AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಶೀಘ್ರದಲ್ಲೇ ಆಟಕ್ಕೆ ಮರಳಲ್ಲಿದ್ದೇನೆ! ಭುಜದ ಶಸ್ತ್ರ ಚಿಕಿತ್ಸೆ ಬಳಿಕ ಪವರ್ ಫುಲ್ ಸಂದೇಶ ರವಾನಿಸಿದ ಶ್ರೇಯಸ್ ಅಯ್ಯರ್‌

IPL 2021: 26 ವರ್ಷದ ಶ್ರೇಯಸ್ ಅಯ್ಯರ್ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದರು, ಆದರೆ ಗಾಯದಿಂದಾಗಿ ಐಪಿಎಲ್ ನಿಂದ ಹೊರಬಿದ್ದ ನಂತರ, ದೆಹಲಿಯ ಮುಂದಾಳತ್ವನ್ನು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ರಿಷಭ್ ಪಂತ್ಗೆ ಹಸ್ತಾಂತರಿಸಲಾಗಿದೆ.

IPL 2021: ಶೀಘ್ರದಲ್ಲೇ ಆಟಕ್ಕೆ ಮರಳಲ್ಲಿದ್ದೇನೆ!  ಭುಜದ ಶಸ್ತ್ರ ಚಿಕಿತ್ಸೆ ಬಳಿಕ ಪವರ್ ಫುಲ್ ಸಂದೇಶ ರವಾನಿಸಿದ ಶ್ರೇಯಸ್ ಅಯ್ಯರ್‌
ಶ್ರೇಯಸ್ ಅಯ್ಯರ್‌
ಪೃಥ್ವಿಶಂಕರ
|

Updated on: Apr 08, 2021 | 4:29 PM

Share

ಐಪಿಎಲ್ 2021 ಪ್ರಾರಂಭವಾಗುವ ಒಂದು ದಿನ ಮೊದಲು, ಶ್ರೇಯಸ್ ಅಯ್ಯರ್‌ಗೆ ಸಂಬಂಧಿಸಿದ ಒಂದು ದೊಡ್ಡ ಸುದ್ದಿ ಬಂದಿದೆ. ದೆಹಲಿ ಕ್ಯಾಪಿಟಲ್ಸ್‌ನ ಈ ಆಟಗಾರ ಗಾಯದಿಂದಾಗಿ ಈ ಬಾರಿ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭುಜದ ಇಂಜುರಿಯಿಂದ ಬಳಲುತ್ತಿದ್ದರು. ಈಗ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಶ್ರೇಯಸ್ ಅಯ್ಯರ್ ಅವರ ಭುಜದ ಶಸ್ತ್ರ ಚಿಕಿತ್ಸೆ ಏಪ್ರಿಲ್ 8 ರಂದು ನಡೆದಿದೆ. ಈ ಕ್ರಿಕೆಟಿಗ ಶಸ್ತ್ರಚಿಕಿತ್ಸೆಯ ನಂತರ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮತ್ತು ಸಿಂಹ ಹೃದಯದ ಉತ್ಸಾಹದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ನಾನು ಶೀಘ್ರದಲ್ಲೇ ಆಟಕ್ಕೆ ಮರಳಲ್ಲಿದ್ದೇನೆ ಎಂದು ಬರೆದುಕೊಂಡಿದ್ದಾರೆ. 26 ವರ್ಷದ ಶ್ರೇಯಸ್ ಅಯ್ಯರ್ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದರು, ಆದರೆ ಗಾಯದಿಂದಾಗಿ ಐಪಿಎಲ್ ನಿಂದ ಹೊರಬಿದ್ದ ನಂತರ, ದೆಹಲಿಯ ಮುಂದಾಳತ್ವನ್ನು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ರಿಷಭ್ ಪಂತ್ಗೆ ಹಸ್ತಾಂತರಿಸಲಾಗಿದೆ.

