AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ತ್ರಿಮುಖ ರುದ್ರಾಕ್ಷಿಯ ಆಧ್ಯಾತ್ಮಿಕ ರಹಸ್ಯ ಮತ್ತು ಮಹತ್ವದ ಬಗ್ಗೆ ಇಲ್ಲಿ ತಿಳಿಯಿರಿ

ಡಾ. ಬಸವರಾಜ್ ಗುರೂಜಿಯವರು ತ್ರಿಮುಖ ರುದ್ರಾಕ್ಷಿಯ ಮಹತ್ವದ ಬಗ್ಗೆ ಮಾಹಿತಿ ನೀಡಿದ್ದಾರೆ. ತ್ರಿಮುಖ ರುದ್ರಾಕ್ಷಿಯು ಬ್ರಹ್ಮ, ವಿಷ್ಣು, ಮಹೇಶ್ವರರ ಹಾಗೂ ಅಗ್ನಿದೇವನ ಪ್ರತೀಕವಾಗಿದೆ. ಇದು ಅಪರೂಪದ್ದಾಗಿದ್ದು, ಧಾರಣೆಯಿಂದ ಸಕಲ ಪಾಪ ನಿವಾರಣೆ, ಆರೋಗ್ಯ ವೃದ್ಧಿ, ಜ್ಞಾಪಕ ಶಕ್ತಿ ಸುಧಾರಣೆ, ಮತ್ತು ಮಾನಸಿಕ ಧೈರ್ಯ ಹೆಚ್ಚುತ್ತದೆ. ಇದನ್ನು ಭಕ್ತಿ ಹಾಗೂ ಶ್ರದ್ಧೆಯಿಂದ ಧರಿಸಿದಾಗ ಸಕಾರಾತ್ಮಕ ಪರಿಣಾಮಗಳು ಪ್ರಾಪ್ತವಾಗುತ್ತವೆ.

Daily Devotional: ತ್ರಿಮುಖ ರುದ್ರಾಕ್ಷಿಯ ಆಧ್ಯಾತ್ಮಿಕ ರಹಸ್ಯ ಮತ್ತು ಮಹತ್ವದ ಬಗ್ಗೆ ಇಲ್ಲಿ ತಿಳಿಯಿರಿ
Trimukhi Rudraksha
ಅಕ್ಷತಾ ವರ್ಕಾಡಿ
|

Updated on: Oct 16, 2025 | 7:40 AM

Share

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ತ್ರಿಮುಖ ರುದ್ರಾಕ್ಷಿಯ ಆಧ್ಯಾತ್ಮಿಕ ರಹಸ್ಯ ಮತ್ತು ಮಹತ್ವದ ಬಗ್ಗೆ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ತ್ರಿಮುಖ ಎಂಬ ಪದವು ತ್ರಿಲೋಕಗಳು, ತ್ರಿಮೂರ್ತಿಗಳು, ತ್ರಿಗುಣಗಳು, ತ್ರಿಕರಣ ಹಾಗೂ ತ್ರಿವಿಧಗಳನ್ನು ನೆನಪಿಸುತ್ತದೆ. ಮೂರು ಎಂಬ ಸಂಖ್ಯೆಯು ಹೆಚ್ಚಿನ ಪ್ರಾಶಸ್ತ್ಯವನ್ನು ಹೊಂದಿದೆ. ತ್ರಿಮುಖ ರುದ್ರಾಕ್ಷಿಯು ಮೂರು ಗೆರೆಗಳನ್ನು ಹೊಂದಿದ್ದು, ಅಗ್ನಿದೇವರ ಪ್ರತೀಕವಾಗಿದೆ. ಶಿವನನ್ನು ಮುಕ್ಕಣ್ಣ ಎಂದು ಕರೆಯುವಾಗ, ಆ ಮೂರನೇ ಕಣ್ಣು ಅಗ್ನಿಯ ಸಂಕೇತವೂ ಹೌದು.

