AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಐಸಿಸಿ U19 ವಿಶ್ವಕಪ್​ಗೆ ಚಾಲನೆ: ಲಂಕಾದಲ್ಲಿ ನಡೆಯಬೇಕಿದ್ದ ಟೂರ್ನಿ ದಿಢೀರ್ ಆಫ್ರಿಕಾಕ್ಕೆ ಶಿಫ್ಟ್ ಆಗಿದ್ದು ಏಕೆ?

ICC Under 19 World Cup: ಅಂಡರ್-19 ವಿಶ್ವಕಪ್​ ಟೂರ್ನಿಯ ಮೊದಲ ಪಂದ್ಯ ಇಂದು ಐರ್ಲೆಂಡ್ ಮತ್ತು ಅಮೆರಿಕ ನಡುವೆ ಬ್ಲೋಮ್‌ಫಾಂಟೈನ್‌ನಲ್ಲಿ ನಡೆಯಲಿದೆ. ಈ ಬಾರಿಯ ಟೂರ್ನಿಗೆ ಹರಿಣಗಳ ನಾಡು ದಕ್ಷಿಣ ಆಫ್ರಿಕಾ ಆತಿಥ್ಯ ವಹಿಸುತ್ತಿದೆ. ಆದರೆ, ಈ ಮೊದಲು ಈ ವಿಶ್ವಕಪ್ ಟೂರ್ನಿ ಭಾರತದ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ನಡೆಯಬೇಕಿತ್ತು.

ಇಂದು ಐಸಿಸಿ U19 ವಿಶ್ವಕಪ್​ಗೆ ಚಾಲನೆ: ಲಂಕಾದಲ್ಲಿ ನಡೆಯಬೇಕಿದ್ದ ಟೂರ್ನಿ ದಿಢೀರ್ ಆಫ್ರಿಕಾಕ್ಕೆ ಶಿಫ್ಟ್ ಆಗಿದ್ದು ಏಕೆ?
ICC Under 19 World Cup 2024
Vinay Bhat
|

Updated on: Jan 19, 2024 | 11:14 AM

Share

19 ವರ್ಷದೊಳಗಿನವರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ (ICC Under 19 World Cup) ಇಂದಿನಿಂದ ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಲಿದೆ. ಅಂಡರ್-19 ಕ್ರಿಕೆಟ್ ಪ್ರತಿಯೊಬ್ಬ ಕ್ರಿಕೆಟಿಗನಿಗೆ ಬಹಳ ಮುಖ್ಯವಾಗಿದೆ. ಆಯ್ಕೆಗಾರರ ಗಮನ ಸೆಳೆದು ಹಿರಿಯ ತಂಡವನ್ನು ಸೇರುವುದಕ್ಕೆ ಇದೊಂದು ಸೇತುವೆಯಾಗಿದೆ. ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್, ರೋಹಿತ್ ಶರ್ಮಾ ಅವರಂತಹ ಆಟಗಾರರು ಅಂಡರ್-19 ಮಟ್ಟದಲ್ಲಿ ಅಬ್ಬರಿಸಿದ ನಂತರ ಹಿರಿಯ ತಂಡವನ್ನು ಪ್ರತಿನಿಧಿಸಿದರು. ಇದೀಗ ಇಡೀ ಕ್ರಿಕೆಟ್ ಲೋಕದ ಕಣ್ಣು ಭವಿಷ್ಯದ ಯುವ ತಾರೆಯರು ಮೇಲಿದೆ.

ಈ ಟೂರ್ನಿಯ ಮೊದಲ ಪಂದ್ಯ ಇಂದು ಐರ್ಲೆಂಡ್ ಮತ್ತು ಅಮೆರಿಕ ನಡುವೆ ಬ್ಲೋಮ್‌ಫಾಂಟೈನ್‌ನಲ್ಲಿ ನಡೆಯಲಿದೆ. ಈ ಬಾರಿಯ ಟೂರ್ನಿಗೆ ಹರಿಣಗಳ ನಾಡು ದಕ್ಷಿಣ ಆಫ್ರಿಕಾ ಆತಿಥ್ಯ ವಹಿಸುತ್ತಿದೆ. ಆದರೆ, ಈ ಮೊದಲು ಈ ವಿಶ್ವಕಪ್ ಟೂರ್ನಿ ಭಾರತದ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ, ನವೆಂಬರ್‌ನಲ್ಲಿ ಐಸಿಸಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಅಮಾನತುಗೊಳಿಸಿತು. ಹೀಗಾಗಿ ದಕ್ಷಿಣ ಆಫ್ರಿಕಾ ಈ ಪಂದ್ಯಾವಳಿಯ ಆತಿಥ್ಯವನ್ನು ಪಡೆದುಕೊಂಡಿದೆ. ಎರಡು ತಿಂಗಳೊಳಗೆ ದಕ್ಷಿಣ ಆಫ್ರಿಕಾ ಈ ಪಂದ್ಯಾವಳಿಗೆ ತನ್ನನ್ನು ತಾನು ಸಿದ್ಧಪಡಿಸಿಕೊಂಡಿದೆ. ತನ್ನ ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪದಿಂದಾಗಿ ಐಸಿಸಿ ಶ್ರೀಲಂಕಾವನ್ನು ಅಮಾನತುಗೊಳಿಸಿತು.

IND vs AFG: ಸಾವಿರ ಬೌಂಡರಿಗಳ ಸರದಾರ ರೋಹಿತ್ ಶರ್ಮಾ..!

