AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ: ಪ್ರತಿಯೊಬ್ಬ ಆಟಗಾರನನ್ನು ಚಾಂಪಿಯನ್ ಮಾಡುವ ಕಲೆ ಗುರು ದ್ರಾವಿಡ್ ಬಳಿ ಇದೆ: ಕೆಎಲ್ ರಾಹುಲ್

IND vs NZ: ದ್ರಾವಿಡ್ ಅವರ ವಿಶೇಷತೆಯೆಂದರೆ ಅವರು ಆಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರು ಡ್ರೆಸ್ಸಿಂಗ್ ಕೋಣೆಯ ವಾತಾವರಣವನ್ನು ಯಾವಾಗಲೂ ತಂಪಾಗಿರಿಸುತ್ತಾರೆ. ಜೊತೆಗೆ ಯಾವಾಗಲೂ ತಂಡದ ಬಗ್ಗೆ ಯೋಚಿಸುತ್ತಾರೆ.

IND vs NZ: ಪ್ರತಿಯೊಬ್ಬ ಆಟಗಾರನನ್ನು ಚಾಂಪಿಯನ್ ಮಾಡುವ ಕಲೆ ಗುರು ದ್ರಾವಿಡ್ ಬಳಿ ಇದೆ: ಕೆಎಲ್ ರಾಹುಲ್
ಕೆಎಲ್ ರಾಹುಲ್, ರಾಹುಲ್ ದ್ರಾವಿಡ್
TV9 Web
| Edited By: |

Updated on: Nov 15, 2021 | 10:47 PM

Share

2021 ರ ಟಿ 20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಈಗ ಹೊಸ ಆರಂಭವನ್ನು ಮಾಡಲಿದೆ. ಟೀಂ ಇಂಡಿಯಾ ನವೆಂಬರ್ 17 ರಿಂದ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು, ಮೊದಲ ಪಂದ್ಯ ಜೈಪುರದಲ್ಲಿ ನಡೆಯಲಿದೆ. ಈ ಸರಣಿಗೂ ಮುನ್ನ ಟೀಂ ಇಂಡಿಯಾದ ನೂತನ ಉಪನಾಯಕ ಕೆಎಲ್ ರಾಹುಲ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನೂತನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ಮಾತನಾಡಿದ್ದಾರೆ. ರಾಹುಲ್ ದ್ರಾವಿಡ್ ಪ್ರವೇಶದಿಂದ ಟೀಂ ಇಂಡಿಯಾಗೆ ಹೇಗೆ ಲಾಭವಾಗಲಿದೆ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ದ್ರಾವಿಡ್ ಪ್ರಭಾವದ ಬಗ್ಗೆ ಕೆಎಲ್ ರಾಹುಲ್ ಅವರನ್ನು ಕೇಳಿದಾಗ, ರಾಹುಲ್ ದ್ರಾವಿಡ್ ಅವರನ್ನು ಬಹಳ ಸಮಯದಿಂದ ನಾನು ತಿಳಿದಿರುವುದು ನನ್ನ ಅದೃಷ್ಟ. ನಾನು ಚಿಕ್ಕವನಿದ್ದಾಗ ಅವರಂತೆ ಆಟವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಅವರು ಕರ್ನಾಟಕದಲ್ಲಿ ನಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರು ಟೀಮ್ ಇಂಡಿಯಾಗೆ ಸೇರಿದ ನಂತರ, ಈಗ ನಾವು ಅವರಿಂದ ಹೆಚ್ಚಿನದನ್ನು ಕಲಿಯುವ ಅವಕಾಶವನ್ನು ಪಡೆಯುತ್ತೇವೆ.

ರಾಹುಲ್ ದ್ರಾವಿಡ್ ಕಾರ್ಯವೈಖರಿ ಹೀಗಿರಲಿದೆ ರಾಹುಲ್ ದ್ರಾವಿಡ್ ಉತ್ತಮ ಆಟಗಾರನನ್ನು ಹೇಗೆ ಚಾಂಪಿಯನ್ ಆಟಗಾರನನ್ನಾಗಿ ಪರಿವರ್ತಿಸುತ್ತಾರೆ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ. ರಾಹುಲ್ ದ್ರಾವಿಡ್ ಎಷ್ಟು ದೊಡ್ಡ ಹೆಸರು ಎಂದು ನಮಗೆಲ್ಲರಿಗೂ ತಿಳಿದಿದೆ. ಅವರಿಂದ ಸಾಕಷ್ಟು ಕಲಿಯಲು ನಮಗೆ ಉತ್ತಮ ಅವಕಾಶವಿದೆ. ಕೋಚಿಂಗ್ ಬಗ್ಗೆ ಮಾತನಾಡುತ್ತಾ, ಅವರ ಕೋಚಿಂಗ್ ಅಡಿಯಲ್ಲಿ ನಾನು ಭಾರತ ಎ ಪರ ಕೆಲವು ಪಂದ್ಯಗಳನ್ನು ಆಡಿದ್ದೇನೆ. ದ್ರಾವಿಡ್ ಅವರ ವಿಶೇಷತೆಯೆಂದರೆ ಅವರು ಆಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರು ಡ್ರೆಸ್ಸಿಂಗ್ ಕೋಣೆಯ ವಾತಾವರಣವನ್ನು ಯಾವಾಗಲೂ ತಂಪಾಗಿರಿಸುತ್ತಾರೆ. ಜೊತೆಗೆ ಯಾವಾಗಲೂ ತಂಡದ ಬಗ್ಗೆ ಯೋಚಿಸುತ್ತಾರೆ. ರಾಹುಲ್ ದ್ರಾವಿಡ್ ಅವರ ಈ ಗುಣ ಅವರನ್ನು ಇತರರಿಗಿಂತ ಭಿನ್ನವಾಗಿಸುತ್ತದೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ಬಹುತೇಕ ಆಟಗಾರರು ರಾಹುಲ್ ದ್ರಾವಿಡ್ ಅವರ ಕೋಚಿಂಗ್‌ನಲ್ಲಿ ಮುನ್ನಡೆದಿದ್ದಾರೆ.

ದ್ರಾವಿಡ್ ಮೇಲೆ ದೊಡ್ಡ ಜವಾಬ್ದಾರಿ 2013 ರಿಂದ ಟೀಂ ಇಂಡಿಯಾ ಯಾವುದೇ ಐಸಿಸಿ ಟೂರ್ನಮೆಂಟ್ ಗೆದ್ದಿಲ್ಲ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಬ್ ಪಂತ್, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಅವರಂತಹ ಶ್ರೇಷ್ಠ ಆಟಗಾರರನ್ನು ಹೊಂದಿದ್ದರೂ, ಈ ತಂಡವು ಟಿ20 ವಿಶ್ವಕಪ್‌ನ ಸೆಮಿಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಈಗ ಟೀಂ ಇಂಡಿಯಾದ ಗುರಿ 2022ರ ಟಿ20 ವಿಶ್ವಕಪ್ ಆಸ್ಟ್ರೇಲಿಯದಲ್ಲಿ ನಡೆಯಲಿದೆ. ಇದಾದ ಬಳಿಕ 2023ರ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಎರಡೂ ಟೂರ್ನಿಗಳನ್ನು ಗೆದ್ದು ಐಸಿಸಿ ಟೂರ್ನಿಯ ಬರ ನೀಗಿಸಬೇಕು ಎಂದು ನೂತನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬಯಸಿದ್ದಾರೆ.