AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೌಹಾನ್​ಗೆ ನೀಡಿದ ಶ್ರದ್ಧಾಂಜಲಿಯಲ್ಲಿ ಗವಾಸ್ಕರ್ ಆ ಅಹಿತಕರ ಘಟನೆ ಬಗ್ಗೆ ಹೇಳಿಲ್ಲ

ಭಾರತದ ಮಾಜಿ ಆರಂಭ ಆಟಗಾರ ಮತ್ತು ನಿವೃತ್ತಿಯ ನಂತರ ಕ್ರಿಕೆಟ್ ಆಡಳಿತ ಹಾಗೂ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು ಎರಡು ಬಾರಿ ಅಮ್ರೊಹ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ನಂತರ ಉತ್ತರ ಪ್ರದೇಶದ ನೌಗಾವನ್ ಸಾದತ್ ಕ್ಷೇತ್ರದಿಂದ ವಿಧಾನ ಸಭೆಗೆ ಆರಿಸಿಬಂದಿದ್ದೂ ಅಲ್ಲದೆ ಯೋಗಿ ಆದಿತ್ಯನಾಥ್ ಅವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡುತ್ತಿದ್ದಾಗಲೇ ಕೊವಿಡ್ ಸೋಂಕಿಗೆ ಬಲಿಯಾದ ಚೇತನ್ ಚೌಹಾನ್ ಈಗ ನೆನಪು ಮಾತ್ರ. ತಾನಾಡಿದ 40 ಟೆಸ್ಟ್​ಗಳಲ್ಲಿ ಒಂದೂ ಶತಕ ದಾಖಲಿಸದೆ, 2000 ರನ್ ಪೂರೈಸಿದ ಏಕೈಕ ಆರಂಭ […]

ಚೌಹಾನ್​ಗೆ ನೀಡಿದ ಶ್ರದ್ಧಾಂಜಲಿಯಲ್ಲಿ ಗವಾಸ್ಕರ್ ಆ ಅಹಿತಕರ ಘಟನೆ ಬಗ್ಗೆ ಹೇಳಿಲ್ಲ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on:Aug 24, 2020 | 4:38 PM

Share

ಭಾರತದ ಮಾಜಿ ಆರಂಭ ಆಟಗಾರ ಮತ್ತು ನಿವೃತ್ತಿಯ ನಂತರ ಕ್ರಿಕೆಟ್ ಆಡಳಿತ ಹಾಗೂ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು ಎರಡು ಬಾರಿ ಅಮ್ರೊಹ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ನಂತರ ಉತ್ತರ ಪ್ರದೇಶದ ನೌಗಾವನ್ ಸಾದತ್ ಕ್ಷೇತ್ರದಿಂದ ವಿಧಾನ ಸಭೆಗೆ ಆರಿಸಿಬಂದಿದ್ದೂ ಅಲ್ಲದೆ ಯೋಗಿ ಆದಿತ್ಯನಾಥ್ ಅವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡುತ್ತಿದ್ದಾಗಲೇ ಕೊವಿಡ್ ಸೋಂಕಿಗೆ ಬಲಿಯಾದ ಚೇತನ್ ಚೌಹಾನ್ ಈಗ ನೆನಪು ಮಾತ್ರ.

ತಾನಾಡಿದ 40 ಟೆಸ್ಟ್​ಗಳಲ್ಲಿ ಒಂದೂ ಶತಕ ದಾಖಲಿಸದೆ, 2000 ರನ್ ಪೂರೈಸಿದ ಏಕೈಕ ಆರಂಭ ಆಟಗಾರನೆಂಬ ಅಷ್ಟೇನು ಖುಷಿ ನೀಡದ ದಾಖಲೆಯಂದಿಗೆ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದ ಚೌಹಾನ್, ತಮ್ಮ ಕರೀಯರ್​ನಲ್ಲಿ ವಿಶ್ವದ ಶ್ರೇಷ್ಠ ಓಪನರ್​ಗಳಲ್ಲಿ ಒಬ್ಬರಾದ ಸುನಿಲ್ ಗವಾಸ್ಕರ್ ಅವರೊಂದಿಗಿನ ಕೆಲವು ಅದ್ಭುತ ಜೊತೆಗಾರಿಕೆಗಳಿಗಾಗಿ ಜಾಸ್ತಿ ಜನಪ್ರಿಯರು. ಚೌಹಾನ್​ಗೆ ಶ್ರದ್ಧಾಂಜಲಿ ಅರ್ಪಿಸುತ್ತಾ ಇಂಗ್ಲಿಷ್ ಪತ್ರಿಕೆಯೊಂದಕ್ಕೆ ಗವಾಸ್ಕರ್ ಒಂದು ಲೇಖನವನ್ನು ಸೋಮವಾರ ಬರೆದಿದ್ದಾರೆ.

