AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಪಂಕಜಕಸ್ತೂರಿ 2023ರ ಐಕಾನಿಕ್ ಬ್ರ್ಯಾಂಡ್ ಆಗಿ ಆಯ್ಕೆ; ಇದೊಂದು ಹೆಮ್ಮೆಯ ಕ್ಷಣ ಎಂದ ಸಂಸ್ಥೆ

Pankajakasthuri India's Iconic Brand 2023: ಆಯುರ್ವೇದ ಉತ್ಪನ್ನಗಳ ತಯಾರಕವಾದ ಪಂಕಜಕಸ್ತೂರಿ 2023ನೇ ಸಾಲಿನಲ್ಲಿ ಭಾರತದ ಐಕಾನಿಕ್ ಬ್ರ್ಯಾಂಡ್ ಎಂಬ ಗೌರವಕ್ಕೆ ಪಾತ್ರವಾಗಿದೆ. ಟೈಮ್ಸ್ ಗ್ರೂಪ್ ನಡೆಸುವ ಐಕಾನಿಕ್ ಬ್ರ್ಯಾಂಡ್ಸ್ ಆಫ್ ಇಂಡಿಯಾದ ಆರನೇ ಆವೃತ್ತಿಯಲ್ಲಿ ಪಂಕಜಕಸ್ತೂರಿ ಹರ್ಬಲ್ಸ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ.

ಭಾರತದ ಪಂಕಜಕಸ್ತೂರಿ 2023ರ ಐಕಾನಿಕ್ ಬ್ರ್ಯಾಂಡ್ ಆಗಿ ಆಯ್ಕೆ; ಇದೊಂದು ಹೆಮ್ಮೆಯ ಕ್ಷಣ ಎಂದ ಸಂಸ್ಥೆ
ಪಂಕಜಕಸ್ತೂರಿ 2023ರ ಐಕಾನಿಕ್ ಬ್ರ್ಯಾಂಡ್
TV9 Web
| Edited By: |

Updated on: Sep 29, 2023 | 6:57 PM

Share

ಬೆಂಗಳೂರು, ಸೆಪ್ಟೆಂಬರ್ 29: ಆಯುರ್ವೇದ ಉತ್ಪನ್ನಗಳ ತಯಾರಕವಾದ ಪಂಕಜಕಸ್ತೂರಿ 2023ನೇ ಸಾಲಿನಲ್ಲಿ ಭಾರತದ ಐಕಾನಿಕ್ ಬ್ರ್ಯಾಂಡ್ ಎಂಬ ಗೌರವಕ್ಕೆ ಪಾತ್ರವಾಗಿದೆ. ಟೈಮ್ಸ್ ಗ್ರೂಪ್ ನಡೆಸುವ ಐಕಾನಿಕ್ ಬ್ರ್ಯಾಂಡ್ಸ್ ಆಫ್ ಇಂಡಿಯಾದ ಆರನೇ ಆವೃತ್ತಿಯಲ್ಲಿ (Iconic Brands of India 2023) ಪಂಕಜಕಸ್ತೂರಿ ಹರ್ಬಲ್ಸ್ ಇಂಡಿಯಾವನ್ನು (Pankajakasthuri Herbals Pvt Ltd) ಆಯ್ಕೆ ಮಾಡಲಾಗಿದೆ. ಭಾರತದ ಮೂನ್ ಮ್ಯಾನ್ ಎಂದು ಹೆಸರುವಾಸಿಯಾಗಿರುವ ಇಸ್ರೋ ಸೆಟಿಲೈಟ್ ಸೆಂಟರ್​ನ ಮಾಜಿ ನಿರ್ದೇಶಕ ಡಾ. ಮೈಲಸ್ವಾಮಿ ಅಣ್ಣಾದುರೈ ಅವರಿಂದ ಐಕಾನಿಕ್ ಬ್ರ್ಯಾಂಡ್ 2023 ಪ್ರಶಸ್ತಿ ಫಲಕವನ್ನು ಪಂಕಜಕಸ್ತೂರಿ ಸಂಸ್ಥೆಯ ಮಾರ್ಕೆಟಿಂಗ್ ನಿರ್ದೇಶಕ ಅರುಣ್ ವಿಸಾಖ್ ನಾಯರ್ ಸ್ವೀಕರಿಸಿದರು.

