India vs England: ರಾಹುಲ್​ರನ್ನು ತಂಡದಿಂದ ಕೈಬಿಟ್ಟರೆ ಅವರ ಆತ್ಮವಿಶ್ವಾಸ ಉಡುಗಿ ಹೋಗುತ್ತದೆ: ವಿವಿಎಸ್ ಲಕ್ಷ್ಮಣ್

ಸ್ಟಾರ್​ ಸ್ಪೋರ್ಟ್ಸ್ ನೆಟ್​ವರ್ಕ್​ನೊಂದಿಗೆ ಗುರುವಾರದಂದು ಮಾತಾಡಿದ ಲಕ್ಷ್ಮಣ್, ರಾಹುಲ್ ಅವರನ್ನು ಟಾಪ್ ಆರ್ಡರ್​ನಲ್ಲಿ ಆಡಿಸುವುದು ಮುಂದುವರಿಸಬೇಕು ಎಂದು ಹೇಳಿದ್ದು, ತಾವು ಔಟಾಗಿರುವ ರೀತಿಯ ಬಗ್ಗೆ ರಾಹುಲ್ ತೀವ್ರ ಅಸಂತುಷ್ಟರಾಗಿರುತ್ತಾರೆ ಎಂದರು.

India vs England: ರಾಹುಲ್​ರನ್ನು ತಂಡದಿಂದ ಕೈಬಿಟ್ಟರೆ ಅವರ ಆತ್ಮವಿಶ್ವಾಸ ಉಡುಗಿ ಹೋಗುತ್ತದೆ: ವಿವಿಎಸ್ ಲಕ್ಷ್ಮಣ್
ಕೆ ಎಲ್ ರಾಹುಲ್
ಅರುಣ್​ ಕುಮಾರ್​ ಬೆಳ್ಳಿ Edited By:

Updated on: Mar 18, 2021 | 6:13 PM

ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ಆರಂಭ ಆಟಗಾರ ಕೆ.ಎಲ್.ರಾಹುಲ್ ಕುರಿತು ಚರ್ಚೆ ನಡೆಯುತ್ತಲೇ ಇದೆ. ಇಂದು (ಗುರುವಾರ) ಅಹಮದಾಬಾದಿನ ಅದೇ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ 4ನೇ ಪಂದ್ಯದಲ್ಲಿ ಅವರು ಆಡುವ ಇಲೆವೆನ್​ನಲ್ಲಿ ಸ್ಥಾನ ಗಿಟ್ಟಿಸುವರೇ ಅಥವಾ ಸೂರ್ಯಕುಮಾರ್ ಯಾದವ್ ಅವರನ್ನು ಆಡಿಸಲಾಗುತ್ತದೆಯೇ? ಮೊದಲ ಮೂರು ಪಂದ್ಯಗಳಲ್ಲಿ ರಾಹುಲ್ ಅವರ ಸ್ಕೋರ್ ಲೈನ್ 1-0-0 ಆಗಿದ್ದರೂ ಟೀಮ್ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋಡ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ರಾಹುಲ್​ಗೆ ಮಾಜಿ ಆಟಗಾರ ವಿವಿಎಸ್ ಲಕ್ಷ್ಮನ್ ಅವರ ಬೆಂಬಲವೂ ಸಿಕ್ಕಿದೆ.

ಸ್ಟಾರ್​ ಸ್ಪೋರ್ಟ್ಸ್ ನೆಟ್​ವರ್ಕ್​ನೊಂದಿಗೆ ಗುರುವಾರದಂದು ಮಾತಾಡಿದ ಲಕ್ಷ್ಮಣ್, ರಾಹುಲ್ ಅವರನ್ನು ಟಾಪ್ ಆರ್ಡರ್​ನಲ್ಲಿ ಆಡಿಸುವುದು ಮುಂದುವರಿಸಬೇಕು ಎಂದು ಹೇಳಿದ್ದು, ತಾವು ಔಟಾಗಿರುವ ರೀತಿಯ ಬಗ್ಗೆ ರಾಹುಲ್ ತೀವ್ರ ಅಸಂತುಷ್ಟರಾಗಿರುತ್ತಾರೆ ಎಂದರು.