ಐಪಿಎಲ್​ನಲ್ಲಿ ಶ್ರೇಯಸ್ ಸಾಧನೆ ಶ್ರೇಯಸ್ ಅಯ್ಯರ್ ಇದುವರೆಗೆ ಐಪಿಎಲ್‌ನಲ್ಲಿ ಒಟ್ಟು 79 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 31.42 ಸರಾಸರಿಯೊಂದಿಗೆ 2200 ರನ್ ಗಳಿಸಿದ್ದಾರೆ ಮತ್ತು ಸ್ಟ್ರೈಕ್ ರೇಟ್ 126.07 ಆಗಿದೆ. ಅವರ ಗರಿಷ್ಠ ಸ್ಕೋರ್ 96 ರನ್ ಆಗಿದೆ. 16 ಅರ್ಧಶತಕ, 189 ಬೌಂಡರಿ ಮತ್ತು 83 ಸಿಕ್ಸರ್‌ಗಳನ್ನು ಹೊಡೆಯುವುದರ ಜೊತೆಗೆ 28 ​​ಕ್ಯಾಚ್‌ಗಳನ್ನು ಸಹ ಅವರು ಹಿಡಿದಿದ್ದಾರೆ. ಅವರು 2019 ರಿಂದ ತಂಡದ ನಾಯಕರಾಗಿದ್ದಾರೆ. ಅವರ ನಾಯಕತ್ವದಲ್ಲಿ ದೆಹಲಿ ಹಿಂದಿನ ಆವೃತ್ತಿಯಲ್ಲಿ ಫೈನಲ್ ಪಂದ್ಯವನ್ನು ಆಡಿದ್ದರು ಮತ್ತು 2019 ರಲ್ಲಿ ಪ್ಲೇಆಫ್‌ಗೆ ಪ್ರಯಾಣವನ್ನು ಪೂರ್ಣಗೊಳಿಸಿದರು. ಅಯ್ಯರ್ ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಆಟಗಾರ. ಕಳೆದ ಎರಡು ವರ್ಷಗಳಿಂದ ಅವರು ಭಾರತೀಯ ಏಕದಿನ ಮತ್ತು ಟಿ 20 ಸದಸ್ಯರೂ ಆಗಿದ್ದಾರೆ.

ಅಯ್ಯರ್ ನಾಲ್ಕು ತಿಂಗಳು ಕ್ರಿಕೆಟ್‌ನಿಂದ ದೂರವಿರುತ್ತಾರೆ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಗಾಯಗೊಂಡರು. ಭಾರತದ ವೇಗದ ಬೌಲರ್ ಶಾರ್ದುಲ್ ಠಾಕೂರ್ ಅವರ ಎಸೆತವನ್ನು ಬಾರಿಸಿದ ಜಾನಿ ಬೈರ್‌ಸ್ಟೋವ್ ಅವರ ಡ್ರೈವ್ ನಿಲ್ಲಿಸಲು ಪ್ರಯತ್ನಿಸುತ್ತಿದ್ದಾಗ ಅವರು ಗಾಯಗೊಂಡರು. ಇದರ ನಂತರ, ಅಸಹನೀಯ ನೋವಿನಿಂದ ಬಳಲುತ್ತಿದ್ದ ಅಯ್ಯರ್​ ಅವರನ್ನು ಕೂಡಲೇ ಮೈದಾನದಿಂದ ಆಸ್ಪತ್ರೆಗೆ ವರ್ಗಾಹಿಸಲಾಗಿತ್ತು.

ಅಯ್ಯರ್ ಶಸ್ತ್ರಚಿಕಿತ್ಸೆಯ ನಂತರ ಕನಿಷ್ಠ ನಾಲ್ಕು ತಿಂಗಳು ಆಟದಿಂದ ದೂರವಿರಲಿದ್ದಾರೆ. ಅವನನ್ನು ಇಂಗ್ಲೆಂಡ್‌ನ ಕೌಂಟಿ ಕ್ಲಬ್‌ನ ಲ್ಯಾಂಕಾಷೈರ್ ಸಹ ಗುತ್ತಿಗೆ ಪಡೆದಿದ್ದರು. ಆದರೆ ಈಗ ಅಲ್ಲಿಯೂ ಸಹ ಅವರ ಆಟವನ್ನು ಸಹ ನಾಕ್ ಔಟ್ ಮಾಡಲಾಗಿದೆ. ಏಕೆಂದರೆ ಇಂಗ್ಲೆಂಡ್‌ನ ದೇಶೀಯ ಏಕದಿನ ಪಂದ್ಯಾವಳಿ ಜುಲೈ 23 ರಂದು ಪ್ರಾರಂಭವಾಗಲಿದೆ.

ಇದನ್ನೂ ಓದಿ:IPL 2021: ನಾಳಿನ ಪಂದ್ಯದಲ್ಲಿ ಮುಂಬೈ ಎದುರು ಗೆದ್ದು ಬೀಗಲಿದೆ ಆರ್​ಸಿಬಿ! ಇದು ಅಂಕಿ- ಅಂಶಗಳು ನುಡಿದಿರುವ ಭವಿಷ್ಯ