AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಭಾರತವನ್ನು ತವರಿನಲ್ಲಿ ಮಣಿಸುವುದು ಕಷ್ಟಕಷ್ಟ! 2ನೇ ಟಿ20 ಜೊತೆಗೆ ಸರಣಿ ಗೆದ್ದ ರೋಹಿತ್ ಪಡೆ

IND vs SL: ಭಾರತ ತಂಡ ಮತ್ತೊಂದು ಅದ್ಭುತ ಗೆಲುವಿನೊಂದಿಗೆ ಟಿ20 ಸರಣಿ ಗೆಲುವಿನ ಹ್ಯಾಟ್ರಿಕ್ ಸಾಧನೆ ಮಾಡಿದೆ. ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರ ಬಲಿಷ್ಠ ಇನ್ನಿಂಗ್ಸ್ ಬಲದಿಂದ ಟೀಂ ಇಂಡಿಯಾ 7 ವಿಕೆಟ್​ಗಳ ಜಯ ಸಾಧಿಸಿದೆ.

IND vs SL: ಭಾರತವನ್ನು ತವರಿನಲ್ಲಿ ಮಣಿಸುವುದು ಕಷ್ಟಕಷ್ಟ! 2ನೇ ಟಿ20 ಜೊತೆಗೆ ಸರಣಿ ಗೆದ್ದ ರೋಹಿತ್ ಪಡೆ
ಶ್ರೇಯಸ್
TV9 Web
| Edited By: |

Updated on:Feb 26, 2022 | 11:04 PM

Share

ಭಾರತ ತಂಡ ಮತ್ತೊಂದು ಅದ್ಭುತ ಗೆಲುವಿನೊಂದಿಗೆ ಟಿ20 ಸರಣಿ ಗೆಲುವಿನ ಹ್ಯಾಟ್ರಿಕ್ (hat-trick of T20) ಸಾಧನೆ ಮಾಡಿದೆ. ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರ ಬಲಿಷ್ಠ ಇನ್ನಿಂಗ್ಸ್ ಬಲದಿಂದ ಟೀಂ ಇಂಡಿಯಾ 7 ವಿಕೆಟ್​ಗಳ ಜಯ ಸಾಧಿಸಿದೆ. ಫೆಬ್ರವರಿ 26 ರಂದು ಧರ್ಮಶಾಲಾದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 18ನೇ ಓವರ್‌ನಲ್ಲಿ ಶ್ರೀಲಂಕಾ ನೀಡಿದ 184 ರನ್‌ಗಳ ಪ್ರಬಲ ಗುರಿಯನ್ನು ಸಾಧಿಸಿತು. ಇದರೊಂದಿಗೆ ಟೀಂ ಇಂಡಿಯಾ ಸರಣಿ ವಶಪಡಿಸಿಕೊಂಡಿದೆ. ನಾಯಕ ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಟೀಂ ಇಂಡಿಯಾ ಸತತ ಮೂರನೇ ಟಿ20 ಸರಣಿಯನ್ನು ಗೆದ್ದುಕೊಂಡಿದೆ. ಇದರೊಂದಿಗೆ ರೋಹಿತ್ ಶರ್ಮಾ ತವರು ನೆಲದಲ್ಲಿ 16 ಟಿ20 ಪಂದ್ಯಗಳನ್ನು ಗೆದ್ದ ದಾಖಲೆಯನ್ನೂ ಮಾಡಿದ್ದಾರೆ.

ಲಂಕಾ ಇನ್ನಿಂಗ್ಸ್ ಮೊದಲ ಪಂದ್ಯದಲ್ಲಿ ಸುಲಭವಾಗಿ ಸೋತಿದ್ದ ಶ್ರೀಲಂಕಾ ತಂಡ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿತು. ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಶ್ರೀಲಂಕಾ ನಿರೀಕ್ಷೆಗೂ ಮೀರಿ ಉತ್ತಮ ಆಟವಾಡಿತು. ನಿಧಾನಗತಿಯ ಆರಂಭದ ನಂತರ ಶ್ರೀಲಂಕಾ ದನುಷ್ಕಾ ಗುಣತಿಲಕ ಆಧಾರದ ಮೇಲೆ ವೇಗವನ್ನು ಹೆಚ್ಚಿಸಿತು. ಅದೇ ಪಂದ್ಯದಲ್ಲಿ ಗುಣತಿಲಕ ಅವರನ್ನು ಪ್ಲೇಯಿಂಗ್ ಇಲೆವೆನ್‌ಗೆ ಮರಳಿ ತರಲಾಯಿತು. ಅವರು ಪಾತುಮ್ ನಿಸಂಕಾ ಅವರೊಂದಿಗೆ 67 ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ಮಾಡಿದರು, ಇದು ಶ್ರೀಲಂಕಾಕ್ಕೆ ಉತ್ತಮ ಸ್ಕೋರ್ ಮಾಡಲು ಅಡಿಪಾಯವನ್ನು ಹಾಕಿತು.

