AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ವಿಶ್ವಕಪ್ ಆಡುವುದಕ್ಕಾದರೂ ನನಗೊಂದು ಅವಕಾಶ ಕೊಡಿ! ಸೆಲೆಕ್ಟರ್ ಬಳಿ ಮನವಿ ಮಾಡಿದ ದಿನೇಶ್ ಕಾರ್ತಿಕ್

2019 ರ ಏಕದಿನ ವಿಶ್ವಕಪ್‌ ಆಡಬೇಕೆಂದು ನನ್ನಲ್ಲಿ ಭಾರಿ ನಿರೀಕ್ಷೆಗಳಿದ್ದವು. ಆದರೆ, ನನಗೆ ಆಡಲು ಅವಕಾಶ ಸಿಗಲಿಲ್ಲ. ಇದೀಗ ಪೂರ್ಣ ಫಿಟ್‌ನಲ್ಲಿದ್ದೇನೆ ಈ ವರ್ಷದ ಟಿ 20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರ ಆಡಬೇಕೆಂಬುದು ನನ್ನ ಕನಸು.

ಒಂದು ವಿಶ್ವಕಪ್ ಆಡುವುದಕ್ಕಾದರೂ ನನಗೊಂದು ಅವಕಾಶ ಕೊಡಿ! ಸೆಲೆಕ್ಟರ್ ಬಳಿ ಮನವಿ ಮಾಡಿದ ದಿನೇಶ್ ಕಾರ್ತಿಕ್
ದಿನೇಶ್ ಕಾರ್ತಿಕ್
TV9 Web
| Updated By: preethi shettigar|

Updated on: Jul 10, 2021 | 8:31 AM

Share

ಟೀಮ್ ಇಂಡಿಯಾದಲ್ಲಿ ಮರು ಪ್ರವೇಶಕ್ಕಾಗಿ ದಿನೇಶ್ ಕಾರ್ತಿಕ್ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ, ಅವಕಾಶಗಳು ಸಿಗುವುದು ತೀರ ವಿರಳವಾಗಿದೆ. ಟೀಮ್ ಇಂಡಿಯಾವನ್ನು ಪ್ರಸ್ತುತ ಯುವ ಆಟಗಾರರು ಮತ್ತು ಹಿರಿಯ ಆಟಗಾರರೊಂದಿಗೆ ಎರಡು ತಂಡಗಳಾಗಿ ವಿಂಗಡಿಸಿ ಎರಡು ವಿಭಿನ್ನ ಸರಣಿಗಳನ್ನು ಆಡಲು ಸಿದ್ಧವಾಗಿದೆ. ಅನೇಕ ಆಟಗಾರರು ಟೀಂ ಇಂಡಿಯಾದಲ್ಲಿ ಸ್ಥಾನಕ್ಕಾಗಿ ಕಾಯುತ್ತಿದ್ದಾರೆ. ಇತ್ತೀಚೆಗೆ, ಟೀಮ್ ಇಂಡಿಯಾದ ಹಿರಿಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೂಡ ಭಾರತೀಯ ಆಯ್ಕೆದಾರರು ತನಗೆ ಮತ್ತೊಂದು ಅವಕಾಶ ನೀಡಬೇಕೆಂದು ಹೇಳಿಕೆ ನೀಡಿದ್ದಾರೆ. 2019 ರ ಏಕದಿನ ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಭಾರತ ಪರ ಆಡಿದ ದಿನೇಶ್ ಕಾರ್ತಿಕ್, ಅಂದಿನಿಂದ ಮತ್ತೆ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಮತ್ತೊಂದೆಡೆ, ನಿರೂಪಕನಾಗಿ ಮತ್ತೊಂದು ಇನ್ನಿಂಗ್ಸ್ ಪ್ರಾರಂಭಿಸಿದ ದಿನೇಶ್ ಕಾರ್ತಿಕ್, ಡಬ್ಲ್ಯೂಟಿಸಿ ಫೈನಲ್​ನಲ್ಲಿ ಕಾಮೆಂಟೆಟರ್ ಕೆಲಸಕ್ಕಾಗಿ ಇಂಗ್ಲೆಂಡ್​ಗೆ ತೆರಳಿದ್ದರು.

