AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಭಾರತದ ಕೃಪೆಯಿಂದ ಆದಾಯ ಹೆಚ್ಚಾಯ್ತು! ಟೀಂ ಇಂಡಿಯಾ ವಿರುದ್ಧದ ಸರಣಿಯಿಂದ ಶ್ರೀಲಂಕಾ ಗಳಿಸುವ ಆದಾಯ ಎಷ್ಟು ಗೊತ್ತಾ?

IND vs SL: ಈ ಸರಣಿಯಿಂದ ಮಂಡಳಿಯು 12 ಮಿಲಿಯನ್ ಅಥವಾ ಸುಮಾರು 89.72 ಕೋಟಿ ರೂ. ಗಳಿಸಲಿದೆ ಎಂದು ಸ್ಪೋರ್ಟ್ಸ್ ವೆಬ್‌ಸೈಟ್ ಇನ್ಸೈಡ್ ಸ್ಪೋರ್ಟ್ ವರದಿಯಲ್ಲಿ ಎಸ್‌ಎಲ್‌ಸಿ ಅಧ್ಯಕ್ಷ ಸಿಲ್ವಾ ಹೇಳಿದ್ದಾರೆ.

IND vs SL: ಭಾರತದ ಕೃಪೆಯಿಂದ ಆದಾಯ ಹೆಚ್ಚಾಯ್ತು! ಟೀಂ ಇಂಡಿಯಾ ವಿರುದ್ಧದ ಸರಣಿಯಿಂದ ಶ್ರೀಲಂಕಾ ಗಳಿಸುವ ಆದಾಯ ಎಷ್ಟು ಗೊತ್ತಾ?
ಪ್ರಾತಿನಿಧಿಕ ಚಿತ್ರ
ಪೃಥ್ವಿಶಂಕರ
|

Updated on: Jul 08, 2021 | 3:49 PM

Share

Aಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿ (ಭಾರತ ವಿರುದ್ಧ ಶ್ರೀಲಂಕಾ 2021) ಜುಲೈ 13 ರಿಂದ ಪ್ರಾರಂಭವಾಗುತ್ತಿದೆ. ಅದರ ಅನೇಕ ದೊಡ್ಡ ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ, ಈ ಸರಣಿಯ ಉತ್ಸಾಹ ಉಳಿದಿದೆ, ಏಕೆಂದರೆ ಶಿಖರ್ ಧವನ್ ನಾಯಕತ್ವದ ಭಾರತೀಯ ತಂಡವು ಹೆಚ್ಚಾಗಿ ಹೊಸ ಮುಖಗಳನ್ನು ಹೊಂದಿದೆ. ಆದರೆ ಇದು ಶ್ರೀಲಂಕಾದ ಕ್ರಿಕೆಟ್‌ಗೆ ಇನ್ನೂ ದೊಡ್ಡ ಅವಕಾಶವಾಗಿದೆ. ಏಕೆಂದರೆ ಈ ಸರಣಿ ಅವರ ಖಾತೆಗೆ ಭಾರೀ ಆದಾವನ್ನು ತಂದುಕೊಡಲಿದೆ. ಭಾರತ ವಿರುದ್ಧದ ಸರಣಿಯಿಂದ ಸುಮಾರು 90 ಕೋಟಿ ರೂ. ಗಳಿಸಲಿದ್ದೇವೆ ಎಂದು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಅಧ್ಯಕ್ಷ ಶಮ್ಮಿ ಸಿಲ್ವಾ ಅವರೇ ಹೇಳಿದ್ದಾರೆ. ಭಾರತವು ಶ್ರೀಲಂಕಾ ಜೊತೆ ಈ ಪ್ರವಾಸದಲ್ಲಿ 3 ಏಕದಿನ ಮತ್ತು ಟಿ 20 ಪಂದ್ಯಗಳನ್ನು ಆಡಬೇಕಾಗಿದೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಈ ಸರಣಿಯನ್ನು ಕಳೆದ ವರ್ಷವೇ ಆಡಬೇಕಿತ್ತು. ಆದರೆ ಕೊರೊನಾ ವೈರಸ್ ಕಾರಣದಿಂದ ಸರಣಿಯನ್ನು ಮುಂದೂಡಲಾಯಿತು. ಭವಿಷ್ಯದ ಪ್ರವಾಸ ಕಾರ್ಯಕ್ರಮದಡಿ ನಿರ್ಧರಿಸಿದಂತೆ ಈ ಸರಣಿಯನ್ನು ಪೂರ್ಣಗೊಳಿಸಲು ಈಗ ಎರಡೂ ತಂಡಗಳು ಘರ್ಷಣೆಗೆ ಒಳಗಾಗಲಿದ್ದು, ಇದರಲ್ಲಿ ಭಾರತೀಯ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಸೇರಿದಂತೆ ಅನೇಕ ದೊಡ್ಡ ಆಟಗಾರರು ಹಾಜರಿಲ್ಲ. ಇದರ ಹೊರತಾಗಿಯೂ, ಈ ಸರಣಿಯು ಶ್ರೀಲಂಕಾದ ಕ್ರಿಕೆಟ್‌ಗೆ ಉತ್ತಮ ಗಳಿಕೆಯ ಮೂಲವಾಗಿದೆ.

