AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PAK vs BAN: 3ನೇ ಅಂಪೈರ್ ವಿರುದ್ಧ ತಾಳ್ಮೆ ಕಳೆದುಕೊಂಡ ಪಾಕ್ ನಾಯಕ; ಡಗೌಟ್​ನಲ್ಲೂ ತಣ್ಣಗಾಗದ ಕೋಪ

Shan Masood: ಬಾಂಗ್ಲಾ ಬೌಲರ್ ಶೋರಿಫುಲ್ ಇಸ್ಲಾಂ ಅವರ ಎಸೆತವನ್ನು ಶಾನ್ ಮಸೂದ್ ಡಿಫೆಂಡ್ ಮಾಡಲು ಯತ್ನಿಸಿದರು. ಆದರೆ ಚೆಂಡು ಬ್ಯಾಟ್ ಹಾಗೂ ಪ್ಯಾಡ್ ನಡುವೆ ತೀರ ಸನಿಹದಲ್ಲಿ ಹಾದು ಹೋಯಿತು. ಈ ವೇಳೆ ಶಬ್ದವೂ ಬಂತು. ಕೂಡಲೇ ಬಾಂಗ್ಲಾ ಆಟಗಾರರು ಔಟಿಗೆ ಮನವಿ ಮಾಡಿದರು. ಆದರೆ ಶಾನ್ ಮಸೂದ್ ಅವರನ್ನು ಫೀಲ್ಡ್ ಅಂಪೈರ್ ನಾಟೌಟ್ ನೀಡಿದರು. ನಂತರ ಬಾಂಗ್ಲಾದೇಶ ರಿವ್ಯೂ ತೆಗೆದುಕೊಂಡಿತು. ಬಾಂಗ್ಲಾ ಮನವಿಯನ್ನು ಮರು ಪರಿಶೀಲಿಸಿದ ಮೂರನೇ ಅಂಪೈರ್, ಮಸೂದ್ ಔಟೆಂದು ತೀರ್ಪು ನೀಡಿದರು.

PAK vs BAN: 3ನೇ ಅಂಪೈರ್ ವಿರುದ್ಧ ತಾಳ್ಮೆ ಕಳೆದುಕೊಂಡ ಪಾಕ್ ನಾಯಕ; ಡಗೌಟ್​ನಲ್ಲೂ ತಣ್ಣಗಾಗದ ಕೋಪ
ಶಾನ್ ಮಸೂದ್
ಪೃಥ್ವಿಶಂಕರ
|

Updated on:Aug 21, 2024 | 6:05 PM

Share

ರಾವಲ್ಪಿಂಡಿಯಲ್ಲಿ ಇಂದಿನಿಂದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ನಾಯಕ ಶಾನ್ ಮಸೂದ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಮೊದಲ ಇನ್ನಿಂಗ್ಸ್ ಆರಂಭಿಸಿದ ಪಾಕ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಕೇವಲ 16 ರನ್​ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಅದರಲ್ಲಿ ಒಂದು ವಿಕೆಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಈ ವಿವಾದ ಹುಟ್ಟಿಕೊಳ್ಳಲು ಪಾಕ್ ನಾಯಕ ಶಾನ್ ಮಸೂದ್ ವಿರುದ್ಧ ಮೂರನೇ ಅಂಪೈರ್ ನೀಡಿದ ತೀರ್ಮಾನ. ವಾಸ್ತವವಾಗಿ ಬಾಂಗ್ಲಾ ಬೌಲರ್ ಶೋರಿಫುಲ್ ಇಸ್ಲಾಂ ಅವರ ಎಸೆತದಲ್ಲಿ ಶಾನ್ ಮಸೂದ್ ಕೇವಲ 6 ರನ್ ಗಳಿಸಿ ಔಟಾದರು. ಆದರೆ ಮೂರನೇ ಅಂಪೈರ್ ನೀಡಿದ ನಿರ್ಣಯದ ಬಗ್ಗೆ ಪಾಕ್ ನಾಯಕ ತೀರ್ವ ಅಸಮಾಧಾನ ಹೊರಹಾಕಿದ್ದಾರೆ.

ಮೇಲೆ ಹೇಳಿದಂತೆ ಬಾಂಗ್ಲಾ ಬೌಲರ್ ಶೋರಿಫುಲ್ ಇಸ್ಲಾಂ ಅವರ ಎಸೆತವನ್ನು ಶಾನ್ ಮಸೂದ್ ಡಿಫೆಂಡ್ ಮಾಡಲು ಯತ್ನಿಸಿದರು. ಆದರೆ ಚೆಂಡು ಬ್ಯಾಟ್ ಹಾಗೂ ಪ್ಯಾಡ್ ನಡುವೆ ತೀರ ಸನಿಹದಲ್ಲಿ ಹಾದು ಹೋಯಿತು. ಈ ವೇಳೆ ಶಬ್ದವೂ ಬಂತು. ಕೂಡಲೇ ಬಾಂಗ್ಲಾ ಆಟಗಾರರು ಔಟಿಗೆ ಮನವಿ ಮಾಡಿದರು. ಆದರೆ ಶಾನ್ ಮಸೂದ್ ಅವರನ್ನು ಫೀಲ್ಡ್ ಅಂಪೈರ್ ನಾಟೌಟ್ ನೀಡಿದರು. ನಂತರ ಬಾಂಗ್ಲಾದೇಶ ರಿವ್ಯೂ ತೆಗೆದುಕೊಂಡಿತು. ಬಾಂಗ್ಲಾ ಮನವಿಯನ್ನು ಮರು ಪರಿಶೀಲಿಸಿದ ಮೂರನೇ ಅಂಪೈರ್, ಮಸೂದ್ ಔಟೆಂದು ತೀರ್ಪು ನೀಡಿದರು.

