AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಹಿತ್ ಶರ್ಮ ಬಿಟ್ಟ ಕ್ಯಾಚ್ ಕಷ್ಟಕರವಾಗೇನೂ ಇರಲಿಲ್ಲ, ಹಿಡಿಯಬಹುದಿತ್ತು ಅಂದರು ನೆಟ್ಟಿಗರು!

ಸರಿ, ಬ್ಯಾಟಿಂಗ್ ವೈಫಲ್ಯ ಟೆಸ್ಟ್ ಕ್ರಿಕೆಟ್ ನಲ್ಲಿ ಸಾಮಾನ್ಯ ಎಂದು ಭಾವಿಸಿ ಭಾರತ 78 ರನ್ ಮೊತ್ತಕ್ಕೆ ಅಲೌಟ್ ಆಗಿದ್ದನ್ನು ಅಂಗೀಕರಿಸಿದರೂ ಫೀಲ್ಡಿಂಗ್ ಮಾಡುವಾಗ ಭಾರತದ ಕಳಪೆ ಪ್ರದರ್ಶನ ಮುಂದುವರೆಯಿತು. ತಮ್ಮೆಡೆ ಸಿಡಿದ ಕ್ಯಾಚ್​ಗಳನ್ನು ಭಾರತೀಯರು ನೆಲಸಮಗೊಳಿಸಿದರು.

ರೋಹಿತ್ ಶರ್ಮ ಬಿಟ್ಟ ಕ್ಯಾಚ್ ಕಷ್ಟಕರವಾಗೇನೂ ಇರಲಿಲ್ಲ, ಹಿಡಿಯಬಹುದಿತ್ತು ಅಂದರು ನೆಟ್ಟಿಗರು!
ಹಮೀದ್​ ನೀಡಿದ ಕ್ಯಾಚ್ ಹಿಡಿಯಲು ವಿಫಲರಾಗಿರುವ ರೋಹಿತ್​ ಶರ್ಮ
TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Aug 27, 2021 | 12:51 AM

Share

ಲಾರ್ಡ್ಸ್ ಮೈದಾನದಲ್ಲಿ ನಿಜಕ್ಕೂ ದೊರೆಗಳಂತೆ ಆಡಿದ್ದ ಟೀಮ್ ಇಂಡಿಯ ಲೀಡ್ಸ್ ನಲ್ಲಿ ಅದಕ್ಕೆ ತದ್ವಿರುದ್ಧವಾದ ಪ್ರದರ್ಶನ ನೀಡುತ್ತಿದೆ. ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ವಿರಾಟ್ ಕೊಹ್ಲಿ ಪಡೆಗೆ ಕೆಟ್ಟ ದಿನವಾಗಿತ್ತು. ಎಲ್ಲ ಬ್ಯಾಟ್ಸ್​ಮನ್​​ ವಿಫಲರಾಗಿ ತಂಡ ಕೇವಲ 78 ರನ್​ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ತನ್ನ ಓಪನಿಂಗ್ ಸ್ಪೆಲ್ನಲ್ಲಿ ಅಪ್ರತಿಮ ಬೌಲಿಂಗ್ ಪ್ರದರ್ಶನ ನೀಡಿದ ಜೇಮ್ಸ್ ಆಂಡರ್ಸನ್ ಕೊಹ್ಲಿ ಸೇರಿದಂತೆ ಮೂರು ವಿಕೆಟ್ ಪಡೆದು ಟೀಮ್ ಇಂಡಿಯಾಗೆ ಮರ್ಮಾಘಾತ ನೀಡಿದರು. ಅಲ್ಲಿಂದ ಭಾರತ ಚೇತರಿಸಿಕೊಳ್ಳುವ ಚಾನ್ಸೇ ಇರಲಿಲ್ಲ.

ಸರಿ, ಬ್ಯಾಟಿಂಗ್ ವೈಫಲ್ಯ ಟೆಸ್ಟ್ ಕ್ರಿಕೆಟ್ ನಲ್ಲಿ ಸಾಮಾನ್ಯ ಎಂದು ಭಾವಿಸಿ ಭಾರತ 78 ರನ್ ಮೊತ್ತಕ್ಕೆ ಅಲೌಟ್ ಆಗಿದ್ದನ್ನು ಅಂಗೀಕರಿಸಿದರೂ ಫೀಲ್ಡಿಂಗ್ ಮಾಡುವಾಗ ಭಾರತದ ಕಳಪೆ ಪ್ರದರ್ಶನ ಮುಂದುವರೆಯಿತು. ತಮ್ಮೆಡೆ ಸಿಡಿದ ಕ್ಯಾಚ್​ಗಳನ್ನು ಭಾರತೀಯರು ನೆಲಸಮಗೊಳಿಸಿದರು. ಜಸ್ಪ್ರೀತ್ ಬುಮ್ರಾ ದಾಳಿಯಲ್ಲಿ ಇಂಗ್ಲೆಂಡ್ ಆರಂಭ ಆಟಗಾರ ಹಸೀಬ್ ಹಮೀದ್ ನೀಡಿದ ಕ್ಯಾಚನ್ನು ಸ್ಲಿಪ್ಸ್​ನಲ್ಲಿದ್ದ ರೋಹಿತ್ ಶರ್ಮ ಕೈ ಚೆಲ್ಲಿದರು. ಅದೇನು ಅಷ್ಟು ಕಷ್ಟಕರ ಚಾನ್ಸ್ ಆಗಿರಲಿಲ್ಲ, ಹಿಡಿಯಬಹುದಿತ್ತು. ಟೆಸ್ಟ್ ಕ್ರಿಕೆಟ್ ನಲ್ಲಿ ಹಾಫ್ ಚಾನ್ಸ್ ಸಹ ಕ್ಯಾಚ್​ನಲ್ಲಿ ಪರಿವರ್ತಿಸಬೇಕಾಗುತ್ತದೆ. ಆದರೆ ಟೀಮ್ ಇಂಡಿಯ ಸದಸ್ಯರು ಸಿಂಪಲ್ ಚಾನ್ಸ್​ಗಳನ್ನೂ ಹಾಳು ಮಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ.

