AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಮೈದಾನದಲ್ಲೇ ಅಂಪೈರ್​ನ ಮೈಚಳಿ ಬಿಡಿಸಿದ ಕೊಹ್ಲಿ: ನೀವು ಫೀಲ್ಡ್ ಮಾಡಿ, ನಾನು ಅಂಪೈರ್ ಮಾಡ್ತೇನೆ ಎಂದ ವಿರಾಟ್

India vs New Zealand: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಟೆಸ್ಟ್​ನ ಮೂರನೇ ದಿನದಲ್ಲಿ ನ್ಯೂಜಿಲೆಂಡ್ ಬ್ಯಾಟಿಂಗ್ ಇನ್ನಿಂಗ್ಸ್​ ವೇಳೆ ಅಂಪೈರ್ ಸರಿಯಾಗಿ ಗಮನಿಸದೆ ಕೆಟ್ಟ ನಿರ್ಧಾರವೊಂದನ್ನು ಪ್ರಕಟಿಸಿದರು. ಈ ಸಂದರ್ಭ ಸಿಟ್ಟಾದ ವಿರಾಟ್ ಕೊಹ್ಲಿ ಏನು ಹೇಳಿದ್ರು ಕೇಳಿ.

Virat Kohli: ಮೈದಾನದಲ್ಲೇ ಅಂಪೈರ್​ನ ಮೈಚಳಿ ಬಿಡಿಸಿದ ಕೊಹ್ಲಿ: ನೀವು ಫೀಲ್ಡ್ ಮಾಡಿ, ನಾನು ಅಂಪೈರ್ ಮಾಡ್ತೇನೆ ಎಂದ ವಿರಾಟ್
Virat Kohli India vs New Zealand
TV9 Web
| Edited By: |

Updated on: Dec 06, 2021 | 9:38 AM

Share

ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ದ್ವಿತೀಯ ಟೆಸ್ಟ್ ಪಂದ್ಯ ಬಹುತೇಕ ಟೀಮ್ ಇಂಡಿಯಾ (Team India) ಕಡೆ ವಾಲಿದೆ. ಕೊಹ್ಲಿ (Kohli) ಪಡೆಯ ಗೆಲುವಿಗೆ ಕಿವೀಸ್ ಪಡೆಯ ಕೇವಲ 5 ವಿಕೆಟ್​ಗಳಷ್ಟೆ ಬೇಕಿರುವುದು. ಹೀಗಾಗಿ ಇಂದು ಮಧ್ಯಾಹ್ನದ ಹೊತ್ತಿಗೆ ಭಾರತದ ಗೆಲುವು ಖಚಿತವಾಗಲಿದೆ. ಇಂಡೋ-ಕಿವೀಸ್ (IND vs ZN Test) ಟೆಸ್ಟ್ ಸರಣಿಯಲ್ಲಿ ಅಂಪೈರ್​ಗಳ ಕೆಟ್ಟ ತೀರ್ಪಿನಿಂದ ಅನೇಕ ತಪ್ಪುಗಳಾಗಿವೆ. ಈ ಹಿಂದೆ ರಾಂಚಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲೂ ಅಂಪೈರ್​ಗಳು ಮನಬಂದಂತೆ ತೀರ್ಪು ನೀಡುತ್ತಿದ್ದರು. ಎರಡನೇ ಟೆಸ್ಟ್​ನಲ್ಲೂ ಅದೇ ಮುಂದುವರೆದಿದೆ. ಆಟಗಾರರು ಡಿಆರ್​​ಎಸ್ (DRS) ಮೊರೆ ಹೋಗಿ ತಪ್ಪಾದ ನಿರ್ಧಾರವನ್ನು ಸರಿಪಡಿಸಿರುವ ಘಟನೆ ಮುಂಬೈ ಟೆಸ್ಟ್​ನಲ್ಲೂ (Mumbai Test) ನಡೆಯುತ್ತಿದೆ. ಭಾನುವಾರ ಕೂಡ ಅಂಪೈರ್​ಗಳು ಇದೇರೀತಿ ವರ್ತಿಸಿದರು. ಇದರಿಂದ ನಾಯಕ ವಿರಾಟ್ ಕೊಹ್ಲಿ (Virat Kohli) ಸಿಟ್ಟುಗೊಂಡು ಏನು ಹೇಳಿದ್ರು ಕೇಳಿ.

