AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MS Dhoni: ಧೋನಿ ತೋಡಿದ ಹಳ್ಳಕ್ಕೆ ಬಿದ್ದ ಕೊಹ್ಲಿ: ಇಲ್ಲಿದೆ ನೋಡಿ ಸಿಎಸ್​ಕೆ ನಾಯಕನ ಮಾಸ್ಟರ್ ಮೈಂಡ್ ಸ್ಟೋರಿ

MS Dhoni masterstroke against Virat Kohli: ಆರ್​ಸಿಬಿ 13.2 ಓವರ್​ಗೆ 111 ರನ್ ಗಳಿಸಿರುವಾಗ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ಇದಕ್ಕೆ ಕಾರಣವಾಗಿದ್ದು ಎಂ. ಎಸ್ ಧೋನಿ. ಈ ಬಗ್ಗೆ ಅವರು ಹೇಳಿದ ಮಾತು ಇಲ್ಲಿದೆ ನೋಡಿ.

MS Dhoni: ಧೋನಿ ತೋಡಿದ ಹಳ್ಳಕ್ಕೆ ಬಿದ್ದ ಕೊಹ್ಲಿ: ಇಲ್ಲಿದೆ ನೋಡಿ ಸಿಎಸ್​ಕೆ ನಾಯಕನ ಮಾಸ್ಟರ್ ಮೈಂಡ್ ಸ್ಟೋರಿ
MS Dhoni Virat Kohli
TV9 Web
| Updated By: Vinay Bhat|

Updated on: Sep 25, 2021 | 11:32 AM

Share

ಮಹೇಂದ್ರ ಸಿಂಗ್ ಧೋನಿ (MS Dhoni) ಎದುರಾಳಿ ಆಟಗಾರನನ್ನು ಔಟ್ ಮಾಡಲು ರಣತಂತ್ರ ರೂಪಿಸಿದರೆ ಅದರಲ್ಲಿ ಫೇಲ್ ಆಗಿದ್ದು ತೀರಾ ಕಡಿಮೆ. ಧೋನಿ ಮಾಡಿದ ಮಾಸ್ಟರ್ ಮೈಂಡ್​ಗೆ ಬಹುತೇಕ ಆಟಗಾರರು ಬಲಿಯಾಗಿದ್ದಾರೆ. ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Royal Challengers Bangalore vs Chennai Super Kings)​ ನಡುವಣ ಪಂದ್ಯದಲ್ಲೂ ಆಗಿದ್ದು ಇದೆ. ಸ್ಫೋಟಕ ಶತಕದ ಜೊತೆಯಾಟ ಆಡಿ ಮುನ್ನುಗ್ಗುತ್ತಿದ್ದ ಆರ್​ಸಿಬಿ (RCB) ಆರಂಭಿಕರು ವಿರಾಟ್ ಕೊಹ್ಲಿ (Virat Kohli) ಹಾಗೂ ದೇವದತ್ ಪಡಿಕ್ಕಲ್ (Devdutt Padikkal) ಜೋಡಿಗೆ ಶಾಕ್ ನೀಡಿದ್ದು ಡ್ವೇನ್ ಬ್ರಾವೋ (Dwayne Bravo). ಬ್ರಾವೋ ಹಿಂದಿರುವ ಯೋಜನೆ ಧೋನಿಯದ್ದು. ಈ ಬಗ್ಗೆ ಪಂದ್ಯ ಮುಗಿದ ಬಳಿಕ ಸ್ವತಃ ಧೋನಿಯವರೇ ಮಾತನಾಡಿದ್ದಾರೆ. ಸಿಎಸ್​ಕೆ (CSK) ತಂಡ ಮೊದಲ ಇನ್ನಿಂಗ್ಸ್​ನಲ್ಲಿ ಹೇಗೆ ಕಮ್​ಬ್ಯಾಕ್ ಮಾಡಿತು?, ಇದಕ್ಕೆ ನಾವು ಮಾಡಿದ ಪ್ಲ್ಯಾನ್ ಏನು? ಎಂಬುದನ್ನು ಕೂಲ್ ಕ್ಯಾಪ್ಟನ್ ವಿವರಿಸಿದ್ದಾರೆ.

ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್​ಕೆ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಚೆನ್ನೈ ವಿರುದ್ಧ ಹಿಂದೆಂದೂ ಕಾಣದ ಸ್ಫೋಟಕ ಆರಂಭ ಪಡೆದುಕೊಂಡಿತು. ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಚೆನ್ನೈ ಬೌಲರ್​ಗಳ ಬೆವರಿಳಿಸಿದರು. 10 ಓವರ್ ಆಗುವ ಹೊತ್ತಗೆಯೇ ಆರ್​ಸಿಬಿ ತಂಡದ ಮೊತ್ತ ವಿಕೆಟ್ ನಷ್ಟವಿಲ್ಲದೆ 90 ತಲುಪಿತ್ತು.