ಹಮೀದ್ ನೀಡಿದ ಕ್ಯಾಚನ್ನು ರೋಹಿತ್ ಹಿಡಿದಿದ್ದರೆ ಮೊದಲ ದಿನದಾಟದ ಅಂತ್ಯದಲ್ಲಿ ಪಂದ್ಯದ ಸ್ಥಿತಿ ಬೇರೆ ಇರುತ್ತಿತ್ತು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಮೊದಲು ರೋಹಿತ್ ಹಿಡಿಯಲಾಗದ ಕ್ಯಾಚನ್ನು ನೋಡಿರಿ.

ಒಬ್ಬ ಟ್ವಿಟರ್ ಯೂಸರ್ ರೋಹಿತ್ ಕ್ಯಾಚ್ ಬಿಟ್ಟಿದ್ದರಿಂದ ಹಮೀದ್ 50 ರನ್ ಪೂರೈಸಿದ್ದು ಎಲ್ಲ ಕತೆಯನ್ನು ಹೇಳುತ್ತದೆ. ಆಂಗ್ಲರು ಈ ಟೆಸ್ಟ್ನಲ್ಲಿ ನಿಸ್ಸಂದೇಹವಾಗಿ ಮೇಲುಗೈ ಸಾಧಿಸಿದ್ದಾರೆ, ಎಂದು ಹೇಳಿದ್ದಾರೆ.

ಮತ್ತೊಬ್ಬ ಕ್ರಿಕೆಟ್ ಪ್ರೇಮಿ ರೋಹಿತ್ ಆ ಕ್ಯಾಚ್ ಹಿಡಿದಿದ್ದರೆ ಇಂಗ್ಲೆಂಡ್ ಮತ್ತೆರಡು ವಿಕೆಟ್ ಕಳೆದುಕೊಳ್ಳುವ ಸಾಧ್ಯತೆ ಇರುತಿತ್ತು ಎಂದು ಹಿಂದಿಯಲ್ಲಿ ಹೇಳಿದ್ದಾರೆ.

ಬುಮ್ರಾ ಬೌಲ್ ಮಾಡಿದ ನಂತರ ಬಾಲು ಹಮೀದ್ ಬ್ಯಾಟಿನ ಅಂಚನ್ನು ಸವರಿ ತಮ್ಮೆಡೆ ಬರುವ ಮೊದಲೇ ರೋಹಿತ್ ಶರ್ಮ ತಮ್ಮ ಬಲಗಡೆ ಮೂವ್ ಮಾಡಿದ್ದರು. ಬಾರತೀಯ ಆಟಗಾರರು ಬೆಳಗ್ಗೆ ಏನು ತಿಂದಿದ್ದರೋ? ಜಡೇಜಾ ಅವರಿಂದ ಮಿಸ್ ಫೀಲ್ಡ್ ಆಗುತ್ತೆ. ರೋಹಿರ್ ಕ್ಯಾಚ್ ಬಿಡುತ್ತಾರೆ. ಟೆರ್ರಿಬಲ್ ದಿನ ಮತ್ತು ಭಾರತೀಯರಿಂದ ಟೆರ್ರಿಬಲ್ ಪರ್ಫಾರ್ಮನ್ಸ್ ಅಂತ ಮತ್ತೊಬ್ಬರು ಹೇಳಿದ್ದಾರೆ.

ಜಿಮ್ಮಿ ತಮ್ಮ ಮ್ಯಾಜಿಕಲ್ ಓಪನಿಂಗ್ ಸ್ಪೆಲ್ನಲ್ಲಿ, ಕೆ ಎಲ್ ರಾಹುಲ್, ಚೇತೇಶ್ವರ್ ಪೂಜಾರಾ ಮತ್ತು ಕೊಹ್ಲಿ ಅವರ ವಿಕೆಟ್ಗಳನ್ನು ಪಡೆದಾಗ ಭಾರತದ ಸ್ಕೋರ್ 21/3 ಆಗಿತ್ತು. ಭಾರತದ ಮಿಡ್ಲ್ ಮತ್ತು ಲೋಯರ್ ಆರ್ಡರ್ ಬ್ಯಾಟ್ಸ್ಮನ್ಗಳನ್ನು ಆಂಗ್ಲರ ವೇಗಿಗಳಾದ ಸ್ಯಾಮ್ ಕರನ್, ಒಲ್ಲೀ ರಾಬಿನ್ಸನ್ ಮತ್ತು ಕ್ರೇಗ್ ಓವರ್ಟನ್ ತರಗೆಲೆಗಳಂತೆ ಉದುರಿಸಿದರು.

ಇದನ್ನೂ ಓದಿ: ಕ್ರಿಕೆಟ್ ವಿಚಾರದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ; ಅಫ್ಘಾನ್ ಕ್ರಿಕೆಟ್​ಗೆ ತಾಲಿಬಾನಿಗಳಿಂದ ಸಿಗ್ತು ಬೇಷರತ್ ಬೆಂಬಲ

Follow Us
TV9 Web
TV9 Web

TV9 Kannada

Read More
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!