ಅವರೊಂದಿಗಿನ ಕೆಲವು ಸ್ಮರಣೀಯ ಜೊತೆಯಾಟಗಳನ್ನು ಮೆಲಕು ಹಾಕಿರುವ ಗವಾಸ್ಕರ್, ತನ್ನಿಂದಾಗೇ ಚೌಹಾನ್ ಎರಡು ಬಾರಿ ಶತಕ ಗಳಿಸುವುದನ್ನು ತಪ್ಪಿಸಿಕೊಂಡರು ಅಂತ ಹೇಳಿದ್ದಾರೆ. ಆ ಎರಡು ಸಂದರ್ಭಗಳ ಕ್ಲುಪ್ತ ವಿವರಣೆಯನ್ನು ಸಹ ಸನ್ನಿ ನೀಡಿದ್ದಾರೆ.

ಟೀಮು ಗೆಲ್ಲುವ ಹಂತದಲ್ಲಿದ್ದಾಗ, ಬ್ಯಾಟ್ಸ್​ಮನ್​ನೊಬ್ಬ ಸೆಂಚುರಿ ಬಾರಿಸುವ ಹತ್ತಿರಕ್ಕೆ ಬಂದಾಗ, ಇಲ್ಲವೇ ಕ್ರೀಸ್​ನಲ್ಲಿರುವ ಇಬ್ಬರು ಬ್ಯಾಟ್ಸ್​ಮನ್​ಗಳ ನಡುವೆ ಉತ್ತಮ ಜೊತೆಯಾಟ ನಡೆಯುತ್ತಿರುವಾಗ, ಡ್ರೆಸಿಂಗ್​ರೂಮಿನಿಂದ ಆಟ ವೀಕ್ಷಿಸುವ ತಂಡದ ಇತರ ಆಟಗಾರರು ತಾವು ಕುಳಿತ ಸ್ಥಳದಿಂದ ಮೇಲೇಳುವುದಿಲ್ಲ. ಅದು ಮೂಢ ನಂಬಿಕೆಯಾದರೂ, ಹಾಗೆ ಮಾಡಿದರೆ ಆಡುತ್ತಿರುವವರಿಗೆ, ತಂಡಕ್ಕೆ ಅಪಶಕುನವುಂಟಾಗುತ್ತದೆ ಅಂತ ಬಹಳಷ್ಟು ಆಟಗಾರರು ಭಾವಿಸಿತ್ತಾರೆ. ಗವಾಸ್ಕರ್ ಕೂಡ ಹಾಗೆ ನಂಬಿದವರು.

1981ರ ಆಸ್ಟ್ರೇಲಿಯ ಪ್ರವಾಸದ ಎರಡನೇ ಟೆಸ್ಟ್ (ಅಡಿಲೇಡ್ ಓವಲ್) ಪಂದ್ಯದಲ್ಲಿ ಚೌಹಾನ್ ಶತಕ ಬಾರಿಸುವ ತೀರ ಹತ್ತಿರಕ್ಕೆ ಬಂದಿದ್ದನ್ನು ಡ್ರೆಸಿಂಗ್​ರೂಮಿನಲ್ಲಿ ಕೂತು ತದೇಕಚಿತ್ತದಿಂದ ನೋಡುತ್ತಿದ್ದ ಗವಾಸ್ಕರ್ ಯಾರೋ ಕರೆದ ಕಾರಣ ಸ್ಥಳಬಿಟ್ಟು ಎದ್ದರಂತೆ. ಅದಾದ ಸ್ವಲ್ಪ ಹೊತ್ತಿಗೆ 97 ರನ್ ಗಳಿಸಿದ್ದ ಚೌಹಾನ್ ಡೆನಿಸ್ ಲಿಲ್ಲಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್​ಗೆ ಮರಳಿದರೆಂದು ಗವಾಸ್ಕರ್ ಬರೆಯುತ್ತಾರೆ. ಅವರು ಔಟಾಗಿದ್ದಕ್ಕೆ ತಾನೇ ಕಾರಣನಾದೆ ಅಂತ ದೂಷಿಸಿಕೊಳ್ಳುತ್ತಾರೆ. ಗಮನಿಸಬೇಕಾದ ಸಂಗತಿಯೆಂದರೆ, ಚೌಹಾನ್ ಬದುಕಿದ್ದಾ ಸನ್ನಿ ಈ ವಿಷಯವನ್ನು ಯಾವತ್ತೂ ಹೇಳಲಿಲ್ಲ.