ತ್ರಿಮುಖ ರುದ್ರಾಕ್ಷಿಯು ಅತಿ ವಿರಳವಾಗಿದ್ದು, ಸುಲಭವಾಗಿ ಸಿಗುವುದಿಲ್ಲ. ಇದರ ಧಾರಣೆಯು ಸಕಲ ಪಾಪಗಳ ನಿವಾರಣೆಗೆ ಸಹಾಯಕ. ಸಾಕ್ಷಾತ್ ಬ್ರಹ್ಮ, ವಿಷ್ಣು, ಮಹೇಶ್ವರರು ಇದರಲ್ಲಿ ನೆಲೆಸಿದ್ದಾರೆ ಎಂದು ನಂಬಲಾಗುತ್ತದೆ. ಲಕ್ಷ್ಮಿ, ಪಾರ್ವತಿ, ಕಾಳಿಯ ಸ್ವರೂಪವೂ ಇದಾಗಿದೆ. ತ್ರಿಶಕ್ತಿಗಳು ಮತ್ತು ತ್ರಿಮೂರ್ತಿಗಳ ಪ್ರತಿನಿಧಿಯಾಗಿ ತ್ರಿಮುಖ ರುದ್ರಾಕ್ಷಿಯನ್ನು ಪರಿಗಣಿಸಲಾಗುತ್ತದೆ. ಈ ರುದ್ರಾಕ್ಷಿಯ ಮಾಲೆಯನ್ನು ಧರಿಸಿ ಒಮ್ಮೆ ಜಪ ಮಾಡಿದರೆ, ಹನ್ನೊಂದು ದಿನ ಜಪ ಮಾಡಿದಷ್ಟು ಫಲ ಸಿಗುತ್ತದೆ ಎಂದು ಗುರೂಜಿ ವಿವರಿಸಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ತ್ರಿಮುಖ ರುದ್ರಾಕ್ಷಿಯನ್ನು ಧಾರಣೆ ಮಾಡಿದಾಗ ದೇಹದಲ್ಲಿ ಸಕಾರಾತ್ಮಕ ಶಕ್ತಿ ಸಂಚಲನವಾಗುತ್ತದೆ. ನಿರ್ಧಾರಗಳು ನೇರವಾಗುತ್ತವೆ. ತ್ರಿಮುಖ ರುದ್ರಾಕ್ಷಿಯು ಅಗ್ನಿಯ ಸ್ವರೂಪವಾಗಿರುವುದರಿಂದ, “ಮಹಾಜ್ವಾಲಾಯ ವಿದ್ಮಹೇ ಅಗ್ನಿಜ್ವಾಲಾಯ ಧೀಮಹಿ ತನ್ನೋ ಅಗ್ನಿ ಪ್ರಚೋದಯಾತ್” ಎಂಬ ಮಂತ್ರದ ಜಪದೊಂದಿಗೆ ಗುರುಗಳ ಮುಖಾಂತರ ಇದನ್ನು ಧರಿಸಿದರೆ, ಕೆಲಸ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ವೃದ್ಧಿ, ಮತ್ತು ಹಳೆಯ ಜನ್ಮದ ಸಂಚಿತ ಪಾಪಗಳ ನಿವಾರಣೆ ಆಗುತ್ತದೆ. ಯಶಸ್ಸು, ಕೀರ್ತಿ, ಪ್ರತಿಷ್ಠೆಗಳಿಗೆ ಪಾತ್ರರಾಗುತ್ತಾರೆ.