ಆರ್​ಸಿಬಿ 13.2 ಓವರ್​ಗೆ 111 ರನ್ ಗಳಿಸಿರುವಾಗ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ವಿರಾಟ್ ಕೊಹ್ಲಿ 41 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಬಾರಿಸಿ 53 ರನ್​ಗೆ ಔಟ್ ಆದರು. ಈ ಮೂಲಕ ಚೆನ್ನೈಗೆ ಡ್ವೇನ್ ಬ್ರಾವೋ ಮೊದಲ ಬ್ರೇಕ್ ನೀಡಿದರು. ಆ ಬಳಿಕ ಪಂದ್ಯ ಸಂಪೂರ್ಣ ಸಿಎಸ್​ಕೆ ಕಡೆ ವಾಲಿತು. ಇದಕ್ಕೆಲ್ಲ ಕಾರಣವಾಗಿದ್ದು ಎಂ. ಎಸ್ ಧೋನಿ. ಈ ಬಗ್ಗೆ ಅವರು ಹೇಳಿದ ಮಾತು ಇಲ್ಲಿದೆ ನೋಡಿ.

ಪಂದ್ಯದ ಬಳಿಕ ಮಾತನಾಡಿದ ಧೋನಿ, “ಯುಎಇಯಲ್ಲಿ ಅಬುಧಾಬಿ ಮತ್ತು ದುಬೈನಲ್ಲಿರುವ ಪಿಚ್​ಗಳಿಗೆ ಹೋಲಿಸಿದರೆ ಶಾರ್ಜಾದ ಪಿಚ್ ತುಸು ನಿಧಾನಗತಿಯದ್ದಾಗಿದೆ. ಅಲ್ಲದೆ ಇಬ್ಬನಿ ಇದ್ದಕಾರಣ ನಾವು ಚೇಸಿಂಗ್ ಆಯ್ಕೆ ಮಾಡಿಕೊಂಡೆವು. ಆರ್​ಸಿಬಿ ಇನ್ನಿಂಗ್ಸ್ ವೇಳೆ 9 ಓವರ್ ಬಳಿಕ ಪಿಚ್ ನಿಧಾನವಾಗತೊಡಗಿತು. 14ನೇ ಓವರ್ ಬೌಲಿಂಗ್ ಮಾಡಲು ನನಗೆ ಮೊದಲು ಮೊಯೀನ್ ಅಲಿಗೆ ಕೊಡಬೇಕೆಂಬ ನಿರ್ಧಾರ ಮನಸಿನಲ್ಲಿತ್ತು. ಆದರೆ, ಡ್ವೇನ್ ಬ್ರಾವೋ ಅವರಿಗೆ ನಾನು ಚೆಂಡು ನೀಡಿದೆ. ಇದೇವೇಳೆ ಬ್ರಾವೋಗೆ ಒಂದೇ ಓವರ್​ನಲ್ಲಿ ಆರು ವಿಭಿನ್ನ ಎಸೆತ ಹಾಕುವಂತೆ ಹೇಳಿದೆ. ಬ್ರಾವೋ ಆ ಜವಾಬ್ದಾರಿಯನ್ನು ಅದ್ಭುತವಾಗಿ ನಿಭಾಯಿಸಿದರು” ಎಂದು ಧೋನಿ ಹೇಳಿದರು.

ಹೌದು, ಡ್ವೇನ್ ಬ್ರಾವೋಗೆ ಬೌಲಿಂಗ್ ನೀಡಿದ ಧೋನಿ ಓವರ್‌ನ ಆರೂ ಎಸೆತಗಳನ್ನು ವಿಭಿನ್ನವಾಗಿ ಮತ್ತು ನಿಧಾನವಾಗಿ ಎಸೆಯುವಂತೆ ಸಲಹೆಯನ್ನು ನೀಡಿ ಕೊಹ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಧೋನಿ ಹೇಳಿದ ಹಾಗೆ ಡ್ವೇನ್ ಬ್ರಾವೊ ವಿರಾಟ್ ಕೊಹ್ಲಿಗೆ ಸ್ಲೋ ಡಿಲವರಿಗಳನ್ನು ಎಸೆದರು. ಈ ಪರಿಣಾಮವಾಗಿ ಬ್ರಾವೊ ಹಾಕಿದ ಎರಡನೇ ಎಸೆತದಲ್ಲಿಯೇ ವಿರಾಟ್ ಕೊಹ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಜಡೇಜಾಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.

ಇದರ ಪರಿಣಾಮ ಆರ್​ಸಿಬಿ ತಂಡದ ಮೊತ್ತ 156 ಕ್ಕಷ್ಟೆ ತಲುಪಿತು. ಚೆನ್ನೈ 18.1 ಓವರ್​ನಲ್ಲೇ ಗೆಲುವು ಸಾಧಿಸಿತು. ಧೋನಿ ಹೇಳಿದ ಪ್ಲಾನ್ ಅನ್ನು ಅಚ್ಚುಕಟ್ಟಾಗಿ ಕಾರ್ಯರೂಪಕ್ಕೆ ತಂಡ ಬ್ರಾವೋ 3 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

RCB vs CSK IPL 2021: ಅನುಮಾನ ಹುಟ್ಟುಹಾಕಿದ ವಿರಾಟ್ ಕೊಹ್ಲಿ ಹಿಡಿದ ಕ್ಯಾಚ್: ಅಂಪೈರ್ ಮಾಡಿದ್ದೇನು ನೋಡಿ

IPL 2021 Playoffs: ಆರ್​ಸಿಬಿಗೆ ಬಾಕಿ ಇರುವುದು ಕೇವಲ 5 ಪಂದ್ಯ: ಪ್ಲೇ ಆಫ್​ಗೇರಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು?

(MS Dhoni brought Dwayne Bravo to bowl six different balls to Virat Kohli out in IPL 2021 RCB vs CSK Match)

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್