Legends League: 6 ನಗರಗಳು, 13 ಪಂದ್ಯಗಳು: ಲೆಜೆಂಡ್ಸ್​ ಲೀಗ್ ವೇಳಾಪಟ್ಟಿ ಪ್ರಕಟ

Legends League Cricket: ಮೊದಲ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ತಂಡವು ವರ್ಲ್ಡ್​ ಜೈಂಟ್ಸ್​ ತಂಡವನ್ನು ಎದುರಿಸಲಿದೆ. ಭಾರತ ದಿಗ್ಗಜರ ತಂಡದ ನಾಯಕರಾಗಿ ಸೌರವ್ ಗಂಗೂಲಿ ಕಾಣಿಸಿಕೊಳ್ಳಲಿದ್ದಾರೆ.

Legends League: 6 ನಗರಗಳು, 13 ಪಂದ್ಯಗಳು: ಲೆಜೆಂಡ್ಸ್​ ಲೀಗ್ ವೇಳಾಪಟ್ಟಿ ಪ್ರಕಟ
Legends League Cricket
Edited By:

Updated on: Aug 24, 2022 | 12:55 PM

ಲೆಜೆಂಡ್ಸ್ ಕ್ರಿಕೆಟ್ ಲೀಗ್ (LLC) ಎರಡನೇ ಸೀಸನ್ ವೇಳಾಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ಭಾರತದಲ್ಲೇ ಈ ಟೂರ್ನಿ ನಡೆಯಲಿದ್ದು, ಸೆಪ್ಟೆಂಬರ್ 16 ರಿಂದ ಶುರುವಾಗಲಿದೆ. ಹಾಗೆಯೇ ಮತ್ತು ಅಕ್ಟೋಬರ್ 8 ರಂದು ಫೈನಲ್ ಪಂದ್ಯ ನಡೆಯಲಿದೆ. ಮೂರು ವಾರಗಳ ಕಾಲ ನಡೆಯಲಿರುವ ಈ ಟೂರ್ನಿಗಾಗಿ ದೇಶದ 5 ನಗರಗಳ ಸ್ಟೇಡಿಯಂಗಳನ್ನು ಆಯ್ಕೆ ಮಾಡಲಾಗಿದೆ.
ಈ ಪಟ್ಟಿಯಲ್ಲಿ ಕೋಲ್ಕತ್ತಾ, ನವದೆಹಲಿ, ಕಟಕ್, ಲಕ್ನೋ ಮತ್ತು ಜೋಧ್‌ಪುರ ಸೇರಿವೆ. ಇನ್ನು ಪ್ಲೇಆಫ್ ನಡೆಯಲಿರುವ ಸ್ಟೇಡಿಯಂ/ನಗರವನ್ನು ಇನ್ನಷ್ಟೇ ನಿರ್ಧರಿಸಬೇಕಿದೆ.

ಮೊದಲ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ತಂಡವು ವರ್ಲ್ಡ್​ ಜೈಂಟ್ಸ್​ ತಂಡವನ್ನು ಎದುರಿಸಲಿದೆ. ಭಾರತ ದಿಗ್ಗಜರ ತಂಡದ ನಾಯಕರಾಗಿ ಸೌರವ್ ಗಂಗೂಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಜೋಧ್‌ಪುರ ಮತ್ತು ಲಕ್ನೋನಲ್ಲಿ 2 ಪಂದ್ಯಗಳು ನಡೆದರೆ, ಉಳಿದ ಎಲ್ಲಾ ಮೈದಾನಗಳಲ್ಲಿ ತಲಾ ಮೂರು ಪಂದ್ಯಗಳು ಆಡಲಾಗುತ್ತದೆ.

ನಾವು ಪಂದ್ಯ ಆಯೋಜಿಸುವುದನ್ನು ವೇಳಾಪಟ್ಟಿ ಪ್ರಕಟಣೆಯೊಂದಿಗೆ ಅಧಿಕೃತಗೊಳಿಸಿದ್ದೇವೆ. ಈ ಬಾರಿ ಕೂಡ 3 ತಂಡಗಳಲ್ಲಿ 10 ರಾಷ್ಟ್ರಗಳ ಲೆಜೆಂಡರಿ ಆಟಗಾರರು ಕಣಕ್ಕಿಳಿಯಲಿದ್ದಾರೆ ಎಂದು ಲೆಜೆಂಡ್ಸ್ ಲೀಗ್ ಕ್ರಿಕೆಟ್ ಸಹ-ಸಂಸ್ಥಾಪಕ ಮತ್ತು ಸಿಇಒ ರಮಣ್ ರಹೇಜಾ ತಿಳಿಸಿದ್ದಾರೆ.

ಇದನ್ನೂ ಓದಿ
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಅದರಂತೆ ಈ ಬಾರಿ ಕೂಡ ಇಂಡಿಯಾ ಲೆಜೆಂಡ್ಸ್​, ಏಷ್ಯಾ ಲೆಜೆಂಡ್ಸ್​ ಹಾಗೂ ವರ್ಲ್ಡ್​ ಜೈಂಟ್ಸ್ ತಂಡಗಳು ಕಣಕ್ಕಿಳಿಯಲಿದೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್ ವೇಳಾಪಟ್ಟಿ:

  • ಕೋಲ್ಕತ್ತಾ: ಸೆಪ್ಟೆಂಬರ್ 16, ಸೆಪ್ಟೆಂಬರ್ 18
  • ಲಕ್ನೋ: ಸೆಪ್ಟೆಂಬರ್ 21, ಸೆಪ್ಟೆಂಬರ್ 22
  • ನವದೆಹಲಿ: ಸೆಪ್ಟೆಂಬರ್ 24, ಸೆಪ್ಟೆಂಬರ್ 26
  • ಕಟಕ್: 27 ಮತ್ತು 30 ಸೆಪ್ಟೆಂಬರ್
  • ಜೋಧಪುರ: ಅಕ್ಟೋಬರ್ 1, ಅಕ್ಟೋಬರ್ 3
  • ಪ್ಲೇ-ಆಫ್ಸ್​: ಅಕ್ಟೋಬರ್ 5, ಅಕ್ಟೋಬರ್ 7 (ಸ್ಥಳವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು)
  • ಅಕ್ಟೋಬರ್ 8 ರಂದು ಫೈನಲ್ ಪಂದ್ಯ ನಡೆಯಲಿದೆ.

ಇಂಡಿಯಾ ಲೆಜೆಂಡ್ಸ್ (ಭಾರತ ಮಹಾರಾಜಾಸ್) ತಂಡ ಹೀಗಿದೆ: ಸೌರವ್ ಗಂಗೂಲಿ (ನಾಯಕ), ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಎಸ್​. ಬದ್ರಿನಾಥ್, ಪ್ರಗ್ಯಾನ್ ಓಜಾ, ಪಾರ್ಥಿವ್ ಪಟೇಲ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ನಮನ್ ಓಜಾ, ಅಶೋಕ್ ದಿಂಡಾ, ಆರ್‌ಪಿ ಸಿಂಗ್, ಅಜಯ್ ಜಡೇಜಾ, ಜೋಗಿಂದರ್ ಶರ್ಮಾ, ರಿತೀಂದರ್ ಸಿಂಗ್ ಸೋಧಿ ಮತ್ತು ಇರ್ಫಾನ್ ಪಠಾಣ್.