ಮತ್ತೊಂದು ಸಂದರ್ಭ ಕೂಡ ಅದೇ ಸರಣಿಯ ಮೂರನೇ ಟೆಸ್ಟ್​ನಲ್ಲಿ ನಡೆಯಿತೆಂದು ಗವಾಸ್ಕರ್ ಬರೆಯುತ್ತಾರೆ. ಮೆಲ್ಬರ್ನ್ ನಲ್ಲಿ ನಡೆದ ಆ ಪಂದ್ಯದಲ್ಲಿ ಅವರಿಬ್ಬರ ನಡುವಿನ ಆರಂಭಿಕ ಜೊತೆಯಾಟದಲ್ಲಿ 165 ರನ್ ಬಂದಿದ್ದವು. ಆಗ 70 ರನ್ ಗಳಿಸಿ ಆಡುತ್ತಿದ್ದ ಗವಾಸ್ಕರ್ ಅವರನ್ನು ಅದೇ ಲಿಲ್ಲಿ ಎಲ್ ಬಿ ಡಬ್ಲ್ಯು ಬಲೆಗೆ ಕೆಡವಿದರು. ಅಂಪ್ಯೆರ್​ನ ತೀರ್ಪನ್ನು ಗವಾಸ್ಕರ್ ಒಪ್ಪಿಕೊಳ್ಳಲೇ ಇಲ್ಲ. ತಾನು ಔಟಾಗಿಲ್ಲ ಅಂತ ವಾದಿಸುತ್ತಾ ಪಿಚ್ ಮೇಲೆ ನಿಂತುಬಿಟ್ಟರು. ಚೌಹಾನ್ ಸಮಾಧಾನಪಡಿಸಿ ವಾಪಸ್ಸು ಕಳಿಸುವ ಪ್ರಯತ್ನ ಮಾಡಿದರಾದರೂ ತಂಡದ ನಾಯಕ ಕೂಡ ಆಗಿದ್ದ ಗವಾಸ್ಕರ್, ಅವರ ಮಾತು ಕೇಳದೆ, ಆಟ ಇಲ್ಲಿಗೆ ನಿಲ್ಲಿಸಿಬಿಡೋಣ ಎಂದು ಹೇಳಿ, ಚೌಹಾನ್​ರನ್ನು ಅಕ್ಷರಶಃ ಪೆವಿಲಿಯನ್​ನತ್ತ ತಳ್ಳಿಕೊಂಡು ಬಂದರು. ಚೌಹಾನ್​ಗೆ ನಾಯಕನ ಮಾತು ಪಾಲಿಸದೆ ವಿಧಿಯಿರಲಿಲ್ಲ.

ಆ ಸನ್ನಿವೇಶ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆಯಾಗಿ ಉಳಿದುಬಿಟ್ಟಿದೆ.

ಗವಾಸ್ಕರ್ ವರ್ತನೆ, ಭಾರತದ ಡ್ರೆಸಿಂಗ್​ರೂಮಲ್ಲಿ ಆತಂಕ ಸೃಷ್ಟಿಸಿತ್ತು. ತಂಡದ ಮ್ಯಾನೇಜರ್ ಹಾಗೂ ಇತರ ಆಟಗಾರರು ಕೂಡಲೇ ಮೈದಾನದ ಕಡೆ ಧಾವಿಸಿ, ಚೌಹಾನ್​ರನ್ನು ವಾಪಸ್ಸು ಕಳಿಸಿ ಆಟ ಮುಂದುವರೆಯುವಂತೆ ನೋಡಿಕೊಂಡರು. ಈ ಘಟನೆಯಿಂದ ಚೌಹಾನ್ ಏಕಾಗ್ರತೆ ಕಳೆದುಕೊಂಡು ಅವರ ವೈಯಕ್ತಿಕ ಸ್ಕೋರ್ 85 ಆಗಿದ್ದಾಗ ಔಟಾದರೆಂದು ಗವಾಸ್ಕರ್ ಬರೆದಿದ್ದಾರೆ ಮತ್ತು ಅದು ಕೂಡ ತನ್ನಿಂದಲೇ ಆಯಿತು ಎಂದಿದ್ದಾರೆ. ಅದರೆ, ತನ್ನಿಂದ ಸೃಷ್ಟಿಯಾದ ಆ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿಲ್ಲ. 

ಈ ಪಂದ್ಯದಲ್ಲಿ ಮತ್ತೊಬ್ಬ ಶ್ರೇಷ್ಠ ಆಟಗಾರ ಜಿ ಆರ್ ವಿಶ್ವನಾಥ ಅವರ ಅಮೋಘ ಹಾಗೂ ಅಷ್ಟೇ ಕಲಾತ್ಮಕ ಶತಕ ಮತ್ತು ಕಪಿಲ್ ದೇವ್ ಅವರ ಉತ್ಕೃಷ್ಟ ಬೌಲಿಂಗ್ ನೆರವಿನಿಂದ ಭಾರತ ಗೆಲುವು ಸಾಧಿಸಿ ಸರಣಿಯನ್ನು ಸಮ ಮಾಡಿಕೊಂಡಿದ್ದು ಭಾರತೀಯರಿಗೆ ಆ ಅಹಿತಕರ ಸನ್ನಿವೇಶದ ನೆನಪು ಮಾಸುವಂತೆ ಮಾಡಿತಾದರೂ, ವೀದೇಶಿ ಮಾಧ್ಯಮಗಳು ತೀವ್ರವಾಗಿ ಖಂಡಿಸಿದವು.

ಗವಾಸ್ಕರ್ ಮಹಾನ್ ಆಟಗಾರನಾಗಿದ್ದರೂ ಸ್ವಾರ್ಥಿಯಾಗಿದ್ದರೆಂದು ಅನೇಕ ಆರೋಪಗಳಿವೆ. ಮತ್ಯಾವಾಗಲಾದರೂ ಈ ವಿಷಯವನ್ನು ಚರ್ಚಿಸುವ ಬಿಡಿ.

Published On - 8:21 pm, Mon, 17 August 20

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