AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India Vs Australia Test Series 2020 | ಭಾರತದ ಫೀಲ್ಡರ್​ಗಳು ಕ್ರಿಸ್​ಮಸ್ ಮೂಡ್​ನಲ್ಲಿದ್ದಾರೆ: ಗಾವಸ್ಕರ್ ಟೀಕೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹಲವಾರು ವರ್ಷಗಳಿಂದ ಫೀಲ್ಡಿಂಗ್ ಕೋಚ್​ನನ್ನು ನೇಮಕ ಮಾಡುತ್ತಿದೆ. ಆದರೆ ಟೀಮ್ ಇಂಡಿಯಾದ ಫೀಲ್ಡಿಂಗ್ ಗುಣಮಟ್ಟ ಸುಧಾರಿಸುತ್ತಿಲ್ಲ.

India Vs Australia Test Series 2020 | ಭಾರತದ ಫೀಲ್ಡರ್​ಗಳು ಕ್ರಿಸ್​ಮಸ್ ಮೂಡ್​ನಲ್ಲಿದ್ದಾರೆ: ಗಾವಸ್ಕರ್ ಟೀಕೆ
ಲಬುಶೇನ್ ನೀಡಿದ ಕ್ಯಾಚ್ ಡ್ರಾಪ್ ಮಾಡುತ್ತಿರುವ ಪೃಥ್ವಿ ಶಾ
ಅರುಣ್​ ಕುಮಾರ್​ ಬೆಳ್ಳಿ
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Dec 18, 2020 | 9:17 PM

Share

ಅಡಿಲೇಡ್ ಮೈದಾನದಲ್ಲಿಂದು ಭಾರತದ ಫೀಲ್ಡರ್​ಗಳು ಅಸ್ಟ್ರೇಲಿಯ ಆಟಗಾರರಿಗೆ ತೋರಿಸಿದ ಔದಾರ್ಯವನ್ನು ಭಾರತದ ಮಾಜಿ ಆರಂಭ ಆಟಗಾರ ಸುನಿಲ್ ಗಾವಸ್ಕರ್ ತೀವ್ರವಾಗಿ ಟೀಕಿಸಿದ್ದಾರೆ. ಭಾರತೀಯರ ಫೀಲ್ಡಂಗ್ ಕ್ವಾಲಿಟಿ ಬಗ್ಗೆ ಪದೇಪದೆ ಪ್ರಶ್ನೆಗಳೇಳುತ್ತಿವೆ, ಆದರೆ ಸುಧಾರಣೆ ಮಾತ್ರ ಕಂಡುಬರುತ್ತಿಲ್ಲ.

ಅಸ್ಟ್ರೇಲಿಯಾದ ಮೂರನೇ ಕ್ರಮಾಂಕದ ಆಟಗಾರ ಮಾರ್ನಸ್ ಲಬುಶೇನ್ ಇವತ್ತು ಉಪಯುಕ್ತ 47 ರನ್ ಬಾರಿಸಿ ಔಟಾಗುವ ಮೊದಲು ಎರಡು ಬಾರಿ ಜೀವದಾನ ಪಡೆದರು. ಅವರ ವೈಯಕ್ಕಿಕ ಸ್ಕೋರ್ 12 ಆಗಿದ್ದಾಗ ಫೈನ್​ಲೆಗ್​ನಲ್ಲಿದ್ದ ಜಸ್ಪ್ರೀತ್ ಬುಮ್ರಾ ಒಂದು ಸುಲಭವಾದ ಕ್ಯಾಚ್ ಕೈಚೆಲ್ಲಿದ್ದರು. ಬೌಲರ್ ಮೊಹಮ್ಮದ್ ಶಮಿ ಮುಖ ಸಪ್ಪೆ ಮಾಡಿಕೊಂಡರು.

ಅದಾದ ಮೇಲೆ ಲಬುಶೇನ್ 21 ರನ್ ಗಳಿಸಿ ಆಡುತ್ತಿದ್ದಾಗ ಪೃಥ್ವಿ ಶಾ ಅವರಿಂದ ಜೀವದಾನ ಪಡೆದರು. ಇದು ಕ್ಯಾಚ್ ಬುಮ್ರಾ ಬಿಟ್ಟಿದ್ದಕ್ಕಿಂತ ಸುಲಭವಾಗಿತ್ತು. ಕ್ಯಾಚ್ ಹಿಡಿಯಲು ಗಂಭೀರ ಪ್ರಯತ್ನ ಮಾಡದ ಟೀಮ್ ಇಂಡಿಯಾದ ಆಟಗಾರರನ್ನು ಗಾವಸ್ಕರ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಬುಮ್ರಾ ಕ್ಯಾಚ್ ಬಿಟ್ಟಿದ್ದು ಹೀಗೆ!

‘ಇವರೆಲ್ಲ ಕ್ರಿಸ್​ಮಸ್​ ಮೂಡ್​ನಲ್ಲಿರುವಂತಿದೆ. ಒಂದು ವಾರ ಮೊದಲೇ ಹಬ್ಬದ ಗಿಫ್ಟ್​ಗಳನ್ನು ನೀಡುತ್ತಿದ್ದಾರೆ’ ಎಂದು ಗಾವಸ್ಕರ್ ಕ್ರಿಕೆಟ್ ಜಾಲತಾಣದ ಪ್ರತಿನಿಧಿಯೊಬ್ಬರ ಜೊತೆಗೆ ಮಾತನಾಡುವಾಗ ಹೇಳಿದ್ದರು.

ಶಾ ಅವರ ಕಳಪೆ ಫೀಲ್ಡಿಂಗ್ ನೆಟ್ಟಿಗರಿಂದಲೂ ಭಯಾನಕವಾಗಿ ಟ್ರೋಲ್ ಆಗುತ್ತಿದೆ. ಮಿಹಿರ್ ಝಾ ಎನ್ನುವವರು, ಶಾಗೆ ಕ್ಯಾಚ್​ಗಳನ್ನು ಹಿಡಿಯುವುದೂ ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದರೆ, ರೋಹನ್ ಛಾಬ್ರಾ ಹೆಸರಿನ ವ್ಯಕ್ತಿ, ಶಾ ಕ್ಯಾಚ್ ಹಿಡಿಯಲು ಮಾಡಿದ ಪ್ರಯತ್ನ ಪಾರ್ಕ್​ನಲ್ಲಿ ಆಟವಾಡಿದಂತಿತ್ತು ಎಂದಿದ್ದಾರೆ.

ಸುನಿಲ್ ಗಾವಸ್ಕರ್

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು