AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿಗೆ ತಮ್ಮ ಆಟಗಾರರನ್ನು ಬೆಂಬಲಿಸುವ ಪರಿ ಎಣಿಕೆಗೆ ನಿಲುಕದ್ದು: ಬ್ರೆಟ್ ಲೀ

ಆಸ್ಟ್ರೇಲಿಯನ್ನರು ಯಾರನ್ನೂ ಸುಮ್ಮನೆ ಹೊಗಳುವುದಿಲ್ಲ, ಕ್ರಿಕೆಟ್​ನಲ್ಲಂತೂ ಅಂಥ ಉದಾಹರಣೆಗಳು ತೀರಾ ಕಡಿಮೆ. ಆದರೆ ಇಂಡಿಯನ್ ಪ್ರಿಮೀಯರ್ ಲೀಗ್ ಶುರುವಾದಾಗಿನಿಂದ ಅವರ ಮನೋಭಾವನೆ ಬದಲಾಗಿದೆ. ಐಪಿಎಲ್ ಸೀಸನ್​ಗಳಲ್ಲಿ ಅನಲಿಸ್ಟ್ ಆಗಿ ಕೆಲಸ ಮಾಡುವ ಆಸ್ಟ್ರೇಲಿಯಾದ ಬ್ರೆಟ್ ಲೀ, ಚೆನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ತಂಡದ ಆಟಗಾರರ ಮೇಲಿಡುವ ನಂಬಿಕೆ ಮತ್ತು ವೈಫಲ್ಯಗಳ ಹೊರತಾಗಿಯೂ ಅವರನ್ನು ಹುರಿದುಂಬಿಸಿ ಬೆಂಬಲಿಸುವುದನ್ನು ಮನಸಾರೆ ಕೊಂಡಾಡಿದ್ದಾರೆ. ಸಿಎಸ್​ಕೆ ಓಪನರ್ ಶೇನ್ ವಾಟ್ಸನ್ ನಿಸ್ಸಂದೇಹವಾಗಿ ಅತ್ಯುತ್ತಮ ಆಟಗಾರ. ಅಸಲಿಗೆ […]

ಧೋನಿಗೆ ತಮ್ಮ ಆಟಗಾರರನ್ನು ಬೆಂಬಲಿಸುವ ಪರಿ ಎಣಿಕೆಗೆ ನಿಲುಕದ್ದು: ಬ್ರೆಟ್ ಲೀ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Oct 06, 2020 | 6:42 PM

Share

ಆಸ್ಟ್ರೇಲಿಯನ್ನರು ಯಾರನ್ನೂ ಸುಮ್ಮನೆ ಹೊಗಳುವುದಿಲ್ಲ, ಕ್ರಿಕೆಟ್​ನಲ್ಲಂತೂ ಅಂಥ ಉದಾಹರಣೆಗಳು ತೀರಾ ಕಡಿಮೆ. ಆದರೆ ಇಂಡಿಯನ್ ಪ್ರಿಮೀಯರ್ ಲೀಗ್ ಶುರುವಾದಾಗಿನಿಂದ ಅವರ ಮನೋಭಾವನೆ ಬದಲಾಗಿದೆ.

ಐಪಿಎಲ್ ಸೀಸನ್​ಗಳಲ್ಲಿ ಅನಲಿಸ್ಟ್ ಆಗಿ ಕೆಲಸ ಮಾಡುವ ಆಸ್ಟ್ರೇಲಿಯಾದ ಬ್ರೆಟ್ ಲೀ, ಚೆನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ತಂಡದ ಆಟಗಾರರ ಮೇಲಿಡುವ ನಂಬಿಕೆ ಮತ್ತು ವೈಫಲ್ಯಗಳ ಹೊರತಾಗಿಯೂ ಅವರನ್ನು ಹುರಿದುಂಬಿಸಿ ಬೆಂಬಲಿಸುವುದನ್ನು ಮನಸಾರೆ ಕೊಂಡಾಡಿದ್ದಾರೆ.

ಸಿಎಸ್​ಕೆ ಓಪನರ್ ಶೇನ್ ವಾಟ್ಸನ್ ನಿಸ್ಸಂದೇಹವಾಗಿ ಅತ್ಯುತ್ತಮ ಆಟಗಾರ. ಅಸಲಿಗೆ ಅವರೊಬ್ಬ ಆಲ್​ರೌಂಡರ್ ಅಂತ ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಈ ಸೀಸನ್​ನಲ್ಲಿ ಅವರು ಕೇವಲ ಬ್ಯಾಟಿಂಗ್ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ವಯಸ್ಸಾಗುತ್ತಿರುವುದರಿಂದ ವ್ಯಾಟೊ ಬೌಲಿಂಗ್ ಮಾಡದಿರಲು ನಿರ್ಧರಿಸಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಈ ಬಾರಿಯ ಸೀಸನ್​ನಲ್ಲಿ ವಾಟ್ಸನ್ ಯಾವ ಮಟ್ಟಿಗೆ ಫೇಲಾಗಲಾರಂಭಿಸಿದ್ದರೆಂದರೆ, ತಮ್ಮನ್ನು ಡ್ರಾಪ್ ಮಾಡುವುದು ನಿಶ್ವಿತ ಅಂತ ಭಾವಿಸಿದ್ದರು. ಆದರೆ ನಾಯಕ ಧೋನಿಗೆ ಮಾತ್ರ ತಮ್ಮ ಓಪನರ್ ಮೇಲಿನ ನಂಬಿಕೆ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಹಾಗಾಗೇ ಧೋನಿ, ಆಸ್ಟ್ರೇಲಿಯಾದ ಈ ಮಾಜಿ ಆಟಗಾರನನ್ನು ಆಡುವ ಎಲೆವೆನ್​ನಲ್ಲಿ ಮುಂದುವರಿಸಿದರು.

