AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Solar Eclipse 2022: ಜಗತ್ತನ್ನೇ ಬೆಳಗುವ ಸೂರ್ಯನಿಗೆ ಗ್ರಹಣ: ಕೇತುಗ್ರಸ್ತ ಸೂರ್ಯ ಗ್ರಹಣ ಎಲ್ಲೆಲ್ಲಿ, ಯಾವಾಗ ಸಂಭವಿಸುತ್ತೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಕೇತುಗ್ರಸ್ತ ಸೂರ್ಯ ಗ್ರಹಣವು, ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಸಂಭವಿಸುತ್ತಿದೆ. ಈ ಗ್ರಹಣದ ವೇಳೆ ಕೇತುವಿನ ಪ್ರಭಾವ ಸೂರ್ಯನ ಮೇಲೆ ಹೆಚ್ಚಾಗಿ ಬೀಳೋದ್ರಿಂದ ಇದನ್ನ ಕೇತುಗ್ರಸ್ತ ಸೂರ್ಯಗ್ರಹಣ ಅಂತಾ ಕರೆಯಲಾಗುತ್ತೆ.

Solar Eclipse 2022: ಜಗತ್ತನ್ನೇ ಬೆಳಗುವ ಸೂರ್ಯನಿಗೆ ಗ್ರಹಣ: ಕೇತುಗ್ರಸ್ತ ಸೂರ್ಯ ಗ್ರಹಣ ಎಲ್ಲೆಲ್ಲಿ, ಯಾವಾಗ ಸಂಭವಿಸುತ್ತೆ
ಸೂರ್ಯ ಗ್ರಹಣ
TV9 Web
| Edited By: |

Updated on:Oct 25, 2022 | 7:55 AM

Share

ದೀಪಾವಳಿ(Deepavali 2022) ಹೊತ್ತಲ್ಲೇ, ಅಕ್ಟೋಬರ್ 25ರಂದು ಅಂದ್ರೆ ಇಂದು ಈ ವರ್ಷದ ಕೊನೆಯ ಹಾಗೂ 27 ವರ್ಷಗಳ ಬಳಿಕ ಕೇತುಗ್ರಸ್ತ ಸೂರ್ಯ ಗ್ರಹಣ(Solar Eclipse 2022) ಸಂಭವಿಸುತ್ತಿದೆ. ಇಪ್ಪತ್ತೇಳು ವರ್ಷಗಳ ಹಿಂದೆ ದೀಪಾವಳಿ ಹಬ್ಬದಂದು ಕೇತುಗ್ರಸ್ತ ಸೂರ್ಯಗ್ರಹಣವು ಸಂಭವಿಸಿತ್ತು. ಇದೀಗ ಮತ್ತೆ ಆ ಸಮಯ ಬಂದಿದ್ದು, ಬಾನಂಗಳದಲ್ಲಿ ಸೂರ್ಯ ಬಳೆ ತೊಟ್ಟಂತೆ ಗೋಚರಿಸಲಿದ್ದಾನೆ. ಸೌರಮಂಡಲದ ವಿಸ್ಮಯಕಾರಿ ಪ್ರಕ್ರಿಯೆ ಕಣ್ತುಂಬಿಕೊಳ್ಳಲು ಜನ ಕಾತುರದಿಂದ ಕಾಯುತ್ತಿದ್ದಾರೆ.

ಸೂರ್ಯ ಗ್ರಹಣ ಸಮಯ

  • ಗ್ರಹಣ ಸ್ಪರ್ಶಕಾಲ – ಮಧ್ಯಾಹ್ನ 2:15
  • ಗ್ರಹಣ ಮಧ್ಯಕಾಲ – ಮಧ್ಯಾಹ್ನ 4:18
  • ಗ್ರಹಣ ಮೋಕ್ಷಕಾಲ – ಸಂಜೆ 6:30

ದೀಪಾವಳಿ ಅಮಾವಾಸ್ಯೆಯಾದ ಇಂದು ಮಧ್ಯಾಹ್ನ 2:15 ಕ್ಕೆ ಆರಂಭವಾಗುವ ಸೂರ್ಯಗ್ರಹಣ, 4 ಗಂಟೆ 18 ನಿಮಿಷಕ್ಕೆ ಬಹಳಷ್ಟು ತೀವ್ರತೆಯನ್ನ ಪಡೆದುಕೊಳ್ಳುತ್ತೆ. ಸಂಜೆ 6.30ಕ್ಕೆ ಗ್ರಹಣವು ಮುಕ್ತಾಯವಾಗುತ್ತೆ.

ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರಿಸುತ್ತೆ? ಸೂರ್ಯಗ್ರಹಣ ದೆಹಲಿ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಉಜ್ಜಯಿನಿ, ವಾರಾಣಸಿ ಮತ್ತು ಮಥುರಾದಲ್ಲಿ ಗೋಚರವಾಗಲಿದೆ. ಬೆಂಗಳೂರಲ್ಲಿ ಸಂಜೆ 5.12 ರಿಂದ 5.55 ರವರೆಗೆ ಗ್ರಹಣ ಗೋಚರವಾಗಲಿದೆ. ಇನ್ನು, ಯುರೋಪ್, ಆಫ್ರಿಕಾ, ಏಷ್ಯಾ ಖಂಡದಲ್ಲಿ ಗ್ರಹಣ ಗೋಚರವಾಗುತ್ತೆ.

ರಾಜ್ಯದ ವಿವಿಧ ಭಾಗಗಳಲ್ಲಿ ಸೂರ್ಯ ಗ್ರಹಣ ಗೋಚರದ ವಿವರ

  • ಬೆಂಗಳೂರು 10.09% – ಸಂಜೆ 5:12 ಗಂಟೆಗೆ ಗ್ರಹಣ ಪ್ರಾರಂಭ
  • ಮೈಸೂರು 9.5%- ಸಂಜೆ 5:13 ಗಂಟೆಗೆ ಪ್ರಾರಂಭ
  • ಧಾರವಾಡ 16.09%- ಸಂಜೆ 5:01 ಗಂಟೆಗೆ ಪ್ರಾರಂಭ
  • ರಾಯಚೂರು 16.67%- ಸಂಜೆ 5:01 ಗಂಟೆಗೆ ಪ್ರಾರಂಭ
  • ಬಳ್ಳಾರಿ 14.64%- ಸಂಜೆ 5:04 ಗಂಟೆಗೆ ಪ್ರಾರಂಭ
  • ಬಾಗಲಕೋಟೆ 17.33%- ಸಂಜೆ 5:00 ಗಂಟೆಗೆ ಪ್ರಾರಂಭ
  • ಮಂಗಳೂರು 10.91%- ಸಂಜೆ 5:10 ಗಂಟೆಗೆ ಪ್ರಾರಂಭ
  • ಕಾರವಾರ 15.15%- ಸಂಜೆ 5:03 ಗಂಟೆಗೆ ಪ್ರಾರಂಭ

ದೇಶದ ಇತರೆ ಭಾಗದಲ್ಲಿ

  • ದೆಹಲಿ ಸಂಜೆ 4:29ಕ್ಕೆ
  • ಮುಂಬೈ ಸಂಜೆ 4:49ಕ್ಕೆ
  • ಕೊಲ್ಕತ್ತಾ ಸಂಜೆ 4:52ಕ್ಕೆ
  • ಚೆನ್ನೈ ಸಂಜೆ 5:14ಕ್ಕೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಕೇತುಗ್ರಸ್ತ ಸೂರ್ಯ ಗ್ರಹಣವು, ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಸಂಭವಿಸುತ್ತಿದೆ. ಈ ಗ್ರಹಣದ ವೇಳೆ ಕೇತುವಿನ ಪ್ರಭಾವ ಸೂರ್ಯನ ಮೇಲೆ ಹೆಚ್ಚಾಗಿ ಬೀಳೋದ್ರಿಂದ ಇದನ್ನ ಕೇತುಗ್ರಸ್ತ ಸೂರ್ಯಗ್ರಹಣ ಅಂತಾ ಕರೆಯಲಾಗುತ್ತೆ.

ಇನ್ನು, ವೈಜ್ಞಾನಿಕ ಲೋಕದ ಪ್ರಕಾರ, ಖಗೋಳ ಶಾಸ್ತ್ರಜ್ಞರ ಪ್ರಕಾರ ಇದು ಬಾನಲ್ಲಿ ನಡೆಯುವ ಒಂದು ಪ್ರಕ್ರಿಯೆ ಅಷ್ಟೆ. ಆದ್ರೆ ಇದು ಬಹಳಷ್ಟು ವಿಚಿತ್ರವಾದ, ಅಪಾಯಕಾರಿಯಾದ, ಪ್ರಮಾಧವನ್ನ ಸೃಷ್ಟಿಸುವಂತಹ ಸೂರ್ಯಗ್ರಹಣವೆಂಬ ಮಾತು ಇಡೀ ಜಗತ್ತಿನ ನಾನಾ ಧರ್ಮಗಳ ಜ್ಯೋತಿಷ್ಯ ವಲಯದ್ದಾಗಿದೆ.

ಗ್ರಹಣ ಕಾಲದಲ್ಲಿ ಪಾಲಿಸಬೇಕಾದ ನಿಯಮಗಳೇನು?

  • ಗ್ರಹಣ ಸ್ಪರ್ಶವಾದ ತಕ್ಷಣ ಸ್ನಾನ ಮಾಡಬೇಕು
  • ಗ್ರಹಣ ಸ್ಪರ್ಶವಾದಾಗಿನಿಂದ ಮುಗಿಯುವವರೆಗೂ ಏನನ್ನೂ ತಿನ್ನಬಾರದು
  • ಗ್ರಹಣ ಮೋಕ್ಷದ ನಂತರ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಬೇಕು, ಅಡುಗೆ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಬೇಕು.
  • ಪೂಜೆಯ ನಂತರ ಆಹಾರ ಸೇವಿಸಬೇಕು
  • ಸ್ನಾನ ಆದ ತಕ್ಷಣ ಏನನ್ನಾದರೂ ದಾನ ಮಾಡಬೇಕು, ದಾನ ಮಾಡಲು ಆಗದವರು ದೇವರ ಮಂತ್ರಗಳನ್ನ ಪಠಿಸಬೇಕು
  • ಗ್ರಹಣ ಕಾಲ ಆರಂಭದಿಂದ ಮಧ್ಯಕಾಲದವರೆಗೂ ಪಿತೃಗಳನ್ನು ನೆನೆದು ತರ್ಪಣ ನೀಡಬೇಕು
  •  ಗ್ರಹಣ ಕಾಲದಲ್ಲಿ ನಿದ್ದೆ ಮಾಡಬಾರದು
  • ಗ್ರಹಣ ಸಂಭವಿಸುವ ಮುನ್ನಾ ಹಬ್ಬದಾಚರಣೆ ಮುಗಿಸಬೇಕು
  • ಅಮಾವಾಸ್ಯೆ ಗ್ರಹಣ ಕಾಲದಲ್ಲಿ ನದಿ ನೀರಿನಲ್ಲಿ ತಪಸ್ಸು ಸೂಕ್ತ
  • ಅಮಾವಾಸ್ಯೆ ಗ್ರಹಣ ಕಾಲದಲ್ಲಿ ಜಪ-ತಪ ಸೂಕ್ತ
  • ಗ್ರಹಣ ಸಮಯದಲ್ಲಿ ದೇವತಾ ಪಾರ್ಥನೆಯಿಂದ ಸಿದ್ಧಿ ಪ್ರಾಪ್ತಿ
  • ಗ್ರಹಣ ಕಾಲದಲ್ಲಿ ದೇವರ ನಾಮಸ್ಮರಣೆಯಿಂದ ಸಕಲ ದೋಷ ನಿವಾರಣೆ
  • ಗರ್ಭಿಣಿಯರು ಎಚ್ಚರದಿಂದಿರಬೇಕು
  • ಮಕ್ಕಳು-ವೃದ್ಧರು ಮನೆಯೊಳಗಿರುವುದು ಸೂಕ್ತ
  • ದೈವ ಸ್ಮರಣೆಯಿಂದ ಧನಾತ್ಮಕ ಶಕ್ತಿ ವೃದ್ಧಿ
  • ಹಬ್ಬದ ತಿನಿಸು ಪದಾರ್ಥಗಳ ಮೇಲೆ ದರ್ಬೆ ಹುಲ್ಲನ್ನು ಹಾಕುವುದು ಒಳ್ಳೆಯದು
  • ಸೂರ್ಯಗ್ರಹಣವನ್ನ ಬರಿಗಣ್ಣಿನಿಂದ ನೋಡುವುದು ಒಳಿತಲ್ಲಾ

Published On - 6:30 am, Tue, 25 October 22

ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?