AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನ ಈ ವಾರ, ಟೀಂ ಇಂಡಿಯಾ ಮುಂದಿನ ವಾರ..! ಟಿ20 ವಿಶ್ವಕಪ್ ಭವಿಷ್ಯ ನುಡಿದ ಶೋಯೆಬ್ ಅಖ್ತರ್

T20 World Cup 2022: ಟಿ20 ವಿಶ್ವಕಪ್​ಗೆ ಪಾಕಿಸ್ತಾನ ಆಯ್ಕೆ ಮಾಡಿರುವ ತಂಡವನ್ನು ನೋಡಿದರೆ ಮೊದಲ ಸುತ್ತಿನಲ್ಲೇ ಟೂರ್ನಿಯಿಂದ ಹೊರಬೀಳುವಂತಿದೆ ಎಂದು ಅಖ್ತರ್ ಭವಿಷ್ಯ ನುಡಿದಿದ್ದರು.

ಪಾಕಿಸ್ತಾನ ಈ ವಾರ, ಟೀಂ ಇಂಡಿಯಾ ಮುಂದಿನ ವಾರ..! ಟಿ20 ವಿಶ್ವಕಪ್ ಭವಿಷ್ಯ ನುಡಿದ ಶೋಯೆಬ್ ಅಖ್ತರ್
ಭಾರತ- ಪಾಕ್ ಕ್ರಿಕೆಟಿಗರ ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಪೃಥ್ವಿಶಂಕರ

Updated on:Oct 28, 2022 | 3:47 PM

ಟಿ20 ವಿಶ್ವಕಪ್‌ನಲ್ಲಿ (T20 World Cup 2022) ಪಾಕಿಸ್ತಾನ ತಂಡದ ಸತತ ಎರಡು ಸೋಲುಗಳು ಆ ತಂಡದ ಅಭಿಮಾನಿಗಳ ಮತ್ತು ಮಾಜಿ ಕ್ರಿಕೆಟಿಗರ ನಿದ್ದೆಗೆಡಿಸಿದೆ. ಟಿ20 ವಿಶ್ವಕಪ್​ನ ಫೈನಲಿಸ್ಟ್ ತಂಡದಗಳಲ್ಲಿ ಒಂದು ಎಂದು ಬಿಂಬಿತವಾಗಿದ್ದ ಪಾಕ್ ತಂಡ ಸೂಪರ್ 12 ಸುತ್ತಿನಿಂದಲೇ ಟೂರ್ನಿಯಿಂದ ಹೊರಬೀಳುವುದು ಖಚಿತವಾಗಿದೆ. ಅಲ್ಲದೆ ಉರಿಯುವ ಗಾಯಕ್ಕೆ ತುಪ್ಪು ಸುರಿದಂತೆ ಇತ್ತ ಟೀಂ ಇಂಡಿಯಾ (Team India) ಸತತ ಎರಡು ಗೆಲುವುಗಳನ್ನು ಸಾಧಿಸಿರುವುದು ಪಾಕ್ ತಂಡದ ಅಭಿಮಾನಿಗಳು ಹೊಟ್ಟೆ ಕಿವುಚಿಕೊಳ್ಳುವಂತೆ ಮಾಡಿದೆ. ಇದಕ್ಕೆ ಆ ತಂಡದ ಮಾಜಿ ಕ್ರಿಕೆಟಿಗರು ಹೊರತಾಗಿಲ್ಲ. ಜಿಂಬಾಬ್ವೆ ವಿರುದ್ಧದ ಸೋಲಿನ ನಂತರ ಪಾಕ್ ತಂಡದ ಲೆಜೆಂಡರಿ ಬೌಲರ್ ಶೋಯೆಬ್ ಅಖ್ತರ್ (Shoaib Akhtar) ಹೇಳಿರುವ ಹೇಳಿಕೆಯೊಂದು ಸಖತ್ ವೈರಲ್ ಆಗುತ್ತಿದ್ದು, ಇದರಲ್ಲಿ ಅವರು ಈ ವಾರ ಪಾಕಿಸ್ತಾನ ತಂಡ ತನ್ನ ದೇಶಕ್ಕೆ ಮರಳಲಿದೆ. ಹಾಗೆಯೇ ಮುಂದಿನ ವಾರ ಟೀಂ ಇಂಡಿಯಾ ಕೂಡ ಟಿ20 ವಿಶ್ವಕಪ್​ನಿಂದ ಗಂಟುಮೂಟೆ ಕಟ್ಟಲಿದೆ ಎಂದು ಹೇಳಿಕೊಂಡಿದ್ದಾರೆ.

