AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾದಲ್ಲಿ ಒಡಕು! ಕೊಹ್ಲಿ ವರ್ತನೆ ವಿರುದ್ಧ ಬಿಸಿಸಿಐಗೆ ದೂರು ಕೊಟ್ಟರಾ ರಹಾನೆ-ಪೂಜಾರ?

ಟೀಮ್ ಇಂಡಿಯಾ 2 ವಾರಗಳ ವಿರಾಮದಲ್ಲಿದ್ದಾಗ, ಅದೇ ಸಮಯದಲ್ಲಿ ಇಬ್ಬರೂ ಹಿರಿಯ ಬ್ಯಾಟ್ಸ್‌ಮನ್‌ಗಳು ಬಿಸಿಸಿಐ ಕಾರ್ಯದರ್ಶಿಗೆ ವೈಯಕ್ತಿಕ ಕರೆ ಮಾಡಿ ತಮಗಾದ ನೋವನ್ನು ಹೇಳಿಕೊಂಡಿದ್ದರಂತೆ.

ಟೀಮ್ ಇಂಡಿಯಾದಲ್ಲಿ ಒಡಕು! ಕೊಹ್ಲಿ ವರ್ತನೆ ವಿರುದ್ಧ ಬಿಸಿಸಿಐಗೆ ದೂರು ಕೊಟ್ಟರಾ ರಹಾನೆ-ಪೂಜಾರ?
ಪೂಜಾರ, ವಿರಾಟ್ ಕೊಹ್ಲಿ, ರಹಾನೆ
TV9 Web
| Edited By: |

Updated on: Sep 29, 2021 | 5:14 PM

Share

ವಿರಾಟ್ ಕೊಹ್ಲಿ ಟಿ 20 ತಂಡದ ನಾಯಕತ್ವ ತೊರೆದ ನಂತರ ಟೀಂ ಇಂಡಿಯಾದಲ್ಲಿದ್ದ ಒಡಕು ಸರಿಹೊಗಲಿದೆ ಎಂದು ಎಲ್ಲರೂ ಬಾವಿಸಿದ್ದರು. ಆದರೆ ಇಲ್ಲಿ ವಿಷಯ ವಿಭಿನ್ನವಾಗಿದೆ. ಈಗ ಕ್ರಮೇಣ ತಂಡದಲ್ಲಿ ಅಸಮಾನತೆಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸೋಲಿನ ಕಹಿ ಸಿಪ್ ಕುಡಿದ ನಂತರ, ಭಾರತದ ಅನೇಕ ಹಿರಿಯ ಕ್ರಿಕೆಟಿಗರು ವಿರಾಟ್ ಕೊಹ್ಲಿ ವಿರುದ್ಧ ಅಸಮಾಧಾನ ಹೊರಹಾಕಲು ಆರಂಭಿಸಿದರು. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ತನ್ನ ವಿಶ್ವಾಸಾರ್ಹ ಮೂಲಗಳ್ನು ಉಲ್ಲೇಖಿಸಿ ಕನಿಷ್ಠ ಇಬ್ಬರು ಹಿರಿಯ ಕ್ರಿಕೆಟಿಗರು ತಮ್ಮ ವಿರುದ್ಧ ವಿರಾಟ್ ಕೊಹ್ಲಿಯ ವರ್ತನೆಯ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ದೂರು ನೀಡಿದ್ದಾರೆ ಎಂದು ವರದಿ ಮಾಡಿದೆ. ವರದಿಯಲ್ಲಿ ವಿರಾಟ್ ಕೊಹ್ಲಿ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂಬುದು ಆರೋಪವಾಗಿದೆ.