‘ಈ ವರ್ಷ ಅವರು (ರಾಹುಲ್) ಅಂತರರಾಷ್ಟ್ರೀಯ ಕ್ರಿಕೆಟ್ ಆಡಿಲ್ಲದಿರುವುದರಿಂದ ಅವರನ್ನು 4ನೇ ಪಂದ್ಯದಲ್ಲಿ ಆಡಬೇಕು. ಟೆಸ್ಟ್​ ಪಂದ್ಯಗಳಲ್ಲಿ ಅವರು ಟೀಮಿನ ರೆಗ್ಯುಲರ್ ಸದಸ್ಯನಾಗಿಲ್ಲ. ಆದರೆ, ಕಳೆದ ಮೂರು ಇನ್ನಿಂಗ್ಸ್​ಗಳಲ್ಲಿ ತಾನು ಔಟಾಗಿರುವ ರೀತಿ ನೋಡಿ ಅವರು ನಿಶ್ಚಿತವಾಗಿಯೂ ನಿರಾಶರಾಗಿರುತ್ತಾರೆ’ ಎಂದು ಲಕ್ಷ್ಮಣ ಹೇಳಿದರು.

ವಿವಿಎಸ್ ಲಕ್ಷ್ಮಣ್

‘ರಾಹುಲ್ ಅವರ ಬ್ಯಾಟಿಂಗ್ ಗಮನಿಸಿದರೆ ಅವರ ತಾಂತ್ರಿಕವಾಗಿ ನಿಪುಣ ಬ್ಯಾಟ್ಸ್​ಮನ್ ಅನ್ನೋದು ಗೊತ್ತಾಗುತ್ತದೆ. ಟೆಸ್ಟ್​ ಕ್ರಿಕೆಟ್​ನಲ್ಲೂ ಅವರು ಶತಕಗಳನ್ನು ಬಾರಿಸಿದ್ದಾರೆ. ಅದರೆ ಇಂಗ್ಲೆಂಡ್​ ವಿರುದ್ಧ ಆಡುವಾಗ ಅವರ ಪಾದಗಳು ಕ್ರೀಸ್​ನಿಂದ ಸರಿಯುತ್ತಿಲ್ಲ ಮತ್ತು ಅವರ ಬ್ಯಾಟ್​ ಮತ್ತು ಪ್ಯಾಡ್​ಗಳ ನಡುವೆ ಗ್ಯಾಪ್ ಸೃಷ್ಟಿಯಾಗುತ್ತಿದೆ’ ಎಂದು ಲಕ್ಷ್ಮಣ್ ಹೇಳಿದರು.

ಇಂಥ ಸಂದರ್ಭದಲ್ಲಿ ರಾಹುಲ್​ ಅವರನ್ನು ಆಡುವ ಇಲೆವೆನ್​ನಿಂದ ಕೈಬಿಟ್ಟರೆ ಅವರ ಆತ್ಮವಿಶ್ವಾಸಕ್ಕೆ ದೊಡ್ಡ ಪೆಟ್ಟಾಗುತ್ತದೆ. ಯಾಕೆಂದರೆ ಸತತ ವೈಫಲ್ಯಗಳಿಂದ ಅವರು ಈಗಾಗಲೇ ಕಂಗೆಟ್ಟಿದ್ದಾರೆ ಎಂದು ಲಕ್ಷ್ಮಣ್ ಹೇಳಿದರು.

‘ರಾಹುಲ್ ಅವರ ಬ್ಯಾಟಿಂಗ್​ನಲ್ಲಿ ಸಾಮಾನ್ಯವಾಗಿ ಕಾಣುವ ಆತ್ಮವಿಶ್ವಾಸ ಮತ್ತು ಲಯ ಮಿಸ್ ಆಗಿದೆ. ನಿಸ್ಸಂದೇಹವಾಗಿ ಅವರ ಆತ್ಮವಿಶ್ವಾಸ ಉಡುಗಿಹೋಗಿದೆ. ಈ ಹಂತದಲ್ಲಿ ಅವರನ್ನು ಟೀಮಿನಿಂದ ಕೈಬಿಟ್ಟರೆ ಅವರಿಗೆ ಚೇತರಿಸಿಕೊಳ್ಳಲು ಕಷ್ಟವಾಗಬಹುದಾದ ಪೆಟ್ಟು ನೀಡುತ್ತದೆ’ ಎಂದು ಲಕ್ಷ್ಮಣ್ ಹೇಳಿದರು.

ಇದನ್ನೂ ಓದಿ: India vs England: ಸೂರ್ಯಕುಮಾರ್​ಗೆ ಅವಕಾಶ ನೀಡದೆ ಕೈಬಿಟ್ಟಿದ್ದು ಅಕ್ಷಮ್ಯ ಎಂದ ಗೌತಮ್ ಗಂಭೀರ್

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us