AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಭಾಗಶಃ ತಂಡಗಳ ಒತ್ತಾಯ; ಆರ್​ಸಿಬಿಗೆ ಎದುರಾಯ್ತು ಸಂಕಷ್ಟ..!

IPL 2024: ಮುಂದಿನ ವರ್ಷ ನಡೆಯಲ್ಲಿರುವ ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಸಂಖ್ಯೆಯನ್ನು 4 ರ ಬದಲು 8 ಕ್ಕೆ ಏರಿಸಬೇಕು ಎಂದು ಭಾಗಶಃ ಫ್ರಾಂಚೈಸಿಗಳು ಬಿಸಿಸಿಐ ಮುಂದೆ ಬೇಡಿಕೆ ಇಟ್ಟಿವೆ ಎಂದು ವರದಿಯಾಗಿದೆ.

ಪೃಥ್ವಿಶಂಕರ
|

Updated on: Apr 10, 2024 | 6:07 PM

ಐಪಿಎಲ್ 17ನೇ ಆವೃತ್ತಿಯ ಮೊದಲಾರ್ಧ ಮುಗಿದಿದ್ದು, ಇದೀಗ ದ್ವಿತೀಯಾರ್ಧ ಆರಂಭವಾಗಿದೆ. ಇಲ್ಲಿಯವರೆಗೆ ನಡೆದಿರುವ ಎಲ್ಲಾ ಪಂದ್ಯಗಳು ಅಭಿಮಾನಿಗಳನ್ನು ರಂಜಿಸಲು ಯಶಸ್ವಿಯಾಗಿವೆ. ಈ ನಡುವೆ ಮುಂದಿನ ಐಪಿಎಲ್ ಬಗ್ಗೆ ಚರ್ಚೆ ಶುರುವಾಗಿದ್ದು, ಮುಂದಿನ ವರ್ಷ ನಡೆಯಲ್ಲಿರುವ ಮೆಗಾ ಹರಾಜಿನ ಬಗ್ಗೆ ಬಿಗ್ ಅಪ್​ಡೇಟ್ ಹೊರಬಿದ್ದಿದೆ.

ಐಪಿಎಲ್ 17ನೇ ಆವೃತ್ತಿಯ ಮೊದಲಾರ್ಧ ಮುಗಿದಿದ್ದು, ಇದೀಗ ದ್ವಿತೀಯಾರ್ಧ ಆರಂಭವಾಗಿದೆ. ಇಲ್ಲಿಯವರೆಗೆ ನಡೆದಿರುವ ಎಲ್ಲಾ ಪಂದ್ಯಗಳು ಅಭಿಮಾನಿಗಳನ್ನು ರಂಜಿಸಲು ಯಶಸ್ವಿಯಾಗಿವೆ. ಈ ನಡುವೆ ಮುಂದಿನ ಐಪಿಎಲ್ ಬಗ್ಗೆ ಚರ್ಚೆ ಶುರುವಾಗಿದ್ದು, ಮುಂದಿನ ವರ್ಷ ನಡೆಯಲ್ಲಿರುವ ಮೆಗಾ ಹರಾಜಿನ ಬಗ್ಗೆ ಬಿಗ್ ಅಪ್​ಡೇಟ್ ಹೊರಬಿದ್ದಿದೆ.

1 / 8
ವಾಸ್ತವವಾಗಿ ಮುಂದಿನ ವರ್ಷ ಅಂದರೆ 2025 ರ ಐಪಿಎಲ್ ಆರಂಭಕ್ಕೂ ಮುನ್ನ ಮೆಗಾ ಹರಾಜು ನಡೆಯಲ್ಲಿದೆ. ಇದರರ್ಥ ಎಲ್ಲಾ ತಂಡಗಳು ಕೇವಲ 4 ಆಟಗಾರರನ್ನು ಮಾತ್ರ ತಮ್ಮಲ್ಲಿ ಉಳಿಸಿಕೊಂಡು ಮಿಕ್ಕವರೆಲ್ಲರನ್ನು ತಂಡದಿಂದ ಬಿಡುಗಡೆ ಮಾಡಬೇಕು.