ಆಗಸ್ಟ್ 4 ರಿಂದ ಸೆಪ್ಟೆಂಬರ್ 14 ರವರೆಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್ ಸರಣಿಯಲ್ಲಿ ದಿನೇಶ್ ಕಾರ್ತಿಕ್ ಕಾರ್ಯನಿರ್ವಹಿಸಲಿದ್ದಾರೆ. ಆದಾಗ್ಯೂ, ಪ್ರಸ್ತುತ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್-ಕಮ್-ಬ್ಯಾಟ್ಸ್‌ಮನ್ ಆಗಿ ಧೂಳೀಪಟ ಮಾಡುತ್ತಿರುವ ರಿಷಭ್ ಪಂತ್ ಅವರ ಆಗಮನದೊಂದಿಗೆ ದಿನೇಶ್ ಕಾರ್ತಿಕ್ ಅವರ ಅವಕಾಶಗಳು ಬದಲಾಗಿವೆ. ರಿಷಭ್ ಎಲ್ಲಾ ಮೂರು ಫಾರ್ಮ್ಯಾಟ್‌ಗಳಿಗೆ ವಿಕೆಟ್ ಕೀಪರ್ ಆಗಿ ಮುಂದುವರೆದಿದ್ದಾರೆ. ಟೀಮ್ ಇಂಡಿಯಾದಲ್ಲಿ ದಿನೇಶ್ ಕಾರ್ತಿಕ್ ಅವರ ಇನ್ನಿಂಗ್ಸ್ ಮುಗಿದಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಮಾತನಾಡಲಾರಂಭಿಸಿದ್ದಾರೆ.

ವಿಶ್ವಕಪ್‌ ಆಡಬೇಕೆಂದು ನನ್ನಲ್ಲಿ ಭಾರಿ ನಿರೀಕ್ಷೆಗಳಿದ್ದವು ಟೀಮ್ ಇಂಡಿಯಾದಲ್ಲಿ ಅವರ ಅವಕಾಶಗಳ ಬಗ್ಗೆ ಮಾತನಾಡುತ್ತಾ, ನಾನು ಫಿಟ್‌ನೆಸ್‌ನೊಂದಿಗೆ ತುಂಬಾ ದಿನ ಕ್ರಿಕೆಟ್ ಆಡಲು ಬಯಸುತ್ತೇನೆ. 2019 ರ ಏಕದಿನ ವಿಶ್ವಕಪ್‌ ಆಡಬೇಕೆಂದು ನನ್ನಲ್ಲಿ ಭಾರಿ ನಿರೀಕ್ಷೆಗಳಿದ್ದವು. ಆದರೆ, ನನಗೆ ಆಡಲು ಅವಕಾಶ ಸಿಗಲಿಲ್ಲ. ಇದೀಗ ಪೂರ್ಣ ಫಿಟ್‌ನಲ್ಲಿದ್ದೇನೆ ಈ ವರ್ಷದ ಟಿ 20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರ ಆಡಬೇಕೆಂಬುದು ನನ್ನ ಕನಸು. ಈ ವರ್ಷ ಯುಎಇ ಕಿರು ವಿಶ್ವಕಪ್ ಅನ್ನು ಆಯೋಜಿಸುತ್ತದೆ. ಅಲ್ಲದೆ, ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ಮತ್ತೊಂದು ಟಿ 20 ವಿಶ್ವಕಪ್ ನಡೆಯಲಿದೆ. ಮತ್ತೊಂದೆಡೆ, ಟೀಂ ಇಂಡಿಯಾಕ್ಕೆ ಇನ್ನೂ ಉತ್ತಮ ಮಿಡ್‌ಫೀಲ್ಡರ್ ಬ್ಯಾಟ್ಸ್‌ಮನ್‌ಗಳ ಅಗತ್ಯವಿದೆ. ಟಾಪ್ ಆರ್ಡರ್ ಮತ್ತು ಲೋವರ್ ಆರ್ಡರ್ ನಲ್ಲಿ ಎಲ್ಲವೂ ಭರ್ತಿ ಆಗಿದೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಪಂತ್ ಹೊರತುಪಡಿಸಿ ಸ್ಥಿರ ಆಟಗಾರರಿಲ್ಲ ”ಎಂದು ವಿಕೆಟ್ ಕೀಪರ್ ಹೇಳಿದರು.

ಏತನ್ಮಧ್ಯೆ, ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾ ಪರ 32 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಅವರು 33.25 ರ ಸರಾಸರಿಯಲ್ಲಿ ಕೇವಲ 339 ರನ್ ಗಳಿಸಿದ್ದಾರೆ. ಇದರಲ್ಲಿ 42 ಬೌಂಡರಿ ಮತ್ತು 15 ಸಿಕ್ಸರ್‌ಗಳು ಸೇರಿದ್ದವು. ಕನಿಷ್ಠ ಒಂದು ಅರ್ಧಶತಕವೂ ಇಲ್ಲ. ಅವರು 26 ಟೆಸ್ಟ್ ಆಡಿದ್ದಾರೆ ಮತ್ತು 1,025 ರನ್ ಗಳಿಸಿದ್ದಾರೆ. ಅವರು 94 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು 1,752 ರನ್ ಗಳಿಸಿದ್ದಾರೆ.

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