3 ರ ಬದಲು 6 ಪಂದ್ಯಗಳನ್ನು ಆಡಲು ಒಪ್ಪಿದರೆ 89.72 ಕೋಟಿ ರೂ ಆದಾಯ ಈ ಸರಣಿಯಿಂದ ಮಂಡಳಿಯು 12 ಮಿಲಿಯನ್ ಅಥವಾ ಸುಮಾರು 89.72 ಕೋಟಿ ರೂ. ಗಳಿಸಲಿದೆ ಎಂದು ಸ್ಪೋರ್ಟ್ಸ್ ವೆಬ್‌ಸೈಟ್ ಇನ್ಸೈಡ್ ಸ್ಪೋರ್ಟ್ ವರದಿಯಲ್ಲಿ ಎಸ್‌ಎಲ್‌ಸಿ ಅಧ್ಯಕ್ಷ ಸಿಲ್ವಾ ಹೇಳಿದ್ದಾರೆ. ಆರಂಭದಲ್ಲಿ ನಾವು ಕೇವಲ ಮೂರು ಪಂದ್ಯಗಳನ್ನು ಮಾತ್ರ ಆಯೋಜಿಸಲು ನಿರ್ಧರಿಸಿದ್ದೆವು. ಆದರೆ ಭಾರತೀಯ ಕ್ರಿಕೆಟ್ ಮಂಡಳಿಯೊಂದಿಗೆ ಸ್ವಲ್ಪ ಚರ್ಚೆಯ ನಂತರ, ನಾವು ಪಂದ್ಯಗಳ ಸಂಖ್ಯೆಯನ್ನು 6 ಕ್ಕೆ ಹೆಚ್ಚಿಸಲು ಸಾಧ್ಯವಾಯಿತು, ಇದು ಹೆಚ್ಚುವರಿ $ 6 ಮಿಲಿಯನ್ ಆದಾಯವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ, ಇದು ಒಟ್ಟು 12 ಮಿಲಿಯನ್ ವರೆಗೆ ಆದಾಯ ಹೆಚ್ಚಾಗಲಿದೆ ಎಂದು ಮಂಡಳಿ ತಿಳಿಸಿದೆ.

ಮಾಧ್ಯಮ ಹಕ್ಕುಗಳಿಂದ ಹೆಚ್ಚು ಆದಾಯ ಪ್ರಪಂಚದಾದ್ಯಂತ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳ ಉಪಸ್ಥಿತಿಯಿಂದಾಗಿ, ಪ್ರತಿ ಕ್ರಿಕೆಟ್ ಮಂಡಳಿಯು ತಮ್ಮ ದೇಶದಲ್ಲಿ ಭಾರತೀಯ ತಂಡದೊಂದಿಗೆ ದ್ವಿಪಕ್ಷೀಯ ಸರಣಿಯನ್ನು ಆಡಲು ಬಯಸುತ್ತದೆ, ಇದರಿಂದ ಆ ಮಂಡಳಿ ಸಾಕಷ್ಟು ಆದಾಯ ಗಳಿಸುತ್ತದೆ. ಇತರ ದೇಶಗಳಂತೆ, ಶ್ರೀಲಂಕಾ ಮಂಡಳಿಯ ಆದಾಯವೂ ಮುಖ್ಯವಾಗಿ ಮಾಧ್ಯಮ ಹಕ್ಕುಗಳ ಮೂಲಕವೇ ಆಗುತ್ತದೆ. ಈ ಸರಣಿಯನ್ನು ಪ್ರಸಾರ ಮಾಡುವ ಹಕ್ಕನ್ನು ಸೋನಿ ಸ್ಪೋರ್ಟ್ಸ್ ಪಡೆದುಕೊಂಡಿದೆ. ಇದಲ್ಲದೆ, ಶ್ರೀಲಂಕಾ ಮಂಡಳಿಯು ಪ್ರಾಯೋಜಕರ ಮೂಲಕ ಗಮನಾರ್ಹ ಮೊತ್ತವನ್ನು ಸಂಗ್ರಹಿಸಬಹುದು. ಭಾರತ-ಶ್ರೀಲಂಕಾ ಏಕದಿನ ಸರಣಿ ಜುಲೈ 13 ರಿಂದ ಮತ್ತು ಟಿ 20 ಸರಣಿ ಜುಲೈ 21 ರಿಂದ ಪ್ರಾರಂಭವಾಗಲಿದೆ. ಈ ಎಲ್ಲಾ ಪಂದ್ಯಗಳು ಕೊಲಂಬೊದಲ್ಲಿ ನಡೆಯಲಿದೆ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