ಕೋಪಗೊಂಡ ಶಾನ್ ಮಸೂದ್

ಆದರೆ ಥರ್ಡ್ ಅಂಪೈರ್ ನಿರ್ಧಾರ ಬಂದ ತಕ್ಷಣ ಶಾನ್ ಮಸೂದ್ ಶಾಕ್ ಆಗಿದ್ದು, ಕೂಡಲೇ ಮೈದಾನದ ಅಂಪೈರ್​ಗಳೊಂದಿಗೆ ವಾಗ್ವಾದಕ್ಕಿಳಿದರು. ಶಾನ್ ಮಸೂದ್ ಅವರ ವಾದವೆಂದರೆ ಚೆಂಡು ತನ್ನ ತೊಡೆಯ ಪ್ಯಾಡ್‌ಗೆ ಬಡಿದಿದೆ. ಅಲ್ಲದೆ ರಿವ್ಯೂವ್​ನಲ್ಲೂ ಚೆಂಡು ಬ್ಯಾಟ್​ಗೆ ಬಡಿದಿದೆಯೋ ಅಥವಾ ಪ್ಯಾಡಿಗೆ ಬಡಿದಿದೆಯೋ ಎಂಬುದು ಅಸ್ಪಷ್ಟವಾಗಿತ್ತು. ಹೀಗಾಗಿ ಫೀಲ್ಡ್ ಅಂಪೈರ್ ನಾಟೌಟ್ ನೀಡಿರುವ ಕಾರಣ, ಡೌಟ್ ಆಫ್ ಬೆನಿಫಿಟ್ ಆದಾರದ ಮೇಲೆ ಮೂರನೇ ಅಂಪೈರ್ ನಿರ್ಣಯ ಬ್ಯಾಟರ್ ಪರ ಬರಬೇಕಿತ್ತು. ಆದರೆ ಮೂರನೇ ಅಂಪೈರ್ ಶಾನ್ ಮಸೂದ್ ಔಟೆಂದು ತೀರ್ಪು ನೀಡಿದರು.

ಹೀಗಾಗಿ ಅಂಪೈರ್‌ನ ನಿರ್ಧಾರದಿಂದ ಮಸೂದ್ ಅತೃಪ್ತರಾಗಿದ್ದಲ್ಲದೆ, ಡ್ರೆಸ್ಸಿಂಗ್ ರೂಮ್‌ನಲ್ಲಿಯೂ ತಮ್ಮ ಕೋಪವನ್ನು ಹೊರಹಾಕಿದರು. ಮಸೂದ್ ತನ್ನ ಕೋಚ್‌ಗೆ ಮಾನಿಟರ್‌ನಲ್ಲಿ ರಿಪ್ಲೇ ತೋರಿಸಿ ಇದು ನಾಟೌಟ್ ಎಂಬುದನ್ನು ಮನವರಿಕೆ ಮಾಡಲು ಯತ್ನಿಸಿದರು. ಇತ್ತ ಪಾಕಿಸ್ತಾನದ ಸಹಾಯಕ ಸಿಬ್ಬಂದಿ ಕೂಡ ಅಂಪೈರ್ ಅವರ ನಿರ್ಧಾರದಿಂದ ಕೋಪಗೊಂಡರು.

ಪಾಕಿಸ್ತಾನಕ್ಕೆ ಕೆಟ್ಟ ಆರಂಭ

ಮೊದಲ ಇನ್ನಿಂಗ್ಸ್​ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ನಾಲ್ಕನೇ ಓವರ್‌ನಲ್ಲಿ ಅಬ್ದುಲ್ಲಾ ಶಫೀಕ್ ಕೇವಲ 2 ರನ್ ಗಳಿಸಿ ಔಟಾದರು. 7ನೇ ಓವರ್​ನಲ್ಲಿ ನಾಯಕ ಶಾನ್ ಮಸೂದ್ 11 ರನ್ ಗಳಿಸಿ ಔಟಾದರೆ, 9ನೇ ಓವರ್​ನಲ್ಲಿ ಬಾಬರ್ ಆಝಂ ಖಾತೆ ತೆರೆಯದೆ ಔಟಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:02 pm, Wed, 21 August 24

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್