AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PAK vs BAN: 3ನೇ ಅಂಪೈರ್ ವಿರುದ್ಧ ತಾಳ್ಮೆ ಕಳೆದುಕೊಂಡ ಪಾಕ್ ನಾಯಕ; ಡಗೌಟ್​ನಲ್ಲೂ ತಣ್ಣಗಾಗದ ಕೋಪ

Shan Masood: ಬಾಂಗ್ಲಾ ಬೌಲರ್ ಶೋರಿಫುಲ್ ಇಸ್ಲಾಂ ಅವರ ಎಸೆತವನ್ನು ಶಾನ್ ಮಸೂದ್ ಡಿಫೆಂಡ್ ಮಾಡಲು ಯತ್ನಿಸಿದರು. ಆದರೆ ಚೆಂಡು ಬ್ಯಾಟ್ ಹಾಗೂ ಪ್ಯಾಡ್ ನಡುವೆ ತೀರ ಸನಿಹದಲ್ಲಿ ಹಾದು ಹೋಯಿತು. ಈ ವೇಳೆ ಶಬ್ದವೂ ಬಂತು. ಕೂಡಲೇ ಬಾಂಗ್ಲಾ ಆಟಗಾರರು ಔಟಿಗೆ ಮನವಿ ಮಾಡಿದರು. ಆದರೆ ಶಾನ್ ಮಸೂದ್ ಅವರನ್ನು ಫೀಲ್ಡ್ ಅಂಪೈರ್ ನಾಟೌಟ್ ನೀಡಿದರು. ನಂತರ ಬಾಂಗ್ಲಾದೇಶ ರಿವ್ಯೂ ತೆಗೆದುಕೊಂಡಿತು. ಬಾಂಗ್ಲಾ ಮನವಿಯನ್ನು ಮರು ಪರಿಶೀಲಿಸಿದ ಮೂರನೇ ಅಂಪೈರ್, ಮಸೂದ್ ಔಟೆಂದು ತೀರ್ಪು ನೀಡಿದರು.

PAK vs BAN: 3ನೇ ಅಂಪೈರ್ ವಿರುದ್ಧ ತಾಳ್ಮೆ ಕಳೆದುಕೊಂಡ ಪಾಕ್ ನಾಯಕ; ಡಗೌಟ್​ನಲ್ಲೂ ತಣ್ಣಗಾಗದ ಕೋಪ
ಶಾನ್ ಮಸೂದ್
ಪೃಥ್ವಿಶಂಕರ
|

Updated on:Aug 21, 2024 | 6:05 PM

Share

ರಾವಲ್ಪಿಂಡಿಯಲ್ಲಿ ಇಂದಿನಿಂದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ನಾಯಕ ಶಾನ್ ಮಸೂದ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಮೊದಲ ಇನ್ನಿಂಗ್ಸ್ ಆರಂಭಿಸಿದ ಪಾಕ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಕೇವಲ 16 ರನ್​ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಅದರಲ್ಲಿ ಒಂದು ವಿಕೆಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಈ ವಿವಾದ ಹುಟ್ಟಿಕೊಳ್ಳಲು ಪಾಕ್ ನಾಯಕ ಶಾನ್ ಮಸೂದ್ ವಿರುದ್ಧ ಮೂರನೇ ಅಂಪೈರ್ ನೀಡಿದ ತೀರ್ಮಾನ. ವಾಸ್ತವವಾಗಿ ಬಾಂಗ್ಲಾ ಬೌಲರ್ ಶೋರಿಫುಲ್ ಇಸ್ಲಾಂ ಅವರ ಎಸೆತದಲ್ಲಿ ಶಾನ್ ಮಸೂದ್ ಕೇವಲ 6 ರನ್ ಗಳಿಸಿ ಔಟಾದರು. ಆದರೆ ಮೂರನೇ ಅಂಪೈರ್ ನೀಡಿದ ನಿರ್ಣಯದ ಬಗ್ಗೆ ಪಾಕ್ ನಾಯಕ ತೀರ್ವ ಅಸಮಾಧಾನ ಹೊರಹಾಕಿದ್ದಾರೆ.

ಮೇಲೆ ಹೇಳಿದಂತೆ ಬಾಂಗ್ಲಾ ಬೌಲರ್ ಶೋರಿಫುಲ್ ಇಸ್ಲಾಂ ಅವರ ಎಸೆತವನ್ನು ಶಾನ್ ಮಸೂದ್ ಡಿಫೆಂಡ್ ಮಾಡಲು ಯತ್ನಿಸಿದರು. ಆದರೆ ಚೆಂಡು ಬ್ಯಾಟ್ ಹಾಗೂ ಪ್ಯಾಡ್ ನಡುವೆ ತೀರ ಸನಿಹದಲ್ಲಿ ಹಾದು ಹೋಯಿತು. ಈ ವೇಳೆ ಶಬ್ದವೂ ಬಂತು. ಕೂಡಲೇ ಬಾಂಗ್ಲಾ ಆಟಗಾರರು ಔಟಿಗೆ ಮನವಿ ಮಾಡಿದರು. ಆದರೆ ಶಾನ್ ಮಸೂದ್ ಅವರನ್ನು ಫೀಲ್ಡ್ ಅಂಪೈರ್ ನಾಟೌಟ್ ನೀಡಿದರು. ನಂತರ ಬಾಂಗ್ಲಾದೇಶ ರಿವ್ಯೂ ತೆಗೆದುಕೊಂಡಿತು. ಬಾಂಗ್ಲಾ ಮನವಿಯನ್ನು ಮರು ಪರಿಶೀಲಿಸಿದ ಮೂರನೇ ಅಂಪೈರ್, ಮಸೂದ್ ಔಟೆಂದು ತೀರ್ಪು ನೀಡಿದರು.

