
ತಿರುಪತಿ ಎಂದಾಕ್ಷಣ ಕಣ್ಣಮುಂದೆ ಬರೋದು ಶ್ರೀವಾರಿಯ ಪ್ರಸಾದ ಲಡ್ಡು. ದೇವರ ದರ್ಶನ ಮಾಡಿ ಬಂದ ಪ್ರತಿಯೊಬ್ಬರೂ ಲಡ್ಡು ಸ್ವೀಕರಿಸದೆ ಮನೆಗೆ ಬರೋದಿಲ್ಲ. ಅಷ್ಟೇ ಏಕೆ ತಿರುಪತಿಗೆ ಸ್ನೇಹಿತರೋ, ಅಕ್ಕಪಕ್ಕದ ಮನೆಯವರೋ ಹೋಗುತ್ತಿದ್ದಾರೆಂದರೆ ನಮಗೂ ಒಂದೆರಡು ಲಡ್ಡು ತಂದುಕೊಡಿ ಅಂತಾರೆ. ಇನ್ನು ಎಷ್ಟೇ ಲಕ್ಷಾಂತರ ಭಕ್ತ ಸಮೂಹವಿದ್ದರೂ, ನೂಕುನುಗ್ಗಲಲ್ಲೇ ಕೆಲವೇ ನಿಮಿಷಗಳಿಗಾದರೂ ತಿಮ್ಮಪ್ಪನ ದರ್ಶನ ಮಾಡಬೇಕೆಂಬ ಹಂಬಲದಲ್ಲಿ ನಾನಾ ರಾಜ್ಯಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಲಡ್ಡು ಇಲ್ಲದೆ ತೀರ್ಥಯಾತ್ರೆ ಅಪೂರ್ಣ ಎಂಬಂತೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಲಡ್ಡು ಪ್ರಸಾದ ಖರೀದಿಸುತ್ತಾರೆ. ಆದರೆ ಇತ್ತೀಚೆಗೆ ಎದ್ದ ಆ ಆರೋಪವೊಂದು ಭಕ್ತರ ನಂಬಿಕೆಯನ್ನು ಘಾಸಿಗೊಳಿಸಿದೆ, ಆಘಾತ ತಂದಿದೆ, ನೋವುಂಟು ಮಾಡಿದೆ. ಆಧುನಿಕ ಯುಗದಲ್ಲಿ ಮುಟ್ಟಿದ್ದೆಲ್ಲಾ ಕಲಬೆರಕೆ ಎಂಬಂತಾಗಿದೆ. ಅನ್ನ ಮಾಡುವ ಅಕ್ಕಿ, ಮೊಟ್ಟೆಯಿಂದ ಹಿಡಿದು ಮಸಾಲೆ ಪದಾರ್ಥಗಳು, ಹಣ್ಣು, ದಿನ ನಿತ್ಯ ಬಳಕೆ ವಸ್ತುಗಳಲ್ಲಿ ಬಹುತೇಕ ಎಲ್ಲವೂ ಕಲಬೆರಕೆಯಾಗಿಬಿಟ್ಟಿದೆ. ಕಲಬೆರಕೆ ಇಲ್ಲದ ಪದಾರ್ಥಗಳನ್ನು ಕಂಡುಹಿಡಿಯುವುದೇ ಕಷ್ಟವಾಗಿದೆ. ಇತ್ತ ಪವಿತ್ರ ತಿರುಪತಿ ಲಡ್ಡು ತಯಾರಿಕೆಯಲ್ಲಿ ಬಳಸಲಾದ ತುಪ್ಪವೇ ಕಲಬೆರಕೆಯಾಗಿತ್ತು ಎಂಬ ದೊಡ್ಡ ಆರೋಪ ಕೇಳಿಬಂದಿದೆ. ಇದರಿಂದಾಗಿ ಪವಿತ್ರ, ಭಕ್ತಿ ಪ್ರಧಾನ ಲಡ್ಡುವಿನಲ್ಲಿ ದನ, ಹಂದಿಯ ಕೊಬ್ಬಿನ ಅಂಶ, ಮೀನಿನ ಎಣ್ಣೆ ಅಂಶ ಇರುವುದು ಪತ್ತೆಯಾಗಿದೆ. 1857ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ತನ್ನ ಭಾರತೀಯ ಯೋಧರಿಗೆ ಬಂದೂಕುಗಳನ್ನು ನೀಡಿತ್ತು. ಅದರಲ್ಲಿ ಬಳಸುವ ಗುಂಡುಗಳಿಗೆ ಆಕಳು, ಹಂದಿ ಮಾಂಸದ ಕೊಬ್ಬು ಹಚ್ಚಲಾಗಿದೆ ಎಂಬ ಮಾತು ಯೋಧರ ಕಿವಿಗೆ ಕಾದ ಸೀದಂತೆ ಬಿದ್ದಾಗ ಸಹಜವಾಗಿಯೇ ಅದು ಸಿಪಾಯಿ ದಂಗೆಗೆ ಕಾರಣವಾಗಿತ್ತು. ಇದೀಗ ತಿರುಪತಿ ಲಡ್ಡು...
Published On - 1:33 pm, Mon, 30 September 24