ಕೊನೆಯ ಓವರ್​ನಲ್ಲಿ ಮೂರು ಕ್ಯಾಚ್ ಡ್ರಾಪ್, ಎರಡು ರನ್​ಔಟ್ ಮಿಸ್; ಆದರೂ ಗೆದ್ದ ಹೈದರಾಬಾದ್

ನೆಯ ಓವರ್​ನಲ್ಲಿ ಮೂರು ಕ್ಯಾಚ್ ಡ್ರಾಪ್ ಮಾಡಿ, ಎರಡು ರನ್​ಔಟ್ ಮಿಸ್​ ಮಾಡಿತು ಹೈದರಾಬಾದ್ ತಂಡ. ಆದಾಗ್ಯೂ ಎಸ್​ಎಚ್​ಆರ್ ತಂಡ ಗೆಲುವಿನ ನಗು ಬೀರಿತು. ಜಯದೇವ್ ಉನಾದ್ಕಟ್ ಅವರು ಕೊನೆಯ ಓವರ್​ನಲ್ಲಿ ನೀಡಿದ್ದು ಬರೋಬ್ಬರಿ 26 ರನ್​ಗಳು.

ಕೊನೆಯ ಓವರ್​ನಲ್ಲಿ ಮೂರು ಕ್ಯಾಚ್ ಡ್ರಾಪ್, ಎರಡು ರನ್​ಔಟ್ ಮಿಸ್; ಆದರೂ ಗೆದ್ದ ಹೈದರಾಬಾದ್
ಎಸ್ಆರ್​ಎಚ್​

Updated on: Apr 10, 2024 | 8:48 AM

ಸನ್​ ರೈಸರ್ಸ್ ಹೈದರಾಬಾದ್ (SRH) ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಸಾಕಷ್ಟು ರೋಚಕವಾಗಿತ್ತು. ಕೊನೆಯ ಓವರ್​ನಲ್ಲಿ ಮೂರು ಕ್ಯಾಚ್ ಡ್ರಾಪ್ ಮಾಡಿ, ಎರಡು ರನ್​ಔಟ್ ಮಿಸ್​ ಮಾಡಿತು ಹೈದರಾಬಾದ್ ತಂಡ. ಆದಾಗ್ಯೂ ಎಸ್​ಎಚ್​ಆರ್ ತಂಡ ಗೆಲುವಿನ ನಗು ಬೀರಿತು. ಜಯದೇವ್ ಉನಾದ್ಕಟ್ ಅವರು ಕೊನೆಯ ಓವರ್​ನಲ್ಲಿ ನೀಡಿದ್ದು ಬರೋಬ್ಬರಿ 26 ರನ್​ಗಳು. ಕೊನೆಯ ಓವರ್​ನಲ್ಲಿ ಏನೆಲ್ಲ ಡ್ರಾಮಾ ನಡೆಯಿತು ಎನ್ನುವ ವಿವರ ಇಲ್ಲಿದೆ.

ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ಆರಂಭದಲ್ಲಿ ಮುಗ್ಗರಿಸಿತು. ಹೆಡ್ 15 ಬಾಲ್​ಗೆ 21 ರನ್​ ಬಾರಿಸಿದರು. ಮಕ್ರಮ್ ಡಕ್​ಗೆ ಔಟ್ ಆದರು. ಅಭಿಷೇಕ್ ಶರ್ಮಾ 16 ರನ್ ಗಳಿಸಿದರು. ನಿತಿಶ್ ರೆಡ್ಡಿ ತಂಡಕ್ಕೆ ಆಸರೆ ಆದರು. 37 ಬಾಲ್​ಗೆ 64 ರನ್ ಗಳಿಸಿದರು. ಕೊನೆಗೆ 182 ರನ್​ ಗಳಿಸಿದ ಹೈದರಾಬಾದ್ ತಂಡ, 183 ರನ್​ಗಳ ಟಾರ್ಗೆಟ್ ನೀಡಿತು. ಬೃಹತ್ ಮೊತ್ತ ಬೆನ್ನು ಹತ್ತಿದ ಪಂಜಾಬ್ ಕೂಡ ಕಳಪೆ ಆರಂಭ ಕಂಡಿತತು. ಧವನ್ 14 ರನ್ ಗಳಿಸಿ ಔಟ್ ಆದರೆ, ಬ್ರೇಸ್ಟೋ ಸೊನ್ನೆ ಸುತ್ತಿದರು. ಸ್ಯಾಮ್ ಕರನ್, ರಾಜಾ ಕೂಡ ದೊಡ್ಡ ಮೊತ್ತ ಕಲೆ ಹಾಕಲಿಲ್ಲ. 19 ಓವರ್​ಗಳು ಪೂರ್ಣಗೊಳ್ಳುವಾಗ ಪಂಜಾಬ್​ ತಂಡ 154 ರನ್​ಗೆ 6 ವಿಕೆಟ್​ಗಳನ್ನು ಕಳೆದುಕೊಂಡಿತ್ತು.