ಕೋಪಗೊಂಡ ಶಾನ್ ಮಸೂದ್

ಆದರೆ ಥರ್ಡ್ ಅಂಪೈರ್ ನಿರ್ಧಾರ ಬಂದ ತಕ್ಷಣ ಶಾನ್ ಮಸೂದ್ ಶಾಕ್ ಆಗಿದ್ದು, ಕೂಡಲೇ ಮೈದಾನದ ಅಂಪೈರ್​ಗಳೊಂದಿಗೆ ವಾಗ್ವಾದಕ್ಕಿಳಿದರು. ಶಾನ್ ಮಸೂದ್ ಅವರ ವಾದವೆಂದರೆ ಚೆಂಡು ತನ್ನ ತೊಡೆಯ ಪ್ಯಾಡ್‌ಗೆ ಬಡಿದಿದೆ. ಅಲ್ಲದೆ ರಿವ್ಯೂವ್​ನಲ್ಲೂ ಚೆಂಡು ಬ್ಯಾಟ್​ಗೆ ಬಡಿದಿದೆಯೋ ಅಥವಾ ಪ್ಯಾಡಿಗೆ ಬಡಿದಿದೆಯೋ ಎಂಬುದು ಅಸ್ಪಷ್ಟವಾಗಿತ್ತು. ಹೀಗಾಗಿ ಫೀಲ್ಡ್ ಅಂಪೈರ್ ನಾಟೌಟ್ ನೀಡಿರುವ ಕಾರಣ, ಡೌಟ್ ಆಫ್ ಬೆನಿಫಿಟ್ ಆದಾರದ ಮೇಲೆ ಮೂರನೇ ಅಂಪೈರ್ ನಿರ್ಣಯ ಬ್ಯಾಟರ್ ಪರ ಬರಬೇಕಿತ್ತು. ಆದರೆ ಮೂರನೇ ಅಂಪೈರ್ ಶಾನ್ ಮಸೂದ್ ಔಟೆಂದು ತೀರ್ಪು ನೀಡಿದರು.

ಹೀಗಾಗಿ ಅಂಪೈರ್‌ನ ನಿರ್ಧಾರದಿಂದ ಮಸೂದ್ ಅತೃಪ್ತರಾಗಿದ್ದಲ್ಲದೆ, ಡ್ರೆಸ್ಸಿಂಗ್ ರೂಮ್‌ನಲ್ಲಿಯೂ ತಮ್ಮ ಕೋಪವನ್ನು ಹೊರಹಾಕಿದರು. ಮಸೂದ್ ತನ್ನ ಕೋಚ್‌ಗೆ ಮಾನಿಟರ್‌ನಲ್ಲಿ ರಿಪ್ಲೇ ತೋರಿಸಿ ಇದು ನಾಟೌಟ್ ಎಂಬುದನ್ನು ಮನವರಿಕೆ ಮಾಡಲು ಯತ್ನಿಸಿದರು. ಇತ್ತ ಪಾಕಿಸ್ತಾನದ ಸಹಾಯಕ ಸಿಬ್ಬಂದಿ ಕೂಡ ಅಂಪೈರ್ ಅವರ ನಿರ್ಧಾರದಿಂದ ಕೋಪಗೊಂಡರು.

ಪಾಕಿಸ್ತಾನಕ್ಕೆ ಕೆಟ್ಟ ಆರಂಭ

ಮೊದಲ ಇನ್ನಿಂಗ್ಸ್​ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ನಾಲ್ಕನೇ ಓವರ್‌ನಲ್ಲಿ ಅಬ್ದುಲ್ಲಾ ಶಫೀಕ್ ಕೇವಲ 2 ರನ್ ಗಳಿಸಿ ಔಟಾದರು. 7ನೇ ಓವರ್​ನಲ್ಲಿ ನಾಯಕ ಶಾನ್ ಮಸೂದ್ 11 ರನ್ ಗಳಿಸಿ ಔಟಾದರೆ, 9ನೇ ಓವರ್​ನಲ್ಲಿ ಬಾಬರ್ ಆಝಂ ಖಾತೆ ತೆರೆಯದೆ ಔಟಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:02 pm, Wed, 21 August 24

ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