ವಾಟ್ಸನ್ ಸಹ ತಮ್ಮ ನಾಯಕನ ವಿಶ್ವಾಸವನ್ನು ಅದ್ಹೇಗೆ ಉಳಿಸಿಕೊಂಡರೆನ್ನುವುದು ರವಿವಾರದಂದು ಕಿಂಗ್ಸ್ ಎಲೆವೆನ್ ಪಂಜಾಬ್ ವಿರುದ್ಧ ಆಡಿದ ಪಂದ್ಯದಲ್ಲಿ ವಿದಿತವಾಯಿತು. ಗೆಲ್ಲಲು 175 ರನ್ ಮೊತ್ತದ ಬೆನ್ನಟ್ಟಿದ ಸಿಎಸ್​ಕೆ ವಿಕೆಟ್ ನಷ್ಟವಿಲ್ಲದೆ, ಇನ್ನೂ 14 ಎಸೆತಗಳು ಬಾಕಿಯಿರುವಂತೆಯೇ ಗುರಿ ಸಾಧಿಸಿತು. ವಾಟ್ಸನ್ 53 ಎಸೆತಗಳಲ್ಲಿ 83 ರನ್ ಬಾರಿಸಿದರೆ, ಅವರ ಜೊತೆಗಾರ ಫಫ್ ಡು ಪ್ಲೆಸ್ಸಿ ಸಹ 53 ಎಸೆತಗಳನ್ನಾಡಿ 87 ರನ್ ಬಾರಿಸಿದರು. ಈ ಪಂದ್ಯದ ನಂತರವೇ ಲೀ, ಧೋನಿಯ ನಾಯಕತ್ವದ ಬಗ್ಗೆ ಗುಣಗಾನ ಮಾಡಿದ್ದು.

‘‘ಎಮ್​ಎಸ್ ಧೋನಿಯಲ್ಲಿರುವ ಶ್ರೇಷ್ಠ ಗುಣವೆಂದರೆ, ತಮ್ಮ ಆಟಗಾರರ ಮೇಲಿಡುವ ನಂಬಿಕೆ. ಆಟಗಾರರು ಗಾಯಗೊಳ್ಳಬಹುದಾದ ಹಿನ್ನೆಲೆಯಲ್ಲಿ ಅವರು ಉಳಿದ 13-14 ಆಟಗಾರರನ್ನು ಸಹ ಬೆಂಬಲಿಸುತ್ತಾರೆ. ಆಡುವ ಎಲೆವೆನ್ ಮೇಲೆ ಅವರಿಗೆ ವಿಶ್ವಾಸ ಹುಟ್ಟಿತೆಂದರೆ ಅದಕ್ಕವರು ಬದ್ಧರಾಗಿರುತ್ತಾರೆ. ರವಿವಾರದಂದು ವಾಟ್ಸನ್ ಮತ್ತು ಡು ಪ್ಲೆಸ್ಸಿ ಅದೆಷ್ಟು ಚೆನ್ನಾಗಿ ಆಡಿದರೆಂದರೆ, ತಂಡದ ಇತರ ಸದಸ್ಯರೆಲ್ಲ ಅಂದು ರಾತ್ರಿ ಸಿಂಹಗಳಂತೆ ನಿರಾತಂಕದಿಂದ ನಿದ್ರೆ ಮಾಡಿದರು,’’ ಎಂದು ಲೀ ಹೇಳಿದ್ದಾರೆ.

‘‘ವಾಟ್ಸನ್​ರನ್ನು ಬೆಂಬಲಿಸಿ ಅವರಿಗೆ ಮತ್ತೊಂದು ಅವಕಾಶ ಕಲ್ಪಸಿದ ಧೋನಿ ಪ್ರಶಂಸಾರ್ಹರು. ಆ ವಿಶ್ವಾಸವನ್ನು ಉಳಿಸಿಕೊಂಡ ವ್ಯಾಟೊ ಅಧಿಕಾರಯುತ ಬ್ಯಾಟಿಂಗ್ ಪ್ರದರ್ಶಿಸಿದರು. ರವಿವಾರದಂದು ಅಕ್ಷರಶಃ ಬೆಂಕಿಯುಗುಳಿದ ವ್ಯಾಟೊ, ಫಾರ್ಮ್​ನಲ್ಲಿದ್ದರೆ ಯಾವ ಹೊಡೆತವನ್ನಾದರೂ ಆಡಬಲ್ಲರು,’’ ಎಂದು ಲೀ ಹೇಳಿದ್ದಾರೆ.

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