ರಾವಲ್ಪಿಂಡಿ ಎಕ್ಸ್​ಪ್ರೆಸ್ ಎಂದೇ ಖ್ಯಾತರಾಗಿರುವ ಶೋಯೆಬ್ ಅಖ್ತರ್ ಎರಡು ತಿಂಗಳ ಹಿಂದೆ, ಟಿ20 ವಿಶ್ವಕಪ್​ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಯ್ಕೆ ಮಾಡಿರುವ ತಂಡವನ್ನು ನೋಡಿದರೆ ಮೊದಲ ಸುತ್ತಿನಲ್ಲೇ ಟೂರ್ನಿಯಿಂದ ಹೊರಬೀಳುವಂತಿದೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಅದೇ ಸಂಭವಿಸಿದ್ದು, ಈಗ ಅಖ್ತರ್ ಮತ್ತೊಂದು ಬಾಂಬ್ ಹಾಕಿದ್ದು, ಅದರಲ್ಲಿ ಟೀಂ ಇಂಡಿಯಾದ ಪ್ರಯಾಣವೂ ಫೈನಲ್ ತಲುಪುವುದಿಲ್ಲ ಎಂಬ ಬಾಂಬ್ ಸಿಡಿಸಿದ್ದಾರೆ.

ಇದನ್ನೂ ಓದಿ: ಪಾಕ್​ ತಂಡವನ್ನು ಮಣಿಸಿದ ಜಿಂಬಾಬ್ವೆ ಕ್ರಿಕೆಟಿಗರ ತಿಂಗಳ ಆದಾಯ ಎಷ್ಟು ಗೊತ್ತಾ?

ಸೆಮಿಫೈನಲ್​​ನಲ್ಲಿ ಭಾರತ ಸೋಲಲಿದೆ- ಅಖ್ತರ್

ಟಿ20 ವಿಶ್ವಕಪ್‌ನಲ್ಲಿ ಗುರುವಾರ ನಡೆದ ರೋಚಕ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ಒಂದು ರನ್‌ನಿಂದ ಸೋತಿದೆ. ಈ ಸೋಲಿನ ನಂತರ, ಶೋಯೆಬ್ ಅಖ್ತರ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಪಾಕ್ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದಲ್ಲದೆ, ಭಾರತವನ್ನು ಗುರಿಯಾಗಿಸಿಕೊಂಡಿದ್ದಾರೆ. ಇದರಲ್ಲಿ ಅವರು ಪಾಕಿಸ್ತಾನ ತಂಡ ಈ ವಾರ ಮತ್ತು ಭಾರತ ಮುಂದಿನ ವಾರ ತವರಿಗೆ ಮರಳಲಿದೆ. ಟೀಂ ಇಂಡಿಯಾ ಏನು ತೀಸ್ ಮಾರ್ ಖಾನ್ ಅಲ್ಲ. ಹೀಗಾಗಿ ಅವರೂ ಸಹ ಸೆಮಿಫೈನಲ್​ನಲ್ಲಿ ಸೋತು ಮನೆಗೆ ತೆರಳಲಿದ್ದಾರೆ ಎಂದಿದ್ದಾರೆ.

ಭವಿಷ್ಯ ನುಡಿದಿದ್ದ ಅಖ್ತರ್

ಟಿ20 ವಿಶ್ವಕಪ್‌ಗೆ ಪಿಸಿಬಿ ತಂಡವನ್ನು ಪ್ರಕಟಿಸಿದ ದಿನವೇ ಪಾಕಿಸ್ತಾನ ಮೊದಲ ಸುತ್ತಿನಲ್ಲಿಯೇ ಹೊರಗುಳಿಯಲಿದೆ ಎಂದು ಅಖ್ತರ್ ಹೇಳಿದ್ದರು. ನೀವು ಇಂತಹ ತಂಡವನ್ನು ಆಯ್ಕೆ ಮಾಡಿ, ಈ ಆಟಗಾರರೊಂದಿಗೆ ಹೋದರೆ ಆಸ್ಟ್ರೇಲಿಯಾದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ. ಅಲ್ಲದೆ ಈ ಮಧ್ಯಮ ಕ್ರಮಾಂಕವನ್ನು ಕಟ್ಟಿಕೊಂಡು ನೀವು ಹೇಗೆ ಪಂದ್ಯ ಗೆಲ್ಲುತ್ತಿರಿ? ಹೀಗಾಗಿ ಪಾಕಿಸ್ತಾನ ಮೊದಲ ಸುತ್ತಿನಲ್ಲೇ ಹೊರಬೀಳಬಹುದು ಎಂಬ ಭಯ ನನಗಿದೆ ಎಂದು ಅಖ್ತರ್ ಈ ಹಿಂದೆಯೇ ಹೇಳಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Fri, 28 October 22

ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
ನೀವು ನೀರು ನಿಲ್ಲಿಸಿದ್ರೆ, ನಾವು ನಿಮ್ಮ ಉಸಿರು ನಿಲ್ಲಿಸ್ತೇವೆ: ಪಾಕ್
ನೀವು ನೀರು ನಿಲ್ಲಿಸಿದ್ರೆ, ನಾವು ನಿಮ್ಮ ಉಸಿರು ನಿಲ್ಲಿಸ್ತೇವೆ: ಪಾಕ್
Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?