AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup: ಟಿ-20 ವಿಶ್ವಕಪ್​ಗೆ ಹಾರ್ದಿಕ್ ಆಯ್ಕೆ ಅನುಮಾನ! ಪಾಂಡ್ಯ ಸ್ಥಾನಕ್ಕೆ ಈ ಮೂವರು ಪ್ರಬಲ ಸ್ಪರ್ಧಿಗಳು

T20 World Cup: ಶ್ರೀಲಂಕಾ ಪ್ರವಾಸದಲ್ಲಿ ದೀಪಕ್ ಚಹಾರ್ ಅರ್ಧಶತಕವಾಗಲಿ ಅಥವಾ ಲಾರ್ಡ್ಸ್‌ನಲ್ಲಿ ಶಮಿ-ಬುಮ್ರಾ ಜೋಡಿಯ ಬಿರುಗಾಳಿಯ ಜೊತೆಯಾಟವಾಗಿರಲಿ. ಆದ್ದರಿಂದ, ಹಾರ್ದಿಕ್ ಬದಲಿಗೆ ಇತರರಿಗೆ ಅವಕಾಶ ಸಿಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

T20 World Cup: ಟಿ-20 ವಿಶ್ವಕಪ್​ಗೆ ಹಾರ್ದಿಕ್ ಆಯ್ಕೆ ಅನುಮಾನ! ಪಾಂಡ್ಯ ಸ್ಥಾನಕ್ಕೆ ಈ ಮೂವರು ಪ್ರಬಲ ಸ್ಪರ್ಧಿಗಳು
ಹಾರ್ದಿಕ್ ಪಾಂಡ್ಯ
TV9 Web
| Updated By: ಪೃಥ್ವಿಶಂಕರ|

Updated on: Aug 18, 2021 | 5:23 PM

Share

ಅಂತರಾಷ್ಟ್ರೀಯ ಟ್ವೆಂಟಿ -20 ವಿಶ್ವಕಪ್‌ಗಾಗಿ ದಿನಾಂಕಗಳನ್ನು ಕೆಲವು ದಿನಗಳ ಹಿಂದೆ ಐಸಿಸಿ ಘೋಷಿಸಿತು. ನಂತರ ಐಸಿಸಿ ಮಂಗಳವಾರ (ಆಗಸ್ಟ್ 17) ಪಂದ್ಯದ ವೇಳಾಪಟ್ಟಿಯನ್ನು ಪ್ರಕಟಿಸಿತು. ಆದ್ದರಿಂದ ಈಗ ಎಲ್ಲಾ ತಂಡಗಳು ಭರದ ಸಿದ್ದತೆಯಲ್ಲಿ ತೊಡಗಿವೆ. ಭಾರತವು ಪ್ರಸ್ತುತ ಹಲವಾರು ಉತ್ತಮ ಗುಣಮಟ್ಟದ ಆಟಗಾರರನ್ನು ಹೊಂದಿದೆ. ಹೀಗಾಗಿ ಅಂತಿಮ 11 ರಲ್ಲಿ ಯಾರನ್ನು ಸೇರಿಸಬೇಕು? ಈ ಪ್ರಶ್ನೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಿದೆ. ಏತನ್ಮಧ್ಯೆ, ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೆಲ ಸಮಯದಿಂದ ಫಾರ್ಮ್ ನಿಂದ ಹೊರಗುಳಿದಿದ್ದು, ತಂಡದಲ್ಲಿ ತನ್ನ ಸ್ಥಾನಕ್ಕೆ ಅಪಾಯ ತಂದೊಡ್ಡಿದ್ದಾರೆ.

ಕೆಲವು ಹೊಸ ಆಲ್‌ರೌಂಡರ್‌ಗಳು ಅವರನ್ನು ಬದಲಿಸಲು ಸಿದ್ಧರಾಗಿರುವುದರಿಂದ ಹಾರ್ದಿಕ್ ಸ್ಥಾನ ಅಪಾಯದಲ್ಲಿದೆ. ಇತ್ತೀಚೆಗೆ, ಟೀಂ ಇಂಡಿಯಾದ ಬೌಲರ್​ಗಳು ಸಹ ಕೊನೆಯವರೆಗೂ ಬ್ಯಾಟಿಂಗ್ ಮಾಡುವ ಸಾಮಥ್ರ್ಯ ಹೊಂದಿದ್ದಾರೆ ಎಂಬುದು ಸಾಭೀತಾಗಿದೆ. ಶ್ರೀಲಂಕಾ ಪ್ರವಾಸದಲ್ಲಿ ದೀಪಕ್ ಚಹಾರ್ ಅರ್ಧಶತಕವಾಗಲಿ ಅಥವಾ ಲಾರ್ಡ್ಸ್‌ನಲ್ಲಿ ಶಮಿ-ಬುಮ್ರಾ ಜೋಡಿಯ ಬಿರುಗಾಳಿಯ ಜೊತೆಯಾಟವಾಗಿರಲಿ. ಆದ್ದರಿಂದ, ಹಾರ್ದಿಕ್ ಬದಲಿಗೆ ಇತರರಿಗೆ ಅವಕಾಶ ಸಿಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಈ ಮೂವರು ಆಲ್‌ರೌಂಡರ್‌ಗಳು ಹಾರ್ದಿಕ್​ನಂತೆ ಬೌಲಿಂಗ್ ಮಾಡಿ ಬ್ಯಾಟ್​ ಮಾಡುವವರಲ್ಲಿ ಶಿವಂ ದುಬೆ ಮೊದಲಿಗರಾಗಿದ್ದಾರೆ. ಸ್ಥಳೀಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶಿವಂ, ಆರ್​ಸಿಬಿ ಪರ ಐಪಿಎಲ್​ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಪ್ರಸ್ತುತ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದಾರೆ ಮತ್ತು ಮುಂಬರುವ ಐಪಿಎಲ್ ಅವರ ಭವಿಷ್ಯವನ್ನು ನಿರ್ಧರಿಸುತ್ತದೆ.

ಶಿವಂ ನಂತರ, ಶಾರ್ದೂಲ್ ಠಾಕೂರ್ ಪ್ರಬಲ ಸ್ಪರ್ಧಿಯಾಗಿದ್ದಾರೆ. ಬೌಲರ್ ಆಗಿ ತಂಡದಲ್ಲಿರುವ ಶಾರ್ದೂಲ್ ಬ್ಯಾಟಿಂಗ್​ನಲ್ಲೂ ಅದ್ಭುತ ಪ್ರದರ್ಶನ ನೀಡುತ್ತಾರೆ. ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಪಂದ್ಯದಲ್ಲಿ ಅವರು ಇದನ್ನು ಸಾಬೀತುಪಡಿಸಿದ್ದರು. ಅವರು ಇತ್ತೀಚೆಗೆ 34.50 ರ ಸರಾಸರಿಯಲ್ಲಿ 69 ರನ್​ಗಳೊಂದಿಗೆ ಅಂತರಾಷ್ಟ್ರೀಯ ಟಿ 20 ಗೆ ಪಾದಾರ್ಪಣೆ ಮಾಡಿದ್ದಾರೆ.

ಶ್ರೀಲಂಕಾ ಪ್ರವಾಸದಲ್ಲಿ ಎಲ್ಲರ ಹೃದಯ ಗೆದ್ದ ದೀಪಕ್ ಚಹಾರ್ ಕೂಡ ಬಲವಾದ ಆಯ್ಕೆಯಾಗಿದ್ದಾರೆ. ಪ್ರಮುಖ ಬೌಲರ್ ದೀಪಕ್, ಶ್ರೀಲಂಕಾ ಪ್ರವಾಸದ ನಿರ್ಣಾಯಕ ಕ್ಷಣದಲ್ಲಿ ಅಮೋಘ ಅರ್ಧಶತಕ ಸಿಡಿಸಿ ಶ್ರೀಲಂಕಾದ ಕೈಯಿಂದ ಗೆಲುವನ್ನು ಕಸಿದುಕೊಂಡರು. ಆದ್ದರಿಂದ ಅವರು ಪಾಂಡ್ಯನಿಗೆ ಉತ್ತಮ ಪರ್ಯಾಯವಾಗಬಹುದು.

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್