ಈ ವೇಳೆ ಅರುಣ್ ನಾಯರ್ ತಮ್ಮ ಸಂಸ್ಥೆಗೆ ಈ ಪ್ರಶಸ್ತಿ ಸಿಕ್ಕಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಪಂಕಜಕಸ್ತೂರಿ ಇತಿಹಾಸದಲ್ಲೇ ಇದೊಂದು ಹೆಮ್ಮೆಯ ಕ್ಷಣ ಎಂದು ಅವರು ಬಣ್ಣಿಸಿದರು. ‘ಕಳೆದ 35 ವರ್ಷಗಳಿಗೂ ಹೆಚ್ಚು ಕಾಲದಿಂದ ನಮ್ಮ ಮೇಲೆ ವಿಶ್ವಾಸ ಇಟ್ಟಿರುವ ಕೋಟ್ಯಂತರ ಜನರಿಗೆ ಶ್ರೇಷ್ಠ ಉತ್ಪನ್ನಗಳನ್ನು ಒದಗಿಸುವ ನಮ್ಮ ಬದ್ಧತೆಗೆ ಇದು ಸಿಕ್ಕ ಪ್ರಶಂಸೆಯಾಗಿದೆ’ ಎಂದು ಅರುಣ್ ನಾಯರ್ ಹೇಳಿದರು.

ಪುರಾತನ ಆಯುರ್ವೇದದ ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ವಿಜ್ಞಾನ ಎರಡನ್ನೂ ಸೇರಿಸಿ ಉನ್ನತ ಗುಣಮಟ್ಟದ ಉತ್ಪನ್ನಗಳನ್ನು ಪಂಕಜ ಕಸ್ತೂರಿ ಹರ್ಬಲ್ಸ್ ಸಂಸ್ಥೆ ಒದಗಿಸುತ್ತಿರುವುದನ್ನು ಈ ಸಂದರ್ಭದಲ್ಲಿ ಗುರುತಿಸಲಾಗಿದೆ. ಗುಣಮಟ್ಟದಲ್ಲಿ ರಾಜಿ ಇಲ್ಲದೇ ಉತ್ಪನ್ನಗಳನ್ನು ತಯಾರಿಸುವ ಪಂಕಜ ಕಸ್ತೂರಿ ಬ್ರ್ಯಾಂಡ್ ಅಡಿಯಲ್ಲಿ ಬ್ರೀತ್ ಈಸಿ (Pankajakasthuri Breath Eazy), ಆರ್ತೋ ಹರ್ಬ್ (Orthoherb), ಆಂಟಿಸಿಡ್ (Anticid) ಮೊದಲಾದ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ.

ಪಂಕಜ ಕಸ್ತೂರಿ ಬ್ರೀತ್ ಈಸಿ ಉತ್ಪನ್ನವು ಉಸಿರಾಟ ತೊಂದರೆಗೆ ತೆಗೆದುಕೊಳ್ಳಬಹುದಾದ ಔಷಧವಾಗಿದೆ. ಇನ್ನು, ಪಂಕಜ ಕಸ್ತೂರಿ ಆರ್ತೋಹರ್ಬ್ ಸಂಧಿ ವಾತ, ಕೀಲುನೋವು ಉಪಶಮನಕ್ಕೆ ನೀಡುವ ಔಷಧವಾಗಿದೆ. ಹಾಗೆಯೇ, ಅಜೀರ್ಣ ಸಮಸ್ಯೆಗೆ ಪಂಕಜ ಕಸ್ತೂರಿ ಆಂಟಿಸಿಡ್ ಔಷಧ ಇದೆ.

(ಇದು ಪ್ರಾಯೋಜಿತ ಸುದ್ದಿ)

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?