AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡಿಲೇಡ್​ನಲ್ಲಿ ಹೀನಾಯ ಸೋಲು ಕಂಡ ಭಾರತ; ಒಂದಂಕಿ ದಾಟದ ಟೀಂ ಇಂಡಿಯಾ ಬ್ಯಾಟ್ಸ್​​ಮನ್​ಗಳು

ಅಂತಿಮವಾಗಿ ಭಾರತ ನೀಡಿದ 90 ರನ್​ಗಳ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ಎರಡು ವಿಕೆಟ್ ಕಳೆದುಕೊಂಡು ಗೆದ್ದು ಬೀಗಿದೆ. ಈ ಮೂಲಕ ಎಂಟು ವಿಕೆಟ್​ಗಳ ಜಯ ಕಂಡಿತು.

ಅಡಿಲೇಡ್​ನಲ್ಲಿ ಹೀನಾಯ ಸೋಲು ಕಂಡ ಭಾರತ; ಒಂದಂಕಿ ದಾಟದ ಟೀಂ ಇಂಡಿಯಾ ಬ್ಯಾಟ್ಸ್​​ಮನ್​ಗಳು
ಆಸ್ಟ್ರೇಲಿಯಾ ತಂಡ
ರಾಜೇಶ್ ದುಗ್ಗುಮನೆ
|

Updated on:Dec 19, 2020 | 2:15 PM

Share

ಪಿಂಕ್​ಬಾಲ್​ ಮೊದಲ ಟೆಸ್ಟ್​ನಲ್ಲಿ ಭಾರತದ ಕಳಪೆ ಬ್ಯಾಟಿಂಗ್​ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ ಸುಲಭ ಗೆಲುವು ದಾಖಲಿಸಿತು. ಈ ಮೂಲಕ ನಾಲ್ಕು ಟೆಸ್ಟ್​​ ಸರಣಿಯಲ್ಲಿ ಮೊದಲನೇ ಟೆಸ್ಟ್​​ ಆಸ್ಟ್ರೇಲಿಯಾ ಬಾಚಿಕೊಂಡಿತು.

ಮೊದಲನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ನಲ್ಲಿ ಸಾಧಾರಣ ಹಾಗೂ ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್​ನಲ್ಲಿ ಕಳಪೆಯಲ್ಲೇ ಕಳಪೆ ಪ್ರದರ್ಶನ ನೀಡಿತು. ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 36 ರನ್​ ಗಳಿಕೆ ಮಾಡಿತು. ಎಲ್ಲ ಬ್ಯಾಟ್ಸ್​ಮನ್​ಗಳು ಪೆವಿಲಿಯನ್​ ಪರೇಡ್​ ನಡೆಸಿದರು. ವಿಚಿತ್ರ ಎಂದರೆ ಯಾವೊಬ್ಬ ಬ್ಯಾಟ್ಸ್​​ಮನ್​ ಕೂಡ ಒಂದಕಿ ದಾಟಿಲ್ಲ! ಎರಡನೇ ಇನ್ನಿಂಗ್ಸ್​ನಲ್ಲಿ ಅತಿ ಹೆಚ್ಚು ರನ್​ ಗಳಿಕೆ ಮಾಡಿದ್ದು ಮಯಾಂಕ್​ ಅಗರ್​ವಾಲ್​. ಅವರು ಬಾರಿಸಿದ್ದು 9 ರನ್​ ಮಾತ್ರ!

ಮೊದಲ ಇನ್ನಿಂಗ್ಸ್​ನಲ್ಲಿ 244 ರನ್​ ಬಾರಿಸಿದ್ದ ಭಾರತ, ಆಸ್ಟ್ರೇಲಿಯಾವನ್ನು ಕೇವಲ 191ರನ್​ಗಳಿಗೆ ಕಟ್ಟಿ ಹಾಕಿತ್ತು. ಈ ಮೂಲಕ 53 ರನ್​ಗಳ ಲೀಡ್​ ಕಾಯ್ದುಕೊಂಡಿತ್ತು. ಎರಡನೇ ಇನ್ನಿಂಗ್ಸ್​ನಲ್ಲಿ ಓಪನರ್​ಗಳಾಗಿ ಇಳಿದ ಪೃಥ್ವಿ ಶಾ ಹಾಗೂ ಮಯಾಂಕ್​ ಅನುಕ್ರಮವಾಗಿ ನಾಲ್ಕು ಹಾಗೂ ಒಂಭತ್ತು ರನ್​ ಗಳಿಸಿದರು.

