Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಪಂದ್ಯ ಸೋತರೂ ಅದ್ಭುತ ಫೀಲ್ಡಿಂಗ್​ನಿಂದ ಅಭಿಮಾನಿಗಳ ಹೃದಯ ಗೆದ್ದ ಹೈದರಾಬಾದ್; ವಿಡಿಯೋ ನೋಡಿ

IPL 2021: ತಂಡದ ಆಟಗಾರರು ಅದ್ಭುತ ಫೀಲ್ಡಿಂಗ್‌ ಮಾಡಿ ಅಭಿಮಾನಿಗಳ ಹೃದಯ ಗೆದ್ದರು. ಬದಲಿ ಫೀಲ್ಡರ್ ಆಗಿ ಮೈದಾನಕ್ಕೆ ಎಂಟ್ರಿಕೊಟ್ಟಿದ್ದ ಜಗದೀಶ ಸುಚಿತ್ (ಜಗದೀಶ ಸುಚಿತ್) ಮತ್ತು ಬೌಲರ್ ಸಂದೀಪ್ ಶರ್ಮಾ ಅತ್ಯುತ್ತಮ ಕ್ಯಾಚ್‌ಗಳನ್ನು ತೆಗೆದುಕೊಂಡರು

IPL 2021: ಪಂದ್ಯ ಸೋತರೂ ಅದ್ಭುತ ಫೀಲ್ಡಿಂಗ್​ನಿಂದ ಅಭಿಮಾನಿಗಳ ಹೃದಯ ಗೆದ್ದ ಹೈದರಾಬಾದ್; ವಿಡಿಯೋ ನೋಡಿ
ಅದ್ಭುತ ಫೀಲ್ಡಿಂಗ್​ನಿಂದ ಅಭಿಮಾನಿಗಳ ಹೃದಯ ಗೆದ್ದ ಹೈದರಾಬಾದ್
Follow us
TV9 Web
| Updated By: ಪೃಥ್ವಿಶಂಕರ

Updated on: Sep 26, 2021 | 5:17 PM

ಐಪಿಎಲ್ 2021 ರಲ್ಲಿ ತನ್ನ ಎರಡನೇ ಗೆಲುವಿಗಾಗಿ ಹೆಣಗಾಡುತ್ತಿರುವ ಸನ್ ರೈಸರ್ಸ್ ಹೈದರಾಬಾದಿನ ಕಾಯುವಿಕೆ ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ನಂತರವೂ ಮುಂದುವರಿಯಿತು. ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಐದು ರನ್​ಗಳಿಂದ ಪಂದ್ಯವನ್ನು ಕಳೆದುಕೊಳ್ಳಬೇಕಾಯ್ತು. ಕೇನ್ ವಿಲಿಯಮ್ಸನ್ ನಾಯಕತ್ವದ ಹೈದರಾಬಾದ್ ಪಂದ್ಯವನ್ನು ಕಳೆದುಕೊಂಡಿರಬಹುದು, ಆದರೆ ಅದರ ಆಟಗಾರರು ತಮ್ಮ ಅತ್ಯುತ್ತಮ ಫೀಲ್ಡಿಂಗ್ ಮೂಲಕ ಖಂಡಿತವಾಗಿಯೂ ಅಭಿಮಾನಿಗಳ ಹೃದಯ ಗೆದ್ದರು.

ಸನ್ ರೈಸರ್ಸ್ ಹೈದರಾಬಾದ್ ತಂಡ ಮೊದಲು ಬೌಲಿಂಗ್ ಮಾಡಿತು. ಈ ಸಮಯದಲ್ಲಿ, ತಂಡದ ಆಟಗಾರರು ಅದ್ಭುತ ಫೀಲ್ಡಿಂಗ್‌ ಮಾಡಿ ಅಭಿಮಾನಿಗಳ ಹೃದಯ ಗೆದ್ದರು. ಬದಲಿ ಫೀಲ್ಡರ್ ಆಗಿ ಮೈದಾನಕ್ಕೆ ಎಂಟ್ರಿಕೊಟ್ಟಿದ್ದ ಜಗದೀಶ ಸುಚಿತ್ (ಜಗದೀಶ ಸುಚಿತ್) ಮತ್ತು ಬೌಲರ್ ಸಂದೀಪ್ ಶರ್ಮಾ ಅತ್ಯುತ್ತಮ ಕ್ಯಾಚ್‌ಗಳನ್ನು ತೆಗೆದುಕೊಂಡರು, ಇದು ಎಲ್ಲರ ಕಣ್ಣು ಹುಬ್ಬೆರುವಂತೆ ಮಾಡಿತು. ಈಗ ಈ ಎರಡೂ ಕ್ಯಾಚ್​ಗಳ ವೀಡಿಯೊಗಳು ಸಾಕಷ್ಟು ವೈರಲ್ ಆಗುತ್ತಿವೆ.