ವಾಸ್ತವವಾಗಿ ಮುಂದಿನ ವರ್ಷ ಅಂದರೆ 2025 ರ ಐಪಿಎಲ್ ಆರಂಭಕ್ಕೂ ಮುನ್ನ ಮೆಗಾ ಹರಾಜು ನಡೆಯಲ್ಲಿದೆ. ಇದರರ್ಥ ಎಲ್ಲಾ ತಂಡಗಳು ಕೇವಲ 4 ಆಟಗಾರರನ್ನು ಮಾತ್ರ ತಮ್ಮಲ್ಲಿ ಉಳಿಸಿಕೊಂಡು ಮಿಕ್ಕವರೆಲ್ಲರನ್ನು ತಂಡದಿಂದ ಬಿಡುಗಡೆ ಮಾಡಬೇಕು.

2 / 8
ಹೀಗೆ ತಂಡದಿಂದ ಬಿಡುಗಡೆಯಾದ ಆಟಗಾರರು ಮತ್ತೊಮ್ಮೆ ಹರಾಜಿಗೆ ಬರಲಿದ್ದಾರೆ. ಅಲ್ಲಿ ಕಳೆದ ಆವೃತ್ತಿಗೆ ಅಧಿಕ ಮೊತ್ತ ಅಥವಾ ಕಡಿಮೆ ಮೊತ್ತ ಪಡೆಯಲ್ಲಿದ್ದಾರೆ. ಇದರೊಂದಿಗೆ ಅವರು ಹೊಸ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆದರೆ ಇದೀಗ ಭಾಗಶಃ ಪ್ರಾಂಚೈಸಿಗಳು ಬಿಸಿಸಿಐ ಮುಂದೆ ಒಂದೇ ಬೇಡಿಕೆ ಇಟ್ಟಿವೆ.

ಹೀಗೆ ತಂಡದಿಂದ ಬಿಡುಗಡೆಯಾದ ಆಟಗಾರರು ಮತ್ತೊಮ್ಮೆ ಹರಾಜಿಗೆ ಬರಲಿದ್ದಾರೆ. ಅಲ್ಲಿ ಕಳೆದ ಆವೃತ್ತಿಗೆ ಅಧಿಕ ಮೊತ್ತ ಅಥವಾ ಕಡಿಮೆ ಮೊತ್ತ ಪಡೆಯಲ್ಲಿದ್ದಾರೆ. ಇದರೊಂದಿಗೆ ಅವರು ಹೊಸ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆದರೆ ಇದೀಗ ಭಾಗಶಃ ಪ್ರಾಂಚೈಸಿಗಳು ಬಿಸಿಸಿಐ ಮುಂದೆ ಒಂದೇ ಬೇಡಿಕೆ ಇಟ್ಟಿವೆ.

3 / 8
ಅದೆನೆಂದರೆ ಮುಂದಿನ ವರ್ಷ ನಡೆಯಲ್ಲಿರುವ ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಸಂಖ್ಯೆಯನ್ನು 4 ರ ಬದಲು 8 ಕ್ಕೆ ಏರಿಸಬೇಕು ಎಂದು ಭಾಗಶಃ ಫ್ರಾಂಚೈಸಿಗಳು ಬಿಸಿಸಿಐ ಮುಂದೆ ಬೇಡಿಕೆ ಇಟ್ಟಿವೆ ಎಂದು ವರದಿಯಾಗಿದೆ.

ಅದೆನೆಂದರೆ ಮುಂದಿನ ವರ್ಷ ನಡೆಯಲ್ಲಿರುವ ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಸಂಖ್ಯೆಯನ್ನು 4 ರ ಬದಲು 8 ಕ್ಕೆ ಏರಿಸಬೇಕು ಎಂದು ಭಾಗಶಃ ಫ್ರಾಂಚೈಸಿಗಳು ಬಿಸಿಸಿಐ ಮುಂದೆ ಬೇಡಿಕೆ ಇಟ್ಟಿವೆ ಎಂದು ವರದಿಯಾಗಿದೆ.

4 / 8
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಬಿಸಿಸಿಐ ಕೂಡ ಫ್ರಾಂಚೈಸಿಗಳ ಈ ಮನವಿಗೆ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಹೀಗಾಗಿ ಈಗಾಗಲೇ ಬಲಿಷ್ಠ ತಂಡವನ್ನು ಕಟ್ಟಿಕೊಂಡಿರುವ ಮುಂಬೈ, ಚೆನ್ನೈ, ಹೈದರಾಬಾದ್, ರಾಜಸ್ಥಾನ್, ಕೆಕೆಆರ್ ತಂಡಗಳು ತಮಗೆ ಬೇಕಾದ 8 ಆಟಗಾರನನ್ನು ತಮ್ಮಲ್ಲೇ ಉಳಿಸಿಕೊಳ್ಳಲಿವೆ.

ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಬಿಸಿಸಿಐ ಕೂಡ ಫ್ರಾಂಚೈಸಿಗಳ ಈ ಮನವಿಗೆ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಹೀಗಾಗಿ ಈಗಾಗಲೇ ಬಲಿಷ್ಠ ತಂಡವನ್ನು ಕಟ್ಟಿಕೊಂಡಿರುವ ಮುಂಬೈ, ಚೆನ್ನೈ, ಹೈದರಾಬಾದ್, ರಾಜಸ್ಥಾನ್, ಕೆಕೆಆರ್ ತಂಡಗಳು ತಮಗೆ ಬೇಕಾದ 8 ಆಟಗಾರನನ್ನು ತಮ್ಮಲ್ಲೇ ಉಳಿಸಿಕೊಳ್ಳಲಿವೆ.

5 / 8
ಮುಂಬರುವ ಹರಾಜಿನಲ್ಲಿ ಉಳಿದಂತೆ ತಮಗೆ ಬೇಕಾದ ಆಟಗಾರನನ್ನು ಖರೀದಿಸಲಿವೆ. ಈ ನಿಯಮ ಜಾರಿಗೆ ಬಂದರೆ ಕೆಲವು ತಂಡಗಳಿಗೆ ಇದು ವರವಾದರೆ ಇನ್ನು ಕೆಲವು ತಂಡಗಳಿಗೆ ಇದು ಶಾಪವಾಗಲಿದೆ. ಅದರಲ್ಲೂ ಯಾವ ವಿಭಾಗದಲ್ಲೂ ಬಲಿಷ್ಠವಾಗಿರದ ಆರ್​ಸಿಬಿ ಕಥೆ ಇನ್ನು ಹೇಳ ತೀರದಾಗುತ್ತದೆ.

ಮುಂಬರುವ ಹರಾಜಿನಲ್ಲಿ ಉಳಿದಂತೆ ತಮಗೆ ಬೇಕಾದ ಆಟಗಾರನನ್ನು ಖರೀದಿಸಲಿವೆ. ಈ ನಿಯಮ ಜಾರಿಗೆ ಬಂದರೆ ಕೆಲವು ತಂಡಗಳಿಗೆ ಇದು ವರವಾದರೆ ಇನ್ನು ಕೆಲವು ತಂಡಗಳಿಗೆ ಇದು ಶಾಪವಾಗಲಿದೆ. ಅದರಲ್ಲೂ ಯಾವ ವಿಭಾಗದಲ್ಲೂ ಬಲಿಷ್ಠವಾಗಿರದ ಆರ್​ಸಿಬಿ ಕಥೆ ಇನ್ನು ಹೇಳ ತೀರದಾಗುತ್ತದೆ.

6 / 8
ಮುಂಬರುವ ಮೆಗಾ ಹರಾಜಿಗೂ ಮುನ್ನ ಆರ್​ಸಿಬಿ ಕೇವಲ 2 ರಿಂದ 3 ಆಟಗಾರನನ್ನು ತನ್ನಲ್ಲಿ ಉಳಿಸಿಕೊಂಡು ಮಿಕ್ಕವರನ್ನು ತಂಡದಿಂದ ಬಿಡುಗಡೆ ಮಾಡಿ, ಆ ನಂತರ ಮೆಗಾ ಹರಾಜಿನಲ್ಲಿ ಅವಶ್ಯಕ ಆಟಗಾರರನ್ನು ಖರೀದಿಸುವ ಮೂಲಕ ಬಲಿಷ್ಠ ತಂಡವನ್ನು ಕಟ್ಟುವ ಇರಾದೆಯಲ್ಲಿತ್ತು.

ಮುಂಬರುವ ಮೆಗಾ ಹರಾಜಿಗೂ ಮುನ್ನ ಆರ್​ಸಿಬಿ ಕೇವಲ 2 ರಿಂದ 3 ಆಟಗಾರನನ್ನು ತನ್ನಲ್ಲಿ ಉಳಿಸಿಕೊಂಡು ಮಿಕ್ಕವರನ್ನು ತಂಡದಿಂದ ಬಿಡುಗಡೆ ಮಾಡಿ, ಆ ನಂತರ ಮೆಗಾ ಹರಾಜಿನಲ್ಲಿ ಅವಶ್ಯಕ ಆಟಗಾರರನ್ನು ಖರೀದಿಸುವ ಮೂಲಕ ಬಲಿಷ್ಠ ತಂಡವನ್ನು ಕಟ್ಟುವ ಇರಾದೆಯಲ್ಲಿತ್ತು.

7 / 8
ಆದರೀಗ 8 ಆಟಗಾರನನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು ಎಂಬ ನಿಯಮ ಜಾರಿಗೆ ಬಂದರೆ, ಆರ್​ಸಿಬಿಗೆ ಬೇಕಾದ ಆಟಗಾರರು ಹರಾಜಿಗೆ ಬರಲು ಸಾಧ್ಯವಿಲ್ಲ. ಪ್ರಮುಖ ಆಟಗಾರನನ್ನು ಫ್ರಾಂಚೈಸಿಗಳು ತಮ್ಮಲ್ಲೇ ಉಳಿಸಿಕೊಳ್ಳುವುದರಿಂದ ಆರ್​ಸಿಬಿ ಮತ್ತೊಮ್ಮೆ ಅನಗತ್ಯ ಆಟಗಾರರ ಮೊರೆ ಹೋಗಬೇಕಾಗುತ್ತದೆ. ಇದರ ಪರಿಣಾಮವಾಗಿ ತಂಡ ಮತ್ತೆ ಕಳಪೆ ಆಟದಿಂದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

ಆದರೀಗ 8 ಆಟಗಾರನನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು ಎಂಬ ನಿಯಮ ಜಾರಿಗೆ ಬಂದರೆ, ಆರ್​ಸಿಬಿಗೆ ಬೇಕಾದ ಆಟಗಾರರು ಹರಾಜಿಗೆ ಬರಲು ಸಾಧ್ಯವಿಲ್ಲ. ಪ್ರಮುಖ ಆಟಗಾರನನ್ನು ಫ್ರಾಂಚೈಸಿಗಳು ತಮ್ಮಲ್ಲೇ ಉಳಿಸಿಕೊಳ್ಳುವುದರಿಂದ ಆರ್​ಸಿಬಿ ಮತ್ತೊಮ್ಮೆ ಅನಗತ್ಯ ಆಟಗಾರರ ಮೊರೆ ಹೋಗಬೇಕಾಗುತ್ತದೆ. ಇದರ ಪರಿಣಾಮವಾಗಿ ತಂಡ ಮತ್ತೆ ಕಳಪೆ ಆಟದಿಂದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

8 / 8
Follow us
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್