ಶಾ ಔಟ್​ ಆದ ನಂತರ ಬಂದ ಬೂಮ್ರಾ ಎರಡು ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದ ಪೂಜಾರ ಡಕ್​ಔಟ್​ ಆದರೆ, ನಾಯಕ ಕೊಹ್ಲಿ ನಾಲ್ಕು ರನ್​ ಬಾರಿಸಿ ಪೆವಿಲಿಯನ್​ ಸೇರಿದರು. ಉಪನಾಯಕ ರಹಾನೆ ಶೂನ್ಯ ಸುತ್ತಿದರೆ, ಹನುಮ ವಿಹಾರಿ 8 ರನ್​ ಗಳಿಸಲು ಪರದಾಡಿದರು. ಅಶ್ವಿನ್​ ಸೊನ್ನೆ ಸುತ್ತಿದರು. ಕೊನೆಯ ವಿಕೆಟ್​ನಲ್ಲಿ ಆಡುತ್ತಿದ್ದ ಉಮೇಶ್​ ನಾಲ್ಕು ರನ್​ ಗಳಿಸಿದರು. 1 ರನ್​ ಬಾರಿಸಿದ್ದ ಶಮಿ ಗಾಯಗೊಂಡು ಪೆವಿಲಿಯನ್​ ಸೇರಿದರು. ಕೊನೆಗೆ ಭಾರತ 36 ರನ್​ ಗಳಿಸಲಷ್ಟೇ ಶಕ್ತವಾಯಿತು.

ಎರಡನೇ  ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ಬೌಲರ್​ಗಳು ಭಾರತದ ವಿರುದ್ಧ ಮಿಂಚಿದ್ದಾರೆ. ಅದರಲ್ಲೂ ಜೋಷ್ ಹ್ಯಾಜ್ಲೆವುಡ್​ 8 ರನ್​ಗಳನ್ನು ನೀಡಿ ಐದು ವಿಕೆಟ್​ ಪಡೆದರು. ಇನ್ನು ಪ್ಯಾಟ್ ಕಮ್ಮಿನ್ಸ್​ ಕೂಡ ಮಿಂಚಿದ್ದು ನಾಲ್ಕು ವಿಕೆಟ್​ ಗಳಿಸಿದರು.

ಅಂತಿಮವಾಗಿ ಭಾರತ ನೀಡಿದ 90 ರನ್​ಗಳ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ಎರಡು ವಿಕೆಟ್ ಕಳೆದುಕೊಂಡು ಗೆದ್ದು ಬೀಗಿತು. ಈ ಮೂಲಕ ಎಂಟು ವಿಕೆಟ್​ಗಳ ಜಯ ಕಂಡಿತು.

ಮೂರೇ ದಿನಕ್ಕೆ ಮುಗಿದು ಹೋಯ್ತು ಟೆಸ್ಟ್​

ಐದು ದಿನಗಳ ಹೊನಲು ಬೆಳಕಿನ ಟೆಸ್ಟ್​ ಕೇವಲ ಮೂರೇ ದಿನಕ್ಕೆ ಪೂರ್ಣಗೊಂಡಿದೆ. ಮೊದಲ ಇನ್ನಿಂಗ್ಸ್​ ಎರಡು ದಿನಕ್ಕೆ ಪೂರ್ಣಗೊಂಡರೆ ಎರಡನೇ ಇನ್ನಿಂಗ್ಸ್​ ಕೇವಲ ಅರ್ಧ ದಿನಕ್ಕೆ ಅಂತ್ಯವಾಗಿದೆ.

ಕೊಹ್ಲಿಗೆ ಅರ್ಜೆಂಟ್​ ಇದೆ ಎಂದ್ರು ನೆಟ್ಟಿಗರು

ಕೊಹ್ಲಿ ಈ ಟೆಸ್ಟ್​ ಪೂರ್ಣಗೊಳಿಸಿ ಪಿತೃತ್ವ ರಜೆ ಪಡೆದು ಭಾರತಕ್ಕೆ ಮರಳುತ್ತಿದ್ದಾರೆ. ಟೀಂ ಇಂಡಿಯಾ ಕಳಪೆ ಪ್ರದರ್ಶನದ  ಬಗ್ಗೆ ಕುಹಕ ಆಡಿರುವ ನೆಟ್ಟಿಗರು, ವಿರಾಟ್​ ಕೊಹ್ಲಿಗೆ ಮನೆಗೆ ತೆರಳೋಕೆ ತಡವಾದಂತಿದೆ. ಹೀಗಾಗಿ, ಬೇಗ ಔಟ್​ ಆಗಿದ್ದಾರೆ ಎಂದು ಟೀಕಿಸಿದ್ದಾರೆ.

India Vs Australia Test Series 2020 | ಭಾರತದ ಫೀಲ್ಡರ್​ಗಳು ಕ್ರಿಸ್​ಮಸ್ ಮೂಡ್​ನಲ್ಲಿದ್ದಾರೆ: ಗಾವಸ್ಕರ್ ಟೀಕೆ

Published On - 1:34 pm, Sat, 19 December 20

ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