ಜಗದೀಶ ಸುಚಿತ್ ಅವರಿಂದ ಉತ್ತಮ ಕ್ಯಾಚ್ ಪಂಜಾಬ್ ಕಿಂಗ್ಸ್‌ ಇನ್ನಿಂಗ್ಸ್‌ನ 16 ನೇ ಓವರ್‌ನಲ್ಲಿ, ಜೇಸನ್ ಹೋಲ್ಡರ್ ಓವರ್​ನ ನಾಲ್ಕನೇ ಎಸೆತವನ್ನು ಎದುರಾಳಿ ಬ್ಯಾಟ್ಸ್‌ಮನ್ ದೀಪಕ್ ಹೂಡಾ ಬಲವಾಗಿ ಬಾರಿಸಿದರು. ಚೆಂಡು ಶಾರ್ಟ್ ಕವರ್‌ನಲ್ಲಿ ನಿಂತಿದ್ದ ಫೀಲ್ಡರ್ ಜಗದೀಶ ಸುಚಿತ್ ಕಡೆ ಹಾರಿತು. ಸುಚಿತ್ ತಡಮಾಡದೆ ಗಾಳಿಯಲ್ಲಿ ಹಾರುವ ಮೂಲಕ ಒಂದು ಕೈಯಿಂದ ಉತ್ತಮ ಕ್ಯಾಚ್ ತೆಗೆದುಕೊಂಡರು.

ಪೂರನ್ ಕ್ಯಾಚ್ ಹಿಡಿದ ಸಂದೀಪ್ ಶರ್ಮಾ ಅದೇ ಸಮಯದಲ್ಲಿ, ಇದಕ್ಕೂ ಮುನ್ನ, ಸಂದೀಪ್ ಶರ್ಮಾ ಕೂಡ ಪಂಜಾಬ್‌ನ ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಅವರನ್ನು ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಔಟ್ ಮಾಡಿದರು. ಪೂರಾನ್, ಸಂದೀಪ್ ಶರ್ಮಾ ಎಸೆತಕ್ಕೆ ಒಂದು ಸಿಕ್ಸರ್ ಬಾರಿಸಿದರು. ಮುಂದಿನ ಎಸೆತದಲ್ಲಿ, ಅವರು ಮತ್ತೊಂದು ತ್ವರಿತ ಹೊಡೆತವನ್ನು ಆಡಿದರು. ಚೆಂಡು ಅತಿ ವೇಗದಲ್ಲಿ ಬರುತ್ತಿರುವುದನ್ನು ನೋಡಿ, ಬಹುಶಃ ಸಂದೀಪ್ ಅದನ್ನು ಹಿಡಿಯಲು ಪ್ರಯತ್ನಿಸುವುದಿಲ್ಲ ಎಂದು ತೋರುತ್ತಿತ್ತು. ಆದಾಗ್ಯೂ, ಅವರು ತನ್ನ ಕೈಚಾಚಿ ರಬಸವಾಗಿ ಬರುತ್ತಿದ್ದ ಚೆಂಡನ್ನು ಹಿಡಿದರು. ರಬಸವಾಗಿ ಬರುತ್ತಿದ್ದ ಚೆಂಡನ್ನು ಹಿಡಿದ ಕಾರಣ, ಸಂದೀಪ್ ಕೈಗೂ ಗಾಯವಾಯಿತು.

ಪಂಜಾಬ್ ಕಿಂಗ್ಸ್ಗೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಟಾಸ್ ಸೋತ ನಂತರ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಏಳು ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಸನ್ ರೈಸರ್ಸ್ ತಂಡ ಏಳು ವಿಕೆಟ್ ನಷ್ಟಕ್ಕೆ 120 ರನ್ ಗಳಿಸಲಷ್ಟೇ ಶಕ್ತವಾಯಿತು ಮತ್ತು ಪಂದ್ಯವನ್ನು ಕಳೆದುಕೊಂಡಿತು. ಪಂಜಾಬ್ ಪರವಾಗಿ ರವಿ ವಿಷ್ಣೋಯಿ (24 ರನ್) ಮೂರು ಮತ್ತು ಮೊಹಮ್ಮದ್ ಶಮಿ (14 ರನ್) ಎರಡು ವಿಕೆಟ್ ಪಡೆದರು. ಈ ಸೋಲಿನೊಂದಿಗೆ, ಹೈದರಾಬಾದ್ ತಂಡವು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ತಲುಪಿತು ಮತ್ತು ಪ್ಲೇಆಫ್ ರೇಸ್​ನಿಂದ ಹೊರ ಬಿತ್ತು.

ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್