AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shoaib Akhtar: ಸೇನೆ, ಸರ್ಕಾರ ಸೇರಿದಂತೆ ಇಡೀ ದೇಶವೇ ನನ್ನ ಜೊತೆಗಿದೆ! ನೋಟಿಸ್ ಕಳುಹಿಸಿದ ಚಾನೆಲ್​ಗೆ ಅಖ್ತರ್ ಪ್ರತಿಕ್ರಿಯೆ

Shoaib Akhtar: ನಮ್ಮ ರಾಷ್ಟ್ರನಾಯಕನಿಗೆ ಹೀಗಾಗಬಾರದಿತ್ತು ಎಂಬ ಸಿಟ್ಟು ಇಡೀ ಸಾರ್ವಜನಿಕರಲ್ಲಿದೆ.ಆದರೆ ಇವರೆಲ್ಲ ವಿಷಯವನ್ನು ಬೇರೆಡೆಗೆ ಕೊಂಡೊಯ್ದಿದ್ದಾರೆ. ಇಡೀ ಕ್ಯಾಬಿನೆಟ್‌ನಲ್ಲಿ ಸಾರಾಂಶ ಪಾಸಾಗಿದೆ.ಇಡೀ ಸಂಪುಟ ನನ್ನೊಂದಿಗೆ ಇದೆ.

Shoaib Akhtar: ಸೇನೆ, ಸರ್ಕಾರ ಸೇರಿದಂತೆ ಇಡೀ ದೇಶವೇ ನನ್ನ ಜೊತೆಗಿದೆ! ನೋಟಿಸ್ ಕಳುಹಿಸಿದ ಚಾನೆಲ್​ಗೆ ಅಖ್ತರ್ ಪ್ರತಿಕ್ರಿಯೆ
ಶೋಯೆಬ್ ಅಖ್ತರ್
TV9 Web
| Updated By: ಪೃಥ್ವಿಶಂಕರ|

Updated on: Nov 10, 2021 | 4:26 PM

Share

ಒಂದೆಡೆ, ಪಾಕಿಸ್ತಾನ ಕ್ರಿಕೆಟ್ ತಂಡವು ICC T20 ವಿಶ್ವಕಪ್-2021 ರಲ್ಲಿ ತನ್ನ ಪ್ರದರ್ಶನದೊಂದಿಗೆ ಇಡೀ ಪ್ರಪಂಚವನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಆದರೆ ಅದರ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ವಿನಾಕಾರಣ ವಿವಾದವನ್ನು ತನ್ನ ಮೈಮೇಲೆ ಎಳೆದುಕೊಂಡು ಸುದ್ದಿಯಾಗುತ್ತಿದ್ದಾರೆ. ಇದಕ್ಕೆ ಕಾರಣ ಟಿವಿ ಶೋ. ಆ್ಯಂಕರ್ ನೋಮನ್ ನಿಯಾಜ್ ಪಿಟಿವಿ ಶೋನಲ್ಲಿ ಅಖ್ತರ್ ಜೊತೆ ಅನುಚಿತವಾಗಿ ನಡೆದುಕೊಂಡಿದ್ದಕ್ಕೆ ಅಖ್ತರ್ ಕಾರ್ಯಕ್ರಮದ ಮಧ್ಯದಲ್ಲೇ ಎದ್ದು ಹೊರನಡೆದಿದ್ದರು.ಇದರ ನಂತರ ಚಾನೆಲ್ ಅಖ್ತರ್‌ಗೆ $100 ಮಿಲಿಯನ್ ಮಾನನಷ್ಟ ಮೊಕದಮ್ಮೆ ನೋಟಿಸ್ ಕಳುಹಿಸಿತು. ಸೇನೆ, ಸರ್ಕಾರ ಸೇರಿದಂತೆ ಇಡೀ ದೇಶವೇ ಜೊತೆಗಿದೆ ಎಂದು ಇದೀಗ ಈ ಬಗ್ಗೆ ಅಖ್ತರ್ ದೊಡ್ಡ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಅಖ್ತರ್, 100 ಮಿಲಿಯನ್ ನೋಟಿಸ್ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, “ಪಿಟಿಐ (ಪಾಕಿಸ್ತಾನದ ರಾಜಕೀಯ ಪಕ್ಷ) ಬೆಂಬಲ ನನ್ನೊಂದಿಗಿದೆ, ಎಲ್ಲಾ ರಾಜಕೀಯ ಪಕ್ಷಗಳು ನನ್ನೊಂದಿಗಿವೆ, ಸೇನೆಯೂ ನನ್ನೊಂದಿಗಿದೆ. ನಮ್ಮ ರಾಷ್ಟ್ರನಾಯಕನಿಗೆ ಹೀಗಾಗಬಾರದಿತ್ತು ಎಂಬ ಸಿಟ್ಟು ಇಡೀ ಸಾರ್ವಜನಿಕರಲ್ಲಿದೆ.ಆದರೆ ಇವರೆಲ್ಲ ವಿಷಯವನ್ನು ಬೇರೆಡೆಗೆ ಕೊಂಡೊಯ್ದಿದ್ದಾರೆ.ಇಡೀ ಕ್ಯಾಬಿನೆಟ್‌ನಲ್ಲಿ ಸಾರಾಂಶ ಪಾಸಾಗಿದೆ. ಇಡೀ ಸಂಪುಟ ನನ್ನೊಂದಿಗೆ ಇದೆ. ಪ್ರಧಾನಿ ನನ್ನೊಂದಿಗಿದ್ದಾರೆ ಎಲ್ಲರೂ ನನ್ನ ಜೊತೆಗಿದ್ದಾರೆ, ಟಿವಿಯಲ್ಲಿ ನಾನು ನಿಮಗೆ ಏನನ್ನೂ ಹೇಳುತ್ತಿಲ್ಲ ಎಂದರೆ ನೀವು ಏನು ಬೇಕಾದರೂ ಹೇಳಬೇಕು ಎಂದಲ್ಲ.ಇವರು ಏನು ಮಾಡುತ್ತಿದ್ದರೂ ನನ್ನ ವಕೀಲರು ಎಲ್ಲವನ್ನೂ ಗಮನಿಸುತ್ತಿದ್ದಾರೆ, PTV ಗೂ ಸಹ ಎಲ್ಲರಿಗೂ ಸೂಕ್ತವಾದ ಉತ್ತರ ನಾವು ನೀಡುತ್ತೇವೆ ಎಂದಿದ್ದಾರೆ.