ಆದರೆ, ಈ ಉತ್ತಮ ಆರಂಭದ ಹೊರತಾಗಿಯೂ ಶ್ರೀಲಂಕಾ ಮುಂದಿನ 6 ಓವರ್‌ಗಳಲ್ಲಿ ಕೇವಲ 35 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಗುಣತಿಲ್ಕಾ ಅವರನ್ನು ರವೀಂದ್ರ ಜಡೇಜಾ ಬಲಿಪಶು ಮಾಡಿದರು. ಯುಜ್ವೇಂದ್ರ ಚಾಹಲ್ ಚರಿತ್ ಅಸಲಂಕಾ ಎಲ್‌ಬಿಡಬ್ಲ್ಯೂ ಅವರನ್ನು ಔಟ್ ಮಾಡಿದರು. ಕಮಿಲ್ ಮಿಶ್ರಾ ಸತತ ಎರಡನೇ ಪಂದ್ಯದಲ್ಲಿ ವಿಫಲರಾಗಿ ಹರ್ಷಲ್ ಪಟೇಲ್​ಗೆ ಬಲಿಯಾದರು. ಹಿರಿಯ ಬ್ಯಾಟ್ಸ್‌ಮನ್ ದಿನೇಶ್ ಚಾಂಡಿಮಾಲ್ ಕೂಡ ಅಗ್ಗವಾಗಿ ಔಟಾದರು. ಅವರನ್ನು ಜಸ್ಪ್ರೀತ್ ಬುಮ್ರಾ ಪೆವಿಲಿಯನ್‌ಗೆ ಮರಳಿಸಿದರು.

ಇಂತಹ ಪರಿಸ್ಥಿತಿಯಲ್ಲಿ ಶ್ರೀಲಂಕಾ ಮತ್ತೆ ತತ್ತರಿಸುವ ಸಾಧ್ಯತೆ ಇದ್ದಾಗ ಆರಂಭಿಕರಾಗಿ ಬಂದ ಪಾತುಮ್ ನಿಶಾಂಕ ಹಾಗೂ ನಾಯಕ ದಾಸುನ್ ಶಂಕಾ ಮುನ್ನಡೆ ಸಾಧಿಸಿದರು. 15ನೇ ಓವರ್ ಬಳಿಕ ಇಬ್ಬರೂ ಅಬ್ಬರಿಸಲು ಆರಂಭಿಸಿದರು. ಈ ಮೊದಲ ಅವಧಿಯಲ್ಲಿ ನಿಸಂಕ ತಮ್ಮ ಐದನೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಇನ್ನೊಂದೆಡೆ ಹರ್ಷಲ್ ಪಟೇಲ್ ಮತ್ತು ಭುವನೇಶ್ವರ್ ಕುಮಾರ್ ದುಬಾರಿಯಾದರು. ಇಬ್ಬರೂ ಕೇವಲ 26 ಎಸೆತಗಳಲ್ಲಿ 58 ರನ್‌ಗಳ ಜೊತೆಯಾಟ ನೀಡಿದರು. ನಿಶಾಂಕ 19ನೇ ಓವರ್‌ನಲ್ಲಿ 53 ಎಸೆತಗಳಲ್ಲಿ 75 ರನ್ ಗಳಿಸುವ ಮೂಲಕ ಭುವನೇಶ್ವರ್‌ಗೆ ಬಲಿಯಾದರು. ಅದೇ ಸಮಯದಲ್ಲಿ ನಾಯಕ ಶಂಕಾ ಕೊನೆಯ ಓವರ್‌ನಲ್ಲಿ 2 ಸಿಕ್ಸರ್‌ಗಳ ನೆರವಿನಿಂದ 23 ರನ್ ಗಳಿಸಿದರು. ಅವರು ಕೇವಲ 19 ಎಸೆತಗಳಲ್ಲಿ 47 ರನ್ (2 ಬೌಂಡರಿ, 5 ಸಿಕ್ಸರ್) ಗಳಿಸಿ ಅಜೇಯರಾಗಿ ಮರಳಿದರು.

ಭಾರತದ ಇನ್ನಿಂಗ್ಸ್

ಬ್ಯಾಟಿಂಗ್ ನಂತರ ಬೌಲಿಂಗ್​ನಲ್ಲೂ ಶ್ರೀಲಂಕಾ ಆಕ್ರಮಣಕಾರಿಯಾಗಿ ಮೈದಾನಕ್ಕಿಳಿದಿತ್ತು. ಮೊದಲ ಓವರ್‌ನಲ್ಲಿಯೇ ನಾಯಕ ರೋಹಿತ್ ಶರ್ಮಾ ಅವರನ್ನು ದುಷ್ಮಂತ ಚಮೀರಾ ಬೌಲ್ಡ್ ಮಾಡಿದರು. ಸ್ವಲ್ಪ ಸಮಯದಲ್ಲೇ ಇಶಾನ್ ಕಿಶನ್ ಕೂಡ ಪೆವಿಲಿಯನ್​ಗೆ ಮರಳಿದರು. ಕಳೆದ ಪಂದ್ಯದಲ್ಲಿ 89 ರನ್ ಗಳಿಸಿದ್ದ ಇಶಾನ್ ಈ ಬಾರಿ 16 ರನ್ ಗಳಿಸಲಷ್ಟೇ ಶಕ್ತರಾದರು. ಶ್ರೇಯಸ್ ಮತ್ತು ಸಂಜು ಸ್ಯಾಮ್ಸನ್ ಕಷ್ಟಪಟ್ಟು ತಂಡವನ್ನು ಉಳಿಸುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಕಳೆದ ಪಂದ್ಯದಲ್ಲಿ ಅಯ್ಯರ್ ಕೂಡ ತ್ವರಿತ ಅರ್ಧಶತಕ ಗಳಿಸಿದ್ದರು, ಆದರೆ ಸಂಜು ಸ್ಯಾಮ್ಸನ್ ಈ ಸರಣಿಯಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಪಡೆದರು.

ಕಳೆದ ಪಂದ್ಯದಲ್ಲಿ 26 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಶ್ರೇಯಸ್ ಈ ಬಾರಿ ಕೇವಲ 30 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದರು. ಮತ್ತೊಂದೆಡೆ ನಿಧಾನವಾಗಿ ಆರಂಭ ಮಾಡಿದ ಸಂಜು, ಲಹಿರು ಕುಮಾರ ಅವರ ಒಂದೇ ಓವರ್‌ನಲ್ಲಿ 3 ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು.

ಆದರೆ, ಅದೇ ಓವರ್‌ನ ಕೊನೆಯ ಎಸೆತದಲ್ಲಿ ಲಹಿರು ಸ್ಯಾಮ್ಸನ್ ವಿಕೆಟ್ ಪಡೆದರು. ಬಿನೂರ ಫೆರ್ನಾಂಡೊ ಸ್ಲಿಪ್ಸ್‌ನಲ್ಲಿ ಅದ್ಭುತ ಕ್ಯಾಚ್ ಪಡೆದರು. ಸ್ಯಾಮ್ಸನ್ 25 ಎಸೆತಗಳಲ್ಲಿ 39 ರನ್ (2 ಬೌಂಡರಿ, 3 ಸಿಕ್ಸರ್) ಗಳಿಸಿ ಔಟಾದರು. ಸ್ಯಾಮ್ಸನ್ ಮತ್ತು ಅಯ್ಯರ್ 47 ಎಸೆತಗಳಲ್ಲಿ 84 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು, ಇದು ಭಾರತದ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.

ರವೀಂದ್ರ ಜಡೇಜಾ ಟೀಂ ಇಂಡಿಯಾ ಗೆಲುವಿಗೆ ಅಂತಿಮ ಸ್ಪರ್ಶ ನೀಡಿದರು. ಮೊದಲ ಪಂದ್ಯದಂತೆ ಮತ್ತೊಮ್ಮೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಐದನೇ ಸ್ಥಾನದಲ್ಲಿ ಬ್ಯಾಟಿಂಗ್​ಗೆ ಬಂದರು. ಜಡೇಜಾ ಅದನ್ನು ಸರಿ ಎಂದು ಸಾಬೀತುಪಡಿಸಿದರು ಮತ್ತು ಅದ್ಭುತ ಬ್ಯಾಟಿಂಗ್ ಮಾಡಿದರು. ಅವರು ದುಷ್ಮಂತ ಚಮೀರಾ ಅವರ 16ನೇ ಓವರ್‌ನಲ್ಲಿ 1 ಸಿಕ್ಸರ್ ಮತ್ತು 3 ಬೌಂಡರಿಗಳನ್ನು ಸಿಡಿಸಿದರು. ಜಡೇಜಾ ಬಿರುಗಾಳಿ ಬ್ಯಾಟಿಂಗ್​ನಿಂದಾಗಿ ಭಾರತ ಕೇವಲ 17.1 ಓವರ್‌ಗಳಲ್ಲಿ 7 ವಿಕೆಟ್‌ಗಳಿಂದ ಸುಲಭ ಜಯ ದಾಖಲಿಸಿತು. ಅಯ್ಯರ್ 44 ಎಸೆತಗಳಲ್ಲಿ 74 (6 ಬೌಂಡರಿ, 4 ಸಿಕ್ಸರ್) ಮತ್ತು ಜಡೇಜಾ 18 ಎಸೆತಗಳಲ್ಲಿ 45 ರನ್ (7 ಬೌಂಡರಿ, 1 ಸಿಕ್ಸರ್) ಗಳಿಸಿ ಅಜೇಯರಾಗಿ ಮರಳಿದರು. ಇಬ್ಬರೂ ಕೇವಲ 26 ಎಸೆತಗಳಲ್ಲಿ 58 ರನ್ ಸೇರಿಸಿದರು.

ಇದನ್ನೂ ಓದಿ:IND vs SL 2nd T20I: ಟಾಸ್ ಗೆದ್ದ ಭಾರತ, ತಂಡದಲಿಲ್ಲ ಬದಲಾವಣೆ; ಉಭಯ ತಂಡಗಳ ಇಂದಿನ ಆಡುವ XI

Published On - 10:28 pm, Sat, 26 February 22

ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