ವರದಿಯ ಪ್ರಕಾರ, ಜೂನ್ ತಿಂಗಳಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ತಲುಪುವವರೆಗೂ ಪರಿಸ್ಥಿತಿ ಉತ್ತಮವಾಗಿತ್ತು. ಆದರೆ ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೋಲು ಎಲ್ಲವನ್ನೂ ಬದಲಾಯಿಸಿತು. ಟೀಮ್ ಇಂಡಿಯಾ ಗೆಲುವಿಗೆ ಪ್ರತಿಸ್ಪರ್ಧಿಯಾಗಿತ್ತು. ಸೌತಾಂಪ್ಟನ್‌ನಲ್ಲಿ ಟೆಸ್ಟ್ ಆಡಲಾಯಿತು. ಆದರೆ, ಬ್ಯಾಟಿಂಗ್ ವೈಫಲ್ಯದಿಂದಾಗಿ,ಭಾರತ ಈ ಟೆಸ್ಟ್‌ನಲ್ಲಿ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಇದಕ್ಕೆ ಮುಖ್ಯ ಕಾರಣ ತಂಡದ ಬ್ಯಾಟಿಂಗ್ ವೈಫಲ್ಯ. ಇದರಿಂದ ಕೋಪಗೊಂಡ ನಾಯಕ ಕೊಹ್ಲಿ ತಂಡದ ಹಿರಿಯ ಬ್ಯಾಟ್ಸ್‌ಮನ್‌ಗಳನ್ನು ಗುರಿಯಾಗಿಸಿಕೊಂಡರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸೋಲಿನ ನಂತರ ಮಾತನಾಡಿದ ಕೊಹ್ಲಿ, ರನ್ ಗಳಿಸುವುದು ಮತ್ತು ರನ್ ಗಳಿಸುವ ಮಾರ್ಗಗಳನ್ನು ಹುಡುಕುವ ಮನಸ್ಥಿತಿ ಇರಬೇಕು. ನೀವು ಔಟಾಗುವ ಬಗ್ಗೆ ಹೆಚ್ಚು ಚಿಂತಿಸಬಾರದು, ನೀವು ಬೌಲರ್‌ಗೆ ತನ್ನ ಮೇಲೆ ಪ್ರಾಬಲ್ಯ ಸಾಧಿಸುವ ಅವಕಾಶವನ್ನು ನೀಡುತ್ತೀರಿ ಎಂದು ತಂಡದ ಆಟಗಾರರನ್ನು ಉದ್ದೇಶಿಸಿ ಮಾತನಾಡಿದರು.

WTC ಫೈನಲ್ ನಂತರ ಅಸಮಾಧಾನ ಸ್ಪೋಟ ಮೂಲಗಳ ಪ್ರಕಾರ, ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಂತರ, ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಪೂಜಾರ ಮತ್ತು ರಹಾನೆಗೆ ಕ್ಲಾಸ್ ತೆಗೆದುಕೊಂಡಿದ್ದರಂತೆ. ಕೊಹ್ಲಿ, ಪೂಜಾರ ನಿಧಾನಗತಿಯ ಸ್ಟ್ರೈಕ್ ರೇಟ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು ಮತ್ತು ರಹಾನೆಯ ಕಳಪೆ ಫಾರ್ಮ್ ಅನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದರಂತೆ. ತಂಡದ ಒಳಗೆ ನಡೆದ ಈ ಸಂಗತಿಗಳು ದೊಡ್ಡ ಸಮಸ್ಯೆಯಾಗಿ ಬದಲಾಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. WTC ಫೈನಲ್ ನಂತರ, ಟೀಮ್ ಇಂಡಿಯಾ 2 ವಾರಗಳ ವಿರಾಮದಲ್ಲಿದ್ದಾಗ, ಅದೇ ಸಮಯದಲ್ಲಿ ಇಬ್ಬರೂ ಹಿರಿಯ ಬ್ಯಾಟ್ಸ್‌ಮನ್‌ಗಳು ಬಿಸಿಸಿಐ ಕಾರ್ಯದರ್ಶಿಗೆ ವೈಯಕ್ತಿಕ ಕರೆ ಮಾಡಿ ತಮಗಾದ ನೋವನ್ನು ಹೇಳಿಕೊಂಡಿದ್ದರಂತೆ.

ಈಗ ಏಕದಿನದ ನಾಯಕತ್ವ ಕೂಡ ಕೊಹ್ಲಿಯ ಕೈಯಿಂದ ಜಾರಬಹುದು ಆ ಫೋನ್ ಕರೆಯ ನಂತರ, ಬಿಸಿಸಿಐ ಸಹ ತಂಡದ ಇತರ ಆಟಗಾರರಿಂದ ಪ್ರತಿಕ್ರಿಯೆಯನ್ನು ಪಡೆದುಕೊಂಡಿತು ಮತ್ತು ಇಂಗ್ಲೆಂಡ್ ಪ್ರವಾಸದ ಕೊನೆಯಲ್ಲಿ, ಅದರ ಮೇಲೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ನಿರ್ಧರಿಸಿದರು. ಸಹಜವಾಗಿ, ಕೊಹ್ಲಿ ತನ್ನ ಟಿ 20 ನಾಯಕತ್ವವನ್ನು ತೊರೆಯಲು ಕೆಲಸದ ಹೊರೆ ಕಾರಣ ಎಂದು ಉಲ್ಲೇಖಿಸಿರಬಹುದು. ಆದರೆ ವಿಶ್ವಕಪ್ ಮುಗಿದ ನಂತರ, ಬಿಸಿಸಿಐ ಅವರ ಏಕದಿನ ನಾಯಕತ್ವದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನಂಬಲಾಗಿದೆ.