AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR vs SRH: ಕಪ್​ ಗೆಲ್ಲುವ ತವಕದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ! ಮೊದಲ ಪಂದ್ಯದ ತಯಾರಿ ಬಗ್ಗೆ ಶಿವಂ ಮಾವಿ ಹೇಳಿದ್ದೇನು?

Shivam Mavi: ನಾನು 145 ಕೆಎಂಎಚ್ ಮಾಡಿ ಮುಂದಿನ ಬೌಲ್ ಗೆ 115 ಕಿಲೋಮೀಟರ್ ಬೌಲ್ ಮಾಡಲು ಕಲಿತಿದ್ದೇನೆ. ವಿಶೇಷ ಇದೆ ತುಂಬಾ ವೇರಿಯೇಷನ್ ಕಲಿತಿದ್ದೇನೆ

KKR vs SRH: ಕಪ್​ ಗೆಲ್ಲುವ ತವಕದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ! ಮೊದಲ ಪಂದ್ಯದ ತಯಾರಿ ಬಗ್ಗೆ ಶಿವಂ ಮಾವಿ ಹೇಳಿದ್ದೇನು?
ಶಿವಂ ಮಾವಿ
Follow us
ಪೃಥ್ವಿಶಂಕರ
| Updated By: ಆಯೇಷಾ ಬಾನು

Updated on: Apr 11, 2021 | 7:02 AM

ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾದಾಗಿನಿಂದ ಕೋಲ್ಕತಾ ನೈಟ್ ರೈಡರ್ಸ್ ಹೆಚ್ಚಿನ ಯಶಸ್ಸನ್ನು ಗಳಿಸಿಲ್ಲ. ತಂಡವು 2008 ರಿಂದ 2011 ರವರೆಗೆ ಪ್ರಶಸ್ತಿಗಾಗಿ ಹಾತೊರೆಯಿತು. ಆರಂಭಿಕ ಆವೃತ್ತಿಗಳಲ್ಲಿ ಅವರು ಸಂಖ್ಯಾತ್ಮಕ ಕೋಷ್ಟಕದಲ್ಲಿ ಕೆಳಮಟ್ಟದಲ್ಲಿದ್ದರು. ಗೌತಮ್ ಗಂಭೀರ್ ನಾಯಕನಾದಾಗ 2012 ರಲ್ಲಿ ತಂಡದ ಭವಿಷ್ಯ ಬದಲಾಯಿತು. ಗಂಭೀರ್ ನಾಯಕತ್ವದಲ್ಲಿ ತಂಡವು ತನ್ನ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅದೇ ಗಂಭೀರ್ ಅವರು 2014 ರಲ್ಲಿ ಮತ್ತೆ ಕೋಲ್ಕತಾವನ್ನು ವಿಜೇತರನ್ನಾಗಿ ಮಾಡಿದರು. ಆದರೆ ಅಂದಿನಿಂದ, ಕೊನೆಯ ಆವೃತ್ತಿವರೆಗೂ ಅಂದರೆ 2020 ರವರೆಗೆ ಕೋಲ್ಕತ್ತಾಗೆ ಮೂರನೇ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಅವರ ಶೀರ್ಷಿಕೆ ಬರ ಅಬಾಧಿತವಾಗಿ ಮುಂದುವರಿಯುತ್ತಿದೆ.

ತಂಡವು 2018 ರಲ್ಲಿ ದಿನೇಶ್ ಕಾರ್ತಿಕ್ ಅವರನ್ನು ನಾಯಕನನ್ನಾಗಿ ಮಾಡಿದರೂ ಅವರಿಗೆ ವಿಶೇಷವಾಗಿ ಏನೂ ಮಾಡಲು ಸಾಧ್ಯವಾಗಲಿಲ್ಲ. 2019 ರಲ್ಲಿ ಕಾರ್ತಿಕ್ ನಾಯಕನಾಗಿದ್ದರೂ ಯಶಸ್ಸು ಸಿಗಲಿಲ್ಲ. 2020 ರಲ್ಲಿ, ಕಾರ್ತಿಕ್ ಅವರನ್ನು ಮಧ್ಯ ಆವೃತ್ತಿಯಲ್ಲಿ ನಾಯಕತ್ವದಿಂದ ತೆಗೆದುಹಾಕಲಾಯಿತು ಮತ್ತು ಇಂಗ್ಲೆಂಡ್​ನ ನಾಯಕ ಇಯಾನ್ ಮೋರ್ಗಾನ್ ಅವರನ್ನು ನೇಮಿಸಲಾಯಿತು. ಮೋರ್ಗನ್ 2021 ರಲ್ಲಿ ಇಡೀ ಆವೃತ್ತಿಯಲ್ಲಿ ತಂಡದ ನಾಯಕತ್ವ ವಹಿಸಲಿದ್ದಾರೆ. ಇಂಗ್ಲೆಂಡ್‌ಗೆ ಮೊದಲ ಏಕದಿನ ವಿಶ್ವಕಪ್ ನೀಡಿದ ನಾಯಕ ಮೋರ್ಗನ್ ನಾಯಕತ್ವದಲ್ಲಿ ತಂಡವು ಮೂರನೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಬಹುದೇ ಎಂದು ನೋಡಬೇಕಾಗಿದೆ. ತಮ್ಮ ಮೊದಲ ಪಂದ್ಯಕ್ಕೆ ಎಲ್ಲಾ ರೀತಿಯಲ್ಲೂ ತಂಡ ಸನ್ನದ್ದವಾಗಿದ್ದು, ಇಂದಿನ ಪಂದ್ಯಕ್ಕೆ ಕೋಲ್ಕತ್ತಾದ ವೇಗದ ಬೌಲರ್ ಶಿವಂ ಮಾವಿ ಬಳಿ ನಮ್ಮ ಚಾನೆಲ್​ನ ಆ್ಯಂಕರ್​ ನಡೆಸಿರುವ ಸಂವಾದ ಹೀಗಿದೆ.

ಆ್ಯಂಕರ್: 2018 ರಲ್ಲಿ ಐಪಿಎಲ್ ಶುರುಮಾಡಿದ ನೀವು ಈ ಬಾರಿ ಐಪಿಎಲ್ ಮ್ಯಾಚ್ ಗಳಿಗೆ ತಯಾರಿ ಹೇಗೆ ನಡೆಸಿರುತ್ತೀರಿ? ಶಿವಂ ಮಾವಿ: ಚೆನ್ನಾಗಿ ನಡೆಯುತ್ತಿದೆ ಈ ಬಾರಿ ಬಹಳ ಯೋಜನೆಯ ಪ್ರಕಾರ ತಯಾರಿ ಮಾಡಿದ್ದೇನೆ. ಡೆತ್ ಓವರ್ ಬಗ್ಗೆ ವಿಶೇಷ ತಯಾರಿ ಮಾಡಿಕೊಳ್ಳುತ್ತಿದ್ದೇನೆ.

ಆ್ಯಂಕರ್: ಈ ತಯಾರಿ ಮಾಡಿಕೊಂಡ ಮೇಲೆ ನಿಮ್ಮ ಆತ್ಮವಿಶ್ವಾಸ ಹೇಗಿದೆ? ಶಿವಂ ಮಾವಿ: ನಾನು ಮೊದಲ ಬಾರಿಗೆ ಐಪಿಎಲ್​ಗೆ ಬಂದಾಗ ಇದ್ದ ಆತ್ಮವಿಶ್ವಾಸಕ್ಕೆ ಹೋಲಿಸಿದರೆ ನಾನು ಈ ಬಾರಿ ತುಂಬಾ ಕಾನ್ಫಿಡೆಂಟ್ ಆಗಿದ್ದೇನೆ. ನನ್ನ ಬೌಲಿಂಗ್​ನಲ್ಲಿ ಒಂದು ರಿದಮ್ ಇದೆ ಫೀಲಿಂಗ್ ವೇಲ್.

ಆ್ಯಂಕರ್: ಕೋಲ್ಕತ್ತಾ ನೈಟ್ ರೈಡರ್ಸ್ ಬಳಿ ತುಂಬಾ ಬೌಲರ್ಸ್ ಇದ್ದಾರೆ. ಈ ಬಾರಿ ಪ್ಯಾಟ್ ಕಮಿನ್ಸ್ ಕಮಲೇಶ್ ಪ್ರಸಿದ್ಧ ಕೃಷ್ಣ ನೀವು, ಹರ್ಭಜನ್ ಎಲ್ಲಾ ಇದ್ದೀರಿ. ಈ ಕುರಿತು ಏನನ್ನ ಹೇಳಲು ಬಯಸುತ್ತೀರಿ? ಶಿವಂ ಮಾವಿ: ಕಳೆದ ವರ್ಷ ನಾವು ಸ್ಪಿನ್ ವಿಭಾಗದಲ್ಲಿ ಸ್ವಲ್ಪ ವೀಕ್ ಆಗಿದ್ದೆವು‌ ಈ ಬಾರಿ ಹರ್ಭಜನ್ ಬಂದಿದ್ದರಿಂದ ಸ್ಪಿನ್ ವಿಭಾಗದಲ್ಲಿ ಸ್ಟ್ರಾಂಗ್ ಇದ್ದೇವೆ.