ಈ ರುದ್ರಾಕ್ಷಿ ಧಾರಣೆಯಿಂದ ಸದಾ ಒಂದು ಪ್ರಭಾವಲಯ ನಿಮ್ಮನ್ನು ಸುತ್ತುವರಿದಿರುತ್ತದೆ. ಶಿವ, ಪಾರ್ವತಿ ಮತ್ತು ಅಗ್ನಿಯ ಅಂಶ ನಿಮ್ಮಲ್ಲಿ ಇರುತ್ತದೆ. ದೇವಿಯ ಅನುಗ್ರಹ ಸದಾ ನಿಮ್ಮ ಮೇಲಿರುತ್ತದೆ. ದೃಷ್ಟಿ ಚನ್ನಾಗಿರುತ್ತದೆ, ಜ್ಞಾಪಕ ಶಕ್ತಿ ಹೆಚ್ಚುತ್ತದೆ, ಹಳೆಯ ವಿಷಯಗಳ ಪ್ರಸ್ತಾಪ ಮತ್ತು ಮುಂದಾಗುವ ವಿಷಯಗಳ ಅರಿವು ಸಹ ಈ ರುದ್ರಾಕ್ಷಿಯಿಂದ ಲಭಿಸುತ್ತದೆ. ಇದು ಧೈರ್ಯ ಮತ್ತು ನಿರ್ಭೀತಿಯಿಂದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಹಾಯಕ. ಕೆಂಪು ದಾರದಲ್ಲಿ ತ್ರಿಮುಖ ರುದ್ರಾಕ್ಷಿಯನ್ನು ಧರಿಸುವುದು ಶುಭಕರ ಎಂದು ಹೇಳಲಾಗುತ್ತದೆ. ಭಾನುವಾರದ ಗೋದೂಳಿ ಮುಹೂರ್ತದಲ್ಲಿ ಧಾರಣೆ ಮಾಡುವುದು ಅತ್ಯಂತ ಶುಭ.

ಇದನ್ನೂ ಓದಿ: ದೀಪಾವಳಿಯ ಮುಂದಿನ 6 ತಿಂಗಳು ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ

ಸಾಮಾನ್ಯವಾಗಿ ತ್ರಿಮುಖ ರುದ್ರಾಕ್ಷಿಯನ್ನು ಧರಿಸಿದವರಿಗೆ ವಾಹನ ಅಪಘಾತಗಳು ಆಗುವುದಿಲ್ಲ ಎಂದು ನಂಬಲಾಗಿದೆ. ನೇಪಾಳದಿಂದ ತರುವ ಮೂಲ ರುದ್ರಾಕ್ಷಿಯನ್ನು ಧರಿಸುವುದು ಇನ್ನೂ ಹೆಚ್ಚು ಶುಭ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹ ಸಹಾಯಕ. ಯಾವುದೇ ರುದ್ರಾಕ್ಷಿಯನ್ನು ಧರಿಸಿದರೂ, ಮನಸ್ಸು ನಿರ್ಮಲವಾಗಿರಬೇಕು, ಶ್ರದ್ಧೆ ಮತ್ತು ಭಕ್ತಿ ಇರಬೇಕು. ಅದರ ಮೇಲೆ ಒಳ್ಳೆಯ ಅಭಿಪ್ರಾಯ ಇದ್ದಾಗ ಮಾತ್ರ ಅದರ ಸಂಪೂರ್ಣ ಅಂಶ ನಿಮಗೆ ಪ್ರಾಪ್ತವಾಗುತ್ತದೆ. ಕೇವಲ ಅಲಂಕಾರಿಕವಾಗಿ ಧರಿಸಿದರೆ ಅದರ ಪ್ರಭಾವ ಇರುವುದಿಲ್ಲ. ಭಕ್ತಿ ಮತ್ತು ಭಾವನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ತ್ರಿಮುಖ ರುದ್ರಾಕ್ಷಿಯು ಪ್ರಕೃತಿಯ ಸಾಕ್ಷಾತ್ ಲಯಕಾರಕನ ಅನುಗ್ರಹವನ್ನು ಕರುಣಿಸುತ್ತದೆ. ಶಿವ, ವಿಷ್ಣು, ಬ್ರಹ್ಮರ ಮೂರು ರೂಪಗಳು ಅಗ್ನಿಯ ಸ್ವರೂಪವಾಗಿ ತ್ರಿಮುಖ ರುದ್ರಾಕ್ಷಿಯಲ್ಲಿ ಅಡಗಿವೆ ಎಂದು ಗುರೂಜಿ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