ಮೂರನೇ ದಿನದ ನ್ಯೂಜಿಲೆಂಡ್ ಬ್ಯಾಟಿಂಗ್ ಇನ್ನಿಂಗ್ಸ್​ ವೇಳೆ ಅಂಪೈರ್ ಸರಿಯಾಗಿ ಗಮನಿಸದೆ ಕೆಟ್ಟ ನಿರ್ಧಾರವೊಂದನ್ನು ಪ್ರಕಟಿಸಿದರು. 16ನೇ ಓವರ್​ನ ಬೌಲಿಂಗ್ ಮಾಡಿದ ಅಕ್ಷರ್ ಪಟೇಲ್ ಒಂದು ಬಾಲ್ ಅನ್ನು ಫುಲ್​ಟ್ರಾಸ್ ಹಾಕಿದರು. ಸರಿಯಾಗಿ ನಿಯಂತ್ರಣಕ್ಕೆ ಸಿಗದ ಕಾರಣ ಚೆಂಡನ್ನು ಬ್ಯಾಟರ್ ರಾಸ್ ಟೇಲರ್ ಹಾಗೂ ವಿಕೆಟ್ ಕೀಪರ್ ವೃದ್ದಿಮಾನ್ ಸಾಹ ಇಬ್ಬರೂ ಬಿಟ್ಟರು. ಪರಿಣಾಮ ಬಾಲ್ ವಿಕೆಟ್ ಹಿಂಬದಿಯಿಂದ ಬೌಂಡರಿ ಗೆರೆ ದಾಟಿತು.

ಈ ಸಂದರ್ಭ ಬೈಸ್ ಎಂದು ನಿರ್ಧಾರ ಕೊಡಬೇಕಾದ ಅಂಪೈರ್ ಬೌಂಡರಿ ಎಂದು ಕೈ ತೋರಿಸಿದರು. ಅಷ್ಟಕ್ಕು ಅಲ್ಲಿ ಬ್ಯಾಟ್ ತಾಗಿಯೇ ಇರಲಿಲ್ಲ. ಆದರೂ ಬ್ಯಾಟರ್ ಖಾತೆಗೆ 4 ರನ್ ಸೇರಿಸಿದರು. ಇದರಿಂದ ಕೋಪಗೊಂಡ ವಿರಾಟ್ ಕೊಹ್ಲಿ ನಗುತ್ತಲೇ “ಈ ಅಂಪೈರ್​ಗಳು ಏನು ಮಾಡುತ್ತಿದ್ದಾರೆ?, ನಾನು ನಿಮ್ಮ ಜಾಗಕ್ಕೆ ಬರುತ್ತೇನೆ, ನೀವು ಇಲ್ಲಿ ಫೀಲ್ಡಿಂಗ್​ಗೆ ಬನ್ನಿ” ಎಂಬ ಅರ್ಥದಲ್ಲಿ ಹಿಂದಿಯಲ್ಲಿ ಹೇಳಿದ್ದಾರೆ. ಇದು ಸ್ಟಂಪ್​ ಮೈಕ್​ನಲ್ಲಿ ಕೇಳಿಸಿದೆ. ಸದ್ಯ ಕೊಹ್ಲಿ ಈ ರೀತಿ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಸಂಪೂರ್ಣ ಬಿಗಿ ಹಿಡಿತ ಸಾಧಿಸಿದೆ. ಇನ್ನೂ 2 ದಿನಗಳ ಆಟ ಬಾಕಿ ಉಳಿದಿರುವ ನಿರ್ಣಾಯಕ ಪಂದ್ಯವನ್ನು ಮೂರೂವರೆ ದಿನಗಳಲ್ಲೇ ಗೆಲ್ಲುವ ಅವಕಾಶ ಕೊಹ್ಲಿ ಪಡೆಯ ಮುಂದಿದೆ. ಸೋಮವಾರ ಉಳಿದ 5 ವಿಕೆಟ್ ಕಬಳಿಸಿ ಸರಣಿ ವಶಪಡಿಸಿಕೊಳ್ಳುವತ್ತ ಟೀಮ್ ಇಂಡಿಯಾ ದಿಟ್ಟ ಹೆಜ್ಜೆ ಇಟ್ಟಿದೆ. ಸದ್ಯ ಭಾರತ ನೀಡಿದ 540 ಗುರಿ ಬೆನ್ನಟ್ಟಿರುವ ನ್ಯೂಜಿಲೆಂಡ್, ಮೂರನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 138 ರನ್ ಪೇರಿಸಿದ್ದು, ಜಯ ದಾಖಲಿಸಲು ಇನ್ನೂ 400 ರನ್ ಗಳಿಸಬೇಕಿದೆ.

IND vs NZ 2nd Test, Day 3 LIVE Score

Ravichandran Ashwin: ಒಂದೇ ದಿನ ರವಿಚಂದ್ರನ್ ಅಶ್ವಿನ್ ಖಾತೆಗೆ ಸೇರಿತು ಬರೋಬ್ಬರಿ 4 ದಾಖಲೆಗಳು

(Virat Kohli Angry and take a swipe at an umpire saying he is willing to swap places with him in IND vs NZ 2nd Test)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