ಆ್ಯಂಕರ್: ಹರ್ಭಜನ್ ಹೇಗೆ ಬೇರೆ ಬೌಲರ್ಗಳಿಗೆ ಮತ್ತು ನಿಮಗೆ ಸಹಾಯ ಮಾಡಿದ್ದಾರೆ? ಶಿವಂ ಮಾವಿ: ಅದನ್ನು ಹೇಳಲು ಅಸಾಧ್ಯ. ಆತ ಐಪಿಎಲ್​ನಲ್ಲಿ ಹೇಗೆ ಬೌಲ್ ಮಾಡಬೇಕು ಎಂಬುದರ ಬಗ್ಗೆ ಹಲವಾರು ವಿಚಾರ ತಿಳಿಸಿಕೊಟ್ಟಿದ್ದಾರೆ.

ಆ್ಯಂಕರ್: ನಿಮ್ಮ ಮೊದಲ ಮ್ಯಾಚ್ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಇದೆ. ಟೀಮಿನಲ್ಲಿ ಕೇನ್ ವಿಲಿಯಮ್ಸನ್ ಜಾನ್ ಬೆರ್​ಸ್ಟೋವ್ ಮುಂತಾದ ಹಲವಾರು ಬ್ಯಾಟ್ಸ್ಮನ್ಗಳು ಇದ್ದಾರೆ. ಅವರ ವಿರುದ್ಧ ನಿಮ್ಮ ತಂತ್ರ ಹೇಗೆ ಇರುತ್ತೆ? ಶಿವಂ ಮಾವಿ: ಅವರ ವೀಕ್ನೆಸ್ ನೋಡಿ ನಮ್ಮ ತಂತ್ರಗಾರಿಕೆ ರೂಪಿಸುತ್ತೇವೆ ಮತ್ತು ಪಿಚ್ ಹೇಗೆ ವರ್ತಿಸುತ್ತದೆ ಎನ್ನುವುದನ್ನು ನೋಡುತ್ತೇವೆ. ‌ಚೆನ್ನೈ ಪಿಚ್ ಸ್ಪಿನ್​ಗೆ ಸಾಕಾರಿ ಆಗಬಹುದು ಆದರೂ 200 ರನ್ ಗಳಿಸುವ ಟೀಮ್​ಗಳು ಇವೆ 180 ರನ್ ಗಳಿಸುವ ಸಾಧ್ಯತೆ ಕೂಡ ಇದೆ.

ಆ್ಯಂಕರ್: ಕಳೆದ ಸೀಸನ್ನು ಈ ಸೀಸನ್ ನಡುವೆ ನಿಮ್ಮ ಬೌಲಿಂಗ್ನಲ್ಲಿ ವ್ಯತ್ಯಾಸ ಏನು? ಶಿವಂ ಮಾವಿ: ಸಾರಿ ನಾನು 145 ಕೆಎಂಎಚ್ ಮಾಡಿ ಮುಂದಿನ ಬೌಲ್ ಗೆ 115 ಕಿಲೋಮೀಟರ್ ಬೌಲ್ ಮಾಡಲು ಕಲಿತಿದ್ದೇನೆ. ವಿಶೇಷ ಇದೆ ತುಂಬಾ ವೇರಿಯೇಷನ್ ಕಲಿತಿದ್ದೇನೆ

* ಕೋಲ್ಕತ್ತಾ ತಂಡದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದ ಪಂದ್ಯ ಇರುವ ದಿನದಂದು ಬೆಳಿಗ್ಗೆ 10 ಗಂಟೆ ಹಾಗೂ ಮಧ್ಯಾಹ್ನ 12.30 ಕ್ಕೆ ಸ್ಟಾರ್​ ಸ್ಪೋಟ್ರ್ಸ್​ ಹಿಂದಿ, ಸ್ಟಾರ್​ ಸ್ಪೋಟ್ರ್ಸ್ 3, ಸ್ಟಾರ್​ ಸ್ಪೋಟ್ರ್ಸ್ ಫಸ್ಟ್ ಚಾನೆಲ್​ಗಳನ್ನು ವೀಕ್ಷಿಸಬಹುದಾಗಿದೆ.

ಗರ್ಭವತಿಯಾದ ಹೆಣ್ಣಿನ ಸಂತೋಷ ಕುಟುಂಬಕ್ಕೆ ಸರ್ವಶುಭಮಂಗಳ ಹೇಗೆ?
ಗರ್ಭವತಿಯಾದ ಹೆಣ್ಣಿನ ಸಂತೋಷ ಕುಟುಂಬಕ್ಕೆ ಸರ್ವಶುಭಮಂಗಳ ಹೇಗೆ?
Daily Horoscope: ಈ ರಾಶಿಯವರು ಆತುರದಲ್ಲಿ ಏನನ್ನಾದರೂ ಮಾಡಲು ಹೋಗದಿರಿ
Daily Horoscope: ಈ ರಾಶಿಯವರು ಆತುರದಲ್ಲಿ ಏನನ್ನಾದರೂ ಮಾಡಲು ಹೋಗದಿರಿ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು