AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಶನಿ ಇತರೆ ಗ್ರಹಗಳೊಂದಿಗೆ ಸಂಯೋಗಗೊಂಡಾಗ ಯಾವ ಖಾಯಿಲೆ ಬರುತ್ತೆ ಗೊತ್ತಾ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಗ್ರಹವು ಇತರೆ ಗ್ರಹಗಳೊಂದಿಗೆ ಸಂಯೋಗಗೊಂಡಾಗ ವ್ಯಕ್ತಿಯ ಆರೋಗ್ಯ ಮತ್ತು ಜೀವನದ ಮೇಲೆ ವಿವಿಧ ಪರಿಣಾಮಗಳನ್ನು ಬೀರುತ್ತದೆ. ರವಿ, ಚಂದ್ರ, ಬುಧ, ಗುರು, ಶುಕ್ರ, ರಾಹು ಮತ್ತು ಕೇತುಗಳೊಂದಿಗಿನ ಶನಿಯ ಸಂಯೋಗದಿಂದ ಉಂಟಾಗುವ ವಿಶಿಷ್ಟ ಆರೋಗ್ಯ ಸಮಸ್ಯೆಗಳು ಮತ್ತು ಜೀವನದ ಸವಾಲುಗಳ ಬಗ್ಗೆ ಡಾ. ಬಸವರಾಜ್ ಗುರೂಜಿ ನೀಡಿರುವ ಮಾಹಿತಿ ಇಲ್ಲಿದೆ.

Daily Devotional: ಶನಿ ಇತರೆ ಗ್ರಹಗಳೊಂದಿಗೆ ಸಂಯೋಗಗೊಂಡಾಗ ಯಾವ ಖಾಯಿಲೆ ಬರುತ್ತೆ ಗೊತ್ತಾ?
ಶನಿಯೊಂದಿಗೆ ಸಂಯೋಗ
ಅಕ್ಷತಾ ವರ್ಕಾಡಿ
|

Updated on: Jan 15, 2026 | 11:12 AM

Share

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಸಂಚಾರ ಮತ್ತು ಇತರೆ ಗ್ರಹಗಳೊಂದಿಗಿನ ಸಂಯೋಗವು ಮನುಷ್ಯನ ಜೀವನದಲ್ಲಿ ಆರೋಗ್ಯ, ಸಂಬಂಧಗಳು ಮತ್ತು ಆರ್ಥಿಕ ಸ್ಥಿತಿ ಸೇರಿದಂತೆ ಹಲವು ಅಂಶಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಶನಿಗ್ರಹವು ಒಂದು ರಾಶಿಯಲ್ಲಿ ಸುಮಾರು ಎರಡುವರೆ ವರ್ಷಗಳ ಕಾಲ ಸ್ಥಿತವಾಗಿರುತ್ತದೆ. ಈ ಅವಧಿಯಲ್ಲಿ ಇತರ ಗ್ರಹಗಳು ಶನಿಯೊಂದಿಗೆ ಸಂಯೋಗಗೊಂಡಾಗ ಉಂಟಾಗುವ ಫಲಗಳು ಮತ್ತು ಅನಾರೋಗ್ಯ ಸಮಸ್ಯೆಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಶನಿಗ್ರಹವು ಏಕಾಂಗಿಯಾಗಿ ಪ್ರಭಾವ ಬೀರಿದಾಗ ವಾತ ಸಂಬಂಧಿ ಕಾಯಿಲೆಗಳು, ನರಗಳ ದೌರ್ಬಲ್ಯ, ಬಲಹೀನತೆ, ಪ್ಯಾರಾಲಿಸಿಸ್, ಕಿಡ್ನಿ ಮತ್ತು ಲಿವರ್ ವೈಫಲ್ಯ, ಆಸ್ತಮಾ, ಉಸಿರಾಟದ ತೊಂದರೆಗಳು, ನ್ಯುಮೋನಿಯಾ, ಅಧಿಕ ಜ್ವರ, ಪ್ರಜ್ಞೆ ತಪ್ಪುವುದು, ಕೂದಲು ಉದುರುವುದು, ಅಜೀರ್ಣ ಮತ್ತು ದುಶ್ಚಟಗಳ ಕಡೆಗೆ ಗಮನ ಹೋಗುವುದು ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ.

ಇತರೆ ಗ್ರಹಗಳು ಶನಿಯೊಂದಿಗೆ ಸಂಯೋಗಗೊಂಡಾಗ ಉಂಟಾಗುವ ನಿರ್ದಿಷ್ಟ ಪರಿಣಾಮಗಳು:

ಶನಿ ಮತ್ತು ರವಿ ಸಂಯೋಗ:

ರವಿ ಗ್ರಹವು ಶನಿಯೊಂದಿಗೆ ಸೇರಿದಾಗ ಬಲಹೀನತೆ, ದೃಷ್ಟಿದೋಷ, ನೀರಸತೆ ಮತ್ತು ಶರೀರದಲ್ಲಿ ಉತ್ಸಾಹದ ಕೊರತೆ ಕಂಡುಬರುತ್ತದೆ. ಮೇಲಾಧಿಕಾರಿಗಳಿಂದ ತೊಂದರೆ, ತಂದೆ ಅಥವಾ ತಂದೆಗೆ ಸಮಾನರ ಅಗಲಿಕೆ ಅಥವಾ ಅವರ ಅನಾರೋಗ್ಯದ ಚಿಂತೆ, ಅಧಿಕ ಖರ್ಚುಗಳು ಮತ್ತು ಮಾನಸಿಕ ಶಾಂತಿಯ ನಷ್ಟವಾಗುತ್ತದೆ.

ಶನಿ ಮತ್ತು ಚಂದ್ರ ಸಂಯೋಗ:

ಚಂದ್ರನು ಶನಿಯೊಂದಿಗೆ ಸೇರಿದಾಗ ಮತಿಭ್ರಮಣ, ಎದೆನೋವು, ರಕ್ತಹೀನತೆ, ಮುಖದ ಕಾಂತಿ ಹೊರಟು ಹೋಗುವುದು, ಮುಖದ ಮೇಲೆ ಗುಳ್ಳೆಗಳು, ಆಲಸ್ಯ ಮತ್ತು ಆಸಕ್ತಿಯ ಕೊರತೆ ಉಂಟಾಗಬಹುದು.

ಶನಿ ಮತ್ತು ಬುಧ ಸಂಯೋಗ:

ಬುಧ ಗ್ರಹವು ಶನಿಯೊಂದಿಗೆ ಸೇರಿದಾಗ ಮಾತಿನ ತೊದಲಿಕೆ, ಚರ್ಮ ವ್ಯಾಧಿಗಳು, ಕಿವಿ ನೋವು ಮತ್ತು ಕಿವಿಯಲ್ಲಿ ಸೋರಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಚಿಕ್ಕ ಮಕ್ಕಳಲ್ಲಿ ಈ ಸಂಯೋಗವಿದ್ದರೆ ಬುಧಶಾಂತಿ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಲಾಗುತ್ತದೆ.

ಶನಿ ಮತ್ತು ಗುರು ಸಂಯೋಗ:

ಗುರು ಗ್ರಹವು ಶನಿಯೊಂದಿಗೆ ಸಂಯೋಗಗೊಂಡಾಗ ಜೀರ್ಣಕ್ರಿಯೆ ಸಮಸ್ಯೆಗಳು, ಅತಿಯಾದ ಬುದ್ಧಿವಂತಿಕೆ, ವಿಚಿತ್ರ ವರ್ತನೆ, ನೆನಪಿನ ಶಕ್ತಿ ನಷ್ಟ (ಮೆಮೊರಿ ಲಾಸ್) ಮತ್ತು ಆಹಾರದ ಬಗ್ಗೆ ನಿರಾಸಕ್ತಿ ಉಂಟಾಗಬಹುದು.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ಶನಿ ಮತ್ತು ಶುಕ್ರ ಸಂಯೋಗ:

ಶುಕ್ರ ಗ್ರಹವು ಶನಿಯೊಂದಿಗೆ ಸೇರಿದಾಗ ಗಂಟಲು ನೋವು, ಪ್ರತಿಭೆಯ ಕುಸಿತ, ಟಾನ್ಸಿಲ್ಸ್, ಪೈಲ್ಸ್ ಮತ್ತು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಶನಿ ಮತ್ತು ರಾಹು ಸಂಯೋಗ:

ರಾಹುವು ಶನಿಯೊಂದಿಗೆ ಸೇರಿದಾಗ ವಿಷಭಯ, ಸಂತಾನಹೀನತೆ ಮತ್ತು ಮೂಳೆ ನೋವುಗಳು ಉಂಟಾಗಬಹುದು. ತಿಂದ ಆಹಾರವು ವಿಷವಾಗಿ ಪರಿವರ್ತಿತವಾಗುವ ಭಯವೂ ಇರಬಹುದು.

ಶನಿ ಮತ್ತು ಕೇತು ಸಂಯೋಗ:

ಕೇತುವು ಶನಿಯೊಂದಿಗೆ ಸೇರಿದಾಗ ಬಿಪಿ (ರಕ್ತದೊತ್ತಡ), ರಕ್ತ ಸಂಬಂಧಿ ತೊಂದರೆಗಳು ಮತ್ತು ದೇಹದಲ್ಲಿ ಎಲ್ಲಾ ನೋವುಗಳು ಉಂಟಾಗಬಹುದು.

ಈ ಎಲ್ಲಾ ಜ್ಯೋತಿಷ್ಯ ಸಂಬಂಧಿ ಸಮಸ್ಯೆಗಳಿಗೆ ವೈದ್ಯಕೀಯ ಚಿಕಿತ್ಸೆಯ ಜೊತೆಗೆ, ಆಯಾ ಗ್ರಹಗಳಿಗೆ ಶಾಂತಿ ಪೂಜೆಗಳನ್ನು ಮಾಡಿಸಿಕೊಳ್ಳುವುದು ಅಗತ್ಯ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ
ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ
ಮಕರ ಸಂಕ್ರಾಂತಿ ಆಚರಣೆಯ ಸರಿಯಾದ ದಿನಾಂಕ, ಮಹತ್ವ ಏನು?
ಮಕರ ಸಂಕ್ರಾಂತಿ ಆಚರಣೆಯ ಸರಿಯಾದ ದಿನಾಂಕ, ಮಹತ್ವ ಏನು?