ಇದನ್ನೂ ಓದಿ: IPL 2024: ರಣರೋಚಕ ಹೋರಾಟದಲ್ಲಿ ಸನ್​ರೈಸರ್ಸ್ ಹೈದರಾಬಾದ್​​ಗೆ ರೋಚಕ ಜಯ

ಕೊನೆಯ ಓವರ್​ನಲ್ಲಿ ಬೇಕಾಗಿದ್ದು 29 ರನ್​ಗಳು. ಉನಾದ್ಕಟ್ ಅವರು ಬೌಲಿಂಗ್​ ಇಳಿದರು. ಮೊದಲ ಬಾಲ್ ಕ್ಯಾಚ್ ಬಿಟ್ಟಿದ್ದರಿಂದ ಸಿಕ್ಸ್ ಹೋಯಿತು. ನಂತರ ಎರಡು ವೈಡ್​ಗಳನ್ನು ಹಾಕಿದರು ಉನಾದ್ಕಟ್. ಎರಡನೇ ಬಾಲ್​ಗೆ ಹೊಡೆದ ಶಾಟ್ ಕೂಡ ಸಿಕ್ಸ್​ ಗಡಿಯಲ್ಲಿ ಫೀಲ್ಡರ್​ನ ಕೈಗೆ ಸಿಗದೆ ಸಿಕ್ಸ್ ಹೋಯಿತು. ನಂತರ ಮೂರು ಹಾಗೂ ನಾಲ್ಕನೇ ಬಾಲ್​ಗೆ ತಲಾ ಎರಡು ರನ್​ಗಳು ಬಂದವು. ನಾಲ್ಕನೇ ಬಾಲ್​ನಲ್ಲಿ ಸುಲಭ ಕ್ಯಾಚ್​ನ ಕೈ ಚೆಲ್ಲಲಾಯಿತು. ಅಷ್ಟೇ ಅಲ್ಲ, ಮೂರು ಹಾಗೂ ನಾಲ್ಕನೇ ಬಾಲ್​ನಲ್ಲಿ ರನೌಟ್ ಅವಕಾಶ ಇತ್ತು. ಅದು ಕೂಡ ಕೈತಪ್ಪಿತು. ನಂತರ ಮತ್ತೊಂದು ವೈಡ್ ಬಾಲ್ ಆಯಿತು. ಐದನೇ ಬಾಲ್​ಗೆ ಒಂದು ರನ್ ಹಾಗೂ ಆರನೇ ಬಾಲ್​ಗೆ ಸಿಕ್ಸ್ ಬಂತು. ಈ ಮೂಲಕ ಹೈದರಾಬಾದ್ 2 ರನ್​ಗಳಿಂದ ಗೆಲುವು ಕಂಡಿತು. ಅಶುತೋಷ್ ಶರ್ಮಾ ಅವರು 15 ಬಾಲ್​ಗೆ 33 ರನ್ ಹೊಡೆದರೂ ಗೆಲುವಿನ ನಗೆ ಬೀರಲು ಸಾಧ್ಯವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us