ಇದನ್ನೂ ಓದಿ
Image
ಒಟ್ಟಿಗೆ ನಿವೃತ್ತಿ ಘೋಷಿಸಿದ ವೆಸ್ಟ್ ಇಂಡೀಸ್​ನ ನಾಲ್ವರು ಸ್ಟಾರ್ ಪ್ಲೇಯರ್ಸ್
Image
ಟಿ20 ವಿಶ್ವಕಪ್‌ಗೆ ಈ 10 ಆಟಗಾರರು ಫೈನಲ್ ಆಗಿದ್ದಾರೆ ಎಂದ ರೋಹಿತ್ ಶರ್ಮಾ
Image
ಕೊಹ್ಲಿ ಫೀಲ್ಡರ್ ಆಫ್ ದಿ ಸೀರೀಸ್:ವಿರಾಟ್ ಬಗ್ಗೆ ಅದ್ಭುತ ಕಥೆ ಹೇಳಿದ ಕೋಚ್
Image
ಮೊದಲ ಪಂದ್ಯದಲ್ಲಿ ಭಾರತಕ್ಕೆ ಬಾಂಗ್ಲಾ ಎದುರಾಳಿ

ಎಷ್ಟು ತಂಡಗಳಿವೆ, ಸ್ವರೂಪ ಏನು?

ಈ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸುತ್ತಿವೆ. ಈ 16 ತಂಡಗಳನ್ನು ತಲಾ ನಾಲ್ಕು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಇದಾದ ಬಳಿಕ ಸೂಪರ್-6 ಸುತ್ತು ನಡೆಯಲಿದೆ. ಸೂಪರ್-6 ಸುತ್ತಿನ ನಂತರ ಅಗ್ರ-4 ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಗುಂಪು ಹಂತದ ಪಂದ್ಯ ಜನವರಿ 28 ರವರೆಗೆ ನಡೆಯಲಿದ್ದು, ನಂತರ ಫೆಬ್ರವರಿ 5 ರವರೆಗೆ ಸೂಪರ್-6 ಸುತ್ತು ನಡೆಯಲಿದೆ. ಫೆಬ್ರವರಿ 6 ರಂದು ಮೊದಲ ಸೆಮಿಫೈನಲ್ ಮತ್ತು ಫೆಬ್ರವರಿ 8 ರಂದು ಎರಡನೇ ಸೆಮಿಫೈನಲ್ ಆಯೋಜಿಸಲಾಗಿದೆ. ಇದಾದ ನಂತರ ಫೆಬ್ರವರಿ 11 ರಂದು ಬೆನೋನಿಯಲ್ಲಿ ಫೈನಲ್ ಪಂದ್ಯ ಏರ್ಪಡಿಸಲಾಗಿದೆ. ಈ ಟೂರ್ನಿಯು ದಕ್ಷಿಣ ಆಫ್ರಿಕಾದ ಐದು ಸ್ಥಳಗಳಲ್ಲಿ ನಡೆಯಲಿದೆ. ಪೊಚ್ಟೆಫೊಸ್ಟ್ರಮ್, ಬ್ಲೋಮ್‌ಫಾಂಟೈನ್, ಬೆನೋನಿ, ಕಿಂಬರ್ಲಿ, ಪೂರ್ವ ಲಂಡನ್‌ನಲ್ಲಿ ಪಂದ್ಯಗಳು ನಡೆಯಲಿವೆ.

ಭಾರತ ಅತ್ಯಂತ ಯಶಸ್ವಿ ತಂಡ

ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗುವ ನೆಚ್ಚಿನ ತಂಡವಾಗಿದೆ. 2022ರಲ್ಲಿ ಯಶ್‌ ಧುಲ್‌ ನಾಯಕತ್ವದಲ್ಲಿ ಭಾರತ ವಿಶ್ವಕಪ್‌ ಗೆದ್ದಿತ್ತು. ಈ ಬಾರಿ ಉದಯ್ ಶರಣ್ ನಾಯಕತ್ವದಲ್ಲಿ ತಂಡ ಆರನೇ ಬಾರಿ ಚಾಂಪಿಯನ್ ಆಗಲು ಪ್ರಯತ್ನಿಸಲಿದೆ. ಭಾರತ 2000, 2008, 2012, 2018 ಮತ್ತು 2022ರಲ್ಲಿ ಈ ಟೂರ್ನಿಯನ್ನು ಗೆದ್ದಿತ್ತು. ಭಾರತ ನಂತರ ಆಸ್ಟ್ರೇಲಿಯಾ ಅತಿ ಹೆಚ್ಚು ಬಾರಿ ಈ ಟೂರ್ನಿಯನ್ನು ಗೆದ್ದುಕೊಂಡಿದೆ. 1988, 2002, 2010ರಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿತ್ತು. 2004 ಮತ್ತು 2006ರಲ್ಲಿ ಪಾಕಿಸ್ತಾನ ಈ ವಿಶ್ವಕಪ್ ಗೆದ್ದಿತ್ತು. 2020 ರಲ್ಲಿ ಬಾಂಗ್ಲಾದೇಶ, 2014 ರಲ್ಲಿ ದಕ್ಷಿಣ ಆಫ್ರಿಕಾ, 2016 ರಲ್ಲಿ ವೆಸ್ಟ್ ಇಂಡೀಸ್ ಮತ್ತು 1998 ರಲ್ಲಿ ಇಂಗ್ಲೆಂಡ್ ಈ ಪಂದ್ಯಾವಳಿಯನ್ನು ಗೆದ್ದವು. ಈ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಜ. 20 ರಂದು ಆಡಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು