Throwback Video: ತೆಂಡೂಲ್ಕರ್​ಗೆ ಬರೀ ಕ್ರಿಕೆಟ್​ ಪಿಚ್​ ಅಷ್ಟೇ ಅಲ್ಲ; ಸಂಗೀತದ ಪಿಚ್​ ಸಹ ಗೊತ್ತಿದೆ ಎಂದು ಮೆಚ್ಚಿಕೊಂಡ ಸೋನು ನಿಗಮ್

Sonu Nigam: ತೆಂಡೂಲ್ಕರ್​ಗೆ ಬರೀ ಕ್ರಿಕೆಟ್​ ಪಿಚ್​ ಅಷ್ಟೇ ಅಲ್ಲ; ಸಂಗೀತದ ಪಿಚ್​ ಸಹ ಗೊತ್ತಿದೆ ಎಂದು ಸಿಂಗರ್​ ಸೋನು ನಿಗಮ್, ತೆಂಡೂಲ್ಕರ್​ ಅವರನ್ನು ಮೆಚ್ಚಿಕೊಂಡಿದ್ದಾರೆ. ಕ್ರಿಕೆಟ್​ ಧಾಟಿಯ ಹಾಡನ್ನು ಸುಶ್ರಾವ್ಯವಾಗಿ ಹಾಡಿರುವ ಸಚಿನ್​, ತಮ್ಮ 24 ವರ್ಷದ ಕ್ರಿಕೆಟ್​ ಜೀವನದಲ್ಲಿ ಸಂಗೀತ ಹಾಸುಹೊಕ್ಕಿದೆ. ಅದು ನನ್ನ ಜೀವಾಳ ಎಂದು ಹೇಳಿಕೊಂಡಿದ್ದಾರೆ.

Throwback Video: ತೆಂಡೂಲ್ಕರ್​ಗೆ ಬರೀ ಕ್ರಿಕೆಟ್​ ಪಿಚ್​ ಅಷ್ಟೇ ಅಲ್ಲ; ಸಂಗೀತದ ಪಿಚ್​ ಸಹ ಗೊತ್ತಿದೆ ಎಂದು ಮೆಚ್ಚಿಕೊಂಡ ಸೋನು ನಿಗಮ್
ಸೋನು ನಿಗಮ್​ ಜೊತೆ ಸಚಿನ್ ತೆಂಡೂಲ್ಕರ್​ ಯುಗಳ ಗೀತೆ ಕೇಳಿ, ನೋಡಿ ಆನಂದಿಸಿ Throwback Video
ಸಾಧು ಶ್ರೀನಾಥ್​ Edited By:

Updated on: Jun 23, 2021 | 12:28 PM

ಕ್ರಿಕೆಟ್​ ಆಟವನ್ನು ಧರ್ಮವೆಂದು ಜಪಿಸುವ ಭಾರತದಲ್ಲಿ ಕ್ರಿಕೆಟ್​ ದೇವರು ಎಂದೇ ಪರಿಗಣಿತರಾಗಿರುವ ಸಚಿನ್ ತೆಂಡೂಲ್ಕರ್​ ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ವಿಡಿಯೋ ಒಂದನ್ನು ಅಪ್​ಲೋಡ್​ ಮಾಡಿದ್ದಾರೆ. ಅದು ತಾಜಾತನದಿಂದ ಕೂಡಿದ್ದು, ಚೇತೋಹಾರಿಯಾಗಿದೆ.

ನಿನ್ನೆ ಜೂನ್​ 22ರಂದು ವಿಶ್ವ ಸಂಗೀತ ದಿನ (World Music Day) ಅಂಗವಾಗಿ ಬಾಲಿವುಡ್​​ ಸಂಗೀತ ಸಾಮ್ರಾಜ್ಞ ಸೋನು ನಿಗಮ್ ಜೊತೆ ಸಚಿನ್ ತೆಂಡೂಲ್ಕರ್​ ಹಾಡಿರುವ ಯುಗಳ ಗೀತೆಯದು. ಆ ವಿಡಿಯೋವನ್ನು ಸಚಿನ್ ತೆಂಡೂಲ್ಕರ್​ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದು, ಶ್ರೋತೃಗಳು ಅದನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಸಂಗೀತ ವಿಡಿಯೋ ವೈರಲ್​ ಆಗಿದೆ.

ತೆಂಡೂಲ್ಕರ್​ಗೆ ಬರೀ ಕ್ರಿಕೆಟ್​ ಪಿಚ್​ ಅಷ್ಟೇ ಅಲ್ಲ; ಸಂಗೀತದ ಪಿಚ್​ ಸಹ ಗೊತ್ತಿದೆ ಎಂದು ಸಿಂಗರ್​ ಸೋನು ನಿಗಮ್, ತೆಂಡೂಲ್ಕರ್​ ಅವರನ್ನು ಮೆಚ್ಚಿಕೊಂಡಿದ್ದಾರೆ. ಕ್ರಿಕೆಟ್​ ಧಾಟಿಯ ಹಾಡನ್ನು ಸುಶ್ರಾವ್ಯವಾಗಿ ಹಾಡಿರುವ ಸಚಿನ್​, ತಮ್ಮ 24 ವರ್ಷದ ಕ್ರಿಕೆಟ್​ ಜೀವನದಲ್ಲಿ ಸಂಗೀತ ಹಾಸುಹೊಕ್ಕಿದೆ. ಅದು ನನ್ನ ಜೀವಾಳ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಸ್ಟಾರ್​ ಸ್ಪೋರ್ಟ್ಸ್​​ 50 ಮಂದಿಯ ಆಯ್ಕೆ ಮಂಡಳಿಯು ಸಚಿನ್ ತೆಂಡೂಲ್ಕರ್​ ಅವರನ್ನು ಸಾರ್ವಕಾಲಿಕ ಶ್ರೇಷ್ಠ (Greatest of All Time -G.O.A.T) ಎಂದು ಪರಿಗಣಿಸಿದೆ ಎಂಬುದು ಗಮನಾರ್ಹ.

ಸೋನು ನಿಗಮ್​ ಜೊತೆ ಸಚಿನ್ ತೆಂಡೂಲ್ಕರ್​ ಯುಗಳ ಗೀತೆ ಕೇಳಿ, ನೋಡಿ ಆನಂದಿಸಿ Throwback Video:

(Throwback Video Sachin Tendulkar Singing with Sonu Nigam Watch Video on instagram)

Virat Kohli: ಸೆಂಚುರಿಗಳ ಸರದಾರ ವಿರಾಟ್​ ಕೊಹ್ಲಿ ಶತಕವೀರ ತೆಂಡೂಲ್ಕರ್​ರ ಈ ಸಾಧನೆ ಮುರಿಯವಲ್ಲಿ ಯಶಸ್ವಿಯಾಗುವರೇ? ವಿಶ್ಲೇಷಣೆ

Published On - 11:40 am, Wed, 23 June 21

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us