್ನು ನಾಗರಪಂಚಮಿ ಎಂದು ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ. ನಾಗರಪಂಚಮಿಯಂದು ಏಳುಹೆಡೆಯ ಸರ್ಪಾಕೃತಿಯ ಚಿತ್ರಬರೆದು ತಾಳೆಹೂವಿನಿಂದ ಅದಕ್ಕೆ ಹಾಲೆರೆಯುವ ಪದ್ಧತಿ ಇದೆ. ಇದಕ್ಕೆ ತನಿಎರೆಯುವುದು ಎನ್ನುತ್ತಾರೆ. ಅಂತೆಯೇ ಬೆನ್ನುಮೂಳೆಯ ಆರಂಭದ ಎಡೆ, ಹೊಕ್ಕಳು, ಹೃದಯ, ಗಂಟಲಗುಳಿ, ಅದರ ಹಿಂಭಾಗದ ಬೆನ್ನಿನ ನೇರ, ನೆತ್ತಿ ಇವುಗಳಿಗೆ ಹಾಲು ತುಪ್ಪವನ್ನು ಸವರುವುದೂ ರೂಢಿಯಲ್ಲಿದೆ. ನಾಗದ ವಾಸದ ಎಡೆಯಾದ ಹುತ್ತಗಳಿರುವಲ್ಲಿಗೆ ಹೋಗಿ ಹಾಲು ತುಪ್ಪಗಳನ್ನೆರೆಯುತ್ತಾರೆ.

ನಾಗಜಾತಿಯ ಸಮ್ಮಿಲನದ ಮಾಸ ನಾಗರಪಂಚಮಿ ಹಬ್ಬದ ಹಿಂದೆ ಅನೇಕ ವಿಶೇಷತೆಗಳಿವೆ. ಸಂತಾನೋತ್ಪತ್ತಿಯನ್ನು ಬಯಸಿ ನಾಗರಹಾವಿಗಳು(ಹೆಣ್ಣು) ತಕ್ಕ ಜೋಡಿಗಾಗಿ ಹುಡುಕಾಟ ಪ್ರಾರಂಭಿಸಿ ಯಧೇಚ್ಛಾವಿಹಾರ ಮಾಡುವ ಮಾಸ ಶ್ರಾವಣ ಮಾಸ. ಈ ಸಮಯದಲ್ಲಿ ನಾಗಜಾತಿ ಮಹಾ ಆವೇಶದಿಂದ ಇರುತ್ತವೆ. ಇನ್ನು ಭಾರತದಲ್ಲಿ ಕೆಲವರು ಶ್ರಾವಣ ಶುದ್ಧ ಪಂಚಮಿಗೆ ನಾಗಪೂಜೆಯನ್ನು ಮಾಡಿದರೆ ಕೆಲವರು ಕಾರ್ತೀಕ ಶುದ್ಧ ಚವಿತಿಗೆ ನಾಗಪೂಜೆಯನ್ನು ಮಾಡುತ್ತಾರೆ. ಆದರೆ ನಾಗಜಾತಿಗೆ ಶ್ರಾವಣ ಮಾಸವೆಂದರೆ ಇಷ್ಟದ ಮಾಸ ಎಂದು ಹೇಳಲಾಗುತ್ತೆ.

ಶ್ರಾವಣ ಶುದ್ಧ ಪಂಚಮಿಗೆ ಮಾಡುವ ನಾಗಪಂಚಮಿಗೆ ಹಲವಾರು ವಿಶೇಷಗಳಿವೆ. ಶ್ರಾವಣ ಮಾಸದಲ್ಲಿ ರೈತಾಪಿ ಜನರೆಲ್ಲರೂ ಸಂಜೆಯವರೆಗೂ ಹೊಲ-ಗದ್ದೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಶ್ರಾವಣದ ಮಳೆಯಿಂದಾಗಿ ಸಂಧ್ಯಾ ಕಾಲದಲ್ಲಿ ನಾಗರಹಾವುಗಳು ತಮ್ಮ ಭದ್ರತೆಗಾಗಿ ಹುತ್ತಗಳನ್ನು ಹುಡುಕುತ್ತಾ ಓಡಾಡುತ್ತಿರುತ್ತವೆ. ಹೀಗಾಗಿ ಹೊಲ-ಗದ್ದೆಯಲ್ಲಿ ಕೆಲಸ ಮಾಡುವವರಿಗೆ ತೊಂದರೆಯನ್ನು ನೀಡಬಾರದೆಂದು ಬೇಡುತ್ತ ಕೃಷಿ ಮಹಿಳೆಯರು ನಾಗರಪಂಚಮಿಯನ್ನು ಆಚರಿಸುತ್ತಾರೆ.

ನಾಗರಾಜಾ.. ನಮ್ಮ ಮನೆಯವರು ಮುಗ್ಧರು. ತಿಳಿದೂ ತಿಳಿಯದೇ ಅವರಿಂದ ನಿನಗೇನಾದರೂ ತೊಂದರೆಯಾದರೆ ಹೆಡೆ ಎತ್ತಿ ಸೇಡು ತೀರಿಸಿಕೊಳ್ಳಬೇಡ. ನಾವು ನಿನ್ನ ಭಕ್ತರು. ನಿನ್ನ ಆರಾಧಕರು. ನಮ್ಮನ್ನು ನೀನು ದಯಾಗುಣದಿಂದ ಕಾಪಾಡು. ನನ್ನ ಮಾಂಗಲ್ಯಕ್ಕೆ ರಕ್ಷೆ ನೀಡು ಎಂದು ನಮಿಸಿ ಶ್ರಾವಣ ಪಂಚಮಿಯಂದು ಹುತ್ತಗಳಿರುವಲ್ಲಿಗೆ ಹೋಗಿ ಹಾಲು ತುಪ್ಪಗಳನ್ನೆರೆಯುತ್ತಾರೆ.

ಪುರಾಣಗಳ ಪ್ರಕಾರ, ಪಾತಾಳ ಲೋಕವು ಹಾವಿಗಳ ವಾಸಸ್ಥಾನವಾಗಿದೆ. ಹೀಗಾಗಿ ನಾಗರಪಂಚಮಿಯಂದು ಕಲ್ಲಿನ ನಾಗನಿಗೆ ಅಥವಾ ಮರದ ನಾಗನಿಗೆ ಹಾಲಿನ ಅಭಿಷೇಕ ಮಾಡಿದರೆ ಅದು ಪಾತಾಳ ಲೋಕದಲ್ಲಿನ ಹಾವುಗಳಿಗೆ ಅಭಿಷೇಕ ಮಾಡಿದಂತೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: Naga Panchami 2021: ಶ್ರಾವಣ ಮಾಸದ ಮದರಂಗಿ ಹಬ್ಬ ನಾಗರ ಪಂಚಮಿ- ಏನಿದರ ವಿಶೇಷ, ಆಚರಣೆ, ಭಕ್ತಿ-ಭಾವ ಹೇಗೆ?

ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