ಏನಿದು ಅಖ್ತರ್-ಪಿಟಿವಿ ವಿವಾದ? ಟಿ20 ವಿಶ್ವಕಪ್​ ಸಂದರ್ಭದಲ್ಲಿ ಕ್ರೀಡಾ ಕಾರ್ಯಕ್ರಮದ ಚರ್ಚೆಯಲ್ಲಿ ಶೋಯೆಬ್ ಅಖ್ತರ್ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಚರ್ಚೆ ವೇಳೆ ನಿರೂಪಕ ಡಾ ನೌಮಾನ್ ನಿಯಾಜ್ ಹಾಗೂ ಶೋಯೆಬ್ ಅಖ್ತರ್ ನಡುವೆ ಹೊಂದಾಣಿಕೆಯ ಕೊರತೆ ಕಂಡು ಬಂದಿತ್ತು. ಇಬ್ಬರ ನಡುವಿನ ಭಿನ್ನಾಭಿಪ್ರಾಯ ತಾರಕ್ಕೇರಿ, ನೀವು ಕಾರ್ಯಕ್ರಮದಿಂದ ಹೊರನಡೆಯಬಹುದು ಎಂದು ನಿರೂಪಕರು ಹೇಳಿದ್ದರು. ಇದರಿಂದ ಅಸಮಾಧಾನಗೊಂಡ ಶೋಯೆಬ್ ಅಖ್ತರ್ ಕೂಡ ಅರ್ಧದಲ್ಲೇ ಕಾರ್ಯಕ್ರಮದಿಂದ ನಿರ್ಗಮಿಸಿದ್ದರು. ಅಷ್ಟೇ ಅಲ್ಲದೆ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದ ಅಖ್ತರ್, ನನ್ನ ಗೌರವಕ್ಕೆ ಚ್ಯುತಿ ಬಂದಿದ್ದು, ಹೀಗಾಗಿ ಮುಂದೆ ಪಿಟಿವಿಯ ಪ್ಯಾನೆಲ್​ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಇದೇ ವಿಚಾರವಾಗಿ ಇದೀಗ ಪಿಟಿವಿ ಶೋಯೆಬ್ ಅಖ್ತರ್ ವಿರುದ್ದ ಮಾನನಷ್ಟ ನೋಟಿಸ್ ನೀಡಿದೆ.

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್